Kadaba News

ಅಪರಿಚಿತ ಗಂಡಸಿನ ಮೃತದೇಹ ಪತ್ತೆ

ಮಂಗಳೂರು ಏಪ್ರಿಲ್ 29 ( ನ್ಯೂಸ್ ಕಡಬ) newskadaba.com,);- ಏಪ್ರಿಲ್ 27 ರಂದು ಬೆಳಿಗ್ಗೆ 9 ಗಂಟೆಗೆ ಪಾವಂಜೆ ದೇವಸ್ಥಾನದ ಬಳಿ ಸೀತಾ ಅಮೀನ್ ಎಂಬವರ ಮನೆಯ ಸಮೀಪ ನಂದಿನಿ ನದಿ ಬದಿಯ ತೀರದ ಪೊದೆಯಲ್ಲಿ ಅಪರಿಚಿತ ಗಂಡಸಿನ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿರುವ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತ ವ್ಯಕ್ತಿಯ ಚಹರೆ ಇಂತಿವೆ; ಪ್ರಾಯ 35 ರಿಂದ 45 ವರ್ಷ, ಎತ್ತರ 5.5 ಅಡಿ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, […]

ಅಪರಿಚಿತ ಗಂಡಸಿನ ಮೃತದೇಹ ಪತ್ತೆ Read More »

ಕರಾವಳಿ

ರಾಜ್ಯಮಟ್ಟದ ಅಂಚೆ ಚೀಟಿ ಪ್ರದರ್ಶನ – KARNAPEX 2019

            ಮಂಗಳೂರು ಏಪ್ರಿಲ್29 ( ನ್ಯೂಸ್ ಕಡಬ) newskadaba.com,):- ಅಕ್ಟೋಬರ್ 12 ರಿಂದ 15 ರವರೆಗೆ ಕರ್ನಾಟಕ ಅಂಚೆ ವೃತ್ತವು ಮಂಗಳೂರಿನಲ್ಲಿ ರಾಜ್ಯಮಟ್ಟದ ಅಂಚೆ ಚೀಟಿ ಪ್ರದರ್ಶನವನ್ನು ಏರ್ಪಡಿಸಲು ತೀರ್ಮಾನಿಸಿದೆ. ಈ ಪ್ರದರ್ಶನಕ್ಕೆ KARNAPEX 2019”ಎಂದು ಹೆಸರಿಡಲಾಗಿದೆ. ಇದು 4 ವರ್ಷಗಳಿಗೊಮ್ಮೆ ನಡೆಯುವ ಪ್ರದರ್ಶನವಾಗಿದ್ದು ಮಂಗಳೂರಿನ ಚರಿತ್ರೆಯಲ್ಲೇ ಮೊತ್ತ ಮೊದಲ ಭಾರಿಗೆ ಆಯೋಜಿಸಲಾಗಿದೆ.ಈ ಪ್ರದರ್ಶನದಲ್ಲಿ ದೇಶ- ವಿದೇಶದ ಅಂಚೆ ಚೀಟಿಗಳು ಪ್ರದರ್ಶನಗೊಳ್ಳಲಿದ್ದು, ಸಹಸ್ರಾರು ಅಂಚೆ ಚೀಟಿ ಸಂಗ್ರಹಾಕಾರರು ಪಾಲ್ಗೊಳ್ಳಲಿದ್ದಾರೆ. ಈ ಪ್ರದರ್ಶನ ಲಾಂಛನದ ವಿನ್ಯಾಸಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು,

ರಾಜ್ಯಮಟ್ಟದ ಅಂಚೆ ಚೀಟಿ ಪ್ರದರ್ಶನ – KARNAPEX 2019 Read More »

ಕರಾವಳಿ

ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ

ಮಂಗಳೂರು ಏಪ್ರಿಲ್ 27 (ನ್ಯೂಸ್ ಕಡಬ) newskadaba.com,):- ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಕುರಿತು ಏಪ್ರಿಲ್ 26 ರಂದು ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಆರ್.ಎ.ಪಿ.ಸಿ.ಸಿ.ಸಭಾಂಗಣದಲ್ಲಿ ದಕ್ಷಿಣ ಕನ್ನಡ .ಜಿಲ್ಲೆಯ ವೈದ್ಯಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳ ಹಾಗೂ ಅರೆವೈದ್ಯಕೀಯ ಸಿಬ್ಬಂಧಿಯವರ ಪ್ರಗತಿ ಪರಿಶೀಲನಾ ಸಭೆಯು ಡಾ.ಮುನಿರಾಜು, ಜಂಟಿನಿರ್ದೇಶಕರು (ಕುಷ್ಠ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ .ಸೇವೆಗಳ ನಿರ್ದೇಶನಾಲಯ, ಬೆಂಗಳೂರು ಅವರ ಅಧ್ಯಕ್ಷತೆಯಲ್ಲಿ ಜರಗಿತು. ಸಮುದಾಯದ ಜನರಲ್ಲಿ ಸಕ್ರಿಯಾ ಸಮೀಕ್ಷೆಯ ಮೂಲಕ ಸಂಪೂರ್ಣ ಕುಷ್ಠರೋಗ ನಿರ್ಮೂಲನೆ ಸಾಧಿಸಲು ಒತ್ತಿ ಹೇಳಿದರು.

ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ Read More »

ಕರಾವಳಿ

ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ರೈತರಿಂದ ಅರ್ಜಿ ಆಹ್ವಾನ

ಮಂಗಳೂರು ಏಪ್ರಿಲ್ 26(ನ್ಯೂಸ್ ಕಡಬ) newskadaba.com,) :- 2019-20ನೇ ಸಾಲಿಗೆ ತೋಟಗಾರಿಕೆ ಇಲಾಖೆಯಲ್ಲಿ ವಿವಿಧ ಯೋಜನೆಗಳಡಿಯಲ್ಲಿ ರೈತ ಫಲಾನುಭವಿಗಳಿಗೆ ಸಹಾಯಧನದ ಮೂಲಕ ಕಾರ್ಯಕ್ರಮ ಅನುಷ್ಟಾನಗೊಳಿಸುವುದಕ್ಕೆ ಸಂಬಂದಪಟ್ಟಂತೆ ಕ್ರಿಯಾಯೋಜನೆ ತಯಾರಿಸಿ ಅನುಷ್ಟಾನಕ್ಕೆ ಸಿದ್ದತೆ ಮಾಡಿಕೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಆಸಕ್ತ ರೈತರುಗಳು ಕಾಳುಮೆಣಸು, ಕೋಕೋ, ಬಾಳೆ, ಗೇರು ಹಾಗೂ ತೆಂಗು ಬೆಳೆಗಳಲ್ಲಿ ಹೊಸದಾಗಿ ತೋಟ ಮಾಡಲು, ತೆಂಗು, ಗೇರು ಹಾಗೂ ಕಾಳುಮೆಣಸು ಹಳೇ ತೋಟಗಳ ಪುನಶ್ಚೇತನ ಕಾರ್ಯಕ್ರಮ, ಜೇನು ಸಾಕಾಣಿಕೆಯಡಿ ಜೇನು ಪೆಟ್ಟಿಗೆ ಹಾಗೂ ಕಾಲನಿಗಳನ್ನು ಸ್ಥಾಪಿಸಲು ನೀರು ಸಂಗ್ರಹಣಾ

ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ರೈತರಿಂದ ಅರ್ಜಿ ಆಹ್ವಾನ Read More »

ಕರಾವಳಿ

ತಂತ್ರಜ್ಞಾನ ಮಧ್ಯಸ್ಥಿಕೆಯಿಂದ ತೋಟಗಾರಿಕೆ ಬೆಳೆಗಳ ಉತ್ಪಾದನೆ ವೃದ್ಧಿಸಲು ಉತ್ತೇಜನ : ಡಾ| ಎ.ಟಿ. ರಾಮಚಂದ್ರ ನಾಯ್ಕ

ಮಂಗಳೂರು ಏಪ್ರಿಲ್ 26 (ನ್ಯೂಸ್ ಕಡಬ) newskadaba.com,) :- ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರವು ಬಂಟ್ವಾಳ ತಾಲ್ಲೂಕಿನ ತೋಟಗಾರಿಕಾ ಇಲಾಖೆ ಮತ್ತು ವಿಟ್ಲದ ಪಿಂಗಾರ ರೈತ ಉತ್ಪಾದಕರ ಕಂಪನಿಗಳ ಸಹಯೋಗದಿಂದ ರೈತಾಭಿವೃದ್ಧಿ ಸದಸ್ಯರುಗಳಿಗೆ ಅಡಿಕೆ, ತೆಂಗು ಮತ್ತು ಕಾಳುಮೆಣಸು ಬೆಳೆಗಳ ವೈಜ್ಞಾನಿಕ ಕೃಷಿಯ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಇತ್ತೀಚೆಗೆ ಬಂಟ್ವಾಳ ತಾಲ್ಲೂಕಿನ ವಿಟ್ಲದಲ್ಲಿ ಏರ್ಪಡಿಸಲಾಗಿತ್ತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿ ಯವರು ರೈತರು ಬೆಳೆಯುತ್ತಿರುವ ಬೆಳೆಗಳಿಗೆ ಉತ್ತಮ ಬೆಲೆ

ತಂತ್ರಜ್ಞಾನ ಮಧ್ಯಸ್ಥಿಕೆಯಿಂದ ತೋಟಗಾರಿಕೆ ಬೆಳೆಗಳ ಉತ್ಪಾದನೆ ವೃದ್ಧಿಸಲು ಉತ್ತೇಜನ : ಡಾ| ಎ.ಟಿ. ರಾಮಚಂದ್ರ ನಾಯ್ಕ Read More »

ಕರಾವಳಿ

ನಿಷೇಧಾಜ್ಞೆ

ಮಂಗಳೂರು ಏಪ್ರಿಲ್ 26 (ನ್ಯೂಸ್ ಕಡಬ) newskadaba.com,):- ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಏಪ್ರಿಲ್ 29 ಮತ್ತು 30 ರವರೆಗೆ ನಡೆಯಲಿರುವ ಸಿಇಟಿ-2019 ಸಾಮಾನ್ಯ ಪ್ರವೇಶ ಪರೀಕ್ಷೆಗಳ ಸಂದರ್ಭದಲ್ಲಿ ಪರೀಕ್ಷೆಯು ಸುಸೂತ್ರವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ಮತ್ತು ಪರೀಕ್ಷೆ ಕೇಂದ್ರಗಳಲ್ಲಿ ಅಹಿತಕರ ಘಟನೆಗಳನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಸಿಆರ್‍ಪಿಸಿ 1973ರ ಕಾಯ್ದೆಯ ಸೆಕ್ಷನ್ 144 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಸಂದೀಪ್ ಪಾಟೀಲ್ ಪೊಲೀಸ್ ಆಯುಕ್ತರು ಮಂಗಳೂರು ನಗರ,

ನಿಷೇಧಾಜ್ಞೆ Read More »

ಕರಾವಳಿ

ಗಾಳಿ, ಸಿಡಿಲು-ಮನೆ ಕೊಟ್ಟಿಗೆಗೆ ಹಾನಿ

ಕಡಬ ಏಪ್ರಿಲ್ 25 (ನ್ಯೂಸ್ ಕಡಬ) newskadaba.com,):- ಕುಟ್ರುಪಾಡಿ ಗ್ರಾಮದಲ್ಲಿ ಏ.24ರಂದು ಬೀಸಿದ ಗಾಳಿ ಹಾಗೂ ಸಿಡಿಲಿಗೆ ಮನೆ ಹಾಗೂ ಕೊಟ್ಟಿಗೆಗೆ ಹಾನಿಯಾದ ಘಟನೆ ನಡೆದಿದೆ.ಕುಟ್ರುಪಾಡಿಯ ಅನ್ನಮ್ಮ ವರ್ಗೀಸ್ ಅವರ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಲು ಹಾನಿಗೊಂಡಿವೆ ಅಲ್ಲದೆ ಮನೆಯ ವಿದ್ಯುತ್ ಸಂಪರ್ಕಗಳಿಗೂ ಹಾನಿಯಾಗಿ ಮನೆಯ ಗೋಡೆ ಬಿರುಕು ಬಿಟ್ಟಿದೆ. ಕುಟ್ರುಪಾಡಿ ಗ್ರಾಮದ ದೋಣಿಗಂಡಿ ಎಂಬಲ್ಲಿ ಬಾಲಕೃಷ್ಣ ಎಂಬವರ ಹಟ್ಟಿಯ ಛಾವಣಿ ಗಾಳಿಗೆ ಹಾರಿ ಹೊಗಿದೆ ಈ ಬಗ್ಗೆ ಅವರು ಕಂದಾಯ ಇಲಾಖೆಗೆ

ಗಾಳಿ, ಸಿಡಿಲು-ಮನೆ ಕೊಟ್ಟಿಗೆಗೆ ಹಾನಿ Read More »

ಕರಾವಳಿ

ನಂಬಿಗರ ಅಂಬಿಗ -ನಾಟಕ ಪ್ರದರ್ಶನ

ಮಂಗಳೂರು ಏಪ್ರಿಲ್ 25 (ನ್ಯೂಸ್ ಕಡಬ) newskadaba.com,):- ಅಂಬಿಗರ ಚೌಡಯ್ಯ ಅಧ್ಯಯನ ಪೀಠವು 2018-19ನೇ ಶೈಕ್ಷಣಿಕ ವರ್ಷದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅಂಬಿಗರ ಚೌಡಯ್ಯನವರ ಬದುಕು ಮತ್ತು ಅವರ ವಚನಗಳ ಮೌಲ್ಯಗಳನ್ನು ಪರಿಚಯಿಸುವ ಸದುದ್ಧೇಶದಿಂದ ನಂಬಿಗರ ಅಂಬಿಗ ಎಂಬ ನಾಟಕ ಪ್ರದರ್ಶನವನ್ನು ಏಪ್ರಿಲ್ 27 ರಂದು ಸಂಜೆ 7 ಗಂಟೆಗೆ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇಲ್ಲಿ ಆಯೋಜಿಸಲಾಗಿದೆ. ಡಾ, ನರಸಿಂಹ ಮೂರ್ತಿ.ಆರ್ ವಿಶ್ರಾಂತ ಪ್ರಾಧ್ಯಾಪಕರು, ಮಂಗಳೂರು ಇವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲ್ಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ.

ನಂಬಿಗರ ಅಂಬಿಗ -ನಾಟಕ ಪ್ರದರ್ಶನ Read More »

ಕರಾವಳಿ

ತುಳು ಅಕಾಡೆಮಿ ಪ್ರಕಟಿತ ಪುಸ್ತಕ ಬಿಡುಗಡೆ ಸಮಾರಂಭ

ಮಂಗಳೂರು ಏಪ್ರಿಲ್ 25 (ನ್ಯೂಸ್ ಕಡಬ) newskadaba.com,):- ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ತುಳುಭವನದ ಸಿರಿಚಾವಡಿಯಲ್ಲಿ ಎಪ್ರಿಲ್ 27 ರಂದು ಅಪರಾಹ್ನ 3.30 ಗಂಟೆಗೆ ಅಕಾಡೆಮಿ ಪ್ರಕಟಿತ ಶ್ರೀ ಮುದ್ದು ಮೂಡು ಬೆಳ್ಳೆ ರವರ ತುಳು ನಾಟಕ ಪರಂಪರೆ ಮತ್ತು ಅನುವಾದಕರಾದ ಡಾ.ಪ್ರಮಿಳಾ ಮಾಧವ್ ರವರ ಶಿಕಾರಿ (ಮೂಲ ಲೇ: ಶ್ರೀಮತಿ ಲಲಿತಾ ರೈ) ಕೃತಿ ಬಿಡುಗಡೆ ಸಮಾರಂಭವು ನಡೆಯಲಿದೆ.ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ. ಸಿ. ಭಂಡಾರಿ ವಹಿಸಲಿದ್ದಾರೆ. ಉಡುಪಿ

ತುಳು ಅಕಾಡೆಮಿ ಪ್ರಕಟಿತ ಪುಸ್ತಕ ಬಿಡುಗಡೆ ಸಮಾರಂಭ Read More »

ಕರಾವಳಿ

ಎಸಿಬಿಯಿಂದ ದೂರು ಸ್ವೀಕಾರ

ಮಂಗಳೂರು ಏಪ್ರಿಲ್ 25 (ನ್ಯೂಸ್ ಕಡಬ) newskadaba.com,):-ದಕ್ಷಿಣ ಕನ್ನಡ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಏಪ್ರಿಲ್ 27 ರಂದು ಪೂರ್ವಾಹ್ನ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಪುತ್ತೂರು ಮತ್ತು ಮೂಡಬಿದ್ರೆ ಸರ್ಕಾರಿ ಪ್ರವಾಸಿ ಮಂದಿರಗಳಲ್ಲಿ ಮತ್ತು ಏಪ್ರಿಲ್ 30 ರಂದು ಪೂರ್ವಾಹ್ನ 11 ಗಂಟೆಯಿಂದ ಮದ್ಯಾಹ್ನ 1 ಗಂಟೆಯವರೆಗೆ ಬೆಳ್ತಂಗಡಿ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ದೂರುಗಳನ್ನು ಸ್ವೀಕರಿಸಲಿದ್ದಾರೆ ಎಂದು ಪೊಲೀಸ್ ಉಪಾಧೀಕ್ಷಕರು, ಎಸಿಬಿ, ದ.ಕಜಿಲ್ಲೆ, ಮಂಗಳೂರು ಇವರ ಪ್ರಕಟಣೆ

ಎಸಿಬಿಯಿಂದ ದೂರು ಸ್ವೀಕಾರ Read More »

ಕರಾವಳಿ
Scroll to Top