bilinele

ಕಡಬ:ಕೆಎಸ್‌ಆರ್‌ಟಿಸಿ ಬಸ್ – ದ್ವಿಚಕ್ರ ವಾಹನ ನಡುವೆ ಅಪಘಾತ- ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಮಾ. 11 ಕಡಬ: ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವಿನ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕೈಕಂಬ ಬಳಿ ಸೋಮವಾರ ಸಂಭವಿಸಿದೆ. ಬಿಳಿನೆಲೆ ಗ್ರಾಮದ ಚೇರು ನಿವಾಸಿ ದಿ.ವಿಶ್ವನಾಥ ಎಂಬವರ ಪುತ್ರ ವಿನ್ಯಾಸ್ (23) ಮೃತರು. ಮೃತರು ತಾಯಿ, ಸಹೋದರಿಯನ್ನು ಅಗಲಿದ್ದಾರೆ. ಕಡಬ ಕಡೆಗೆ ತೆರಳುತ್ತಿದ್ದ ಬಸ್ ಹಾಗೂ ಕೈಕಂಬ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನ ನಡುವೆ ಬಿಳಿನೆಲೆ ಗ್ರಾಮದ ಕೈಕಂಬ ಕೋಟೆಹೊಳೆ ಬಳಿ […]

ಕಡಬ:ಕೆಎಸ್‌ಆರ್‌ಟಿಸಿ ಬಸ್ – ದ್ವಿಚಕ್ರ ವಾಹನ ನಡುವೆ ಅಪಘಾತ- ಸವಾರ ಮೃತ್ಯು Read More »

ಕರಾವಳಿ

ಬಿಳಿನೆಲೆ :ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com ಬಿಳಿನೆಲೆ ನ. 01: ನಾಡಿನಾದ್ಯಂತ ಇಂದು ಕನ್ನಡ ರಾಜ್ಯೋತ್ಸದ ಸಂಭ್ರಮ . ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ 65ನೇ ಕನ್ನಡ ರಾಜ್ಯೋತ್ಸವನ್ನು ವೇದವ್ಯಾಸ ವಿದ್ಯಾಲಯದ ಸಹಯೋಗದೊಂದಿಗೆ ಸರಳವಾಗಿ ಆಚರಿಸಲಾಯಿತು. ಶಾಲಾ ಮುಖ್ಯಗುರುಗಳಾದ ಹಿರಿಯಣ್ಣ ಗೌಡ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶುಭಹಾರೈಸಿದರು.ಈ ಸಂದರ್ಭದಲ್ಲಿ ಅಧ್ಯಾಪಕರಾದ ಗಣಪತಿ ಭಟ್, ಶಿವರಾಮ್ ಏನೆಕಲ್, ಸತ್ಯ ಶಂಕರಭಟ್, ದಿನೇಶ್ ಕುಂದರ್, ಚೇತನ್ ಹೆಚ್ ಡಿ, ವೇದವ್ಯಾಸ ವಿದ್ಯಾಲಯದ ಮುಖ್ಯಗುರುಗಳಾದ ಪ್ರಶಾಂತ್ ಹಾಗೂ ಸಹಶಿಕ್ಷಕರು ಉಪಸ್ಥಿತರಿದ್ದರು.    

ಬಿಳಿನೆಲೆ :ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ Read More »

ಕರಾವಳಿ

ಮೂಳೆ ಮುರಿತಕ್ಕೊಳಗಾಗಿ ಆರ್ಥಿಕ ಸಂಕಷ್ಟದಲ್ಲಿದ್ದ ವ್ಯಕ್ತಿಗೆ ಧನಸಹಾಯ ಹಸ್ತಾಂತರ

(ನ್ಯೂಸ್ ಕಡಬ) newskadaba.com ಕಡಬ, ಮೇ.27.,  ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಹಿರಿಯ ಸದಸ್ಯರಾದ ಉಮೇಶ ಕೆ. ಸಣ್ಣಾರ ಅವರು ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಬಿದ್ದು ಅವರ ಕಾಲಿನ ಮೂಳೆ ಮುರಿತವಾಗಿದ್ದು,  ಆರ್ಥಿಕ ಸಂಕಷ್ಟದಲ್ಲಿರುವ ಇವರಿಗೆ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಸದಸ್ಯರಿಂದ ಧನ ಸಂಗ್ರಹ ಮಾಡಿ ಅವರಿಗೆ ಹಸ್ತಾಂತರಿಸಲಾಯಿತು. ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಅಧ್ಯಕ್ಷರಾದ ಜನಾರ್ದನ ಸೂಡ್ಲು, ಕಾರ್ಯದರ್ಶಿ ಸುಂದರ ಒಗ್ಗು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮೂಳೆ ಮುರಿತಕ್ಕೊಳಗಾಗಿ ಆರ್ಥಿಕ ಸಂಕಷ್ಟದಲ್ಲಿದ್ದ ವ್ಯಕ್ತಿಗೆ ಧನಸಹಾಯ ಹಸ್ತಾಂತರ Read More »

ಕರಾವಳಿ

ಮಂಗಳೂರು: 48 ಮೊಬೈಲ್ ಟವರ್ ಗಳ ಬ್ಯಾಟರಿ ಕಳ್ಳತನ ► ಬಿಳಿನೆಲೆ ನಿವಾಸಿ ಸೇರಿದಂತೆ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಜೂ.27. ಮೊಬೈಲ್ ಟವರ್ ಗಳಲ್ಲಿನ ಬ್ಯಾಟರಿ ಕಳವು ಪ್ರಕರಣವನ್ನು ಭೇದಿಸಿರುವ ಉರ್ವ ಠಾಣಾ ಪೊಲೀಸರು ಕಡಬದ ಬಿಳಿನೆಲೆ ನಿವಾಸಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇಂಡಸ್ ಕಂಪೆನಿಗೆ ಸೇರಿದ 48 ಮೊಬೈಲ್ ಟವರ್‌ನ ಬ್ಯಾಟರಿಗಳು ಕಳವಾಗಿರುವ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದ ಉರ್ವ ಠಾಣಾ ಪೊಲೀಸರು ಇಂಡಸ್ ಕಂಪೆನಿಯ ಬ್ಯಾಟರಿಗಳ ನಿರ್ವಹಣೆಯ ಗುತ್ತಿಗೆ ಪಡೆದಿದ್ದ ಸಂಸ್ಥೆಯೊಂದರ ಸಿಬ್ಬಂದಿಗಳಾದ ಕಡಬದ ಬಿಳಿನೆಲೆ ನಿವಾಸಿ ಆನಂದ್(28), ಕಡೂರಿನ ಸೋಮನಹಳ್ಳಿ

ಮಂಗಳೂರು: 48 ಮೊಬೈಲ್ ಟವರ್ ಗಳ ಬ್ಯಾಟರಿ ಕಳ್ಳತನ ► ಬಿಳಿನೆಲೆ ನಿವಾಸಿ ಸೇರಿದಂತೆ ಮೂವರ ಬಂಧನ Read More »

ಕರಾವಳಿ

ನೆಟ್ಟಣ, ಬಿಳಿನೆಲೆ ಪರಿಸರದಲ್ಲಿ ಕಾಡಾನೆ ಪ್ರತ್ಯಕ್ಷ ► ಕಿದು CPCRIನಲ್ಲಿ ಆನೆ ದಾಳಿ

(ನ್ಯೂಸ್ ಕಡಬ) newskadaba.com ಕಡಬ, ಡಿ.21. ಇಲ್ಲಿಗೆ ಸಮೀಪದ ನೆಟ್ಟಣದಲ್ಲಿರುವ ಕಿದು ಸಿ.ಪಿ.ಸಿ.ಆರ್.ಐ ತೆಂಗು ಹಾಗೂ ಅಡಕೆ ಸಂಶೋಧನಾ ಕೇಂದ್ರಕ್ಕೆ ಆನೆಗಳ ಹಿಂಡು ಲಗ್ಗೆ ಇಟ್ಟು ಅಲ್ಲಿನ ಕೃಷಿ ನಾಶ ಮಾಡಿದ ಘಟನೆ ಮಂಗಳವಾರ ತಡ ರಾತ್ರಿ ನಡೆದಿದೆ. ಕೇಂದ್ರದ ತಡೆ ಬೇಲಿ ಮುರಿದು ಒಳನುಗ್ಗಿರುವ ಆನೆಗಳು ಆರು ತೆಂಗಿನ ಮರ, ಹತ್ತಾರು ಬಾಳೆ ಗಿಡ ಹಾಗೂ ಅಡಕೆ ಸಸಿಗಳನ್ನು ನಾಶ ಮಾಡಿವೆ. ಈ ಬಗ್ಗೆ ಅಲ್ಲಿನ ಅಧಿಕಾರಿಗಳು ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ನೆಟ್ಟಣ, ಬಿಳಿನೆಲೆ

ನೆಟ್ಟಣ, ಬಿಳಿನೆಲೆ ಪರಿಸರದಲ್ಲಿ ಕಾಡಾನೆ ಪ್ರತ್ಯಕ್ಷ ► ಕಿದು CPCRIನಲ್ಲಿ ಆನೆ ದಾಳಿ Read More »

ಕರಾವಳಿ

ಬಿಳಿನೆಲೆ, ಕುಲ್ಕುಂದ ದೇವಸ್ಥಾನಗಳಲ್ಲಿ ಕಳ್ಳರ ಕೈಚಳಕ ► ಕಾಣಿಕೆ ಹುಂಡಿ, ಮೊಬೈಲ್ ಕಳ್ಳರ ಪಾಲು

(ನ್ಯೂಸ್ ಕಡಬ) newskadaba.com ಕಡಬ, ಅ.24. ಠಾಣಾ ವ್ಯಾಪ್ತಿಯ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಒಳ ನುಗ್ಗಿರುವ ಕಳ್ಳರು ಮುಖ್ಯದ್ವಾರದ ಬೀಗವನ್ನು ಮುರಿದು ಒಳ‌ಪ್ರವೇಶಿಸಿ ನಮಸ್ಕಾರ ಮಂಟಪದ ಬದಿಯಲ್ಲಿದ್ದ 2 ಕಾಣಿಕೆ ಡಬ್ಬಿ ಹಾಗೂ ಗಣಪತಿ ಗುಡಿಯ ಕಾಣಿಕೆ ಡಬ್ಬಿ ಸೇರಿದಂತೆ ಒಟ್ಟು ಮೂರು ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 12000 ಹಾಗೂ ಒಂದು ಮೈಕ್ರೋಮ್ಯಾಕ್ಸ್ ಮೊಬೈಲನ್ನು ಕದ್ದೊಯ್ದಿದ್ದ ಘಟನೆ ಸೋಮವಾರ ರಾತ್ರಿ ನಡೆದಿದೆ. ಸೋಮವಾರ ಸಂಜೆ ಅರ್ಚಕರು ಎಂದಿನಂತೆ ಬೀಗ ಹಾಕಿ ಹೋಗಿದ್ದು, ಮಂಗಳವಾರ ಬೆಳಿಗ್ಗೆ ಆಗಮಿಸಿದಾಗ

ಬಿಳಿನೆಲೆ, ಕುಲ್ಕುಂದ ದೇವಸ್ಥಾನಗಳಲ್ಲಿ ಕಳ್ಳರ ಕೈಚಳಕ ► ಕಾಣಿಕೆ ಹುಂಡಿ, ಮೊಬೈಲ್ ಕಳ್ಳರ ಪಾಲು Read More »

ಕರಾವಳಿ

ವಾಣಿಜ್ಯ ಕಟ್ಟಡಕ್ಕೆ ಡೋರ್ ನಂಬ್ರ ನೀಡಲು ಬಿಳಿನೆಲೆ ಗ್ರಾ.ಪಂ.ನಿಂದ ವಿಳಂಬ ►ಅ.13 ಶುಕ್ರವಾರದಿಂದ ಪಂಚಾಯತ್ ಎದುರು ಸತ್ಯಾಗ್ರಹ: ತೋಮ್ಸನ್ ಕೆ.ಟಿ.

(ನ್ಯೂಸ್ ಕಡಬ) newskadaba.com .ಕಡಬ, ಅ.10. ಬಿಳಿನೆಲೆ ಗ್ರಾಮ ಪಂಚಾಯತಿಯ ನೆಟ್ಟಣ ಸಮೀಪದ ಮೇರೊಂಜಿ ಎಂಬಲ್ಲಿ ನಿರ್ಮಿಸಲಾದ ಕಟ್ಟಡಕ್ಕೆ ಗ್ರಾಮ ಪಂಚಾಯತಿಯಿಂದ ಡೋರ್ ನಂಬರ್ ನೀಡದೆ ಇರುವುದರಿಂದ ವಿದ್ಯುತ್ ಸಂಪರ್ಕಕ್ಕೆ ತೊಂದರೆ ಉಂಟಾಗಿದ್ದು, ಅಕ್ಟೋಬರ್ 12ರ ಗುರುವಾರದೊಳಗಡೆ ಡೋರ್ ನಂಬರ್ ನೀಡದೆ ಇದ್ದಲ್ಲಿ 13 ಶುಕ್ರವಾರದಿಂದ ಪಂಚಾಯತ್ ಎದುರುಗಡೆ ಸತ್ಯಾಗ್ರಹ ಮಾಡಲಿದ್ದೇನೆ ಎಂದು ಕಟ್ಟಡ ಮಾಲಕ ಥೋಮ್ಸನ್ ಕೆ.ಟಿ ಹೇಳಿದ್ದಾರೆ. ಅವರು ಮಂಗಳವಾರದಂದು ಕಡಬದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಳಿನೆಲೆ ಗ್ರಾಮದ ಮೇರೊಂಜಿ ಎಂಬಲ್ಲಿರುವ ವರ್ಗ ಜಮೀನನ್ನು

ವಾಣಿಜ್ಯ ಕಟ್ಟಡಕ್ಕೆ ಡೋರ್ ನಂಬ್ರ ನೀಡಲು ಬಿಳಿನೆಲೆ ಗ್ರಾ.ಪಂ.ನಿಂದ ವಿಳಂಬ ►ಅ.13 ಶುಕ್ರವಾರದಿಂದ ಪಂಚಾಯತ್ ಎದುರು ಸತ್ಯಾಗ್ರಹ: ತೋಮ್ಸನ್ ಕೆ.ಟಿ. Read More »

ಕರಾವಳಿ

ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆ ► ಕ್ರೀಡೆಯಲ್ಲಿ ತಂಡಕ್ಕೆ ಸಮಗ್ರ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಕಡಬ,ಅ.3. ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆಯಲ್ಲಿ ನಡೆದ ಕಡಬ ವಲಯಮಟ್ಟದ ಪ್ರೌಢ ಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಬಾಲಕಿಯರ ತಂಡ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಬಾಲಕರ ವಿಭಾಗದಲ್ಲಿ ಭಾಗವಹಿಸಿದ ವಿವಿಧ ಸ್ಪರ್ಧಾಳುಗಳಿಗೆ ಬಹುಮಾನ ದೊರಕಿದೆ.

ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆ ► ಕ್ರೀಡೆಯಲ್ಲಿ ತಂಡಕ್ಕೆ ಸಮಗ್ರ ಪ್ರಶಸ್ತಿ Read More »

ಕ್ರೀಡಾ ನ್ಯೂಸ್

ಬಿಳಿನೆಲೆ: ವಾಣಿಜ್ಯ ಕಟ್ಟಡ ನಿರ್ಮಿಸಲು ಪರವಾಣಿಗೆ ಮಂಜೂರು ► ಪ್ರತಿಭಟನೆ ಹಿಂಪಡೆದ ಕೆ.ಟಿ.ತೋಮ್ಸ್‌ನ್

(ನ್ಯೂಸ್ ಕಡಬ) newskadaba.com ಕಡಬ,ಸೆ.27. ಬಿಳಿನೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಟ್ಟಣ ಸಮೀಪದ ಮೇರೊಂಜಿ ಎಂಬಲ್ಲಿ ಕಟ್ಟಡ ನಿರ್ಮಾಣಕ್ಕೆ ಸಕಾಲದಲ್ಲಿ ಪರವಾಣಿಗೆ ನೀಡದೆ ಸತಾಯಿಸಲಾಗಿದೆ ಎನ್ನುವ ಆರೋಪದಲ್ಲಿ ಉದ್ಯಮಿ ಕೆ.ಟಿ.ತೋಮ್ಸ್‌ನ್ ಅವರು ಪಂ. ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿದನ್ನು ಸೋಮವಾರ ಪಂಚಾಯಿತಿ ಅನುಮತಿ ನೀಡಿರುವ ಬೆನ್ನಲ್ಲೇ ವಾಪಾಸ್ಸು ಪಡೆದಿದ್ದಾರೆ. ಕೆ.ಟಿ.ತೋಮ್ಸ್‌ನ ಅವರು ನೆಟ್ಟಣ ಸಮೀಪದ ಮೇರೊಂಜಿಯಲ್ಲಿ ತನ್ನ ಜಮೀನಿನಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಲು ಅನುಮತಿ ನೀಡುವಂತೆ ದಾಖಲೆ ಸಮೇತ ಅರ್ಜಿ ಸಲ್ಲಿಸಿದ್ದರು. ಆದರೆ ಇದೇ ವೇಳೆ ಸುಪ್ರೀಂ ಕೋರ್ಟ್

ಬಿಳಿನೆಲೆ: ವಾಣಿಜ್ಯ ಕಟ್ಟಡ ನಿರ್ಮಿಸಲು ಪರವಾಣಿಗೆ ಮಂಜೂರು ► ಪ್ರತಿಭಟನೆ ಹಿಂಪಡೆದ ಕೆ.ಟಿ.ತೋಮ್ಸ್‌ನ್ Read More »

ಕರಾವಳಿ

ಕಟ್ಟಡ ನಿರ್ಮಾಣ ಪರವಾನಿಗೆಗೆ ಬಿಳಿನೆಲೆ ಗ್ರಾ.ಪಂ.ನಿಂದ ವಿಳಂಬ ನೀತಿ ► ಸೆ. 25 ರಿಂದ ಗ್ರಾ.ಪಂ. ಎದುರು ಗಂಡ-ಹೆಂಡತಿಯಿಂದ ಅನಿರ್ದಿಷ್ಟಾವಧಿ ಮುಷ್ಕರ

(ನ್ಯೂಸ್ ಕಡಬ) newskadaba.com ಕಡಬ, ಸೆ.20. ಅವಶ್ಯ ಎಲ್ಲಾ ದಾಖಲೆಗಳನ್ನು ನೀಡಿದರೂ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡದೆ ಸತಾಯಿಸುತ್ತಿರುವ ಬಿಳಿನೆಲೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಅನಗತ್ಯ ಕಿರುಕುಳ ನೀಡುತ್ತಿದೆ. ಸೆ 24 ರ ಒಳಗೆ ಪರವಾನಿಗೆ ನೀಡದಿದ್ದರೆ ಪಂಚಾಯಿತಿ ಎದುರು ಸೆ 25 ರಿಂದ ಅನಿರ್ಧಿಷ್ಠಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಉದ್ಯಮಿ ಕೆ.ಟಿ.ತೋಮ್ಸ್‌ನ್ ಎಚ್ಚರಿಕೆ ನೀಡಿದ್ದಾರೆ. ಅವರು ಕಡಬ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಿಳಿನೆಲೆ ಗ್ರಾಮ ಪಂಚಾಯಿತಿ ಕಟ್ಟಡ ಪರವಾನಿಗೆ ನೀಡುವಲ್ಲಿ ಯಾರದೋ ಪಿತೂರಿಗೆ

ಕಟ್ಟಡ ನಿರ್ಮಾಣ ಪರವಾನಿಗೆಗೆ ಬಿಳಿನೆಲೆ ಗ್ರಾ.ಪಂ.ನಿಂದ ವಿಳಂಬ ನೀತಿ ► ಸೆ. 25 ರಿಂದ ಗ್ರಾ.ಪಂ. ಎದುರು ಗಂಡ-ಹೆಂಡತಿಯಿಂದ ಅನಿರ್ದಿಷ್ಟಾವಧಿ ಮುಷ್ಕರ Read More »

ಕರಾವಳಿ
Scroll to Top