ಬಸ್ಸಿಗಾಗಿ ಕಾಯುತ್ತಿದ್ದ ಯುವತಿಯನ್ನು ಪುಸಲಾಯಿಸಿ ಕರೆದೊಯ್ದ ಫೇಸ್ ಬುಕ್ ಫ್ರೆಂಡ್ ► ಜೊತೆಯಾಗಿ ತೆರಳುತ್ತಿದ್ದಾಗ ಬಂಟ್ವಾಳದಲ್ಲಿ ಕಾರು ಅಪಘಾತ
(ನ್ಯೂಸ್ ಕಡಬ) newskadaba.com. ಮಂಗಳೂರು,ಜ.12.ಮಂಗಳೂರಿನ ಯುವತಿಯೋರ್ವರು ಸಂಜೆ ವೇಳೆ ಮಂಗಳೂರಿನ ಬಾವುಟ ಗುಡ್ಡೆಯಲ್ಲಿರುವ ಬಸ್ ತಂಗುದಾಣದ ಬಳಿ ಬಸ್ಸಿಗಾಗಿ ಕಾಯುತ್ತಿದ್ದರು. ಆ ಸಮಯಕ್ಕೆ ಅವರಿಗೆ ಫೇಸುಬುಕ್ ಮುಖಾಂತರ ಪರಿಚಯವಾದ ಮನ್ಸೂರು ಎಂಬಾತನು ಓಮ್ನಿ ಕಾರಿನಲ್ಲಿ ಅಲ್ಲಿಗೆ ಬಂದರು. ಯುವತಿಯನ್ನು ಮನ್ಸೂರು ಕಾರಲ್ಲಿ ಬಾ ಎಂದು ಕರೆದಾಗ ಯುವತಿ ಬರಲು ಒಪ್ಪದಿದ್ದಾಗ ಒತ್ತಾಯ ಪೂರ್ವಕವಾಗಿ ಹೇಗೋ ಪುಸಲಾಯಿಸಿಕೊಂಡು ಕಾರಿನಲ್ಲಿ ಕುಳ್ಳಿರಿಸಿ ಯುವತಿಯ ಮನೆಗೆ ಬಿಡುವುದಾಗಿ ಹೇಳಿದನು. ಬಳಿಕ ಮನೆಗೆ ಬಿಡದೇ ಬೇರೆ ಬೇರೆ ರಸ್ತೆಗಳಲ್ಲಿ ಅತೀ ವೇಗವಾಗಿ ಚಲಾಯಿಸಿಕೊಂಡು […]








