ರಾಮಕುಂಜ

ಶ್ರೀ ರಾಮಕುಂಜೇಶ್ವರ ವಾರ್ಷಿಕ ಜಾತ್ರೆ-ನೇಮೋತ್ಸವ

(ನ್ಯೂಸ್ ಕಡಬ) newskadaba.com.ಕಡಬ,ಜ.26.ರಾಮಕುಂಜ ಗ್ರಾಮದ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ಪ್ರಯುಕ್ತ ದೈವಗಳ ನೇಮೋತ್ಸವ ಜ.23 ಮತ್ತು 24ರಂದು ನಡೆಯಿತು.ಜ.23ರಂದು ರಾತ್ರಿ ಕಲೆಂಬಿತ್ತಾಯ, ಕಲ್ಲುರ್ಟಿ, ಅಂಗಣ ಪಂಜುರ್ಲಿ ದೈವಗಳ ನೇಮ ನಡೆಯಿತು. ಜ.24ರಂದು ಬೆಳಿಗ್ಗೆ ಶಿರಾಡಿ, ರುದ್ರಚಾಮುಂಡಿ, ಗಿಳಿರಾಮ, ಗುಳಿಗ ದೈವಗಳ ನೇಮ ನಡೆಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ, ಸದಸ್ಯರುಗಳು, ಉತ್ಸವ ಸಮಿತಿ, ಶ್ರೀ ರಾಮಕುಂಜೇಶ್ವರ ಟ್ರಸ್ಟ್‍ನ ಪದಾಧಿಕಾರಿಗಳು, ಸದಸ್ಯರು, ಭಕ್ತರು ನೇಮೋತ್ಸವದಲ್ಲಿ ಪಾಲ್ಗೊಂಡರು.  

ಶ್ರೀ ರಾಮಕುಂಜೇಶ್ವರ ವಾರ್ಷಿಕ ಜಾತ್ರೆ-ನೇಮೋತ್ಸವ Read More »

ಕರಾವಳಿ

ರಾಮಕುಂಜ: ಶ್ರೀ ರಾಮಕುಂಜೇಶ್ವರ ವಾರ್ಷಿಕ ಜಾತ್ರೆ-ದರ್ಶನ ಬಲಿ ಉತ್ಸವ

(ನ್ಯೂಸ್ ಕಡಬ) newskadaba.com ಕಡಬ, ಜ.23. ರಾಮಕುಂಜ ಗ್ರಾಮದ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದರ್ಶನಬಲಿ ಉತ್ಸವ ನಡೆಯಿತು. ಬೆಳಿಗ್ಗೆ ನಂದಾದೀಪೋತ್ಸವ, ಬಳಿಕ ಉತ್ಸವ ಆರಂಭಗೊಂಡು ಮಧ್ಯಾಹ್ನ ದೇವರ ದರ್ಶನ ಬಲಿ, ನಂತರ ಬಟ್ಟಲು ಕಾಣಿಕೆ ನಡೆಯಿತು. ಸಂಜೆ ಬಲಿ ಹೊರಟು ದಂಡತೀರ್ಥ ಕೆರೆ ಉತ್ಸವ, ದೇವರ ಗುಡ್ಡೆ, ತಾವೂರು ದಾರಿಯ ಕಟ್ಟೆಪೂಜೆಗಳು ನಡೆದು ರಾತ್ರಿ ಶ್ರೀರಾಮ ಸಂದರ್ಶನೋತ್ಸವ ನಡೆಯಿತು. ಬಳಿಕ ಶಾಲಾ ಕಾಲೇಜು ಬಳಿಯ ಕಟ್ಟೆಪೂಜೆಗಳು, ದೈವಗಳ ಭಂಡಾರ ಹಿಡಿಯುವುದು, ವಸಂತ

ರಾಮಕುಂಜ: ಶ್ರೀ ರಾಮಕುಂಜೇಶ್ವರ ವಾರ್ಷಿಕ ಜಾತ್ರೆ-ದರ್ಶನ ಬಲಿ ಉತ್ಸವ Read More »

ಕರಾವಳಿ

ರಾಮಕುಂಜ: ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಿಂದ ರಾಮಕುಂಜ ಅಮೈ ಕೆರೆ ವೀಕ್ಷಣೆ

 (ನ್ಯೂಸ್ ಕಡಬ) newskadaba.com.ಮಂಗಳೂರು,ಜ.19.ಕಡಬ ಪ್ರವಾದಲ್ಲಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿಯವರು ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮೈ ಯಲ್ಲಿ ನಿರ್ಮಾಣವಾದ ಕೆರೆಯನ್ನು ವೀಕ್ಷಣೆ ಮಾಡಿದರು.ಶ್ರೀ ಕ್ಷೇತ್ರ ಧರ್ಮಸ್ಥಳ, ರಾಮಕುಂಜ ಗ್ರಾಮ ಪಂಚಾಯತಿ ಹಾಗೂ ಸುಳ್ಯ ಶಾಸಕ ಎಸ್.ಅಂಗಾರ ಅವರ ಅನುದಾನದಿಂದ ಸುಮಾರು ಐವತ್ತು ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾದ ಬಹುಉಪಯೋಗಿ ಕೆರೆಯನ್ನು ವೀಕ್ಷಣೆ ಮಾಡಿದ ಸೆಲ್ವಮಣಿಯವರು ಪಂಚಾಯತಿ ಈ ಸಾಧನೆಯನ್ನು ಶ್ಲಾಘಿಸಿದರು. ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಆರ್.ಕೆ ಹಾಗೂ ಅಭಿವೃದ್ಧಿ ಅಧಿಕಾರಿ ಜೆರಾಲ್ಡ್ ಮಸ್ಕರೇನಸ್ ಮುಖ್ಯಕಾರ್ಯನಿರ್ವಹಣಾಧಿಕಾರಿಯವರಿಗೆ

ರಾಮಕುಂಜ: ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಿಂದ ರಾಮಕುಂಜ ಅಮೈ ಕೆರೆ ವೀಕ್ಷಣೆ Read More »

ಕರಾವಳಿ

ರಾಮಕುಂಜ: ವೇದಮೂರ್ತಿ ಇ.ವೆಂಕಟ್ರಮಣ ಉಪಾಧ್ಯಾಯ ನಿಧನ

(ನ್ಯೂಸ್ ಕಡಬ) newskadaba.com.ರಾಮಕುಂಜ,ಜ.12. ಕಡಬ: ರಾಮಕುಂಜ ಗ್ರಾಮದ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಪವಿತ್ರಪಾಣಿ, ನಿವೃತ್ತ ಶಿಕ್ಷಕ, ಇರಕಿಮಠ ನಿವಾಸಿ ರಾಮಕುಂಜ ವೇದಮೂರ್ತಿ ಇ.ವೆಂಕಟ್ರಮಣ ಉಪಾಧ್ಯಾಯ(98)ರವರು ಅನಾರೋಗ್ಯದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು.ವೆಂಕಟ್ರಮಣ ಉಪಾಧ್ಯಾಯರು ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ರಾಮಕುಂಜೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದು ಪ್ರಸ್ತುತ ಪವಿತ್ರಪಾಣಿಯಾಗಿದ್ದರು. ಇರಕಿಮಠ ಮುಖ್ಯಪ್ರಾಣಗೋಪಾಲಕೃಷ್ಣ ದೇವಸ್ಥಾನದ ಆಡಳಿತದಾರರೂ ಆಗಿದ್ದರು. ರಾಮಕುಂಜೇಶ್ವರ  ಹಿ.ಪ್ರಾ.ಶಾಲೆಯಲ್ಲಿ ಸುಮಾರು 32 ವರ್ಷಗಳ ಕಾಲ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಹಿರಿಯ ಪುರೋಹಿತರಾಗಿದ್ದು ದೇವಸ್ಥಾನದ ಕೆಲಸಗಳಲ್ಲಿ

ರಾಮಕುಂಜ: ವೇದಮೂರ್ತಿ ಇ.ವೆಂಕಟ್ರಮಣ ಉಪಾಧ್ಯಾಯ ನಿಧನ Read More »

ಕರಾವಳಿ
Scroll to Top