ರಾಜ್ಯಾದ್ಯಂತ ಒಂದು ಲಕ್ಷ ನಿವೇಶನಗಳು ಹಾಗೂ ಹತ್ತು ಸಾವಿರ ಮನೆಗಳನ್ನು ನೀಡುವ ಮಹತ್ವದ ಯೋಜನೆ ಕೈಗೊಳ್ಳಲು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ
(ನ್ಯೂಸ್ ಕಡಬ) newskadaba.com,ಡಿ.30 ಬೆಂಗಳೂರು: ರಾಜ್ಯದಲ್ಲಿರುವ ಸಮುದಾಯದ ಶ್ರಮಿಕರಿಗೆ ರಿಯಾಯಿತಿ ದರದಲ್ಲಿ ನಿವೇಶನ ಹಾಗೂ ಮನೆಗಳನ್ನು ಒದಗಿಸಲು ಮುಂದಾಗಿರುವ ಕರ್ನಾಟಕ ಗೃಹ ಮಂಡಳಿ, ರಾಜ್ಯಾದ್ಯಂತ ಒಂದು ಲಕ್ಷ ನಿವೇಶನಗಳು ಹಾಗೂ ಹತ್ತು ಸಾವಿರ ಮನೆಗಳನ್ನು ನೀಡುವ ಮಹತ್ವದ ಯೋಜನೆ ಕೈಗೊಳ್ಳಲು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯದ ಪ್ರಗತಿ ಹಾಗೂ ನಗರೀಕರಣದ ಹಿನ್ನೆಲೆಯಲ್ಲಿ ವಸತಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಬೇಡಿಕೆ ನೀಗಿಸುವ ನಿಟ್ಟಿನಲ್ಲಿ ಸರಕಾರ ಹಲವು ವಸತಿ ಯೋಜನೆಗಳನ್ನು ಹಮ್ಮಿಕೊಂಡಿದೆ. ಇದರ ನಡುವೆ ಗೃಹ ಮಂಡಳಿ ಕೂಡ […]
