ಬಿ.ಸಿ ರೋಡ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕನ ಜೇಬಿನಿಂದ 1 ಲಕ್ಷ ರೂ. ನಗದು ಕದ್ದ ಕೇರಳದ ಮೂಲದ ವ್ಯಕ್ತಿ ಬಂಧನ
(ನ್ಯೂಸ್ ಕಡಬ) newskadaba.com, ಸೆ.22 ಬಂಟ್ವಾಳ : ಬಿ.ಸಿ ರೋಡ್ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದ ಪ್ರಯಾಣಿಕನ ಜೇಬಿನಿಂದ 1 ಲಕ್ಷ ರೂ. ಕದ್ದ ಆರೋಪದ ಮೇಲೆ ಕೇರಳ ವ್ಯಕ್ತಿಯನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ಕೇರಳದ ತ್ರಿಶೂರ್ ಜಿಲ್ಲೆಯ ನಝೀರ್ ಪುನ್ನಯ್ಯಾರ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಕುಂದಾಪುರದ ರಂಗನಾಥ ಬೆಳ್ಳಾಲ ಅವರು ತಮ್ಮ ಕಾರನ್ನು ಮಾರಾಟ ಮಾಡಿ 1.60 ಲಕ್ಷ ರೂ. ಹಣದೊಂದಿಗೆ ಮತ್ತೊಂದು ಉಪಯೋಗಿಸಿದ ಕಾರು ಖರೀದಿಸಲು ಆಗಸ್ಟ್ 14 ರಂದು ಬಿ.ಸಿ. […]

