ಆರೋಪಿ ನಟ ದರ್ಶನ್ ವಿಚಾರಣೆ ಆರಂಭಿಸಿದ ಐಟಿ ತಂಡ

(ನ್ಯೂಸ್ ಕಡಬ) newskadaba.com ಬಳ್ಳಾರಿ, ಸೆ. 26. ಬೆಂಗಳೂರಿನಿಂದ ಬಂದಿರುವ ಐದು ಜನ ಅಧಿಕಾರಿಗಳ ಐಟಿ ತಂಡ ಇಂದು ನಗರದ ಸೆಂಟ್ರಲ್ ಜೈಲಿನಲ್ಲಿ ಕೊಲೆ ಆರೋಪಿ ನಟ ದರ್ಶನ್ ವಿಚಾರಣೆ ನಡೆಸಿದ್ದಾರೆ. ಜೈಲಿನ ಸೂಪರಿಂಟೆಂಡೆಂಟ್ ಕೊಠಡಿಯಲ್ಲಿ ಅವರ ಎದುರಿನಲ್ಲಿಯೇ ನ್ಯಾಯಾಲಯದ ಸೂಚನೆಯಂತೆ ಇಂದು ಮತ್ತು  ನಾಳೆ ವಿಚಾರಣೆ ನಡೆಯಲಿದೆ. ರೇಣುಕಸ್ವಾಮಿ ಕೊಲೆ ಆರೋಪವನ್ನು ಮತ್ತೊಬ್ಬರು ಒಪ್ಪಿಕೊಳ್ಳಲು 80 ಲಕ್ಷ ರೂ ನಗದು ಹಣ ನೀಡಿದ ಕುರಿತು ತನಿಖೆ ನಡೆಯಿತ್ತಿದೆ.  

ಆರೋಪಿ ನಟ ದರ್ಶನ್ ವಿಚಾರಣೆ ಆರಂಭಿಸಿದ ಐಟಿ ತಂಡ Read More »

ಕರ್ನಾಟಕ, ಕ್ರೈಮ್ ನ್ಯೂಸ್