ಮಂಗಳೂರು

ಕಳೆದ 24 ಗಂಟೆ ಅವಧಿಯಲ್ಲಿ 44,281 ಕೊರೊನಾ ಪ್ರಕರಣಗಳು ಪತ್ತೆ

(ನ್ಯೂಸ್ ಕಡಬ) newskadaba.com ನವದೆಹಲಿ ನ. 11: ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ಸಕ್ರಿಯ ಪ್ರಕರಣಗಳಲ್ಲಿ ಭಾರಿ ಇಳಿಕೆ ಕಂಡು ಬಂದಿದ್ದು, ಐದು ಲಕ್ಷಕ್ಕಿಂತಲೂ ಕಡಿಮೆಯಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ 44,281 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 512 ಮಂದಿ ಸಾವನ್ನಪ್ಪಿದ್ದಾರೆ.   ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 86,36,012ಕ್ಕೆ ಏರಿಕೆಯಾಗಿದೆ. ಈವರೆಗೆ 1,27,571 ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. 50,326 ಸೋಂಕಿತರು ಗುಣಮುಖರಾಗಿದ್ದು, ಇಲ್ಲಿಯತನಕ 80,13,784 ಮಂದಿ ಗುಣಮುಖರಾಗಿದ್ದಾರೆ. ಸದ್ಯ 4,94,657 ಸಕ್ರಿಯ ಪ್ರಕರಣಗಳಿವೆ.    

ಕಳೆದ 24 ಗಂಟೆ ಅವಧಿಯಲ್ಲಿ 44,281 ಕೊರೊನಾ ಪ್ರಕರಣಗಳು ಪತ್ತೆ Read More »

ರಾಷ್ಟ್ರೀಯ ನ್ಯೂಸ್

ಎಡಮಂಗಲ: ಗ್ರಾ.ಪಂ. ಪಿ.ಡಿ.ಒ ಆಗಿ ಜಯಪ್ರಕಾಶ್ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಎಡಮಂಗಲ, ನ.11: ಎಡಮಂಗಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಜಯಪ್ರಕಾಶ್ ರವರು ಅಧಿಕಾರ ಸ್ವೀಕರಿಸಿದ್ದಾರೆ.   ಮೊದಲು ಪಿ.ಡಿ.ಒ ಆಗಿದ್ದ ಸರಿತಾ ಓಲ್ಗಾ ಡಿ’ಸೋಜರವರು ಸಂಪಾಜೆ ಗ್ರಾ.ಪಂ. ಗೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಇವರು ಪಿ.ಡಿ.ಒ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಇವರು ಮೂಲತಃ ಸೋಮವಾರಪೇಟೆಯವರಾಗಿರುವ ಜಯಪ್ರಕಾಶ್ ರವರು ಸುಳ್ಯದಲ್ಲಿ ನೆಲೆಸಿದ್ದು, ಕಾಣಿಯೂರು ಗ್ರಾ.ಪಂ. ನಲ್ಲಿ ಅಭಿವೃದ್ಧಿ ಅಧಿಕಾರಿಯಾಗಿದ್ದಾರೆ. ಈ ಹಿಂದೆ ಜಾಲ್ಸೂರು, ಅರಂತೋಡು, ಮಡಪ್ಪಾಡಿ ಮತ್ತು ಸುಳ್ಯ ತಾ.ಪಂ. ನಲ್ಲಿ ಕರ್ತವ್ಯ ನಿರ್ವಹಿಸಿ,ಇದೀಗ ಎಡಮಂಗಲ ಗ್ರಾ.ಪಂ.

ಎಡಮಂಗಲ: ಗ್ರಾ.ಪಂ. ಪಿ.ಡಿ.ಒ ಆಗಿ ಜಯಪ್ರಕಾಶ್ ಅಧಿಕಾರ ಸ್ವೀಕಾರ Read More »

ಕರಾವಳಿ

ಬಂಟ್ವಾಳ: ಗೋಮಯದಿಂದ ಹಣತೆ ತಯಾರಿಸಿದ ಕಾಲೇಜು ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com ಬಂಟ್ವಾಳ , ನ.11: ಕೊರೋನಾ ಸೋಂಕಿನಿಂದಾಗಿ ಎದುರಾದ ಸವಾಲುಗಳ ನಡುವೆಯೂ, ಬರುವ ವಾರದಲ್ಲೇ ದೀಪಗಳ ಹಬ್ಬವಾದ ದೀಪಾವಳಿ ಆಗಮಿಸಲಿದೆ. ಈ ಹಬ್ಬವನ್ನು ಆಚರಿಸಲು ಸಕಲ ಸಿದ್ಧತೆಗಳು ನಡೆಯುತ್ತಿದೆ. ಸ್ವಾವಲಂಬಿ ಭಾರತವನ್ನು ಸಾಧಿಸುವ ಕನಸಿಗೆ ಅನುಗುಣವಾಗಿ, ಕಲ್ಲಡ್ಕದ ಶ್ರೀ ರಾಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಗೋಮಯವನ್ನು(ಸೆಗಣಿ) ಕಚ್ಚಾ ವಸ್ತುವಾಗಿ ಬಳಸಿಕೊಂಡು ದೀಪಾವಳಿಗಾಗಿ ಹಣತೆಯನ್ನು ಸಿದ್ಧಪಡಿಸುತ್ತಿದ್ದಾರೆ.     ಈ ಹಣತೆಗಳನ್ನು ತಯಾರಿಸಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದ್ದು, ಸುಮಾರು 10,000 ಹಣತೆ ತಯಾರಿಸಲು ಈ ಒಂದು ಶಿಕ್ಷಣ ಸಂಸ್ಥೆಯು

ಬಂಟ್ವಾಳ: ಗೋಮಯದಿಂದ ಹಣತೆ ತಯಾರಿಸಿದ ಕಾಲೇಜು ವಿದ್ಯಾರ್ಥಿಗಳು Read More »

ಕರಾವಳಿ

ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರಿಂದ ನಿರ್ಮಾಲಾ ಸೀತಾರಾಮನ್ ಅವರ ಭೇಟಿ

(ನ್ಯೂಸ್ ಕಡಬ) newskadaba.com ದೆಹಲಿ ನ. 11:  ಉಡುಪಿಯ ಪ್ರಸಿದ್ಧ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಮಂಗಳವಾರ ಕೇಂದ್ರ ಹಣಕಾಸು ಮಂತ್ರಿ ನಿರ್ಮಾಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದರು.     ಬಳಿಕ ಉಡುಪಿಯ ನೇಕಾರ ಸಮಾಜದವರು ದೀಪಾವಳಿಯ ಉಡುಗೊರೆಯಾಗಿ ಕೊಡಮಾಡಿದ ಎರಡು ಕೈ ಮಗ್ಗದ ಸೀರೆಗಳನ್ನು ಹಾಗೂ ಬೆಳ್ಳಿ ಬಟ್ಟಲಲ್ಲಿ ಕುಂಕುಮ ,ಉಡುಪಿ ಕೃಷ್ಣನ ಪ್ರಸಾದ ಫಲ ಮಂತ್ರಾಕ್ಷತೆ ನೀಡಿ ರಾಷ್ಟ್ರದ ಒಳಿತಿಗಾಗಿ ಅತ್ಯಂತ ಸಮರ್ಥವಾಗಿ ಕಾರ್ಯ ನಿರ್ವಹಿಸುವ ಶಕ್ತಿಯನ್ನು ದೇವರು ಅನುಗ್ರಹಿಸಲಿ

ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರಿಂದ ನಿರ್ಮಾಲಾ ಸೀತಾರಾಮನ್ ಅವರ ಭೇಟಿ Read More »

ಕರ್ನಾಟಕ

ಸುಳ್ಯದ ಖ್ಯಾತ ಚಿತ್ರಕಲಾ ಶಿಕ್ಷಕ ನಿಧನ

(ನ್ಯೂಸ್ ಕಡಬ) newskadaba.com ಸುಳ್ಯ ನ. 11: ಸುಳ್ಯದ ಖ್ಯಾತ ಚಿತ್ರಕಲಾ ಶಿಕ್ಷಕ ಮಹಾಬಲ ಕುಳರವರು ಮರದಿಂದ ಬಿದ್ದು ಗಾಯಗೊಂಡು ವಿಧಿವಶರಾಗಿದ್ದಾರೆ.   ಮಂಗಳವಾರದಮದು ತಮ್ಮ ಮನೆಯ ಬಳಿಯಿದ್ದ ಮರದ ರೆಂಬೆ ಕಡಿಯುತ್ತಿದ್ದ ವೇಳೆ ಮರದಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಸುಳ್ಯ ತಾಲೂಕಿನ ಖ್ಯಾತ ಚಿತ್ರಕಲಾ ಶಿಕ್ಷಕ ಕುಳ ಅವರು ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗಿನ ವೇಳೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಹಾಬಲ ಕುಳ ಅವರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಪಂಜ ಸರ್ಕಾರಿ ಕಾಲೇಜಿನಲ್ಲಿಪ್ರೌಢಶಾಲಾ

ಸುಳ್ಯದ ಖ್ಯಾತ ಚಿತ್ರಕಲಾ ಶಿಕ್ಷಕ ನಿಧನ Read More »

ಕರಾವಳಿ

ಪಂಜ: ಯಕ್ಷಗಾನ ಕಲಾವಿದರಿಗೆ ಪಂಚಲಿಂಗೇಶ್ವರ ದೇವಾಲಯದ ವತಿಯಿಂದ ಗೌರವ ಸಲ್ಲಿಕೆ

(ನ್ಯೂಸ್ ಕಡಬ) newskadaba.com ಪಂಜ, ನ.11: ಪರಿವಾರ ಪಂಚಲಿಂಗೇಶ್ವರ ದೇವಾಲಯ ಪಂಜ ಇದರ ವತಿಯಿಂದ ಯಕ್ಷಗಾನ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ ಹಾಗೂ ರಾಘವೇಂದ್ರ ಆಚಾರ್ ಜನ್ಸಾಲೆ ಅವರಿಗೆ ಹಾಗೂ ಇತರ ಹಿಮ್ಮೇಳನ ಕಲಾವಿದರಿಗೂ ಶಾಲು ಹೊದಿಸಿ, ದೇವರ ಪ್ರಸಾದವನ್ನು ನೀಡಿ ಗೌರವಿಸಲಾಯಿತು.   ಕಾರ್ಯಕ್ರಮದಲ್ಲಿ ದೇವಳದ ಅರ್ಚಕರಾದ ಶ್ರೀ ನಾಗರಾಜ ಹೆಗಡೆ ಅದೇ ರೀತಿ ದೇವಳದ ಆಡಳಿತಾಧಿಕಾರಿಗಳಾದ ಡಾ. ದೇವಿಪ್ರಸಾದ್ ಕಾನತ್ತೂರು ಹಾಗೂ ಇತತರು ಉಪಸ್ಥಿತರಿದ್ದರು.    

ಪಂಜ: ಯಕ್ಷಗಾನ ಕಲಾವಿದರಿಗೆ ಪಂಚಲಿಂಗೇಶ್ವರ ದೇವಾಲಯದ ವತಿಯಿಂದ ಗೌರವ ಸಲ್ಲಿಕೆ Read More »

ಕರಾವಳಿ

ಪುತ್ತೂರು: ಸೋಲಾರ್ ದೀಪ ನೀಡಿ ಮಾತು ಉಳಿಸಿಕೊಂಡ ಶಾಸಕ ಸಂಜೀವ ಮಠಂದೂರು

(ನ್ಯೂಸ್ ಕಡಬ) newskadaba.com ಪುತ್ತೂರು, ನ.11: ಶಾಸಕ ಸಂಜೀವ ಮಠಂದೂರು ಅವರು ಮಾಣಿಲ ದಂಡೆಪ್ಪಾಡಿ ಕಿಟ್ಟ ಮೂಲ್ಯ ಅವರ ಮನೆಯಲ್ಲಿ ಬೆಳಕು ಕಾಣದ ಮನೆಯೊಂದಕ್ಕೆ ಬೆಳಕು ನೀಡುವ ಭರವಸೆ  ನೀಡಿದಂತೆ ಸೋಲಾರ್ ದೀಪವವನ್ನು ಉದ್ಘಾಟಿಸಿದರು.     ತಿಂಗಳ ಹಿಂದೆ ಮನೆಗೆ ಭೇಟಿ ನೀಡಿದ ಅವರು ಸೋಲಾರ್ ದೀಪ ಕೊಡಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಶಾಸಕರು ಸೋಲಾರ್ ದೀಪ ಅಳವಡಿಸಿ ತನ್ನ ಭರವಸೆ ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯೆ ಜಯಶ್ರೀ ಕೋಡಂದೂರು, ಪೆರುವಾಯಿ ಸೇವಾ ಸಹಕಾರಿ ಸಂಘದ

ಪುತ್ತೂರು: ಸೋಲಾರ್ ದೀಪ ನೀಡಿ ಮಾತು ಉಳಿಸಿಕೊಂಡ ಶಾಸಕ ಸಂಜೀವ ಮಠಂದೂರು Read More »

ಕರಾವಳಿ

ಅರಣ್ಯ ಸಚಿವ ಆನಂದ್ ಸಿಂಗ್ ನಿವಾಸದ ಬಳಿ ಬಂದ ಮೊಸಳೆ

(ನ್ಯೂಸ್ ಕಡಬ) newskadaba.com ಹೊಸಪೇಟೆ ನ. 11:  ಅರಣ್ಯ ಸಚಿವ ಆನಂದ್ ಸಿಂಗ್ ನಿವಾಸದ ಬಳಿ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಕೆಲಕಾಲ ಆತಂಕ ಸೃಷ್ಟಿಸಿತ್ತು.ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದ ಬೈಪಾಸ್ ಬಳಿ ಎಲ್‍ಎಲ್‍ಸಿ ಕಾಲುವೆ ಇದೆ. ಕಳೆದ ದಿನ ರಾತ್ರಿ ಕಾಲುವೆಯಿಂದ ಮೊಸಳೆಯು ಸಚಿವರ ನಿವಾಸದ ಮುಂಭಾಗದ ರಸ್ತೆಗೆ ಬಂದಿತ್ತು.       ಮೊಸಳೆ ಇರುವ ಮಾಹಿತಿ ಅರಿತ ಕಮಲಾಪುರದ ಅಟಲ್ ವಾಜಪೇಯಿ ಝೂಲಾಜಿಕಲ್ ಪಾರ್ಕ್ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೆ ಮೊಸಳೆಯನ್ನು ಸೆರೆ ಹಿಡಿದಿದ್ದಾರೆ. ನಂತರ

ಅರಣ್ಯ ಸಚಿವ ಆನಂದ್ ಸಿಂಗ್ ನಿವಾಸದ ಬಳಿ ಬಂದ ಮೊಸಳೆ Read More »

ಕರ್ನಾಟಕ

ಉಡುಪಿ : ನಕಲಿ ದಾಖಲೆಗಳೊಂದಿಗೆ ಅಡಿಕೆ ಸಾಗಾಟ

(ನ್ಯೂಸ್ ಕಡಬ) newskadaba.com  ಉಡುಪಿ ನ. 11: ಸರಕು ವಾಹನದಲ್ಲಿ ನಕಲಿ ದಾಖಲೆಗಳೊಂದಿಗೆ ಅಡಿಕೆ ಸರಕನ್ನು ಸಾಗಣೆ ಮಾಡುತ್ತಿದ್ದ ವೇಳೆ ವಾಣಿಜ್ಯ ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿ ರೂ 53.10 ಲಕ್ಷ ದಂಡವನ್ನು ವಸೂಲಿ ಮಾಡಲಾಗಿದೆ.ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು (ಜಾರಿ)-1, ಪಶ್ಚಿಮ ವಲಯ ಮಂಗಳೂರು ಇವರು 2020 ಮೇ 23ರಂದು ರಸ್ತೆ ಜಾಗೃತಿ ಕಾರ್ಯ ನಡೆಸುವ ಸಂದರ್ಭದಲ್ಲಿ ಅಂಪಾರು-ಕೊಲ್ಲೂರು ರಸ್ತೆಯ ವಂಡ್ಸೆ ಎಂಬ ಸ್ಥಳದಲ್ಲಿ ಸರಕು ವಾಹನವನ್ನು ತಡೆಹಿಡಿದು 380 ಚೀಲ ಅಡಿಕೆ ಸರಕನ್ನು (24700 ಕೆಜಿ) ವಾಹನದೊಂದಿಗೆ

ಉಡುಪಿ : ನಕಲಿ ದಾಖಲೆಗಳೊಂದಿಗೆ ಅಡಿಕೆ ಸಾಗಾಟ Read More »

ಕರಾವಳಿ

ಮಣಿಪಾಲ: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಭೂಪ ➤ ಆರೋಪಿ ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಮಣಿಪಾಲ, ನ.11: ಮಣಿಪಾಲದಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಹಣ ಹಾಗೂ ದಾಖಲೆ ಪತ್ರಗಳನ್ನು ಪಡೆದು ವಂಚಿಸಿಕೊಂಡಿರುವ ಘಟನೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಗಣೇಶ್ ನಾಯ್ಕ್ ಎಂದು ಗುರುತಿಸಲಾಗಿದೆ.     ಪ್ರಕರಣದಲ್ಲಿ ಆರೋಪಿತನು ತಾನು ಕೊಂಕಣ ರೈಲ್ವೆ ಇಲಾಖೆಯಲ್ಲಿ ಟಿ ಸಿ ಆಗಿರುವುದಾಗಿ ಹೇಳಿ  ಉದ್ಯೋಗ ಕೊಡುವುದಾಗಿ  ವ್ಯಕ್ತಿಯನ್ನು  ನಂಬಿಸಿ 20,000 ಹಣ ಹಾಗೂ ದಾಖಲೆ ಪತ್ರಗಳನ್ನು ತೆಗೆದುಕೊಂಡು ವಂಚಿಸಿದ್ದಾನೆ. ಅಲ್ಲದೇ ಮತ್ತೊಬ್ಬ ಯುವತಿಯಿಂದ ಹಣ ಪಡೆದು

ಮಣಿಪಾಲ: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಭೂಪ ➤ ಆರೋಪಿ ಪೊಲೀಸರ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top