ಮಂಗಳೂರು

ಉಡುಪಿ : ನೇಕಾರರ ಕುಟುಂಬದ ನೆರವಿಗೆ ನಿಂತ ನಟಿ ಪ್ರಣೀತಾ

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 22:  ಉಡುಪಿಯಲ್ಲಿ ಪಾರಂಪರಿಕ ಯಕ್ಷಗಾನ ಉಡುಗೆ ನೇಯುತ್ತಿದ್ದ 72 ವರ್ಷ ವಯಸ್ಸಿನ ಲಕ್ಷ್ಮಣ ಶೆಟ್ಟಿಗಾರ್ ಎಂಬ ನೇಕಾರರ ಕುಟುಂಬ ಕೆಲವು ದಿನಗಳಿಂದ ಸುರಿದ ಭಾರಿ ಮಳೆಗೆ ಸಿಳುಕಿ ಸಂಕಷ್ಟದಲ್ಲಿದ್ದಾರೆ. ಇಂಥಾಹ ಸಂದರ್ಭದಲ್ಲಿ ವರಿಗೆ ತಕ್ಷಣಕ್ಕೆ ಬೇಕಾಗುವ ಸಹಾಯ ಒದಗಿಸುವ ಅಭಯವನ್ನು ನಟಿ ಪ್ರಣೀತಾ ಸುಭಾಷ್ ರವರು ನೀಡಿದ್ದಾರೆ.   ಆ ಕುಟುಂಬದವರ ಖಾತೆಗೆ ನೇರವಾಘಿ ಹಣ ಸಂದಾಯ ಮಾಡುತ್ತೇನೆ . ಈ ಕುಟುಂಬವೂ ಸೇರಿದಂತೆ ನೆರೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ […]

ಉಡುಪಿ : ನೇಕಾರರ ಕುಟುಂಬದ ನೆರವಿಗೆ ನಿಂತ ನಟಿ ಪ್ರಣೀತಾ Read More »

ಕರಾವಳಿ, ಕರ್ನಾಟಕ

ಮಂಗಳೂರು – ದೆಹಲಿ ನಡುವೆ ವಿಮಾನ ಸೇವೆ ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 22: ಲಾಕ್‌ಡೌನ್ ಸಡಿಲಿಕೆ ಮಾಡಿದರೂ ಕೆಲವೊಂದು ಉದ್ಯಮಗಳು ಚೇತರಿಸಿಕೊಂಡಿಲ್ಲ. ಲಾಕ್‌ಡೌನ್‌ನಿಂದ ಜನ ಚೇತರಿಕೆ ಹಂತದಲ್ಲೇ ಇದ್ದಾರೆ. ಇನ್ನು ಈ ಮಧ್ಯೆ ಲಾಕ್‌ಡೌನ್ ತೆರವಿನಿಂದ ಒಂದೊಂದೇ ಉದ್ಯಮಗಳು ಓಪನ್ ಆಗುತ್ತಿವೆ. ಇದರಲ್ಲಿ ವಿಮಾನಯಾನ ಕೂಡ ಒಂದು. ಇಂದಿನಿಂದ ಮಂಗಳೂರು-ನವದೆಹಲಿಗೆ ವಿಮಾನಯಾನ ಆರಂಭಗೊಂಡಿದೆ.   ಸ್ಪೈಸ್ ಜೆಟ್ ಸಂಸ್ಥೆ ಮಂಗಳೂರಿನಿಂದ ನವದೆಹಲಿಗೆ ವಿಮಾನಯಾನ ಪ್ರಾರಂಭಿಸುವ ಮೂಲಕ ಪ್ರಯಾಣಿಕರಿಗೆ ಅನುವು ಮಾಡಿಕೊಟ್ಟಿದೆ.ಇಂದು ಬೆಳಗ್ಗೆ ನವದೆಹಲಿಯಿಂದ ಟೇಕ್ ಆಫ್ ಆಗಿರುವ ವಿಮಾನ ಮಧ್ಯಾಹ್ನ 12.35 ಕ್ಕೆ

ಮಂಗಳೂರು – ದೆಹಲಿ ನಡುವೆ ವಿಮಾನ ಸೇವೆ ಆರಂಭ Read More »

ಕರಾವಳಿ, ಕರ್ನಾಟಕ

ನಾಳೆ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ..!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 22:  ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಾಳೆ ಆಶಾ ಕಾರ್ಯಕರ್ತೆಯರು ಸರ್ಕಾರದ ವಿರುದ್ಧ ಬೃಹತ್ ಧರಣಿ ನಡೆಸಲು ಮುಂದಾಗಿದ್ದಾರೆ. ಎಐಯುಟಿಯುಸಿ ವತಿಯಿಂದ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿರುವ ಆಶಾ ಕಾರ್ಯಕರ್ತೆಯರು, ಸರ್ಕಾರಕ್ಕೆ ದುಡಿಯುವ ವರ್ಗದ ನೋವು ತಿಳಿಸಲು ಬೀದಿಗಿಳಿಯಲಿದ್ದಾರೆ. ಮಾಸಿಕ ವೇತನ 12 ಸಾವಿರ ನಿಗದಿ ಪಡಿಸುವಂತೆ ಆಗ್ರಹಿಸಿ ಫ್ರೀಡಂ ಪಾರ್ಕ್​ನಲ್ಲಿ ಅಹೋ ರಾತ್ರಿ ಧರಣಿ ನಡೆಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ

ನಾಳೆ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ..!! Read More »

ಕರಾವಳಿ

ಪಂಜ : ಇಮ್ಯೂನಿಟಿ ಬೂಸ್ಟರ್ ಮಾತ್ರೆಗಳನ್ನು ವಿತರಿಸಿ ಹುಟ್ಟುಹಬ್ಬ ಆಚರಣೆ

ಕಡಬ ತಾಲೂಕಿನ ಪಂಜದ ತೊಂಡಚ್ಚನ್ ಇಂಡಸ್ಟ್ರೀಸ್ ನ ಮಾಲಕ ಮನು ಪಂಜ ಮತ್ತು ಆಶಾ ದಂಪತಿಯ ಎರಡು ವರುಷದ ಪುತ್ರ ಆರವ್ ನ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಯಿತು.   ಕೇಕ್ ಕಟ್ ಮಾಡುವ ಬದಲಾಗಿ, ತಮ್ಮದೇ ತೊಂಡಚ್ಚನ್ ಇಂಡಸ್ಟ್ರೀಸ್ ನ ಸಿಬ್ಬಂದಿಗಳಿಗೆ ಇಮ್ಯೂನಿಟಿ ಬೂಸ್ಟರ್ ಮಾತ್ರೆಗಳನ್ನು ವಿತರಿಸುವ ಮೂಲಕ ಆರವ್ ರವರ ಹುಟ್ಟು ಹಬ್ಬವನ್ನು ಪಂಜದ ಕೃಷ್ಣನಗರದಲ್ಲಿರುವ ತೊಂಡಚ್ಚನ್ ತೊಂಡಚ್ಚನ್ ಇಂಡಸ್ಟ್ರೀಸ್ ನಲ್ಲಿ ಆಚರಿಸಿದರು. ಈ ಮೂಲಕ ಕೋವಿಡ್ 19 ವಿರುದ್ಧ ಹೋರಾಡುವ ಸಂದೇಶವನ್ನು ಸಾರಿದ್ದಾರೆ.

ಪಂಜ : ಇಮ್ಯೂನಿಟಿ ಬೂಸ್ಟರ್ ಮಾತ್ರೆಗಳನ್ನು ವಿತರಿಸಿ ಹುಟ್ಟುಹಬ್ಬ ಆಚರಣೆ Read More »

ಕರಾವಳಿ, ಕರ್ನಾಟಕ

ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣ ➤ 12 ವರ್ಷದ ಬಳಿಕ ಆರೋಪಿ ಅರೇಸ್ಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 22:  ಹನ್ನೆರೆಡು ವರ್ಷಗಳ ಹಿಂದೆ ನಗರದಲ್ಲಿ ಎಸಗಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಶಂಕಿತ ಉಗ್ರ ಶೋಯಬ್‌ ಎಂಬಾತನನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.   2008ರಲ್ಲಿ ಬೆಂಗಳೂರಿನ ಮಡಿವಾಳ ಸೇರಿದಂತೆ ಹಲವು ಕಡೆ ನಡೆದಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಶೋಯಬ್‌ ಭಾಗಿಯಾಗಿದ್ದ.ಘಟನೆ ನಡೆದಾಗಿನಿಂದಲೂ ಆರೋಪಿ ತಲೆಮರೆಸಿ ಕೊಂಡಿದ್ದ. ಆರೋಪಿ ಕೇರಳದಲ್ಲಿ ಇರುವ ಬಗ್ಗೆ ಮಾಹಿತಿ ಆಧರಿಸಿ ರಾಷ್ಟ್ರೀಯ ತನಿಖಾ ದಳಗಳ

ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣ ➤ 12 ವರ್ಷದ ಬಳಿಕ ಆರೋಪಿ ಅರೇಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಟೀಲು ದೇಗುಲ ಸೀಲ್‌ಡೌನ್ ಆಗಿಲ್ಲ ➤ ಸುಳ್ಳು ಸುದ್ದಿಗಳಿಗೆ ಕಿವಿಗೊಡದಂತೆ ಆಡಳಿತ ಮಂಡಳಿ ಮನವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.22: ಕರಾವಳಿಯ ಪ್ರಸಿದ್ಧ ಕ್ಷೇತ್ರಗಳಲ್ಲೊಂದಾಗಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸೀಲ್ ಡೌನ್ ಎನ್ನುವ ಸುದ್ದಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅದು ಸುಳ್ಳು ಸುದ್ದಿ ಭಕ್ತರು ಗೊಂದಲಕ್ಕೀಡಾಗುವುದು ಬೇಡ ಎಂದು ಕ್ಷೇತ್ರದ ಆಡಳಿತ ಮಂಡಳಿ ತಿಳಿಸಿದೆ.     ಇನ್ನು ಒಂದು ವಾರದ ಹಿಂದೆ ದೇಗುಲದ ಅರ್ಚಕರೊಬ್ಬರಲ್ಲಿ ಕೊರೋನಾ ಸೋಂಕು ದೃಢಪಟ್ಟಿತ್ತು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಗುಣಮುಖರಾಗಿದ್ದಾರೆ. ಕಳೆದ ದಿನ (ಸೋಮವಾರ) ಮಧ್ಯಾಹ್ನದ ವೇಳೆಗೆ ಸಾಮಾಜಿಕ

ಕಟೀಲು ದೇಗುಲ ಸೀಲ್‌ಡೌನ್ ಆಗಿಲ್ಲ ➤ ಸುಳ್ಳು ಸುದ್ದಿಗಳಿಗೆ ಕಿವಿಗೊಡದಂತೆ ಆಡಳಿತ ಮಂಡಳಿ ಮನವಿ Read More »

ಕರಾವಳಿ, ಕರ್ನಾಟಕ

ಫೇಸ್​ಬುಕ್ ಗೆಳತಿ ಭೇಟಿಗೆ ದೂರದಿಂದ ಬಂದ ಯುವಕ ➤ ಗೆಳತಿ ಕಂಡು ಬೆಚ್ಚಿ ಬಿದ್ದು ಚಾಕು ಎಸೆದ.!!

(ನ್ಯೂಸ್ ಕಡಬ) newskadaba.com ಕಾಸರಗೋಡು, ಸೆ. 22:  ಫೇಸ್​ಬುಕ್​ನಲ್ಲಿ ಪರಿಚಯವಾದ ಗೆಳತಿಯನ್ನು ಭೇಟಿಯಾಗಲು 283 ಕಿ.ಮೀ.ದೂರದ ತ್ರಿಶೂರ್​ನಿಂದ ಕಾಸರಗೋಡಿನ ಬೇಕಲಕ್ಕೆ ಬಂದ ಯುವಕ ದಂಗಾಗಿದ್ದಾನೆ.     ಸಾಮಾಜಿಕ ಜಾಲತಾಣದಲ್ಲಿ 18ರ ಹರೆಯದ ಯುವತಿಯಾಗಿ ತನ್ನನ್ನು ತಾನು ಪರಿಚಯಿಸಿಕೊಂಡಿದ್ದ ಆಕೆ 50 ವರ್ಷದ ಗೃಹಿಣಿ ಎಂದು ತಿಳಿದ ಯುವಕ, ತಾನು ಮೋಸಹೋದುದನ್ನು ತಿಳಿದು ತನ್ನಲ್ಲಿದ್ದ ಚಾಕುವನ್ನು ಆಕೆಯತ್ತ ಎಸೆದ ಘಟನೆ ನಡೆದಿದೆ.ಚಾಟಿಂಗ್ ಸಮಯದಲ್ಲಿ ಆಕೆಗೆ ಹಂತಹಂತವಾಗಿ ಕಳುಹಿಸಿದ್ದ 50 ಸಾವಿರ ರೂ ಕಳುಹಿಸಿದ್ದಾನೆ. ಇದನ್ನ ಮರು ಪಾವತಿಸುವಂತೆ

ಫೇಸ್​ಬುಕ್ ಗೆಳತಿ ಭೇಟಿಗೆ ದೂರದಿಂದ ಬಂದ ಯುವಕ ➤ ಗೆಳತಿ ಕಂಡು ಬೆಚ್ಚಿ ಬಿದ್ದು ಚಾಕು ಎಸೆದ.!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಲಾರಿ

(ನ್ಯೂಸ್ ಕಡಬ) newskadaba.com ಪಂಜಿಗುಂಡಿ, ಸೆ.22: ಉಡುಪಿಯಿಂದ ಮಡಿಕೇರಿಗೆ ಕೋಳಿ ಆಹಾರ ತುಂಬಿಕೊಂಡು ತೆಳುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಘಟನೆ ಕನಕಮಜಲು ಗ್ರಾಮದ ಪಂಜಿಗುಂಡಿ ಎಂಬಲ್ಲಿ ಕಳೆದ ದಿನ ಮಧ್ಯರಾತ್ರಿ ಸಂಭವಿಸಿದೆ.     ಆಹಾರ ತುಂಬಿಕೊಂಡು ಮಡಿಕೇರಿಗೆ ತರಳುತ್ತಿದ್ದ ಲಾರಿ ಆನೆಗುಂಡಿ ದಾಟಿ ಇಳಿಜಾರಿನಲ್ಲಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆದಿದೆ. ಲಾರಿಯಲ್ಲಿ ಚಾಲಕ ಮಾತ್ರ ಇದ್ದು,  ಅಪಾಯದಿಂದ ಪಾರಾಗಿದ್ದಾರೆ.  

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಲಾರಿ Read More »

ಕರಾವಳಿ

ಮಂಗಳೂರಿಗೆ ಮತ್ತೊಂದು ಗರಿ ➤ ದೇಶದ ಮೊದಲ ಕೋಸ್ಟ್‌ಗಾರ್ಡ್ ಅಕಾಡೆಮಿ ಸ್ಥಾಪನೆ

(ನ್ಯೂಸ್ ಕಡಬ) newskadaba.com ಮಂಗಳೂರು,ಸೆ. 22: ದೇಶದ ಮೊದಲ ಕೋಸ್ಟ್‌ಗಾರ್ಡ್ ಅಕಾಡೆಮಿ ಮಂಗಳೂರಿನಲ್ಲೇ ಸ್ಥಾಪನೆಯಾಗುವುದು ಖಚಿತಗೊಂಡಿದೆ. ಈ ಸಂಬಂಧ ರಾಜ್ಯ ಸರ್ಕಾರ ದೃಢವಾಗಿ ಮೊದಲ ಹೆಜ್ಜೆ ಇರಿಸಿದ್ದು, ಮಂಗಳೂರಿನ ಕೆಂಜಾರಿನಲ್ಲಿ 158 ಎಕರೆ ಭೂಮಿಯನ್ನು ಅಕಾಡೆಮಿ ಸ್ಥಾಪನೆಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ರಕ್ಷಣಾ ಸಚಿವಾಲಯಕ್ಕೆ ಹಸ್ತಾಂತರಿಸಿದೆ. ಭಾರತೀಯ ತಟರಕ್ಷಣಾ ಪಡೆಯ ತರಬೇತಿ ಅಕಾಡೆಮಿ (ಐಸಿಜಿಎ)ಯನ್ನು ಮಂಗಳೂರಿನಲ್ಲಿ ಸ್ಥಾಪಿಸುವ ನಿಟ್ಟಿನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಸಕ್ತಿ ವಹಿಸಿದ್ದು, ಶೀಘ್ರ ಈ ಕುರಿತ ಪ್ರಕ್ರಿಯೆಗಳು ಆರಂಭವಾಗಲಿರುವ ಎಲ್ಲ

ಮಂಗಳೂರಿಗೆ ಮತ್ತೊಂದು ಗರಿ ➤ ದೇಶದ ಮೊದಲ ಕೋಸ್ಟ್‌ಗಾರ್ಡ್ ಅಕಾಡೆಮಿ ಸ್ಥಾಪನೆ Read More »

ಕರಾವಳಿ, ಕರ್ನಾಟಕ

ನೌಕಾಪಡೆಯಿಂದ ಐತಿಹಾಸಿಕ ನಡೆ ➤ ಯುದ್ಧನೌಕೆಯಲ್ಲಿ ಮಹಿಳಾ ಅಧಿಕಾರಿಗಳ ನಿಯೋಜನೆ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 22:  ದೇಶದ ಇತಿಹಾಸಲ್ಲೇ ಪ್ರಪ್ರಥಮ ಬಾರಿಗೆ ಇಬ್ಬರು ಮಹಿಳಾ ಅಧಿಕಾರಿಗಳನ್ನ ನೌಕಾ ಪಡೆಯ ಯುದ್ಧನೌಕೆಯಲ್ಲಿ ನಿಯೋಜನೆ ಮಾಡಲಾಗ್ತಿದೆ. ಸಬ್​ ಲೆಫ್ಟಿನೆಂಟ್​​ಗಳಾದ​​ ಕುಮುದಿನಿ ತ್ಯಾಗಿ ಹಾಗೂ ರಿತಿ ಸಿಂಗ್​​​ ಯುದ್ಧನೌಕೆಯಲ್ಲಿ ನಿಯೋಜನೆಗಳಲ್ಲಿರೋ ಭಾರತದ ಮೊಟ್ಟ ಮೊದಲ ಮಹಿಳೆಯರೆನಿಸಿಕೊಳ್ಳಲಿದ್ದಾರೆ. ಇವರಿಬ್ಬರೂ ಹೆಲಿಕಾಪ್ಟರ್​​​ ಸ್ಟ್ರೀಮ್​ನಲ್ಲಿ ಅಬ್ಸರ್ವರ್ಸ್​(ಏರ್​​ಬೋರ್ನ್​ ಟ್ಯಾಕ್ಟೀಶಿಯನ್ಸ್)​​ ಆಗಿ ಸೇರ್ಪಡೆಗೊಳ್ಳಲು ಆಯ್ಕೆಯಾಗಿದ್ದಾರೆ. ಮುಂದೆ ಕುಮುದಿನಿ ಹಾಗೂ ರಿತಿ ಅವರು ನೌಕೆಯ ಹೊಸ ಎಂಎಚ್​​-60 ಹೆಲಿಕಾಪ್ಟರ್​​ಗಳ ಹಾರಾಟ ನಡೆಸುವ ನಿರೀಕ್ಷೆ ಇದೆ ಅಂತ ವರದಿಯಾಗಿದೆ. ಕೊಚ್ಚಿಯಲ್ಲಿ

ನೌಕಾಪಡೆಯಿಂದ ಐತಿಹಾಸಿಕ ನಡೆ ➤ ಯುದ್ಧನೌಕೆಯಲ್ಲಿ ಮಹಿಳಾ ಅಧಿಕಾರಿಗಳ ನಿಯೋಜನೆ Read More »

ರಾಷ್ಟ್ರೀಯ ನ್ಯೂಸ್
Scroll to Top