ಮಂಗಳೂರು

ಉಡುಪಿ: ಆಯಾತಪ್ಪಿ ಕಾಲು ಜಾರಿ ನೀರಿಗೆ ಬಿದ್ದು ಮೀನುಗಾರ ಮೃತ್ಯು

(ನ್ಯೂಸ್ ಕಡಬ) newskadaba.com ಉಡುಪಿ, ಅ.17: ಬಾಬುತೋಟ ಧಕ್ಕೆಯಲ್ಲಿ ಲಂಗರು ಹಾಕಿದ್ದ ಬೋಟಿನಿಂದ ಅಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಜೋನ್ ಎಲ್ ಎಂದು ಗುರುತಿಸಲಾಗಿದೆ.     ಕನ್ಯಾಕುಮಾರಿ ತಮಿಳುನಾಡು ಇವರ ಇಮ್ಯಾನುವೆಲ್ ಗಿಲ್ ನೆಟ್ ಬೋಟ್ ನಲ್ಲಿ ಜೋನ್.ಎಲ್ ಹಾಗೂ ಇತರ 18 ಮಂದಿ ಮೀನುಗಾರರು ಜೊತೆಗಿದ್ದರು. ಮೀನುಗಾರಿಕೆಗೆ ತಮಿಳುನಾಡಿನಿಂದ ತೆರಳಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ, ಸಮುದ್ರದಲ್ಲಿ ಹವಾಮಾನ ವೈಪರೀತ್ಯದಿಂದ ಅಕ್ಟೋಬರ್‌ 12 ರಂದು ರಾತ್ರಿ ಮಲ್ಪೆ ಬಂದರಿನ ಬಾಬುತೋಟ […]

ಉಡುಪಿ: ಆಯಾತಪ್ಪಿ ಕಾಲು ಜಾರಿ ನೀರಿಗೆ ಬಿದ್ದು ಮೀನುಗಾರ ಮೃತ್ಯು Read More »

ಕರಾವಳಿ

ಕರ್ನಾಟಕ ಸಂಗೀತ ದಿಗ್ಗಜ ಪಿ.ಎಸ್. ನಾರಾಯಣಸ್ವಾಮಿ ನಿಧನ

(ನ್ಯೂಸ್ ಕಡಬ) newskadaba.com ಚೆನ್ನೈ, ಅ.17: ಕರ್ನಾಟಕ ಸಂಗೀತದ ಅತ್ಯುತ್ತಮ ಗುರುಗಳಲ್ಲಿ ಒಬ್ಬರಾದ, ಪದ್ಮಭೂಷಣ ವಿದ್ವಾನ್ ಪುಲಿಯೂರ್ ಸುಬ್ರಮಣ್ಯಂ ನಾರಾಯಣಸ್ವಾಮಿ(86 ವ.) ಕಳೆದ ದಿನ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನರಾದರು.     ಸಂಗೀತಗಾರ ಪಿ.ಎಸ್. ನಾರಾಯಣಸ್ವಾಮಿ ಅವರು ತಮ್ಮ ಗುರು ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರಿಂದ ಕಲಿತ ಸಂಗೀತದ ಪಾಠದಿಂದ ಅತ್ಯುತ್ತಮ ಸಾಧಕರಾಗಿ ಗುರುತಿಸಿಕೊಂಡಿದ್ದರು. ಇವರು ಭಾರತ ಸರ್ಕಾರದ ಪದ್ಮಭೂಷಣ, ಮತ್ತು ತಮಿಳುನಾಡು ಸರ್ಕಾರದ ಕಲೈಮಣಿ ಸೇರಿದಂತೆ ಅನೇಕ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ನಾರಾಯಣಸ್ವಾಮಿ ಅವರು ಶೆಮ್ಮಂಗುಡಿ

ಕರ್ನಾಟಕ ಸಂಗೀತ ದಿಗ್ಗಜ ಪಿ.ಎಸ್. ನಾರಾಯಣಸ್ವಾಮಿ ನಿಧನ Read More »

ರಾಷ್ಟ್ರೀಯ ನ್ಯೂಸ್

ಮನೆಯಲ್ಲಿರುವ ಹಲ್ಲಿ ಓಡಿಸಲು ಇಲ್ಲಿದೆ ಸುಲಭ ಉಪಾಯ ➤ ಹೇಗೆ ಎಂಬುದನ್ನ ನೀವೆ ನೋಡಿ

(ನ್ಯೂಸ್ ಕಡಬ) newskadaba.com ಕಡಬ, ಅ.17: ಮನೆಯಲ್ಲಿ ಹಲ್ಲಿಗಳಿರುವುದು ಸಾಮಾನ್ಯ ಸಂಗತಿ. ಹಲ್ಲಿ ಮನುಷ್ಯನಿಗೆ ಯಾವುದೇ ಹಾನಿ ಮಾಡುವುದಿಲ್ಲ. ಆದ್ರೆ ಹಲ್ಲಿ ಮನೆಯಲ್ಲಿದ್ದರೆ ಏನೋ ಒಂತರ ಕಿರಿಕಿರಿ. ಹಲ್ಲಿ ಕಂಡ್ರೆ ಹೆದರುವವರಿದ್ದಾರೆ. ಇದನ್ನು ಓಡಿಸಲು ಅನೇಕ ಪ್ರಯತ್ನಪಟ್ಟು ಸೋತವರಿದ್ದಾರೆ. ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಹಲ್ಲಿ ಓಡಿಸಬಹುದು.     ಮೊದಲು ನಿಮ್ಮ ಮನೆಯಲ್ಲಿರುವ ನವಿಲುಗರಿಯನ್ನು ಹಲ್ಲಿ ಓಡಾಡುವ ಜಾಗದಲ್ಲಿ ಇಡಿ. ಹಲ್ಲಿ ನವಿಲಿಗೆ ಹೆದರುತ್ತದೆ. ಹಾಗಾಗಿ ನವಿಲುಗರಿ ಇರುವ ಜಾಗಕ್ಕೆ ಹಲ್ಲಿ ಬರುವುದಿಲ್ಲ. ಇನ್ನೊಂದು ಕಾಫಿ ಪುಡಿಯನ್ನು ತಂಬಾಕು

ಮನೆಯಲ್ಲಿರುವ ಹಲ್ಲಿ ಓಡಿಸಲು ಇಲ್ಲಿದೆ ಸುಲಭ ಉಪಾಯ ➤ ಹೇಗೆ ಎಂಬುದನ್ನ ನೀವೆ ನೋಡಿ Read More »

ಕರಾವಳಿ

ಮಂಗಳೂರು:‌ ವಿಶ್ವ ಪಾರ್ಶ್ವವಾಯು ದಿನದಂಗವಾಗಿ ಎ.ಜೆ. ಆಸ್ಪತ್ರೆಯಲ್ಲಿ ವಿಶೇಷ ಪ್ಯಾಕೇಜ್

(ನ್ಯೂಸ್ ಕಡಬ) newskadaba.com ಮಂಗಳೂರು, ಅ.17: ಅ.29ನ್ನು ಜಗತ್ತಿನಾದ್ಯಂತ ವಿಶ್ವ ಪಾರ್ಶ್ವವಾಯು ದಿನವಾಗಿ ಆಚರಿಸಲಾಗುತ್ತದೆ. ಇದರ ಅಂಗವಾಗಿ ಅ.19ರಿಂದ ಅ.31ರವರೆಗೆ ಎ.ಜೆ. ಆಸ್ಪತ್ರೆಯಲ್ಲಿ ವಿಶ್ವ ಪಾರ್ಶ್ವವಾಯು 50 ಶೇ. ರಿಯಾಯಿತಿ ಅಂದರೆ ಕೇವಲ ರೂ.2,650ರಲ್ಲಿ ಈ ಪಾರ್ಶ್ವವಾಯು ತಪಾಸಣೆ ಲಭ್ಯವಿರುತ್ತದೆ ಎಂದು ಪ್ರಕಟನೆ ತಿಳಿಸಿದೆ. ತಪಾಸಣೆ ಪ್ಯಾಕೇಜ್ ಪಡೆಯಲು ಮುಂಚಿತವಾಗಿ ನೋಂದಣಿ ಪಡೆದುಕೊಳ್ಳವುದು ಕಡ್ಡಾಯವಾಗಿರುತ್ತದೆ.     ಪಾರ್ಶ್ವವಾಯು ತಪಾಸಣೆಗಳಾದ ರಕ್ತ ಪರೀಕ್ಷಗಳು, ಎಚ್‌ಬಿ, ಆರ್‌ಬಿಎಸ್, ಕ್ರಿಯಟಿನಿನ್ ಈಸಿಜಿ, ಕ್ಯಾರೋಟಿಡ್ ಡೊಪ್ಲರ್, ತಲೆಯ ಸ್ಕಾನ್ ಹಾಗೂ ನುರಿತ

ಮಂಗಳೂರು:‌ ವಿಶ್ವ ಪಾರ್ಶ್ವವಾಯು ದಿನದಂಗವಾಗಿ ಎ.ಜೆ. ಆಸ್ಪತ್ರೆಯಲ್ಲಿ ವಿಶೇಷ ಪ್ಯಾಕೇಜ್ Read More »

ಕರಾವಳಿ

ಶಿವಮೊಗ್ಗ: ರಾತ್ರಿಯಿಡೀ ತಾಯಿಯ ಶವ ಇಟ್ಟುಕೊಂಡು ಕುಳಿತ ಮಗನಿಗೆ ಅಂತ್ಯಸಂಸ್ಕಾರಕ್ಕೆ ಜಾಗ ನೀಡಿದ ಅಪ್ಪ

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಅ.17: ಕ್ಯಾನ್ಸರ್​ನಿಂದ ಮೃತಪಟ್ಟ ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಜಾಗ ಕೊಡುವಂತೆ ತಂದೆ ಬಳಿ ಮಗ ಗೋಗರೆಯುತ್ತ ರಾತ್ರಿಯಿಡೀ ಮನೆ ಬಾಗಿಲಲ್ಲೇ ಅಮ್ಮನ ಶವ ಇಟ್ಟುಕೊಂಡು ಕಣ್ಣೀರಿಟ್ಟ ಹೃದಯವಿದ್ರಾವಕ ಅಮಾನವೀಯ ಘಟನೆಯೊಂದು ಹೊಸನಗರ ತಾಲೂಕಿನ ರಿಪ್ಪನ್​ಪೇಟೆ ಸಮೀಪದ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಯಡಗುಡ್ಡೆ ಗ್ರಾಮದಲ್ಲಿ ಕಳೆದ ದಿನ ರಾತ್ರಿ ನಡೆದಿದೆ.     ಯಡಗುಡ್ಡೆ ಗ್ರಾಮದ ನಾಗರಾಜ್ ಎಂಬವರ ಮೊದಲ ಪತ್ನಿ ನಾಗರತ್ನ (50) ಕಳೆದ ದಿನ ಕ್ಯಾನ್ಸರ್ ನಿಂದಾಗಿ ಮೃತಪಟ್ಟಿದ್ದರು. ಆದರೆ ಪತ್ನಿಯ

ಶಿವಮೊಗ್ಗ: ರಾತ್ರಿಯಿಡೀ ತಾಯಿಯ ಶವ ಇಟ್ಟುಕೊಂಡು ಕುಳಿತ ಮಗನಿಗೆ ಅಂತ್ಯಸಂಸ್ಕಾರಕ್ಕೆ ಜಾಗ ನೀಡಿದ ಅಪ್ಪ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಇಂದು ದಿ. ನಟ ಚಿರುಸರ್ಜಾ ಅವರ 36ನೇ ವರ್ಷದ ಹುಟ್ಟುಹಬ್ಬ ➤ ಗಣ್ಯರು, ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ

(ನ್ಯೂಸ್ ಕಡಬ) newskadaba.com ಬೆಂಗಳೂರು ಅ. 17: ದಿವಂಗತ ನಟ ಚಿರಂಜೀವಿ ಸರ್ಜಾ ಅವರ 36ನೇ ವರ್ಷದ ಹುಟ್ಟುಹಬ್ಬಕ್ಕೆ ಸ್ಯಾಂಡಲ್‍ವುಡ್, ನಟ, ನಟಿಯರು ಹಾಗೂ ಗಣ್ಯರು ಶುಭ ಕೋರುತ್ತಿದ್ದು, ಅವರ ಮಾವ ಅರ್ಜುನ್ ಸರ್ಜಾ ಸಹ ಭಾವನಾತ್ಮಕ ಸಾಲುಗಳಿಂದ ಅಳಿಯನಿಗೆ ಶುಭಾಶಯ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅರ್ಜುನ್ ಸರ್ಜಾ, ಸುದೀಪ್, ದರ್ಶನ್ ಸೇರಿದಂತೆ ಹಲವು ಗಣ್ಯರು ಚಿರು ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ. ಅರ್ಜುನ್ ಸರ್ಜಾ ಅವರು ಚಿರು ಹುಟ್ಟಿದ ಸಂದರ್ಭ, ಅವರು ತೀರಿದ ಬಳಿಕ ಅನುಭವಿಸುತ್ತಿರುವ ಸಂಕಟದ ಬಗ್ಗೆ

ಇಂದು ದಿ. ನಟ ಚಿರುಸರ್ಜಾ ಅವರ 36ನೇ ವರ್ಷದ ಹುಟ್ಟುಹಬ್ಬ ➤ ಗಣ್ಯರು, ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ Read More »

ಕರ್ನಾಟಕ

ಮೈಸೂರಿನ ಎಲ್ಲಾ ಪ್ರವಾಸಿ ತಾಣಗಳು ಸಾರ್ವಜನಿಕ ಮುಕ್ತ ➤ ಜಿಲ್ಲಾಧಿಕಾರಿ ಹಾಕಿದ್ದ ನಿರ್ಬಂಧ ತೆರವು

(ನ್ಯೂಸ್ ಕಡಬ) newskadaba.com ಮೈಸೂರು  ಅ. 17 : ಇಂದು ನಾಡಹಬ್ಬ ದಸರಾಗೆ ವಿದ್ಯುಕ್ತ ಚಾಲನೆ ದೊರೆತಿದೆ. ಕೊರೋನಾ ಹಿನ್ನೆಲೆ, ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಈ ನಡುವೆ ದಸರಾ ವೀಕ್ಷಿಸಲು ಸಾಕಷ್ಟು ಪ್ರವಾಸಿಗರು ಬರುವುದರಿಂದ ಸಾಮಾಜಿಕ ಅಂತರ ಕಾಪಾಡುವುದು ಕಷ್ಟ ಹಾಗೂ ಮೈಸೂರಿನಲ್ಲಿ ಕೊರೋನಾ ಹೆಚ್ಚಾಗಿ ಹರಡುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಅ. 17ರಿಂದ ಮೈಸೂರಿನ ಎಲ್ಲ ಪ್ರವಾಸಿ ತಾಣಗಳನ್ನೂ ಬಂದ್ ಮಾಡಲು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶಿಸಿದ್ದರು. ಆದರೆ

ಮೈಸೂರಿನ ಎಲ್ಲಾ ಪ್ರವಾಸಿ ತಾಣಗಳು ಸಾರ್ವಜನಿಕ ಮುಕ್ತ ➤ ಜಿಲ್ಲಾಧಿಕಾರಿ ಹಾಕಿದ್ದ ನಿರ್ಬಂಧ ತೆರವು Read More »

ಕರಾವಳಿ

ಮಾಸ್ಕ್ ಹಾಕದೆ ಪ್ರಯಾಣಿಸುತ್ತಿದ್ದ ನಿರ್ವಾಹಕ ➤ ದಿಢೀರ್ ದಂಡ ವಿಧಿಸಿದ ಉಡುಪಿ ಡಿಸಿ ಜಗದೀಶ್

(ನ್ಯೂಸ್ ಕಡಬ) newskadaba.com ಉಡುಪಿ ಅ. 17: ಕೊವೀಡ್ 19 ವಿರುದ್ಧ ಹೋರಾಡುತ ಎಲ್ಲ ಸೇವೆಗಳು ಮತ್ತೆ ಆನ್ ಲಾಕ್ ಮೂಲಕ ಆರಂಭವಾಗಿದೆ. ಮಾಸ್ಕ್ ಧರಿಸಿ- ಸಾಮಾಜಿಕ ಅಂತರ ಕಾಯ್ದುಕೊಂಡು ಕರ್ತವ್ಯ ನಿರ್ವಹಿಸಲು ಸರ್ಕಾರವೇ ಆದೇಶ ಹೊರಡಿಸಿದೆ. ಈ ನಡುವೆ ಉಡುಪಿಯಲ್ಲಿ ಬಸ್ ನಿರ್ವಾಹರೋರ್ವರು ಮಾಸ್ಕ್ ಧರಿಸದೆ ಕಾರ್ಯನಿರ್ವಹಿಸುತ್ತಿರುವಾಗ ಸ್ವತಃ ಡಿಸಿ ಜಗದೀಶ್ ರವರ ಕಣ್ಣಿಗೆ ಸಿಕ್ಕಿ ಬಿದ್ದಿದ್ದಾರೆ. ಕೆ.ಎಸ್.ಆರ್.ಟಿ.ಸಿ ಬಸ್ಸಿನ ನಿರ್ವಾಹಕನೋರ್ವ ಮಾಸ್ಕ್ ಧರಿಸದೆ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಜಿಲ್ಲಾಧಿಕಾರಿಯಿಂದ ದಂಡ ಹಾಕಿಸಿಕೊಂಡ ಘಟನೆ ಶನಿವಾರ

ಮಾಸ್ಕ್ ಹಾಕದೆ ಪ್ರಯಾಣಿಸುತ್ತಿದ್ದ ನಿರ್ವಾಹಕ ➤ ದಿಢೀರ್ ದಂಡ ವಿಧಿಸಿದ ಉಡುಪಿ ಡಿಸಿ ಜಗದೀಶ್ Read More »

ಕರಾವಳಿ, ಕರ್ನಾಟಕ

ಜಾನಪದ ನೃತ್ಯ ಸ್ಪರ್ಧೆಯಲ್ಲಿ ಎಣ್ಮೂರು ಶಾಲಾ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಎಣ್ಮೂರು, ಅ.17: ಎನ್.ಪಿ.ಇ.ಪಿ. ರಾಷ್ಟ್ರೀಯ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಎಣ್ಮೂರು ಪ್ರೌಢ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.     ಈ ಕಾರ್ಯಕ್ರಮವು ಮಾನವ ಸಂಪನ್ಮೂಲ ಇಲಾಖೆ, ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆಯಿತು. ಸಂಸ್ಥೆಯ ವಿದ್ಯಾರ್ಥಿಗಳಾದ ನಂದನ್‌ ವೈ.ಬಿ, ಪವನ್‌ ಕುಮಾರ್‌ ಎನ್‌, ಅಶ್ವಿತ್ ಎ, ಸಿಂಚನಾ ಎ, ಕೀರ್ತಿ ಕೆ. ಬಿ, ಸುದೀಪ್‌ ಕೆ, ಹಾಗೂ

ಜಾನಪದ ನೃತ್ಯ ಸ್ಪರ್ಧೆಯಲ್ಲಿ ಎಣ್ಮೂರು ಶಾಲಾ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ Read More »

ಕರಾವಳಿ

ಇನ್ಮುಂದೆ LPG ಸಿಲಿಂಡರ್ ಗೂ ಒಟಿಪಿ ಕಡ್ಡಾಯ

(ನ್ಯೂಸ್ ಕಡಬ) newskadaba.com ನವದೆಹಲಿ, ಅ.17: ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್ ಗಳ ವಿತರಣೆಯು ಮುಂದಿನ ತಿಂಗಳಿನಿಂದ ಮನೆ ಬಾಗಿಲಿಗೆ ಸರಬರಾಜಾಗುವ ಸಂದರ್ಭದಲ್ಲಿ ಒಟಿಪಿ ಅಥವಾ ಒನ್‌-ಟೈಮ್ ಪಾಸ್‌ವರ್ಡ್ ಕಡ್ಡಾಯವಾಗಿದೆ.     ನ. 1ರಿಂದ ಎಲ್‌ಪಿಜಿ ಸಿಲಿಂಡರ್‌ ಪೂರೈಕೆಯಲ್ಲಿ ಈ ಹೊಸ ಬದಲಾವಣೆ ಜಾರಿಗೆ ಬರಲಿದ್ದು, ಸಿಲಿಂಡರ್‌ ಹಸ್ತಾಂತರವಾಗಬೇಕಾದರೆ ಒಟಿಪಿ ನೀಡುವುದು ಕಡ್ಡಾಯ. ಇದರಿಂದ ಅಡುಗೆ ಅನಿಲ ಕಳ್ಳತನ ತಪ್ಪಿಸುವ ಮತ್ತು ಸರಿಯಾದ ಗ್ರಾಹಕನನ್ನು ಗುರುತಿಸುವ ಉದ್ದೇಶದಿಂದ ತೈಲ ಕಂಪೆನಿಗಳು “ಪೂರೈಕೆ ದೃಢೀಕರಣ ಕೋಡ್‌’

ಇನ್ಮುಂದೆ LPG ಸಿಲಿಂಡರ್ ಗೂ ಒಟಿಪಿ ಕಡ್ಡಾಯ Read More »

ರಾಷ್ಟ್ರೀಯ ನ್ಯೂಸ್
Scroll to Top