ಮಂಗಳೂರು

ಉಡುಪಿಯಲ್ಲಿ ಯುವತಿ ಅನುಮಾನಾಸ್ಪದ ಸಾವು ➤ ಆಸ್ಪತ್ರೆಗೆ ದಾಖಲಿಸಿದ ಯುವಕ ಎಸ್ಕೇಪ್

(ನ್ಯೂಸ್ ಕಡಬ) newskadaba.com ಉಡುಪಿ ಅ. 25: ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ಯುವತಿಯನ್ನು ಉಡುಪಿ ತಾಲೂಕು ಕುಕ್ಕೆಹಳ್ಳಿ ನಿವಾಸಿ ರಕ್ಷಿತಾ ನಾಯಕ್ ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಪ್ರಶಾಂತ್ ಕುಂದರ್ ಎಂಬಾತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಕ್ಷಿತಾಳನ್ನು ಆಟೋದಲ್ಲಿ ಕರೆದುಕೊಂಡು ಬಂದು ಉಡುಪಿಯ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ವೈದ್ಯರು ಯುವತಿ ಮೃತಪಟ್ಟಿದ್ದಾಳೆ ಎಂದು ಘೋಷಿಸಿದ ಕೂಡಲೇ ಯುವಕ, ಯುವತಿಯ ಮನೆಯವರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾನೆ. ಕೆಲವೇ ಕ್ಷಣಗಳಲ್ಲಿ ಯುವಕ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಉಡುಪಿ […]

ಉಡುಪಿಯಲ್ಲಿ ಯುವತಿ ಅನುಮಾನಾಸ್ಪದ ಸಾವು ➤ ಆಸ್ಪತ್ರೆಗೆ ದಾಖಲಿಸಿದ ಯುವಕ ಎಸ್ಕೇಪ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನೆಲಕ್ಕೆ ಬಡಿದು ಅಣ್ಣನಿಂದಲೇ ತಂಗಿಯ ಬರ್ಬರ ಹತ್ಯೆ.!

(ನ್ಯೂಸ್ ಕಡಬ) newskadaba.com  ರಾಜಸ್ಥಾನ ಅ. 25: ತಾನು ಪ್ರೀತಿ ಮಾಡಿದಾತನನ್ನು ಮದುವೆಯಾಗುತ್ತೇನೆ ಎಂದ ಸಹೋದರಿಯನ್ನು ಸಹೋದರನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಆರೋಪಿ ಸಹೋದರನನ್ನು ಪವನ್(24) ಎಂದು ಗುರುತಿಸಲಾಗಿದೆ. ಅಣ್ಣ-ತಂಗಿ ಇಬ್ಬರೂ ರಾಜಸ್ಥಾನದ ಅಲ್ವಾರ್ ಪಟ್ಟಣದ ಭಿವಾಡಿ ನಿವಾಸಿಗಳಾಗಿದ್ದಾರೆ. ಈ ಘಟನೆ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಆರೋಪಿ ಏರ್ ಕಂಡೀಷನರ್ ರಿಪೇರಿ ಮಾಡುವ ಅಂಗಡಿ ಹೊಂದಿದ್ದನು. ಯುವತಿಯ ಪ್ರಿಯತಮ ವಿಷ್ಣು ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಆರೋಪಿ ಪವನ್ ತನ್ನ ತಂಗಿಯ ತಲೆಯನ್ನು

ನೆಲಕ್ಕೆ ಬಡಿದು ಅಣ್ಣನಿಂದಲೇ ತಂಗಿಯ ಬರ್ಬರ ಹತ್ಯೆ.! Read More »

ಕ್ರೈಮ್ ನ್ಯೂಸ್

ಬಜರಂಗದಳದಿಂದ ಭರ್ಜರಿ ಕಾರ್ಯಾಚರಣೆ ➤ 12 ಗೋವುಗಳ ರಕ್ಷಣೆ

(ನ್ಯೂಸ್ ಕಡಬ) newskadaba.com ಮಂಗಳೂರು ಅ. 25: ಕರಾವಳಿಯಲ್ಲಿ ಮಾತ್ರ ದಿನದಿಂದ ದಿನಕ್ಕೆ ಅಕ್ರಮ ಗೋಸಾಗಾಟ ಪ್ರಕರಣಗಳು ಪತ್ತೆಯಾಗುತ್ತಲೇಯಿದೆ. ಪೊಲೀಸರು ಕ್ರಮ ಕೈಗೊಂಡರು ಕ್ಯಾರೆ ಅನ್ನದೇ ಖದೀಮರು ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಲೇಯಿದ್ದರೆ. ಇಂತಹ ಹೀನಾಯ ಕೃತ್ಯಗಳಿಗೆ ಯಾವಾಗ ಮುಕ್ತಿ ದೊರೆಯುತ್ತದೋ ತಿಳಿದಿಲ್ಲ. ಅದರಂತೆ ಕಳೆದ ದಿನ ರಾತ್ರಿವೇಳೆಯಲ್ಲಿ ಸಣ್ಣ ಟೆಂಪೋವೊಂದರಲ್ಲಿ ಹಿಂಸಾತ್ಮಕವಾಗಿ ಒಂದರ ಮೇಲೊಂದರಂತೆ ಒಟ್ಟು 12 ದನಗಳನ್ನು ಸಾಗಾಟ ಮಾಡುತ್ತಿದ್ದ ಖದೀಮರನ್ನು ಬಜರಂಗದಳದವರು ತಡೆದಿದ್ದಾರೆ. ಬಂಟ್ವಾಳದಿಂದ ಟೆಂಪೋವನ್ನು ಅಟ್ಟಿಸಿಕೊಂಡು ಬಂದ ಭಜರಂಗದಳದವರು ಉಳ್ಳಾಲದ ಕಸಾಯಿಖಾನೆಗೆ

ಬಜರಂಗದಳದಿಂದ ಭರ್ಜರಿ ಕಾರ್ಯಾಚರಣೆ ➤ 12 ಗೋವುಗಳ ರಕ್ಷಣೆ Read More »

ಕರಾವಳಿ, ಕ್ರೈಮ್ ನ್ಯೂಸ್

ಸ್ಯಾಂಡಲ್ ವುಡ್ ಹಿರಿಯ ನಿರ್ಮಾಪಕ ಹೆಚ್‍.ಕೆ. ಶ್ರೀನಿವಾಸ್ ವಿಧಿವಶ

(ನ್ಯೂಸ್ ಕಡಬ) newskadaba.com ಬೆಂಗಳೂರು ಅ. 25: ನಿರ್ಮಾಪಕ ಹೆಚ್. ಕೆ ಶ್ರೀನಿವಾಸ್ ವಿಧಿವಶರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ. ಅನಾರೋಗ್ಯದ ಕಾರಣ ರಂಗದೊರೆ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀನಿವಾಸ್ ಹೃದಯಾಘಾತದಿಂದ ಕಳೆದ ದಿನ ನಿಧನ ಹೊಂದಿದ್ದಾರೆ. “ಮಾಯಾ ಮುಸುಕು”, “ಗುಂಡನ ಮದುವೆ”, “ಪಟ್ಟಣಕ್ಕೆ ಬಂದ ಪುಟ್ಟ”, “ಚಂದನ ಚಿಗುರು”, “ಕರುನಾಡು” ಮತ್ತು “ಗುರುಕುಲ” ಚಿತ್ರಗಳ ನಿರ್ಮಾಪಕಾರಾಗಿದ್ದ ಶ್ರೀನಿವಾಸ್ ಅವರ “ಗುರುಕುಲ” ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ರಾಜ್ಯ ಪ್ರಶಸ್ತಿ ಲಭಿಸಿತ್ತು.

ಸ್ಯಾಂಡಲ್ ವುಡ್ ಹಿರಿಯ ನಿರ್ಮಾಪಕ ಹೆಚ್‍.ಕೆ. ಶ್ರೀನಿವಾಸ್ ವಿಧಿವಶ Read More »

ಕರ್ನಾಟಕ

ರಾಗಿಣಿ, ಸಂಜನಾ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 25: ಡ್ರಗ್ಸ್ ಆರೋಪ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ಕಾಯ್ದಿರಿಸಿದೆ.   ಒಂದೂವರೆ ತಿಂಗಳ ಹಿಂದೆ ಬಂಧನಕ್ಕೊಳಗಾಗಿದ್ದ ನಟಿಯರು ಇಂದಿನವರೆಗೂ ಜೈಲಿನಲ್ಲೇ ಕಾಲ ಕಳೆಯುತ್ತಿದ್ದಾರೆ. ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸಿರುವ ಸಿಸಿಬಿ ಇಬ್ಬರಿಗೂ ಜಾಮೀನು ನೀಡದಂತೆ ಮನವಿ ಮಾಡಿದೆ. ಜಾಮೀನು ವಿಚಾರಣೆ ಮುಂದುಡಿಕೆ ಆಗಿರುವ ಕಾರಣ ಇಬ್ಬರೂ ನಟಿಯರು ದಸರಾ ಹಬ್ಬವನ್ನು ಜೈಲಿನಲ್ಲೇ ಆಚರಿಸಿಕೊಳ್ಲಬೇಕಾದ ಸ್ಥಿತಿ

ರಾಗಿಣಿ, ಸಂಜನಾ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಹಾನವಮಿಯ ಶುಭಾಶಯ ಕೋರಿದ ಪ್ರಧಾನಿ ಮೋದಿ

(ನ್ಯೂಸ್ ಕಡಬ) newskadaba.com ನವದೆಹಲಿ ಅ. 25: ನವರಾತ್ರಿಯ ಒಂಬತ್ತನೇ ದಿನದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ಮಹಾನವಮಿಯ ಶುಭಾಶಯ ಕೋರಿದ್ದಾರೆ. ನವರಾತ್ರಿಯ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಮಹಾನವಮಿಯ ಶುಭಾಶಯಗಳು. ನವರಾತ್ರಿಯಲ್ಲಿ ದುರ್ಗಾದೇವಿಯ 9ನೇ ರೂಪವಾಗಿರುವ ಸಿದ್ಧಿದಾತ್ರಿಯನ್ನು ಪೂಜಿಸಲಾಗುತ್ತದೆ. ಮಾತೆ ಸಿದ್ಧಿದಾತ್ರಿಯ ಆಶೀರ್ವಾದದಿಂದ ಎಲ್ಲರಿಗೂ ಅವರ ಕಾರ್ಯಗಳಲ್ಲಿ ಯಶಸ್ಸು ಸಿಗಲಿ ಎಂಬುದಾಗಿ ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.

ಮಹಾನವಮಿಯ ಶುಭಾಶಯ ಕೋರಿದ ಪ್ರಧಾನಿ ಮೋದಿ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಮಳೆಗೆ ಸಿಲುಕಿದ ನಾಯಿಮರಿಗಳನ್ನು ರಕ್ಷಿಸಿದ ದಿಗಂತ್ ದಂಪತಿ

(ನ್ಯೂಸ್ ಕಡಬ) newskadaba.com ಬೆಂಗಳೂರು ಅ. 25:  ಭಾರೀ ಮಳೆಯಿಂದಾಗಿ ಕೇವಲ ಮನುಷ್ಯರು ಮಾತ್ರ ಮನೆ-ಮಠ ಕಳೆದುಕೊಂಡಿಲ್ಲ. ಬೀದಿ ನಾಯಿಗಳಿಗೂ ತೊಂದರೆಯಾಗಿದೆ.     ಈ ರೀತಿ ವಿಪರೀತ ಮಳೆಯಿಂದಾಗಿ ನೆಲೆ ಕಳೆದುಕೊಂಡ ಸುಮಾರು 10 ಬೀದಿ ನಾಯಿಗಳ ಮರಿಗಳನ್ನು ನಟ ದಿಗಂತ್-ಐಂದ್ರಿತಾ ದಂಪತಿ ರಕ್ಷಿಸಿದ್ದಾರೆ. ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ದಂಪತಿ ಹಂಚಿಕೊಂಡಿದ್ದಾರೆ. ನಾಯಿಗಳ ಬಗ್ಗೆ ವಿಶೇಷ ಪ್ರೀತಿಯಿರುವ ದಿಗಂತ್ ದಂಪತಿ ಸದ್ಯಕ್ಕೆ ಈ ನಾಯಿಗಳಿಗೆ ಆಶ್ರಯ ನೀಡಿದ್ದಾರಂತೆ. ಇವರ ಕಾರ್ಯಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮಳೆಗೆ ಸಿಲುಕಿದ ನಾಯಿಮರಿಗಳನ್ನು ರಕ್ಷಿಸಿದ ದಿಗಂತ್ ದಂಪತಿ Read More »

ಕರ್ನಾಟಕ

ರ್‍ಯಾಶ್ ಡ್ರೈವಿಂಗ್, ವ್ಹೀಲಿಂಗ್ ಮಾಡಿದರೆ 2 ಲಕ್ಷ ರೂ ಬಾಂಡ್ ➤ ಮುಂದುವರಿಸಿದರೆ ಜೈಲು ಶಿಕ್ಷೆ ಫಿಕ್ಸ್

(ನ್ಯೂಸ್ ಕಡಬ) newskadaba.com ಬೆಂಗಳೂರು ಅ. 25: ಸಂಚಾರಿ ಪೊಲೀಸ್ರು ಅಪಘಾತ ಪ್ರಕರಣಗಳನ್ನ ಕಡಿಮೆ ಮಾಡಲು ಸಾಕಷ್ಟು ಪ್ರಯತ್ನಗಳನ್ನ ನಡೆಸುತ್ತಲೆ ಇದ್ದಾರೆ. ಹೀಗಾಗಿ ಸಂಚಾರಿ ಅಂಥವ್ರಿಗೆ ಕಠಿಣ ಎಚ್ಚರಿಕೆ ನೀಡಲು ಭದ್ರತಾ ಕಾಲಂ107 ಬಳಸಲು ಇಲಾಖೆ ಮುಂದಾಗಿದೆ. ಸಂಚಾರಿ ನಿಯಮ ಪಾಲನೆ ಮಾಡದೆ, ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದರೆ ಎರಡು ಲಕ್ಷ ಬಾಂಡ್ ಬರೆದುಕೊಡಬೇಕು. ಅಷ್ಟೇ ಅಲ್ಲಾ ಎಲ್ಲಾ ದಾಖಲೆಗಳನ್ನ ಕೊಟ್ಟು, ಪೋಷಕರೂ ಬಂದು ಮುಚ್ಚಳಿಕೆ ಬರೆದುಕೊಡಬೇಕು.ಇದುವರೆಗೂ ಇಂಥ 14 ಕೇಸ್​ಗಳನ್ನ ದಾಖಲಿಸಲಾಗಿದೆ. ಇನ್ನು ಕರ್ಕಶ

ರ್‍ಯಾಶ್ ಡ್ರೈವಿಂಗ್, ವ್ಹೀಲಿಂಗ್ ಮಾಡಿದರೆ 2 ಲಕ್ಷ ರೂ ಬಾಂಡ್ ➤ ಮುಂದುವರಿಸಿದರೆ ಜೈಲು ಶಿಕ್ಷೆ ಫಿಕ್ಸ್ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಕರ್ನಾಟಕದಲ್ಲಿ ಇಂದಿನಿಂದ 2 ದಿನ ಮಳೆಯ ಅಬ್ಬರ ➤ ಕರಾವಳಿಯಲ್ಲಿ ಹಳದಿ ಅಲರ್ಟ್​ ಘೋಷಣೆ

(ನ್ಯೂಸ್ ಕಡಬ) newskadaba.com ಕರಾವಳಿ ಅ. 25: ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶುಕ್ರವಾರ ಮಳೆ ಅಬ್ಬರಿಸಿದೆ. ಇಂದಿನಿಂದ 2 ದಿನ ಮತ್ತೆ ರಾಜ್ಯಾದ್ಯಂತ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಬೆಂಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗದಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಹಳದಿ ಅಲರ್ಟ್ ಘೋಷಿಸಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್. ಪಾಟೀಲ್ ಹೇಳಿದ್ದಾರೆ. ಇಂದು ಮತ್ತು ನಾಳೆ ಕರ್ನಾಟಕದ ಬಹುತೇಕ ಎಲ್ಲಾ ಸ್ಥಳಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಕೇರಳದ

ಕರ್ನಾಟಕದಲ್ಲಿ ಇಂದಿನಿಂದ 2 ದಿನ ಮಳೆಯ ಅಬ್ಬರ ➤ ಕರಾವಳಿಯಲ್ಲಿ ಹಳದಿ ಅಲರ್ಟ್​ ಘೋಷಣೆ Read More »

ಕರಾವಳಿ, ಕರ್ನಾಟಕ

ನಟ ಸುರೇಂದ್ರ ಹತ್ಯೆ ಪ್ರಕರಣ ➤ ಇಬ್ಬರು ಆರೋಪಿಗಳು ಅರೆಸ್ಟ್

(ನ್ಯೂಸ್ ಕಡಬ) newskadaba.com ಬಂಟ್ವಾಳ ಅ. 25: ಬಂಟ್ವಾಳದಲ್ಲಿ ಹತ್ಯೆಯಾದ ತುಳು ಸಿನಿಮಾ ನಟ, ರೌಡಿಶೀಟರ್ ಸುರೇಂದ್ರ ಬಂಟ್ವಾಳ್ ಹತ್ಯೆಯ ಪ್ರಧಾನ ಆರೋಪಿಗಳಾಗಿ ಕಂಡುಬಂದಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬಂಟ್ವಾಳ ಪೊಲೀಸರು ಯಶಸ್ವಿಯಾಗಿದ್ದಾರೆ.   ಆರೋಪಿಗಳನ್ನು ಮುಡಿಪು ಎಂಬಲ್ಲಿ ಪೊಲೀಸರು ಬಂಧಿಸಿದ್ದು, ಬಂಟ್ವಾಳ ನಿವಾಸಿ ಸತೀಶ್ ಕುಲಾಲ್ ಹಾಗೂ ಕಿನ್ನಿಗೋಳಿ ನಿವಾಸಿ ಗಿರೀಶ್ ಬಂಧಿತ ಆರೋಪಿಗಳು. ಇವರು ಶನಿವಾರ ರಾತ್ರಿ ಕೇರಳ ಭಾಗದಿಂದ ಬಂಟ್ವಾಳ ಕಡೆಗೆ ಬರುತ್ತಿರುವ ಕುರಿತು ಮಾಹಿತಿ ಪಡೆದ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳ

ನಟ ಸುರೇಂದ್ರ ಹತ್ಯೆ ಪ್ರಕರಣ ➤ ಇಬ್ಬರು ಆರೋಪಿಗಳು ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top