ನ್ಯೂಸ್ ಕಡಬ

ಅಮೆರಿಕಾದ ಪ್ರತಿಷ್ಠಿತ ನೌಕಾಪಡೆ ಕಾಲೇಜು ಪ್ರತಿನಿಧಿಯಾಗಿ ಕೊಡಗಿನ ಲೆ.ಕಮಾಂಡರ್ ಸೂರಜ್ ಅಯ್ಯಪ್ಪ ಆಯ್ಕೆ

(ನ್ಯೂಸ್ ಕಡಬ) newskadaba.com ಕೊಡಗು. ಆ,27:  ಕೊಡಗು ಮೂಲದ ಲೆಫ್ಟಿನೆಂಟ್ ಕಮಾಂಡರ್ ಮುಕ್ಕಾಟಿರ ಸೂರಜ್ ಅಯ್ಯಪ್ಪ ಅಮೆರಿಕಾದ ಪ್ರಷ್ಠಿತ ನೌಕಾಯುದ್ದ ತರಬೇತಿ ಕಾಲೇಜಿಗೆ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.     ಗೋಣಿಕೊಪ್ಪ ಅರ್ವತೋಕ್ಲು ಮೂಲದ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಎಂ.ಎ. ಕಾರ್ಯಪ್ಪ ಹಾಗೂ ಸರಸ್ವತಿ ಕಾರ್ಯಪ್ಪ ಅವರ ಪುತ್ರ ಸೂರಜ್ ಅಯ್ಯಪ್ಪ ಅಮೇರಿಕದಲ್ಲಿ ನಡೆಯುವ ಸಿಬ್ಬಂದಿಗಳ ತರಬೇತಿಯಲ್ಲಿ 52 ದೇಶಗಳ ಅಧಿಕಾರಿಗಳ ಪೈಕಿ ಒಬ್ಬರಾಗಿ ಆಯ್ಕೆಯಾಗಿದ್ದಾರೆ.ಡೆಹ್ರಡೂನ್‍ನ ರಾಷ್ಟ್ರೀಯ ಮಿಲಿಟರಿ ಕಾಲೇಜು (ಆರ್‍ಐಎಂಸಿ)ಯಲ್ಲಿ ಶಿಕ್ಷಣ ಪಡೆದು ನೇವಲ್ ಅಕಾಡೆಮಿಯಿಂದ […]

ಅಮೆರಿಕಾದ ಪ್ರತಿಷ್ಠಿತ ನೌಕಾಪಡೆ ಕಾಲೇಜು ಪ್ರತಿನಿಧಿಯಾಗಿ ಕೊಡಗಿನ ಲೆ.ಕಮಾಂಡರ್ ಸೂರಜ್ ಅಯ್ಯಪ್ಪ ಆಯ್ಕೆ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಬಾಂಬ್‌ ಪತ್ತೆ ದಳದಲ್ಲಿ 14 ವರ್ಷ ಸೇವೆ ಸಲ್ಲಿಸಿದ “ರ್‍ಯಾಂಬೋ’ ನಾಯಿ ನಿಧನ

(ನ್ಯೂಸ್ ಕಡಬ) newskadaba.com ಮಂಡ್ಯ, ಆ.27: ಜಿಲ್ಲಾ ಶಸಸ್ತ್ರ ಪಡೆಯಲ್ಲಿ ಬಾಂಬೆ ಪತ್ತೆ ದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ “ರ್‍ಯಾಂಬೋ’ ಹೆಸರಿನ ಲ್ಯಾಬ್ರಡಾರ್‌ ನಾಯಿ ಮೃತಪಟ್ಟ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆಯಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ನಗರದ ಡಿಎಆರ್‌ ಮೈದಾನದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಪರಶುರಾಮ ಅವರು ಪುಷ್ಪ ನಮನ ಸಲ್ಲಿಸಿ ಸರ್ಕಾರಿ ಗೌರವಗಳೊಂದಿಗೆ ಪೊಲೀಸ್‌ ಕ್ವಾಟ್ರಸ್‌ನಲ್ಲಿರುವ ತೋಟದಲ್ಲಿ ಅಂತ್ಯಕ್ರಿಯೆ ನಡೆಸಿದರು. ಎಸ್ಪಿ ಪರಶುರಾಮ ಮಾತನಾಡಿ, ಜಿಲ್ಲಾ ಶಸಸ್ತ್ರ ಪಡೆಯಲ್ಲಿ ಕಳೆದ 14 ವರ್ಷಗಳಿಂದ

ಬಾಂಬ್‌ ಪತ್ತೆ ದಳದಲ್ಲಿ 14 ವರ್ಷ ಸೇವೆ ಸಲ್ಲಿಸಿದ “ರ್‍ಯಾಂಬೋ’ ನಾಯಿ ನಿಧನ Read More »

ಕರಾವಳಿ, ಕರ್ನಾಟಕ

‘ಬಹು ಪತ್ನಿ ವಲ್ಲಭ’ ನಿಂದ ಪುತ್ರಿಯ ಮೇಲೆ ದೌರ್ಜನ್ಯ ➤ ಮಗಳ ಮೇಲೆ ಕಾಮದೃಷ್ಟಿ ಹರಿಸಿದ ಭೂಪ ಜೈಲು ಪಾಲು

(ನ್ಯೂಸ್ ಕಡಬ) newskadaba.com ಪುತ್ತೂರು. ಆ,27:  ಬಹು ಪತ್ನಿ ಪುರುಷನೋರ್ವ ತನ್ನ ಕಾಮದಾಹಕ್ಕೆ ಕೊನೆಗೆ ತನ್ನ ಪುತ್ರಿಯನ್ನ ಬಳಸಿಕೊಳ್ಳಲು ಮುಂದಾಗಿ ಇದೀಗಾ ಜೈಲಿನಲ್ಲಿ ಕಂಬಿ ಎನಿಸುತ್ತಿದ್ದಾನೆ. ತನ್ನ ಅಪ್ರಾಪ್ತೆ ಪುತ್ರಿಯ ಮೇಲೆ ತಂದೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಆತನ ವಿರುದ್ದ ಪತ್ನಿ ನೀಡಿದ ದೂರಿನ ಹಿನ್ನಲೆಯಲ್ಲಿ ಪುತ್ತೂರು ಮಹಿಳಾ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯೂ ಪಾಟ್ರಕೋಡಿ ಸಮೀಪದ ನಿವಾಸಿಯಾಗಿದ್ದು, ತನ್ನ ಕೊನೆಯ ಹೆಂಡತಿಯ ಅಪ್ರಾಪ್ತೆ ಪುತ್ರಿಗೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಆ.25ರಂದು ಪುತ್ರಿಯ ಮೇಲೆ ಲೈಂಗಿಕ

‘ಬಹು ಪತ್ನಿ ವಲ್ಲಭ’ ನಿಂದ ಪುತ್ರಿಯ ಮೇಲೆ ದೌರ್ಜನ್ಯ ➤ ಮಗಳ ಮೇಲೆ ಕಾಮದೃಷ್ಟಿ ಹರಿಸಿದ ಭೂಪ ಜೈಲು ಪಾಲು Read More »

ಕರಾವಳಿ

ಶ್ರೀಮತಿ ಉಷಾ ಭಾರದ್ವಾಜ್‌ ನಿಧನ

(ನ್ಯೂಸ್ ಕಡಬ) newskadaba.com ಸುಳ್ಯ, ಆ.27: ಪದ್ಮಶ್ರೀ ಪುರಸ್ಕೃತ, ತೂಗುಸೇತುವೆಗಳ ಸರದಾರ ಗಿರೀಶ್‌ ಭಾರದ್ವಾಜ್‌ ಅವರ ಪತ್ನಿ ಉಷಾ (66) ಅವರು ಅನಾರೋಗ್ಯದ ಹಿನ್ನಲೆಯಲ್ಲಿ ಇಂದು ಮುಂಜಾನೆ ನಿಧನರಾಗಿದ್ದಾರೆ. ಮೃತರು ಪತಿ, ಒಬ್ಬ ಪುತ್ರಿ, ಇಬ್ಬರನ್ನು ಪುತ್ರರನ್ನು ಅಗಲಿದ್ದಾರೆ.

ಶ್ರೀಮತಿ ಉಷಾ ಭಾರದ್ವಾಜ್‌ ನಿಧನ Read More »

ಕರಾವಳಿ, ಕರ್ನಾಟಕ

ಬೆಳ್ತಂಗಡಿ : ತಂದೆಯನ್ನ ಹತ್ಯೆ ಮಾಡಿದ್ದ ಮಗ ಈಗ ಪೋಲಿಸರ ಅತಿಥಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ . ಆ,27:  ದಕ್ಷಿಣ ಕನ್ನಡವನ್ನು ಬೆಚ್ಚಿ ಬೀಳಿಸಿದ್ದ,  ಬೆಳ್ತಂಗಡಿಯ ನಗರದ ಕುತ್ಯಾರು ರಸ್ತೆ ನಿವಾಸಿ ಹಿರಿಯ ಕಾರು ಚಾಲಕ ವಾಸು ಸಪಲ್ಯ(66) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಗ ದಯಾನಂದನ್ನು (32) ಪೊಲೀಸರು ಬುಧವಾರ ರಾತ್ರಿ ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿ ವಶಕ್ಕೆ ಪಡೆದಿದ್ದಾರೆ. ಆ.24 ರಂದು ವಾಸು ಸಪಲ್ಯ ಅವರು ಬೆಳಗ್ಗೆ ವಾಕಿಂಗ್ ತೆರಳಿದ್ದಾಗ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಮಚ್ಚಿನಿಂದ ಕಡಿದು ಕೊಲೆಮಾಡಲಾಗಿತ್ತು. ಕೃತ್ಯದ ಬಳಿಕ ಇವರ ಮೂರನೇ ಮಗ

ಬೆಳ್ತಂಗಡಿ : ತಂದೆಯನ್ನ ಹತ್ಯೆ ಮಾಡಿದ್ದ ಮಗ ಈಗ ಪೋಲಿಸರ ಅತಿಥಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ವಿದ್ಯಾಬೋಧಿನಿ ಪ್ರೌಢಶಾಲೆ ಬಾಳಿಲದ ಶಿಕ್ಷಕ ದಿನೇಶ್ವಂದ್ರ ವಿಧಿವಶ

(ನ್ಯೂಸ್ ಕಡಬ) newskadaba.com ಬಾಳಿಲ. ಆ,27:  ವಿದ್ಯಾಬೋಧಿನಿ ಪ್ರೌಢಶಾಲೆ ಬಾಳಿಲದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ದಿನೇಶ್ವಂದ್ರ ಬಾಳಿಲ ರವರು ದೈವಾನಿಧನರಾಗಿದ್ದಾರೆ. ಅನಾರೋಗ್ಯ ಹಿನ್ನಲೆಯಲ್ಲಿ ಅವರು ಕೆಲ ದಿನಗಳ ಹಿಂದೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.     ಆದ್ರೆ ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ ಅವರು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳಿದಿದ್ದಾರೆ. ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಶಿಕ್ಷರಾಗಿದ್ದ ಡಿ.ಸಿ ಸರ್ ಎಂದೇ ವಿದ್ಯಾರ್ಥಿ ವಲಯದಲ್ಲಿ ಗುರುತಿಸಿಕೊಂಡಿದ್ದ ದಿನೇಶ್ಚಂದ್ರರವರ ನಿಧನ ಅವರ ಕುಟುಂಬ ಹಾಗೂ ಆಪ್ತವಲಯದಲ್ಲಿ ದಿಗ್ಬ್ರಮೆ ಮೂಡಿಸಿದೆ. ಇನ್ನು ಇವೆ

ವಿದ್ಯಾಬೋಧಿನಿ ಪ್ರೌಢಶಾಲೆ ಬಾಳಿಲದ ಶಿಕ್ಷಕ ದಿನೇಶ್ವಂದ್ರ ವಿಧಿವಶ Read More »

ಕರ್ನಾಟಕ

ದ್ವಿ ಚಕ್ರ ವಾಹನಕ್ಕೆ ಅಡ್ಡಬಂದ ಮಂಗ ➤ಸ್ಕೂಟರ್‌ ಸವಾರೆಗೆ ಗಾಯ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ.27: ಉಪ್ಪಿನಂಗಡಿ ಸಮೀಪದ ಕರಾಯ ಗ್ರಾಮದ ಗರಡಿ ಎಂಬಲ್ಲಿ ದ್ವಿ ಚಕ್ರ ಸವಾರಿಯ ವೇಳೆ ಮಂಗವೊಂದು ಅಡ್ಡ ಬಂದ ಪರಿಣಾಮ ದ್ವಿ ಚಕ್ರ ಸವಾರೆ ಶ್ರೀಮತಿ ಪೂರ್ಣಿಮ (34) ಎಂಬವರು ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ಸಂಭವಿಸಿದೆ. ಪುತ್ತೂರಿನಿಂದ ಮಂಗಳೂರಿನತ್ತ ತನ್ನ ಹೊಂಡಾ ಆಕ್ಟೀವಾ ದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಂಗವೊಂದು ರಸ್ತೆಯಲ್ಲಿ ದಿಢೀರ್‌ ಆಗಿ ಅಡ್ಡ ಬಂದಾಗ ನಿಯಂತ್ರಣ ಕಳೆದುಕೊಂಡ ಆಕ್ಟೀವಾದಿಂದ ಪೂರ್ಣಿಮರವರು ರಸ್ತೆಗೆ ಬಿದ್ದಿದ್ದರು. ಈ ಪರಿಣಾಮ ಗಂಭೀರವಾಗಿ ಗಾಯಗೊಂಡು

ದ್ವಿ ಚಕ್ರ ವಾಹನಕ್ಕೆ ಅಡ್ಡಬಂದ ಮಂಗ ➤ಸ್ಕೂಟರ್‌ ಸವಾರೆಗೆ ಗಾಯ Read More »

ಕರಾವಳಿ, ಕರ್ನಾಟಕ

ಕೋವಿಡ್ ಸೋಂಕಿಗೆ ತುತ್ತಾಗಿದ್ದಕ್ಕೆ ಖಿನ್ನತೆ ➤ ಕಾಂಗ್ರೆಸ್ ಮುಖಂಡ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಪ. ಆ,26:  ಕೊರೋನಾವೈರಸ್ ಸೋಂಕು ದೃಢಪಟ್ಟ ಹಿನ್ನೆಲೆ  ಖಿನ್ನತೆಗೆ ಒಳಗಾದ ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು  ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪರದೇಶ ಕಡಪ ಜಿಲ್ಲೆಯಲ್ಲಿ ನಡೆದಿದೆ.   ಹಿರಿಯ ನಾಯಕ, ಕಡಪ ಜಿಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ, ಎರ್ರಾಕುಂಟ್ಲಾ ಮಂಡಲದ ಚಿಲಮಕೂರು ಮೂಲದ 55 ವರ್ಷದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ ಇತ್ತೀಚೆಗೆ ಕೊರೋನಾ ಸೋಂಕು ದೃಢವಾಗಿತ್ತು. ಅವರು ಪ್ರೊದ್ದುತೂರು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಸೋಮವಾರ ಸಂಜೆ ಆಸ್ಪತ್ರೆಯ ಆವರಣದಿಂದ ಹೊರಹೋಗಲು

ಕೋವಿಡ್ ಸೋಂಕಿಗೆ ತುತ್ತಾಗಿದ್ದಕ್ಕೆ ಖಿನ್ನತೆ ➤ ಕಾಂಗ್ರೆಸ್ ಮುಖಂಡ ಆತ್ಮಹತ್ಯೆ Read More »

ಕರಾವಳಿ

ಕಡಬ ,ಪುತ್ತೂರು ಉಭಯ ತಾಲೂಕಿನಲ್ಲಿ ಇಂದಿನ ಕೊರೋನಾ ಅಪ್ ಡೇಟ್

(ನ್ಯೂಸ್ ಕಡಬ) newskadaba.com ಕಡಬ. ಆ,26:    ಕಡಬ ಮತ್ತು  ಪುತ್ತೂರು  ತಾಲೂಕುಗಳಲ್ಲಿ ಇಂದು  (ಬುಧವಾರ) 9 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ. ಈ ತನಕ ಉಭಯ ತಾಲೂಕುಗಳಲ್ಲಿ ಒಟ್ಟು 580 ಕೊರೋನ ಪ್ರಕರಣಗಳು ವರದಿಯಾಗಿದೆ. ಪುತ್ತೂರು ನಗರ ಸಭಾ ವ್ಯಾಪ್ತಿಯ ನಗರದ ನಿವಾಸಿ 59 ವರ್ಷದ ಪುರುಷ, ಗ್ರಾಮೀಣ ಪ್ರದೇಶವಾದ ಒಳಮೊಗ್ರು ನಿವಾಸಿ 48 ವರ್ಷದ ಮಹಿಳೆ, ನರಿಮೊಗರು ನಿವಾಸಿ 30 ವರ್ಷದ ಪುರುಷ, ಮುಂಡೂರು ನಿವಾಸಿ 63 ವರ್ಷದ ಪುರುಷ, ಹಳೆನೇರಂಕಿ ನಿವಾಸಿ 35

ಕಡಬ ,ಪುತ್ತೂರು ಉಭಯ ತಾಲೂಕಿನಲ್ಲಿ ಇಂದಿನ ಕೊರೋನಾ ಅಪ್ ಡೇಟ್ Read More »

ಕರಾವಳಿ, ಕರ್ನಾಟಕ

ಕೊಡಗು ಕೇರಳ ಗಡಿಯಲ್ಲಿ ಸಂಚಾರಕ್ಕೆ ನಿರ್ಬಂಧ

(ನ್ಯೂಸ್ ಕಡಬ) newskadaba.com ಕೊಡಗು, ಆ.26: ಕೊಡಗು ಕೇರಳ ಗಡಿಯಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಿದೆ. ಕಾಸರಗೋಡಿನ ಪಣತ್ತಡಿ ಪಂಚಾಯಿತಿ ಈ ನಿರ್ಬಂಧ ಹೇರಿದ್ದು, ಕೇಂದ್ರ ಸರ್ಕಾರ ಅನುಮತಿ ಕೊಟ್ಟರೂ ಸಹ ಕೇರಳ ಸಂಚಾರಕ್ಕೆ ಅವಕಾಶ ಕೊಡದೆ ಗಡಿ ಬಂದ್ ಮಾಡಿದೆ ಎನ್ನಲಾಗಿದೆ. ಇದರಿಂದ ಕನ್ನಡಿಗರು ಪರದಾಡುವಂತಾಗಿದೆ. ಈ ಹಿನ್ನಲೆಯಲ್ಲಿ ಕೇರಳದ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿ ಕೇರಳ ಚೆಕ್ ಪೋಸ್ಟ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.    

ಕೊಡಗು ಕೇರಳ ಗಡಿಯಲ್ಲಿ ಸಂಚಾರಕ್ಕೆ ನಿರ್ಬಂಧ Read More »

ಕರಾವಳಿ, ಕರ್ನಾಟಕ
Scroll to Top