ನ್ಯೂಸ್ ಕಡಬ

ಕಾಸರಗೋಡು: ನೀರುಪಾಲಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ನ. 17:  ಮೂವರು ಸಹಪಾಠಿಗಳ ಜೊತೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ನೀರುಪಾಲಾಗಿದ್ದ ವಿದ್ಯಾರ್ಥಿಯ ಮೃತದೇಹ ಇಂದು ಪತ್ತೆಯಾಗಿದೆ. ಮೃತಪಟ್ಟ ಬಾಲಕನನ್ನು ಚೆಮ್ನಾಡ್ ಕೊಂಬನಡ್ಕದ ಮಿಸ್ಭಾಹ್ (15) ಎಂದು ಗುರುತಿಸಲಾಗಿದೆ.     ಮಿಸ್ಭಾಹ್ ಚೆಮ್ನಾಡ್ ಜಮಾ ಅತ್ ಹಯರ್ ಸೆಕಂಡರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದು, ಮೂವರು ಸ್ನೇಹಿತರ ಜೊತೆ ಚಂದ್ರಗಿರಿ ಹೊಳೆಯಲ್ಲಿ ಸ್ನಾನಕ್ಕಿಳಿದ ಸಂದರ್ಭದಲ್ಲಿ ನೀರುಪಾಲಾಗಿದ್ದನು. ಸ್ಥಳೀಯರು, ಅಗ್ನಿಶಾಮಕ ದಳದ ಸಿಬಂದಿಗಳು ಶೋಧ ಕಾರ್ಯಚರಣೆ ನಡೆಸಿದರೂ ಪತ್ತೆಹಚ್ಚಲಾಗಲಿಲ್ಲ. ಬಳಿಕ ಇಂದು ಸ್ಥಳೀಯರು […]

ಕಾಸರಗೋಡು: ನೀರುಪಾಲಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು :ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯ ಹೆಸರಿಡಲು ಮಿಥುನ್ ರೈ ಆಗ್ರಹ

(ನ್ಯೂಸ್ ಕಡಬ) newskadaba.com ಮಂಗಳೂರು ನ. 17:  ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ವೀರರಾದ ಕೋಟಿ -ಚೆನ್ನಯರ ಹೆಸರು ನಾಮಕರಣ ಮಾಡಬೇಕು. ವಿಮಾನ ನಿಲ್ದಾಣಕ್ಕೆ ಅದಾನಿ ಹೆಸರು ನಾಮಕರಣ ಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್‌ ರೈ ಆಗ್ರಹಿಸಿದರು.ವಿಮಾನ ನಿಲ್ದಾಣದಲ್ಲಿ ಅದಾನಿ ಕಂಪೆನಿಯ ಆನೆಯ ಚಿಹ್ನೆ ತೆರವು ಮಾಡಿ ಹಿಂದೆ ಇದ್ದ ಹುಲಿ ಕುಣಿತದ ಚಿಹ್ನೆ ಯನ್ನು ತಕ್ಷಣ ಅಳವಡಿಸಬೇಕು ಎಂದು ಮಿಥುನ್ ರೈ ಆಗ್ರಹಿಸಿದರು.    

ಮಂಗಳೂರು :ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯ ಹೆಸರಿಡಲು ಮಿಥುನ್ ರೈ ಆಗ್ರಹ Read More »

ಕರಾವಳಿ

ಬಂಟ್ವಾಳ: ನಾಳೆ (ನ. 18) ಪುರಸಭಾಧ್ಯಕ್ಷ ಹಾಗೂ ಉಪಾಧ್ಯಕ್ಷರ ಪದಗ್ರಹಣ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ. 17:  ಬಂಟ್ವಾಳ ಪುರಸಭಾಧ್ಯಕ್ಷರಾಗಿ ಮಹಮ್ಮದ್ ಶರೀಫ್ ಮತ್ತು ಉಪಾಧ್ಯಕ್ಷರಾಗಿ ಜೆಸಿಂತಾ ಡಿಸೋಜಾರವರು ಆಯ್ಕೆಗೊಂಡಿದ್ದಾರೆ.     ಇವರ ಪದಗ್ರಹಣ ಕಾರ್ಯಕ್ರಮವು ನಾಳೆ (ನ.18) ಮಧ್ಯಾಹ್ನ 12 ಗಂಟೆಗೆ ಬಂಟ್ವಾಳ ಪುರಸಭೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.    

ಬಂಟ್ವಾಳ: ನಾಳೆ (ನ. 18) ಪುರಸಭಾಧ್ಯಕ್ಷ ಹಾಗೂ ಉಪಾಧ್ಯಕ್ಷರ ಪದಗ್ರಹಣ Read More »

ಕರಾವಳಿ, ಕರ್ನಾಟಕ

ಮಂಗಳೂರು: ಬೃಹತ್ ಲಾರಿ ಬಾಕಿ ➤ ಸಂಚಾರ ಅಸ್ತವ್ಯಸ್ತ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 17: ಇಂದು ಎಂಆರ್.‌‌ಪಿಎಲ್ ‌‌ಗೆ ತೈಲ ಸಂಸ್ಕರಣಾ ಯಂತ್ರೋಪಕರಣಗಳನ್ನು ಸಾಗಿಸುವ ಬೃಹತ್‌ ಗಾತ್ರದ ಎರಡು ಲಾರಿಗಳು ನಗರದ ಪಡೀಲ್‌‌‌‌‌ ಅಂಡರ್‌ ಪಾಸ್‌‌‌ ಬಳಿ ಕೆಳಗೆ ಸಂಚರಿಸಲಾಗದೇ ಬಾಕಿಯಾಗಿದ್ದು, ವಾಹನ ಸಂಚಾರಕ್ಕೆ  ಅಡಚಣೆ ಉಂಟಾಗಿದೆ.   ಈ ಘಟನೆಯಿಂದ ವಾಹನಗಳನ್ನು ಬೇರೆ ಕಡೆಗೆ ತಿರುಗಿಸುವ ಪ್ರಯತ್ನಗಳು ನಡೆಯುತ್ತಿದ್ದು, ಎರಡು ಬೃಹತ್‌ ಟ್ರಕ್‌‌ ಗಳನ್ನು ಇಲ್ಲಿಂದ ಸ್ಥಳಾಂತರಿಸದಿದ್ದಲ್ಲಿ, ಟ್ರಾಫಿಕ್‌‌‌ ಬ್ಲಾಕ್‌‌ ಎದುರಾಗುವ ಅಪಾಯವಿದೆ.

ಮಂಗಳೂರು: ಬೃಹತ್ ಲಾರಿ ಬಾಕಿ ➤ ಸಂಚಾರ ಅಸ್ತವ್ಯಸ್ತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರು: ಅಪ್ರಾಪ್ತೆ ನಾಪತ್ತೆ

(ನ್ಯೂಸ್ ಕಡಬ) newskadaba.com ಕೆದಿಲ, ನ. 17. ಅಪ್ರಾಪ್ತ ಬಾಲಕಿಯೊರ್ವಳು ನಾಪತ್ತೆಯಾಗಿರುವ  ಘಟನೆ ಪುತ್ತೂರು ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.     ನ.14 ರಂದು ಕೆಲಸಕ್ಕೆಂದು ಮನೆಯಿಂದ ಹೋದವಳು ಗೆಳತಿಯ ಅಕ್ಕನ ಮಗು ಅನಾರೋಗ್ಯದಿಂದಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದರಿಂದ ನಾನು ಅವರ ಜೊತೆ ಆಸ್ಪತ್ರೆಯಲ್ಲೇ ಇದ್ದು, ನಾಳೆ ಬರುತ್ತೇನೆ ಎಂದು ತಂದೆಗೆ ಕರೆ ಮಾಡಿ ಹೇಳಿ ನಾಪತ್ತೆಯಾಗಿದ್ದರು.  ಮನೆಗೆ ಬಾರದೇ ಇದ್ದುದ್ದರಿಂದ ಬಾಲಕಿಯ ತಂದೆಯು ಮಹಿಳಾ ಪೊಲೀಸರಿಗೆ ದೂರು ನೀಡಿದ್ದು, ‘ನನ್ನ ಪುತ್ರಿ ಅಪ್ರಾಪ್ತೆಯಾಗಿದ್ದರಿಂದ ಆಕೆಯನ್ನು

ಪುತ್ತೂರು: ಅಪ್ರಾಪ್ತೆ ನಾಪತ್ತೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ನರಿಮೊಗರು : ಮನೆಯ ಹೆಂಚು ತೆಗೆದು ಕಳ್ಳತನಕ್ಕೆ ಯತ್ನ

(ನ್ಯೂಸ್ ಕಡಬ) newskadaba.com ನರಿಮೊಗರು ನ. 17: ಕಳ್ಳರು ತಮ್ಮ ಕೆಲಸ ಸಾಧಿಸಲು ವಿಭಿನ್ನವಾಗಿ ಕೈ ಚಲಕ ತೋರಿಸಿದ್ದಾರೆ. ರಾತ್ರಿ ವೇಳೆ ಮನೆಯವರೆಲ್ಲ ಮಲಗಿದ್ದ ವೇಳೆ, ಖದೀಮರು ಮನೆಯ ಹೆಂಚು ಎರಡು ತೆಗೆದು ಒಳ ನುಸುಳಲು ಯತ್ನಿಸಿದ್ದಾನೆ. ಈ ಘಟನೆ ನರಿಮೊಗರು ಗ್ರಾಮದ ಮಣಿಯ ಎಂಬಲ್ಲಿ ನಡೆದಿದೆ.   ನ.16 ರ ರಾತ್ರಿ ನರಿಮೊಗರು ಗ್ರಾಮದ ಮಣಿಯ ನಿವಾಸಿ ಉಸ್ಮಾನ್ ಎನ್ ಅವರ ಮನೆಯಲ್ಲಿ ಕಳ್ಳತನದ ಯತ್ನ ನಡೆದಿದೆ. ಉಸ್ಮಾನ್ ರವರು ರಾತ್ರಿ ಮಲಗಿದ್ದ ಸಮಯದಲ್ಲಿ ಕಳ್ಳರು ಮನೆಯ

ನರಿಮೊಗರು : ಮನೆಯ ಹೆಂಚು ತೆಗೆದು ಕಳ್ಳತನಕ್ಕೆ ಯತ್ನ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ ,ಪುತ್ತೂರು ತಾಲೂಕಿನಲ್ಲಿ ಇಂದು ನಾಲ್ಕು ಮಂದಿಯಲ್ಲಿ ಕೋವಿಡ್ ದೃಢ

(ನ್ಯೂಸ್ ಕಡಬ) newskadaba.com ಕಡಬ  ನ. 17: ಕಡಬ ಹಾಗೂ ಪುತ್ತೂರು ತಾಲೂಕಿನಲ್ಲಿ ನ.17 ಆರೋಗ್ಯ ಇಲಾಖೆ ವರದಿಯಂತೆ ನಾಲ್ಕು ಮಂದಿಯಲ್ಲಿ ಕೋವಿಡ್ 19 ದೃಡಗೊಂಡಿದೆ.  ಕಡಬ ತಾಲೂಕಿನ ಗೋಳಿತ್ತೋಟ್ಟು ಗ್ರಾಮದ 48 ವರ್ಷದ ವ್ಯಕ್ತಿ, 11 ವರ್ಷದ ಬಾಲಕಿಯಲ್ಲಿ ಕೋರೊನಾ ದೃಡಗೊಂಡಿದೆ.   ಪುತ್ತೂರಿನ ದರ್ಬೆ ನಿವಾಸಿ 19 ವರ್ಷದ ಯುವಕ ಹಾಗೂ 22 ವರ್ಷದ ಯುವತಿಯಲ್ಲಿ ಕೊರೋನಾ ದೃಢಗೊಂಡಿದೆ.  

ಕಡಬ ,ಪುತ್ತೂರು ತಾಲೂಕಿನಲ್ಲಿ ಇಂದು ನಾಲ್ಕು ಮಂದಿಯಲ್ಲಿ ಕೋವಿಡ್ ದೃಢ Read More »

ಕರಾವಳಿ

ಅಪ್ರಾಪ್ತೆಯ ಮೇಲೆ ಅತ್ಯಾಚಾರವೇಸಗಿ ಶ್ವಾಸಕೋಶ ಕೊಂಡೊಯ್ದ ದುರುಳರು

(ನ್ಯೂಸ್ ಕಡಬ) newskadaba.com ಕಾನ್ಪುರ ನ. 17: ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಆರು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಶ್ವಾಸಕೋಶ ಬಗೆದು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಅರಣ್ಯ ಪ್ರದೇಶದಲ್ಲಿ ಬಾಲಕಿಯ ಮೃತದೇಹ ಭಾನುವಾರ ಪತ್ತೆಯಾಗಿತ್ತು. ಮೃತದೇಹದಿಂದ ಶ್ವಾಸಕೋಶವನ್ನು ಹೊರಗೆಳೆದು ತೆಗೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯೊಬ್ಬರಿಗೆ ಮಗುವಾಗದೇ ಇರುವುದರಿಂದ ವಾಮಾಚಾರ ಮಾಡುವುದಕ್ಕಾಗಿ ಈ ಕೃತ್ಯ ಎಸಗಲಾಗಿತ್ತು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಗೌತಮಪುರ ಪ್ರದೇಶದ ಬಾಲಕಿಯು ದೀಪಾವಳಿಯ ದಿನ ರಾತ್ರಿ ನಾಪತ್ತೆಯಾಗಿದ್ದಳು.

ಅಪ್ರಾಪ್ತೆಯ ಮೇಲೆ ಅತ್ಯಾಚಾರವೇಸಗಿ ಶ್ವಾಸಕೋಶ ಕೊಂಡೊಯ್ದ ದುರುಳರು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸುಳ್ಯ: ಎಸ್.ಎಸ್.ಎಫ್ ವತಿಯಿಂದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮುರೂರು ಬಾಪುಂಞ ಹಾಜಿಯವರಿಗೆ ಗೌರವಾರ್ಪಣೆ

(ನ್ಯೂಸ್ ಕಡಬ) newskadaba.com ಸುಳ್ಯ, ನ. 17:  ಕರ್ನಾಟಕ ರಾಜ್ಯ ಎಸ್.ಎಸ್ ಎಫ್ ಸುಳ್ಯ ಡಿವಿಷನ್ ವತಿಯಿಂದ ಡಿವಿಷನ್ ಅಧ್ಯಕ್ಷರಾದ ಇಬ್ರಾಹಿಂ ಅಮ್ಜದಿ ಮಂಡೆಕೋಲುರವರ ನೇತೃತ್ವದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮುರೂರು ಬಾಪುಂಞÂ ಹಾಜಿಯವರಿಗೆ ಗೌರವಾರ್ಪಣೆ ಕಾರ್ಯಕ್ರಮವು ಅವರ ಮನೆಯಲ್ಲಿ ನಡೆಯಿತು.   ಕಾರ್ಯಕ್ರಮದಲ್ಲಿ ಎಸ್. ವೈ.ಎಸ್.ಈಸ್ಟ್ ಝೋನ್ ಸದಸ್ಯರಾದ ಸಿದ್ದೀಕ್ ಕಟ್ಟೆಕ್ಕಾರ್, ಎಸ್.ಎಸ್.ಎಫ್ ಬೆಳ್ಳಾರೆ ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ ಕಲಾಂ ಝುಹ್ರಿ, ಜಾಲ್ಸೂರು ಸೆಕ್ಟರ್ ಉಪಾಧ್ಯಕ್ಷರಾದ ಹಾಫಿಳ್ ನೌಷಾದ್ ಅಡ್ಕಾರ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಎಸ್.ಎಅ.ಎಫ್.

ಸುಳ್ಯ: ಎಸ್.ಎಸ್.ಎಫ್ ವತಿಯಿಂದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮುರೂರು ಬಾಪುಂಞ ಹಾಜಿಯವರಿಗೆ ಗೌರವಾರ್ಪಣೆ Read More »

ಕರಾವಳಿ

ಬೆಂಗಳೂರು: ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಪಬ್

(ನ್ಯೂಸ್ ಕಡಬ) newskadaba.com : ಬೆಂಗಳೂರು, ನ. 17: ಹೊಸೂರು – ಸರ್ಜಾಪುರ ರಸ್ತೆ (ಹೆಚ್ ಎಸ್ ಆರ್) ಬಡಾವಣೆಯ ಹ್ಯಾಂಗ್ ಓವರ್ ಪಬ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಭಾರಿ ಪ್ರಮಾಣದಲ್ಲಿ ಕಳೆದ ದಿನ ಬೆಂಕಿ ಕಾಣಿಸಿಕೊಂಡಿದೆ.     ಕಳೆದ ದಿನ ಪಬ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಾರ್ಟ್ ಸರ್ಕ್ಯೂಟ್  ವಿಷಯ ತಿಳಿಯುತ್ತಿದ್ದಂತೆ ಬೊಮ್ಮನ ಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ

ಬೆಂಗಳೂರು: ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಪಬ್ Read More »

ಕರ್ನಾಟಕ
Scroll to Top