ನ್ಯೂಸ್ ಕಡಬ

ಸುರತ್ಕಲ್: ಅಸ್ವಸ್ಥ ಪ್ರಯಾಣಿಕನ ಜೀವ ಉಳಿಸಲು ಬಸ್ ನಿರ್ವಾಹಕನ ಹರಸಾಹಸ

(ನ್ಯೂಸ್ ಕಡಬ) newskadaba.com ಮಂಗಳೂರು ನ. 20: ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ ಏಕಾಏಕಿ ಅಸ್ವಸ್ಥಗೊಂಡ ಪ್ರಯಾಣಿಕನ ಜೀವ ಉಳಿಸಲು ಬಸ್ಸಿನ ನಿರ್ವಾಹಕ ಜೀವದ ಹಂಗು ತೊರೆದು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಸುರತ್ಕಲ್ ಸಮೀಪದ ಬಜಪೆ ಕೈಕಂಬ ಮಾರ್ಗವಾಗಿ ಸಂಚರಿಸುವ ಶಾನ್ ಎಂಬ ಸರ್ವಿಸ್ ಬಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಉತ್ತರ ಪ್ರದೇಶದ ವಾರಣಾಸಿ ನಿವಾಸಿ ರಾಜೇಶ್ ಚೌಹಾನ್ (40) ಸುರತ್ಕಲ್ ಸನಿಹದ ಕಾಟಿಪಳ್ಳ ಬಳಿ ದಿಢೀರ್ ಅಸ್ವಸ್ಥಗೊಂಡು ಕುಸಿದು ಬಿದ್ದರು. ತಕ್ಷಣ ಗಣೇಶ್ ಅವರು […]

ಸುರತ್ಕಲ್: ಅಸ್ವಸ್ಥ ಪ್ರಯಾಣಿಕನ ಜೀವ ಉಳಿಸಲು ಬಸ್ ನಿರ್ವಾಹಕನ ಹರಸಾಹಸ Read More »

ಕರಾವಳಿ

ಉಪ್ಪಿನಂಗಡಿ: ಸಾವಿರಾರು ರೂಪಾಯಿ ಪಡೆದು ವಂಚಿಸಿದ ನಕಲಿ ಜ್ಯೋತಿಷಿ..!

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ ನ. 20: ಮಂಡ್ಯದ ವ್ಯಕ್ತಿಯೋರ್ವ ಜ್ಯೋತಿಷಿಯಂತೆ ನಟಿಸಿ ಹಲವಾರು ಮಂದಿಯಿಂದ ಸಾವಿರಾರು ರೂಪಾಯಿ ಪಡೆದು ವಂಚಿಸಿದ್ದಾನೆ ಎಂದು ಹೇಳಲಾಗುತ್ತಿದ್ದು, ಈ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.     ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ವೈರಲ್ ಆಗಿದೆ. ವಂಚನೆ ಮಾಡಿರುವ ಬಗ್ಗೆ ಜನರಿಗೆ ತಿಳಿದ ಬಳಿಕ ಜ್ಯೋತಿಷಿಯ ಕಚೇರಿಗೆ ಧಾವಿಸಿ ತಮ್ಮ ಹಣವನ್ನು ಮರುಪಾವತಿಸುವಂತೆ ಒತ್ತಾಯಿಸಿದ್ದಾರೆ. ಹಣ ಮರುಪಾವತಿಯನ್ನು ಜ್ಯೋತಿಷಿ ಗೂಗಲ್ ಪೇ ಮೂಲಕ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಮಹಿಳೆಯೋರ್ವರು ಮನೆಯಿಂದ ಚಿನ್ನಾಭರಣ

ಉಪ್ಪಿನಂಗಡಿ: ಸಾವಿರಾರು ರೂಪಾಯಿ ಪಡೆದು ವಂಚಿಸಿದ ನಕಲಿ ಜ್ಯೋತಿಷಿ..! Read More »

ಕರಾವಳಿ

ಕೌಕ್ರಡಿಯ ಪೆರಿಯಶಾಂತಿ ಬಳಿ ಮೃತ ದೇಹ ಪತ್ತೆ

(ನ್ಯೂಸ್ ಕಡಬ) newskadaba.com ಕೌಕ್ರಡಿ ನ. 20: ಕೌಕ್ರಡಿಯ ಪೆರಿಯಶಾಂತಿ ಎಂಬಲ್ಲಿ ಇಂದು ಅಪರಿಚಿತ ಯುವಕನ ಶವವೊಂದು ಪತ್ತೆಯಾಗಿದೆ.   ರಸ್ತೆ ಬದಿಯಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದ್ದು. ವ್ಯಕ್ತಿಯ ಮುಖ ಸುಟ್ಟ ರೀತಿಯಲ್ಲಿದ್ದು, ತನಿಖೆಯ ಬಳಿಕವಷ್ಟೇ ಮೃತ ದೇಹದ ಮಾಹಿತಿ ತಿಳಿದು ಬರಬೇಕಾಗಿದೆ. ಮೃತದೇಹವನ್ನು ಸದ್ಯ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ .ಮೃತ ದೇಹ ಪತ್ತೆಯಾದ ಸ್ಥಳಕ್ಕೆ ನೆಲ್ಯಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  

ಕೌಕ್ರಡಿಯ ಪೆರಿಯಶಾಂತಿ ಬಳಿ ಮೃತ ದೇಹ ಪತ್ತೆ Read More »

ಕರಾವಳಿ

ಧರ್ಮಸ್ಥಳ: ಶ್ರೀ ಗುರುದೇವಮಠ ದೇವರಗುಡ್ಡೆ ಅಭಿವೃದ್ಧಿ ಕಾರ್ಯಕ್ಕಾಗಿ ಸರಕಾರದಿಂದ ರೂ. 1 ಕೋಟಿ ಅನುದಾನ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ ನ. 20: ಶ್ರೀರಾಮಕ್ಷೇತ್ರ ಮಹಾಸಂಸ್ಥಾನಂ ಮತ್ತು ಶ್ರೀ ಗುರುದೇವಮಠ ದೇವರಗುಡ್ಡೆ ಇದರ ವಿವಿಧ ಅಭಿವೃದ್ಧಿ ಕಾರ್ಯಕ್ಕಾಗಿ ಸರಕಾರದಿಂದ ರೂ. 1 ಕೋಟಿ ಅನುದಾನವನ್ನು ಕರ್ನಾಟಕ ರಾಜ್ಯ ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಬಿಡುಗಡೆಗೊಳಿಸಿದ್ದಾರೆ.     ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದ ಶ್ರೀರಾಮಕ್ಷೇತ್ರ ಮತ್ತು ಶ್ರೀ ಗುರುದೇವಮಠ ದೇವರಗುಡ್ಡೆ ಇದರ ವಿವಿಧ ಅಭಿವೃದ್ಧಿ ಕಾರ್ಯಕ್ಕಾಗಿ ದ.ಕ ಜಿಲ್ಲಾ ಉಸ್ತುವಾರಿ ಹಾಗೂ ಮುಜುರಾಯಿ ಮತ್ತು

ಧರ್ಮಸ್ಥಳ: ಶ್ರೀ ಗುರುದೇವಮಠ ದೇವರಗುಡ್ಡೆ ಅಭಿವೃದ್ಧಿ ಕಾರ್ಯಕ್ಕಾಗಿ ಸರಕಾರದಿಂದ ರೂ. 1 ಕೋಟಿ ಅನುದಾನ Read More »

ಕರಾವಳಿ

ಸುಳ್ಯ: ಅಪರಿಚತ ವಾಹನವೊಂದು ದನಕ್ಕೆ ಢಿಕ್ಕಿ ➤ ಬಜರಂಗದಳ ಕಾರ್ಯಕರ್ತರಿಂದ ದಫನ ಕಾರ್ಯ

(ನ್ಯೂಸ್ ಕಡಬ) newskadaba.com ಸುಳ್ಯ ನ. 20: ಕೆಲವು ದಿನಗಳ ಹಿಂದೆ ಅಪರಿಚಿತ ವಾಹನವೊಂದು ದನವೊದಕ್ಕೆ ಢಿಕ್ಕಿ ಹೊಡೆದ ಪರಿಣಾಮ ದನ ಗಂಭೀರ ಗಾಯಗೊಂಡು ಸುಳ್ಯದ ಗಾಂಧಿನಗರದ ಸಮೀಪ ಬಿದ್ದಿತ್ತು.     ಅಪಘಾತಕ್ಕೊಳಗಾದ ದನವನ್ನು ಚಿಕಿತ್ಸೆಗೆ ಒಳಪಡಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಕಳೆದ ದಿನ ಮೃತಪಟ್ಟಿದೆ. ಮೃತಪಟ್ಟ ದನವನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು ಪಿಕ್ ಅಪ್ ನಲ್ಲಿ ಸಾಗಿಸಿ ದನದ ಮೇಲೆ ಬಿಳಿ ಬಟ್ಟೆ ಹೊದಿಸಿ ಹೂ ಮಾಲೆ ಹಾಕಿ ಅಂತಿಮ ವಿಧಿ ವಿಧಾಗಳನ್ನು ನೆರವೇರಿಸಿದರು.

ಸುಳ್ಯ: ಅಪರಿಚತ ವಾಹನವೊಂದು ದನಕ್ಕೆ ಢಿಕ್ಕಿ ➤ ಬಜರಂಗದಳ ಕಾರ್ಯಕರ್ತರಿಂದ ದಫನ ಕಾರ್ಯ Read More »

ಕರಾವಳಿ

ಮಂಗಳೂರು ಏರ್ ಪೋರ್ಟ್ : ಮಿಥುನ್ ರೈ ಘರ್ಜನೆಗೆ ಬೆದರಿದ ಅದಾನಿ ಗ್ರೂಪ್ ➤ ಪಿಲಿನಲಿಕೆ ಆಕೃತಿ 24 ಗಂಟೆಯೊಳಗಡೆ ಮತ್ತೆ ಮೂಲ ಸ್ಥಾನಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು ನ. 20: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದಾನಿ ಕಂಪೆನಿಯ ಆನೆಯ ಚಿಹ್ನೆ ತೆರವು ಮಾಡಿ ಹಿಂದೆ ಇದ್ದ  ಪಿಲಿನಲಿಕೆ (ಹುಲಿ ಕುಣಿತದ) ಚಿಹ್ನೆ ಯನ್ನು ತಕ್ಷಣ ಅಳವಡಿಸಬೇಕು ಎಂದು ಮಿಥುನ್ ರೈ ಆಗ್ರಹಿಸಿದ್ದರು.  ತೆರವು ಗೊಳಿಸದೇ ಇದ್ದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದ್ದರು.   ವಿಮಾನ ನಿಲ್ದಾಣಕ್ಕೆ ತುಳುನಾಡಿನ ವೀರರಾದ ಕೋಟಿ -ಚೆನ್ನಯರ ಹೆಸರು ನಾಮಕರಣ ಮಾಡಬೇಕು. ವಿಮಾನ ನಿಲ್ದಾಣಕ್ಕೆ ಅದಾನಿ ಹೆಸರು ನಾಮಕರಣ ಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು

ಮಂಗಳೂರು ಏರ್ ಪೋರ್ಟ್ : ಮಿಥುನ್ ರೈ ಘರ್ಜನೆಗೆ ಬೆದರಿದ ಅದಾನಿ ಗ್ರೂಪ್ ➤ ಪಿಲಿನಲಿಕೆ ಆಕೃತಿ 24 ಗಂಟೆಯೊಳಗಡೆ ಮತ್ತೆ ಮೂಲ ಸ್ಥಾನಕ್ಕೆ Read More »

ಕರಾವಳಿ

ಬೈಕ್ ನಲ್ಲಿ ಹೋಗುತ್ತಿದ್ದಾಗ ಅಮ್ಮನ ಕೈಯಿಂದ ಬಿದ್ದು ಕಂದಮ್ಮ ಮೃತ್ಯು ➤ ಪೋಷಕರೆ ಎಚ್ಚರ ವಹಿಸಿ.!

(ನ್ಯೂಸ್ ಕಡಬ) newskadaba.com ಮಂಡ್ಯ ನ. 20: ಬೈಕಿನಲ್ಲಿ ಹೋಗುವಾಗ ಅಮ್ಮನ ಮಡಿಲಿನಲ್ಲಿ ಕೂತಿದ್ದ ಒಂದು ವರ್ಷದ ಮಗು ದಿಢೀರನೆ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಂಡ್ಯದ ಕಿರಂಗೂರು ಗ್ರಾಮದ ಬಳಿ ನಡೆದಿದೆ.ಚಂದಗಾಲು ಗ್ರಾಮ ಶಿವಕುಮಾರ್ ಮತ್ತು ರಂಜಿತಾ ದಂಪತಿ ಮೃತ ಮಗುವಿನ ಪೋಷಕರಾಗಿದ್ದಾರೆ.     ಮದುವೆ ಕಾರ್ಯಕ್ರಮವನ್ನು ಮುಗಿಸಿಕೊಂಡು ದಂಪತಿ ಮಗುವನ್ನು ಬೈಕಿನಲ್ಲಿ ಕೂರಿಸಿಕೊಂಡು ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.ಕಿರಂಗದೂರು ಗ್ರಾಮದ ಬಳಿಯ ಹಂಪ್ಸ್ ಬಳಿ ಶಿವಕುಮಾರ್ ತಮ್ಮ ಬೈಕನ್ನು ನಿಧಾನವಾಗಿ

ಬೈಕ್ ನಲ್ಲಿ ಹೋಗುತ್ತಿದ್ದಾಗ ಅಮ್ಮನ ಕೈಯಿಂದ ಬಿದ್ದು ಕಂದಮ್ಮ ಮೃತ್ಯು ➤ ಪೋಷಕರೆ ಎಚ್ಚರ ವಹಿಸಿ.! Read More »

ಕರ್ನಾಟಕ

ಮಂಗಳೂರು: ಇನ್ಮುಂದೆ ಮನೆ ಬಾಗಿಲಿಗೇ “ಶಬರಿಮಲೆ ಶ್ರೀ ಅಯ್ಯಪ್ಪನ ಪ್ರಸಾದ”

(ನ್ಯೂಸ್ ಕಡಬ) newskadaba.com ಮಂಗಳೂರು ನ. 20: ದೇಶದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಕೇರಳದ ಶಬರಿಮಲೆಯೂ ಒಂದು. ಈಗಾಗಲೇ ಶಬರಿಮಲೆ ಸ್ವಾಮಿ ಶ್ರೀ ಅಯ್ಯಪ್ಪನ ದರ್ಶನಕ್ಕೆ ತೆರಳುವವರಿಗೆ ಒಂದಿಷ್ಟು ನಿರ್ಬಂಧ ಜೊತೆಗೆ ಅವಕಾಶ ಕಲ್ಪಿಸಲಾಗಿದೆ.ಇದರ ಜತೆಗೆ ಅಯ್ಯಪ್ಪನ ಭಕ್ತರಿಗೆ ಇನ್ನೊಂದು ಶುಭ ಸುದ್ದಿಯೊಂದುಯಿದೆ. ಇನ್ಮುಂದೆ ಮನೆ ಬಾಗಿಲಿಗೇ ಶಬರಿಮಲೆ ಶ್ರೀ ಅಯ್ಯಪ್ಪ ಪ್ರಸಾದ ಬರಲಿದೆ.ಅಂತಹದ್ದೊಂದು ಅವಕಾಶವನ್ನು ಭಾರತೀಯ ಅಂಚೆ ಇಲಾಖೆ ಒದಗಿಸಿಕೊಡಲಿದೆ. ಭಾರತೀಯ ಅಂಚೆ ಇಲಾಖೆ ಕೇರಳ ಹಾಗೂ ಶಬರಿಮಲೆ ದೇವಸ್ಥಾನ ಆಡಳಿತ ಮಂಡಳಿ ಇಂತಹದ್ದೊಂದು ಕರಾರು ಮಾಡಿಕೊಂಡಿದೆ. ಅದರಂತೆ

ಮಂಗಳೂರು: ಇನ್ಮುಂದೆ ಮನೆ ಬಾಗಿಲಿಗೇ “ಶಬರಿಮಲೆ ಶ್ರೀ ಅಯ್ಯಪ್ಪನ ಪ್ರಸಾದ” Read More »

ಕರಾವಳಿ

ಉಡುಪಿ: ಮೃತಪಟ್ಟ 7 ಮೀನುಗಾರರ ಕುಟುಂಬಕ್ಕೆ 10 ಲಕ್ಷ ಹೆಚ್ಚುವರಿ ಪರಿಹಾರ

(ನ್ಯೂಸ್ ಕಡಬ) newskadaba.com ಉಡುಪಿ ನ. 20: ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಮುಳುಗಡೆಯಾಗಿ ಕಣ್ಮರೆಯಾದ 7 ಮೀನುಗಾರರ ಕುಟುಂಬಗಳಿಗೆ ವಿಶೇಷ ಪ್ರಕರಣ ದಡಿಯಲ್ಲಿ ಹೆಚ್ಚುವರಿ ಪರಿಹಾರವಾಗಿ ತಲಾ 10 ಲಕ್ಷ ರೂಪಾಯಿಗಳನ್ನು ಕರ್ನಾಟಕ ಸರ್ಕಾರ ಮಂಜೂರು ಮಾಡಿದೆ.   ಈ ನಿರ್ಧಾರವನ್ನು ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ರವರು ಸ್ವಾಗತಿಸಿದ್ದಾರೆ. ಮನವಿಗೆ ಸ್ಪಂದಿಸಿ, ಮೀನುಗಾರರ ಬಗ್ಗೆ ತಮ್ಮ ಕಾಳಜಿಯನ್ನು ಪ್ರದರ್ಶಿಸಿದ

ಉಡುಪಿ: ಮೃತಪಟ್ಟ 7 ಮೀನುಗಾರರ ಕುಟುಂಬಕ್ಕೆ 10 ಲಕ್ಷ ಹೆಚ್ಚುವರಿ ಪರಿಹಾರ Read More »

ಕರಾವಳಿ

ದುಗ್ಗಲಡ್ಕ: ರಿಕ್ಷಾದಿಂದ ಬಿದ್ದ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ದುಗ್ಗಲಡ್ಕ ನ. 20: ದುಗ್ಗಲಡ್ಕ ನೀರಬಿದಿರೆ(ಕೊಯಿಕುಳಿ ಶಾಲಾ ಬಳಿ) ರಿಕ್ಷಾದಿಂದ ಬಿದ್ದು ಗಂಭೀರ ಗಾಯಗೊಂಡ ಮಹಿಳೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕಳೆದ ದಿನ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಲಲಿತ(40) ಎಂದು ಗುರುತಿಲಾಗಿದೆ.     ಸಂಬಂಧಿಕರಾದ ನಾಗೇಶ್ ಎಂಬವರ ರಿಕ್ಷಾದಲ್ಲಿ ಸುಳ್ಯಕ್ಕೆ ಬರುತ್ತಿದ್ದಾಗ ಆರ್ತಾಜೆ ಸಮೀಪ ರಿಕ್ಷಾದಿಂದ ರಸ್ತೆಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕಳೆದ ದಿನ ಮೃತಪಟ್ಟಿದ್ದಾರೆ.    

ದುಗ್ಗಲಡ್ಕ: ರಿಕ್ಷಾದಿಂದ ಬಿದ್ದ ಮಹಿಳೆ ಮೃತ್ಯು Read More »

ಕರಾವಳಿ
Scroll to Top