ಕಡಬ ನ್ಯೂಸ್

ಮಂಗಳೂರು : ಉದ್ಯಮಿ ನಾಪತ್ತೆ.!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.23: ಸೆಂಟ್ರಲ್ ಮಾರ್ಕೆಟ್‌ನಲ್ಲಿರುವ ಬಟ್ಟೆ ಅಂಗಡಿಯೊಂದರ ಪಾಲುದಾರ, ಉದ್ಯಮಿಯೊಬ್ಬರು ನಾಪತ್ತೆಯಾದ ಬಗ್ಗೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಲಾಗಿದೆ ಎನ್ನಲಾಗಿದೆ.   ಮಾರ್ನಮಿಕಟ್ಟೆ ನಿವಾಸಿ ಸಲೀಂ ಅಹ್ಮದ್ (35) ನಾಪತ್ತೆಯಾದ ಉದ್ಯಮಿ. ಇವರು ಮಾರ್ನಮಿಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಡಿ.21ರ ಬೆಳಗ್ಗೆ 8:30ಕ್ಕೆ ಮನೆಯಿಂದ ತೆರಳಿದವರು ವಾಪಸಾಗಿಲ್ಲ. ಮೊಬೈಲ್ ಸ್ವಿಚ್ ‌ಆಫ್ ಆಗಿದ್ದು, ನೆರೆಕರೆಯವರಲ್ಲಿ ಹಾಗೂ ಮಂಗಳೂರು ನಗರದಲ್ಲಿ ಹುಡುಕಾಟ ನಡೆಸಲಾಗಿದೆ. ಆದರೆ […]

ಮಂಗಳೂರು : ಉದ್ಯಮಿ ನಾಪತ್ತೆ.! Read More »

ಕರಾವಳಿ

ಕೊರೋನಾ ಕಾಲದಲ್ಲಿ ನರ್ಸ್‌ ಆಗಿದ್ದ ನಟಿಗೆ ಪಾರ್ಶ್ವವಾಯು.!

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.23: ಶಾರುಖ್ ಖಾನ್ ಜತೆ ತೆರೆ ಹಂಚಿಕೊಂಡಿದ್ದ ನಟಿ ಪಾರ್ಶ್ವವಾಯುಗೆ ತುತ್ತಾಗಿದ್ದಾರೆ. ಕೊರೋನಾ ಸಂಕಷ್ಟದ ಸಮಯದಲ್ಲಿ ನರ್ಸ್ ಆಗಿಯೂ ಕೆಲಸ ಮಾಡಿದ್ದ ನಟಿ ಶಿಖಾ ಮಲ್ಹೋತ್ರಾ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಟ್ರೋಕ್ ನಟಿಯ ದೇಹದ ಬಲಭಾಗದ ಮೇಲೆ ಭಾರೀ ಪರಿಣಾಮ ಬೀರಿದ್ದು, ಎದ್ದು ಓಡಾಡುವುದು ಸಾಧ್ಯವಾಗುತ್ತಿಲ್ಲ. ಶಿಖಾ ಮಲ್ಹೋತ್ರಾ ಅವರನ್ನು ಮುಂಬೈ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ತಮ್ಮ ತಾಯಿಯೊಂದಿಗೆ ಇರುವ ಪೋಟೋ ಹಂಚಿಕೊಂಡಿದ್ದಾರೆ.ತಾನು ಚೇತರಿಸಿಕೊಳ್ಳುತ್ತಿರುವುದಾಗಿ ನಟಿ ತಿಳಿಸಿದ್ದಾರೆ.ತಾನು ಯಾವಾಗ

ಕೊರೋನಾ ಕಾಲದಲ್ಲಿ ನರ್ಸ್‌ ಆಗಿದ್ದ ನಟಿಗೆ ಪಾರ್ಶ್ವವಾಯು.! Read More »

ರಾಷ್ಟ್ರೀಯ ನ್ಯೂಸ್

ಗುತ್ತಿಗಾರು :ಮತಯಾಚಿಸಲು ಬರಬೇಡಿ ಎಂದು ಗೇಟಿಗೆ ಬೋರ್ಡ್ ➤ಮತದಾರನ ಬೋರ್ಡ್ ನೋಡಿ ಕಂಗಾಲದ ಅಭ್ಯರ್ಥಿಗಳು

(ನ್ಯೂಸ್ ಕಡಬ) newskadaba.com ಗುತ್ತಿಗಾರು, ಡಿ.23: ಒಂದು ಕಡೆ ಗ್ರಾಮ ಪಂಚಾಯತ್ ಚುನಾವಣೆಗೆ ಸಿದ್ದತೆಗಳು ಬರದಿಂದ ಸಾಗುತ್ತಿದೆ. ಮತ್ತೊಂದು ಕಡೆ ಪುತ್ತೂರು, ಸುಳ್ಯ, ಕಡಬ ವ್ಯಾಪ್ತಿಯ ಹಲವು ಭಾಗಗಳಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ಗಳು ರಾರಾಜಿಸುತ್ತಿದೆ.ಸಮಸ್ಯೆಗಳಿಗೆ ಸ್ಪಂದಿಸದೆ ಕೇವಲ ಭರವಸೆ ಮಾತ್ರ ನೀಡುತ್ತಿರುವ ಜನಪ್ರತಿನಿಧಿಗಳ ಧೋರಣೆಗೆ ಬೇಸತ್ತು ಗುತ್ತಿಗಾರಿನಲ್ಲಿ ವ್ಯಕ್ತಿಯೋರ್ವರು ತಮ್ಮ ಮನೆಯ ಗೇಟಿಗೆ ಮತಯಾಚಿಸಲು ಬರಬೇಡಿ ಎಂದು ಬೋರ್ಡ್ ಅಳವಡಿಸಿದ್ದಾರೆ. ಗುತ್ತಿಗಾರಿನ ರವೀಂದ್ರ ಎಂಬುವರು ತಮ್ಮ ಮನೆಗೆ ಬರುವ ದಾರಿಯ ಗೇಟಿನಲ್ಲಿ” ದಯವಿಟ್ಟು ಮತ ಯಾಚಿಸಲು ಬರಬೇಡಿ”

ಗುತ್ತಿಗಾರು :ಮತಯಾಚಿಸಲು ಬರಬೇಡಿ ಎಂದು ಗೇಟಿಗೆ ಬೋರ್ಡ್ ➤ಮತದಾರನ ಬೋರ್ಡ್ ನೋಡಿ ಕಂಗಾಲದ ಅಭ್ಯರ್ಥಿಗಳು Read More »

ಕರಾವಳಿ

ಪುತ್ತೂರು :ಬಲ್ಯಾಡು ಕಾಡ್ಲ ದೈವಸ್ಥಾನದಿಂದ ಕಳವಾದ ಸೊತ್ತುಗಳು ಪತ್ತೆ ➤ ಕಳ್ಳರ ಪತ್ತೆಗಾಗಿ ಶೋಧ ಕಾರ್ಯಾ

(ನ್ಯೂಸ್ ಕಡಬ) newskadaba.com ಸಂಪ್ಯ , ಡಿ.23: ಬಲ್ನಾಡು ಗ್ರಾಮದ ಕಾರಣಿಕ ಕ್ಷೇತ್ರ ಶ್ರೀ ವಿಷ್ಣುಮೂರ್ತಿ ಮತ್ತು ಪರಿವಾರ ದೈವಸ್ಥಾನದಲ್ಲಿ ಕಳ್ಳತನ ನಡೆದ ಘಟನೆ ನ.10 ರಂದು ರಾತ್ರಿ ಬೆಳಕಿಗೆ ಬಂದಿತ್ತು. ಅದರಂತೆ ಪ್ರಕರಣ ದಾಖಲಿಸಿಕೊಂಡಿದ್ದ ಸಂಪ್ಯ ಠಾಣಾ ಪೊಲೀಸರು, ತನಿಖೆ ನಡೆಸುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ, ಇದೀಗಾ ಕಳ್ಳತನವಾಗಿದ್ದ ದೈವದ ಆಯುಧಗಳು ಹಾಗೂ ಆಭರಣಗಳು ಪತ್ತೆಯಾಗಿದೆ.   ದೈವಸ್ಥಾನದಿಂದ ಸುಮಾರು 500 ಮೀಟರ್ ದೂರದಲ್ಲಿ ತರಗೆಲೆಗಳ ರಾಶಿಯಲ್ಲಿ ಪತ್ತೆಯಾಗಿದೆ.ಸ್ಥಳೀಯಮನೆಯವರು ತರಗೆಲೆ ರಾಶಿ ಮಾಡುವ ಸಂದರ್ಭದಲ್ಲಿ ದೈವಸ್ಥಾನದಿಂದ

ಪುತ್ತೂರು :ಬಲ್ಯಾಡು ಕಾಡ್ಲ ದೈವಸ್ಥಾನದಿಂದ ಕಳವಾದ ಸೊತ್ತುಗಳು ಪತ್ತೆ ➤ ಕಳ್ಳರ ಪತ್ತೆಗಾಗಿ ಶೋಧ ಕಾರ್ಯಾ Read More »

ಕರಾವಳಿ

ಗ್ರಾಪಂ ಚುನಾವಣೆ ➤ ಕುಟುಂಬದೊಂದಿಗೆ ಬಂದು ಮತದಾನ ಮಾಡಿದ ಸಚಿವ ಕೋಟ ಶ್ರೀನಿವಾಸ್ ಪೂಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.23: ಗ್ರಾಮೀಣ ಉಡುಪಿಯಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಮೊದಲ ಹಂತದ ಮತದಾನದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲೂ ಮತದಾನ ನಡೆದಿದೆ. ರಾಜ್ಯ ಮುಜರಾಯಿ, ಮೀನುಗಾರಿಕೆ, ಬಂದರು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಕೋಟತಟ್ಟು ಗ್ರಾಮ ಪಂಚಾಯಿತಿ ನಿವಾಸಿಯಾಗಿದ್ದು ಮತದಾನ ಮಾಡಿದ್ದಾರೆ.ಹುಟ್ಟೂರು ಕೋಟತಟ್ಟುವಿನ ಮತಕೇಂದ್ರದಲ್ಲಿ ಪತ್ನಿ ಶಾಂತ ಹಾಗೂ ಪುತ್ರಿಯರಾದ ಸ್ವಾತಿ, ಶ್ರುತಿಯ ಜತೆ ಆಗಮಿಸಿ ಮತದಾನ ಮಾಡಿದರು. ಈ ವೇಳೆ ಮಾತನಾಡಿ, ಗ್ರಾಮ ಪಂಚಾಯತಿ ಚುನಾವಣೆ ಅಂದರೆ ಆಳಿಸಿಕೊಳ್ಳುವವರ ಆಡಳಿತ. ಪಂಚಾಯತ್

ಗ್ರಾಪಂ ಚುನಾವಣೆ ➤ ಕುಟುಂಬದೊಂದಿಗೆ ಬಂದು ಮತದಾನ ಮಾಡಿದ ಸಚಿವ ಕೋಟ ಶ್ರೀನಿವಾಸ್ ಪೂಜಾರಿ Read More »

ಕರಾವಳಿ, ಕರ್ನಾಟಕ

ನೆಲ್ಯಾಡಿ :ಗ್ರಾ.ಪಂ.ಅಭ್ಯರ್ಥಿ ಅಬ್ದುಲ್ ಹಮೀದ್ ಹೃದಯಾಘಾತದಿಂದ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.23: ಗ್ರಾ. ಪಂ ಚುನಾವಣೆಗೆ ಸಂಬಂಧಿಸಿದಂತೆ ನೆಲ್ಯಾಡಿ ಗ್ರಾ.ಪಂ ನ ಎರಡನೇ ವಾರ್ಡ್‍ನ ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ನೆಲ್ಯಾಡಿ ಗ್ರಾಮದ ಮೊರಂಕಳ ನಿವಾಸಿ ಅಬ್ದುಲ್ ಹಮೀದ್ ಪೈಂಟರ್ (60) ರವರು ಹೃದಯಾಘಾತದಿಂದ ನಿಧನರಾದರು. ಡಿ,22ರ ಕಳೆದ ದಿನ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಅಬ್ದುಲ್ ಹಮೀದ್ ರವರಿಗೆ ತಡರಾತ್ರಿ ವೇಳೆ ಎದೆನೋವು ಕಾಣಿಸಿಕೊಂಡಿದ್ದು ಮನೆಯವರು ತಕ್ಷಣ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತೆ ದಾರಿಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಬ್ದುಲ್ ಹಮೀದ್ ರವರು

ನೆಲ್ಯಾಡಿ :ಗ್ರಾ.ಪಂ.ಅಭ್ಯರ್ಥಿ ಅಬ್ದುಲ್ ಹಮೀದ್ ಹೃದಯಾಘಾತದಿಂದ ನಿಧನ Read More »

ಕರಾವಳಿ

ಕಾಲಿಗೆ ಸರಪಳಿ ಬಿಗಿದು ಪದ್ಮಾಸನ ಭಂಗಿಯಲ್ಲಿ ಈಜಾಟ ➤ ಹೊಸ ದಾಖಲೆ ಬರೆದ ಶಿಕ್ಷಕ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.23: ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸಹಿತ ಬೀಗ ಹಾಕಿಕೊಂಡು ಸಮುದ್ರದಲ್ಲಿ ಒಂದು ಕಿ.ಮೀ. ಈಜಿದ ಶಿಕ್ಷಕ ನಾಗರಾಜ್ ಖಾರ್ವಿಯವರು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆದಿದ್ದಾರೆ.ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಚುಗೋಡು ನಿವಾಸಿಯಾಗಿರುವ ನಾಗರಾಜ ಖಾರ್ವಿಯವರು ಬಂಟ್ವಾಳ ತಾಲೂಕಿನ ಕಲ್ಮಂಜದ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಪದವೀಧರ ಶಿಕ್ಷಕರಾಗಿದ್ದಾರೆ.   ಈಜಿನ ಮೂಲಕ ಹಲವಾರು ಸಾಹಸವನ್ನು ಮಾಡಿರುವ ಶಿಕ್ಷಕ ನಾಗರಾಜ ಖಾರ್ವಿಯವರು ತಣ್ಣೀರು ಬಾವಿಯ ಅರಬ್ಬಿ ಸಮುದ್ರದಲ್ಲಿ ಶುಕ್ರವಾರ ಬೆಳಗ್ಗೆ

ಕಾಲಿಗೆ ಸರಪಳಿ ಬಿಗಿದು ಪದ್ಮಾಸನ ಭಂಗಿಯಲ್ಲಿ ಈಜಾಟ ➤ ಹೊಸ ದಾಖಲೆ ಬರೆದ ಶಿಕ್ಷಕ Read More »

ಕರಾವಳಿ

ಸರ ಮತ್ತು ಬೈಕ್‌ ಕಳ್ಳತನ ಪ್ರಕರಣ ➤ ಮೂವರು ಆರೋಪಿಗಳು ಪೊಲೀಸರ ಬಲೆಗೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.23:  ನಗರದ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸರಕಳ್ಳತನ ಮತ್ತು ಬೈಕ್‌ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ನಗರ ಅಪರಾಧ ಪತ್ತೆದಳ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.   ಪೆರ್ಮನ್ನೂರು ಚೆಂಬುಗುಡ್ಡೆಯ ಬಿ.ಕೆ.ಕಾಟೇಜ್‌ ನಿವಾಸಿ ಹಬೀಬ್‌ ಹಸನ್‌ ಆಲಿಯಾಸ್‌ ಅಬ್ಬಿ(39), ಬಿ.ಸಿ.ರೋಡ್‌ ಪಲ್ಲಮಜಲು ನಿವಾಸಿ ಅಬ್ದುಲ್‌ ಮನ್ನಾನ್‌ ಆಲಿಯಾಸ್‌ ಅಬ್ದುಲ್‌ ಮುನಾಫ್‌(32) ಮತ್ತು ಉಡುಪಿ ಪೆರ್ಡೂರು ಗ್ರಾಮ ಹಿರಿಯಡಕ ಅಲಂಕಾರು ಮನೆಯ ಮೊಹಮ್ಮದ್‌ ತೌಸಿಫ್‌ ಆಲಿಯಾಸ್‌ ಶೈಲು ಆಲಿಯಾಸ್‌ ಮುನ್ನ(28) ಬಂಧಿತರು.ಬಂಧಿತರಿಂದ ಒಟ್ಟು ಅಂದಾಜು

ಸರ ಮತ್ತು ಬೈಕ್‌ ಕಳ್ಳತನ ಪ್ರಕರಣ ➤ ಮೂವರು ಆರೋಪಿಗಳು ಪೊಲೀಸರ ಬಲೆಗೆ Read More »

ಕರಾವಳಿ

ಕೋಡಿಂಬಾಳದ ವ್ಯಕ್ತಿಗೆ ಪಂಜಾಬ್ ಮೂಲದಿಂದ ನಿರಂತರ ಕರೆ ➤ ಹಣಕ್ಕೆ ಬೇಡಿಕೆಯಿಟ್ಟ ಅಪರಿಚಿತರು

(ನ್ಯೂಸ್ ಕಡಬ) newskadaba.com ಕೋಡಿಂಬಾಳ, ಡಿ.22: ಡೆಬಿಟ್ ಕಾರ್ಡ್ ನಂಬರ್ ನೀಡುವಂತೆ ಮತ್ತು ನೆಟ್ವರ್ಕ್ ಲಿಂಕೊಂದಕ್ಕೆ ಲಾಗ್ ಇನ್ ಆಗುವಂತೆ ಕೋಡಿಂಬಾಳದ ಯುವ ಉದ್ಯಮಿಯೊಬ್ಬರಿಗೆ ಪಂಜಾಬ್ ಮೂಲದಿಂದ ನಿರಂತರ ಕರೆ ಬಂದಿದೆ. ವಿವಿಧ ಮೊಬೈಲ್ ಸಂಖ್ಯೆಯಿಂದ ಕರೆಮಾಡಿ ಹ ಣಕಾಸು ಸಂಬಂಧಿಸಿದ ಮಾಹಿತಿ ಕೇಳುತ್ತಿರುವುದರಿಂದ ಗಣೇಶ್ ಕೋಡಿಂಬಾಳ ಅವರು ಜಾಗೃತಗೊಂಡು ಮಾಹಿತಿ ನೀಡಿದ್ದಾರೆ.ಕಳೆದ ಮೂರು ದಿನಗಳಿಂದ ಡೆಬಿಟ್ ಕಾರ್ಡ್ ಮಾಹಿತಿ ಕೇಳುತ್ತಿರುವುದಲ್ಲದೆ, ಧ್ವನಿಮುದ್ರಣ ಸಂದೇಶವನ್ನೂ ಕಾಲ್ ಸೆಂಟರ್ ನಿಂದ ಕಳುಹಿಸುತ್ತಿದ್ದಾರೆ.ಗಣೇಶ್ ಅವರು, ಜನರು ಹಣಕಾಸಿಗೆ ಸಂಬಂಧಿಸಿದ ಯಾವುದೇ

ಕೋಡಿಂಬಾಳದ ವ್ಯಕ್ತಿಗೆ ಪಂಜಾಬ್ ಮೂಲದಿಂದ ನಿರಂತರ ಕರೆ ➤ ಹಣಕ್ಕೆ ಬೇಡಿಕೆಯಿಟ್ಟ ಅಪರಿಚಿತರು Read More »

ಕರಾವಳಿ

ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್ ➤ ವಿತರಣೆ/ ನವೀಕರಣ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.22: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಿಂದ ಪ್ರಸ್ತುತ ಸಾಲಿನಲ್ಲಿ ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್‍ಗಳನ್ನು ವಿತರಣೆ/ ನವೀಕರಣ ಮಾಡಲು ಫೆಬ್ರವರಿ 28 ರವರೆಗೆ ಮಾನ್ಯ ಮಾಡಲಾಗುತ್ತದೆ. ಡಿಸೆಂಬರ್ 26 ರಿಂದ ವಿಕಲಚೇತನರ ಪಾಸ್‍ಗಳ ವಿತರಣೆ/ ನವೀಕರಣವನ್ನು ಪ್ರಾರಂಭಿಸಲಾಗುವುದು. ಫಲಾನುಭವಿಗಳು ರೂ. 660 ನಗದು ರೂಪದಲ್ಲಿ ಪಾವತಿಸಿ ಪ್ರಸ್ತುತ ಸಾಲಿಗೆ ಪಾಸ್ ಪಡೆಯಬಹುದಾಗಿದೆ. ನವೀಕರಣ/ಹೊಸ ಪಾಸು ಪಡೆಯುವ ಫಲನುಭವಿಗಳು ಅರ್ಜಿಯನ್ನು ಸೇವಾಸಿಂಧು ಪೋರ್ಟಲ್  ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ..

ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್ ➤ ವಿತರಣೆ/ ನವೀಕರಣ Read More »

ಕರಾವಳಿ
Scroll to Top