ಕಡಬ ನ್ಯೂಸ್

ವಿಶೇಷ ಖಾದ್ಯ ➤ ರೈಸ್‌ ಖೀರ್‌

(ನ್ಯೂಸ್ ಕಡಬ) newskadaba.com,ವಿಶೇಷ ಖಾದ್ಯ:ರೈಸ್‌ ಖೀರ್‌ ಬೇಕಾಗುವ ಸಾಮಗ್ರಿಗಳು: •ಹಾಲು -2 ರಿಂದ 4 ಕಪ್‌ •ಅಕ್ಕಿ – 1 ಕಪ್‌ •ಸಕ್ಕರೆ – 1 ರಿಂದ 2 ಕಪ್‌ •ಗೋಡಂಬಿ- 8 ರಿಂದ 10 •ದ್ರಾಕ್ಷಿ – ಬೇಕಾದಷ್ಟು •ಬಾದಮ್‌ – ಬೇಕಾದಷ್ಟು ( ಚಿಕ್ಕ ಚಿಕ್ಕದಾಗಿ ಪುಡಿ ಮಾಡಿಟ್ಟುಕೊಳ್ಳಬೇಕು) •ತುಪ್ಪ: ಸ್ವಲ್ಪ ಮಾಡುವ ವಿಧಾನ ಒಂದು ಬಾಣಲೆಗೆ 4ರಿಂದ 5 ಕಪ್‌ ಹಾಲನ್ನು ಹಾಕಿ, ಸ್ವಲ್ಪ ಬಿಸಿಯಾದ ಅನಂತರ ಅದಕ್ಕೆ 1ರಿಂದ 2 ಕಪ್‌ […]

ವಿಶೇಷ ಖಾದ್ಯ ➤ ರೈಸ್‌ ಖೀರ್‌ Read More »

ಆರೋಗ್ಯ ಮಾಹಿತಿ

ಕ್ಷಯರೋಗಿಗಳ ಮಾಹಿತಿ ಕಲೆ ಹಾಕಿ -ಅಪರ ಜಿಲ್ಲಾಧಿಕಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.30.ಜಿಲ್ಲೆಯಲ್ಲಿ ಕ್ಷಯರೋಗದಿಂದ ಒಳಪಟ್ಟವರ ಬಗ್ಗೆ ಮಾಹಿತಿ ಕಲೆ ಹಾಕಿ ಅವರಿಗೆ ಸರಿಯಾದ ಜಾಗೃತಿ ಮತ್ತು ಚಿಕಿತ್ಸೆ ನೀಡಬೇಕೆಂದು ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸೋಮವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲ್ಲಿ ನಡೆದ ಜಿಲ್ಲಾ ಕ್ಷಯ ಕೇಂದ್ರದ ಪರಿಷ್ಕ್ರತ ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮದ ಪಾಲುದಾರ ಸಭೆಯನ್ನು ಉದ್ದೇಶಿಸಿ ಮಾತಾನಾಡಿದ ಅವರು ಈ ರೋಗದ ಬಗ್ಗೆ ಎಲ್ಲಾ ತಾಲೂಕು ಮಟ್ಟದಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಷಯ

ಕ್ಷಯರೋಗಿಗಳ ಮಾಹಿತಿ ಕಲೆ ಹಾಕಿ -ಅಪರ ಜಿಲ್ಲಾಧಿಕಾರಿ Read More »

ಕರಾವಳಿ

ಕಾಫಿ ಸಾಮ್ರಾಜ್ಯ ಕಟ್ಟಿದ ಮಾಲಕ ನಿಗೂಢವಾಗಿ ನಾಪತ್ತೆ ➤ ಶೇಕಡಾ 20.ರಷ್ಟು ಕುಸಿತ ಕಂಡ ಕಾಫಿ ಡೇ ಶೇರುಗಳು

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.30.ಸೋಮವಾರ ಸಂಜೆ ಮಂಗಳೂರಿನ ನೇತ್ರಾವತಿ ಸೇತುವೆ ಬಳಿಯಿಂದ ಮಾಜಿ ಮುಖ್ಯಮಂತ್ರಿ, ಎಸ್. ಎಂ. ಕೃಷ್ಣ ಅವರ ಅಳಿಯ ವಿ.ಜಿ. ಸಿದ್ದಾರ್ಥ್‌ ನಾಪತ್ತೆಯಾಗಿದ್ದು, ತೀವ್ರ ಶೋಧ ಕಾರ್ಯ ನಡೆಯುತ್ತಿದೆ.   ಪ್ರತಿಷ್ಠಿತ ಉದ್ಯಮಿಯಾಗಿರುವ ಸಿದ್ದಾರ್ಥ್‌ ಕೆಫೆ ಕಾಫಿ ಡೇ ಎಂಬ ಬಹುರಾಷ್ಟ್ರೀಯ ಕಂಪೆನಿಯ ಮಾಲಕ. ಇದಲ್ಲದೇ ಎಬಿಸಿ ಸಂಸ್ಥೆಗಳು ಮತ್ತು ಚೆನ್ನೈನ ಲಾಜಿಸ್ಟಿಕ್‌ ಕಂಪೆನಿಗಳನ್ನು ಸಿದ್ದಾರ್ಥ್‌ ಕುಟುಂಬ ನಡೆಸುತ್ತಿದೆ. ಚಿಕ್ಕಮಗಳೂರಿನಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಎಕರೆ ಜಾಗದಲ್ಲಿ ಕಾಫಿ ಎಸ್ಟೇಟ್ ಹೊಂದಿರುವ ಕೆಫೆ

ಕಾಫಿ ಸಾಮ್ರಾಜ್ಯ ಕಟ್ಟಿದ ಮಾಲಕ ನಿಗೂಢವಾಗಿ ನಾಪತ್ತೆ ➤ ಶೇಕಡಾ 20.ರಷ್ಟು ಕುಸಿತ ಕಂಡ ಕಾಫಿ ಡೇ ಶೇರುಗಳು Read More »

ಕರಾವಳಿ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ➤ ನಾಟಕ ನಿರ್ದೇಶಕ ಮತ್ತು ಬರಹಗಾರ ವಸಂತ ವಿ ಅಮೀನ್ ಅವರನ್ನು ಸನ್ಮಾನ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.30.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ ಶುಕ್ರವಾರ ನಾಟಕ ನಿರ್ದೇಶಕ ಮತ್ತು ಬರಹಗಾರ ವಸಂತ ವಿ ಅಮೀನ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ರಿಜಿಸ್ಟ್ರಾರ್ ಚಂದ್ರಹಾಸ್ ರೈ. ಬಿ, ಎ. ಶಿವಾನಂದ ಕರ್ಕೇರ, ವಾಸುದೇವ ಮೂಡುಬೆಳ್ಳೆ, ಬೆನೆಟ್ ಜಿ, ಅಮ್ಮನ್ನ ಹಾಗೂ ವಿಜಯಾ ಶೆಟ್ಟಿ ಸಾಲೆತ್ತೂರು ಉಪಸ್ಥಿತರಿದ್ದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ➤ ನಾಟಕ ನಿರ್ದೇಶಕ ಮತ್ತು ಬರಹಗಾರ ವಸಂತ ವಿ ಅಮೀನ್ ಅವರನ್ನು ಸನ್ಮಾನ ಕಾರ್ಯಕ್ರಮ Read More »

ಕರಾವಳಿ

ಅರಣ್ಯ ಮತ್ತು ತೋಟಗಾರಿಕಾ ಘಟಕ ಮಂಗಳೂರು ಕಚೇರಿ ➤ ವಾಹನ ಹೊರಗುತ್ತಿಗೆ: ಟೆಂಡರ್ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.30.ವಲಯ ಅರಣ್ಯಧಿಕಾರಿಗಳು, ಅರಣ್ಯ ಮತ್ತು ತೋಟಗಾರಿಕಾ ಘಟಕ ಮಂಗಳೂರು ಕಚೇರಿ ಬಳಕೆಗಾಗಿ ಹೊರಗುತ್ತಿಗೆ ಬಾಡಿಗೆ ಆಧಾರದ ಮೇಲೆ ಆಸಕ್ತರಿಂದ ಸ್ಥಳೀಯವಾಗಿ ಟೆಂಡರ್ ಮೂಲಕ ಕೆಲವು ಮಾದರಿಯ ವಾಹನವನ್ನು ಪಡೆಯಲು ತೀರ್ಮಾನಿಸಲಾಗಿದೆ. ಬೊಳಾರೊ ಜೀಪ್, ಟಾಟಾ ಇಂಡಿಗೊ, ಟಾಟಾ ಇಂಡಿಕಾ ಡಿಎಲ್‍ಎಕ್ಸ್, ಸ್ವಿಫ್ಟ್ ಡಿಸೈರ್ ಮಾದರಿಯ ವಾಹನವನ್ನು ಪಡೆಯಲು ತೀರ್ಮಾನಿಸಿದ್ದು, ಆಸಕ್ತರು ಆಗಸ್ಟ್ 20 ರಂದು ಅಪರಾಹ್ನ 5 ಗಂಟೆಯೊಳಗೆ ಟೆಂಡರು ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿ ಹಾಗೂ ಟೆಂಡರ್

ಅರಣ್ಯ ಮತ್ತು ತೋಟಗಾರಿಕಾ ಘಟಕ ಮಂಗಳೂರು ಕಚೇರಿ ➤ ವಾಹನ ಹೊರಗುತ್ತಿಗೆ: ಟೆಂಡರ್ ಆಹ್ವಾನ Read More »

ಕರಾವಳಿ

ಸಿರಿ ತೋಟಗಾರಿಕೆ ಸಂಘ ➤ ಕೈತೋಟ, ತಾರಸಿ ತೋಟ ತರಬೇತಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.30.ಸಿರಿ ತೋಟಗಾರಿಕೆ ಸಂಘದ ವತಿಯಿಂದ ಆಗಸ್ಟ್ 3 ರಂದು ಕೈತೋಟ ಮತ್ತು ತಾರಸಿ ತೋಟ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಬಾಲಭವನ ಇಲ್ಲಿ (ಕದ್ರಿ ಉದ್ಯಾನವನದ ಹತ್ತಿರ) ಆಯೋಜಿಸಲಾಗಿದೆ. ಆಸಕ್ತರು ಸಿರಿ ತೋಟಗಾರಿಕೆ ಸಂಘ, ಬೆಂದೂರುವೆಲ್ ಇಲ್ಲಿ ತರಬೇತಿ ಶುಲ್ಕ ನೀಡಿ ಆಗಸ್ಟ್ 2ರೊಳಗೆ ನೊಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ರುಕ್ಮಯ್ಯ ದೂರವಾಣಿ ಸಂಖ್ಯೆ: 9845523944ನ್ನು ಸಂಪರ್ಕಿಸಬೇಕು ಎಂದು ಸಿರಿ ತೋಟಗಾರಿಕೆ ಸಂಘ (ರಿ)ದ ಪ್ರಕಟಣೆ ತಿಳಿಸಿದೆ.

ಸಿರಿ ತೋಟಗಾರಿಕೆ ಸಂಘ ➤ ಕೈತೋಟ, ತಾರಸಿ ತೋಟ ತರಬೇತಿ ಕಾರ್ಯಕ್ರಮ Read More »

ಕರಾವಳಿ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ➤ ಶ್ರದ್ಧಾಂಜಲಿ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.30.ಹಿರಿಯ ತುಳು ಸಾಹಿತಿ, ರಂಗಭೂಮಿ ಕಲಾವಿದ ಮತ್ತು ತುಳು ಅಕಾಡೆಮಿಯ ಮಾಜಿ ಅಧ್ಯಕ್ಷರಾದ ದಿ| ಸೀತಾರಾಮ್ ಕುಲಾಲ್ ಮತ್ತು ತುಳು, ಕನ್ನಡ ವಿದ್ವಾಂಸರಾದ ದಿ| ಏರ್ಯ ಲಕ್ಷ್ಮೀನಾರಾಯಣ ಆಳ್ವ ರವರ ನಿಧನಕ್ಕೆ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿದೆ. ಆದ್ದರಿಂದ ಜುಲೈ 31ರಂದು ಸಂಜೆ 4.30 ಗಂಟೆಗೆ ಮಂಗಳೂರಿನ ಉರ್ವಸ್ಟೋರಿನಲ್ಲಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ‘ಸಿರಿಚಾವಡಿ’ ಯಲ್ಲಿ ಸಂತಾಪ ಸಭೆಯನ್ನು ಆಯೋಜಿಸಲಾಗಿದೆ. ದಿ| ಸೀತಾರಾಮ್ ಕುಲಾಲ್ ಮತ್ತು ದಿ| ಏರ್ಯ ಲಕ್ಷ್ಮೀನಾರಾಯಣ ಆಳ್ವ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ➤ ಶ್ರದ್ಧಾಂಜಲಿ ಸಭೆ Read More »

ಕರಾವಳಿ

ನೆಲ್ಯಾಡಿ ಮೂರ್ತೆದಾರರ ಸಹಕಾರಿ ಸಂಘ ➤ ಪಿಗ್ಮಿ ಸಂಗ್ರಾಹಕ ನಾಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.30.ನೆಲ್ಯಾಡಿ ಮೂರ್ತೆದಾರರ ಸಹಕಾರಿ ಸಂಘದಲ್ಲಿ ಪಿಗ್ಮಿ ಸಂಗ್ರಾಹಕರಾಗಿದ್ದ ಕೃಷ್ಣಪ್ಪ ಪೂಜಾರಿ(47 ) ಎಂಬವರು ಜುಲೈ 26 ರಂದು ಕಾಣೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿರೇಬಂಡಾಡಿ ಗ್ರಾವ್ಮದ ನಂದಿನಿ ನಗರ ನಿವಾಸಿಯಾಗಿರುವ ಇವರು ಜು.25ರಂದು ರಾತ್ರಿ ಮಲಗಿದ್ದವರು, ಕುಟುಂಬದವರು ಬೆಳಿಗ್ಗೆ ನೋಡುವಾಗ ನಾಪತ್ತೆಯಾಗಿದ್ದರು. ಇವರ ಎತ್ತರ 5.5ಅಡಿ, ಕಪ್ಪು ತಲೆಕೂದಲು, ತೆಳ್ಳಗೆ ಶರೀರ, ಬಲಕಾಲಿನ ಮೊಣಗಂಟಿನಲ್ಲಿ ಹಳೆಯ ಗಾಯದ ಗುರುತು ಇದ್ದು, ಬಿಳಿ ಪ್ಯಾಂಟ್ ಮತ್ತು ನೀಲಿ ಬಿಳಿ

ನೆಲ್ಯಾಡಿ ಮೂರ್ತೆದಾರರ ಸಹಕಾರಿ ಸಂಘ ➤ ಪಿಗ್ಮಿ ಸಂಗ್ರಾಹಕ ನಾಪತ್ತೆ Read More »

ಕರಾವಳಿ

ಮಂಗಳೂರು ತಾಲೂಕು ➤ ಹೊಸಬೆಟ್ಟು ಗ್ರಾಮ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.30.ಮಂಗಳೂರು ತಾಲೂಕಿನ ಹೊಸಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ 2019-20ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯನ್ನು ಆಯೋಜಿಸಲಾಗಿದೆ.   ಆದ್ದರಿಂದ ಜುಲೈ, 31ರಂದು ಬೆಳಿಗ್ಗೆ 11 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ ಗಾಜಿಗಾರಪಲ್ಕೆ ಹೊಸಬೆಟ್ಟು ಇಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮಂಗಳೂರು ತಾಲೂಕು ➤ ಹೊಸಬೆಟ್ಟು ಗ್ರಾಮ ಸಭೆ Read More »

ಕರಾವಳಿ

ಬಂಟ್ವಾಳ ತಾಲೂಕು ➤ ನರಿಕೊಂಬು ಗ್ರಾಮ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.30.ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ 2019-20 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯನ್ನು ಆಯೋಜಿಸಲಾಗಿದೆ. ಆದ್ದರಿಂದ ಆಗಸ್ಟ್ 3ರಂದು ಬೆಳಿಗ್ಗೆ 10.30 ಗಂಟೆಗೆ ಶಂಬೂರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಸಭೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬಂಟ್ವಾಳ ತಾಲೂಕು ➤ ನರಿಕೊಂಬು ಗ್ರಾಮ ಸಭೆ Read More »

ಕರಾವಳಿ
Scroll to Top