ಕಡಬ ನ್ಯೂಸ್

ಸರಸ್ವತೀ ವಿದ್ಯಾಲಯ ಮತ್ತು ಶ್ರೀ ಭಾರತಿ ಶಿಶುಮಂದಿರದ ವತಿಯಿಂದ ➤ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಹಿಂದೂ ಧರ್ಮದ ಗೀತಾಪೋದೇಶ ಮಾಡಿದ ಭಗವದ್ಗೀತೆಯ ಸಾರವನ್ನು ತಿಳಿಸುತ್ತಾ ಜೀವನದಲ್ಲಿ ಒಳ್ಳೆಯ ಸತ್ಕಾರ್ಯಗಳನ್ನು ಮಾಡುತ್ತಾ ಮುಂದೆ ಸಾಗೋಣ ಎಂದು ಶ್ರೀ ಕಾಶಿನಾಥ್ ದಾಮ್ಲೆ ಅರಸಿನಮಕ್ಕಿ ಹೇಳಿದರು. ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ಬಾಲ್ಯದಲ್ಲಿ ಒತ್ತಡದ ಶಿಕ್ಷಣದ ಅಗತ್ಯವಿಲ್ಲ, ವಿದ್ಯಾರ್ಥಿಗಳ ಆಸಕ್ತಿಗನುಸಾರವಾದ ಶಿಕ್ಷಣಕ್ಕೆ ಪೋಷಕರು ಒತ್ತು ನೀಡಬೇಕು ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಶ್ರೀಕೃಷ್ಣನ ಜೀವನ ಅವಧಿ ನಮಗೆ ಆದರ್ಶವಾಗಿದ್ದು ಮುಂದಿನ ಭವಿಷ್ಯದಲ್ಲಿ ಒಳ್ಳೆಯ ಕೆಲಸ ಮಾಡುವಂತಹ ಅವಶ್ಯಕತೆ ನಮ್ಮದಾಗಿದೆ. ನ್ಯಾಯ-ಅನ್ಯಾಯ, ಪಾಪ […]

ಸರಸ್ವತೀ ವಿದ್ಯಾಲಯ ಮತ್ತು ಶ್ರೀ ಭಾರತಿ ಶಿಶುಮಂದಿರದ ವತಿಯಿಂದ ➤ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ Read More »

ಕರಾವಳಿ

ಪೇರಡ್ಕ ರಸ್ತೆಗೆ ಕಾಂಕ್ರಿಟೀಕರಣ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆಗಸ್ಟ್.23.ಕಲ್ಲುಗುಡ್ಡೆ-ಕಡಬ ಸಂಪರ್ಕ ಕಲ್ಪಿಸುವ ರಸ್ತೆಯ ತೀರಾ ಹದೆಗೆಟ್ಟ ಪೇರಡ್ಕ ರಸ್ತೆಗೆ ಕಾಂಕ್ರೀಟೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ವಾಹನ ಸಂಚಾರ ಪುನರಾರಂಭಗೊಂಡಿದೆ. ಕಡಬ ಸಂಪರ್ಕ ರಸ್ತೆಯ ಪೇರಡ್ಕ – ಕಾಯರಡ್ಕ ಜಿ.ಪಂ. ರಸ್ತೆ ತೀರಾ ಹದಗೆಟ್ಟು ಸಂಚಾರಕ್ಕೆ ಕಷ್ಟಪಡುವ ಸ್ಥಿತಿ ಉಂಟಾಗಿತ್ತು, ಇದೀಗ ಈ ರಸ್ತೆಯ ಪೇರಡ್ಕದಿಂದ ಸುಮಾರು 550 ಮೀಟರ್ ದೂರದ ವರೆಗೆ ರಸ್ತೆ ಕಾಂಕ್ರಿಟೀಕರಣಗೊಂಡಿದ್ದು, ಕಾಮಗಾರಿ ಸಂದರ್ಭದಲ್ಲಿ ರಸ್ತೆ ಬಂದ್ ಮಾಡಲಾಗಿತ್ತು, ಇದೀಗ ಕಾಮಗಾರಿ ಪೂರ್ಣಗೊಂಡ ಹಿನ್ನಲೆಯಲ್ಲಿ ಸಂಚಾರ ಪುನರಾರಂಭಗೊಂಡಿದೆ. ರಸ್ತೆ

ಪೇರಡ್ಕ ರಸ್ತೆಗೆ ಕಾಂಕ್ರಿಟೀಕರಣ Read More »

ಕರಾವಳಿ

ಶಕ್ತಿನಗರದ ಶಕ್ತಿ ವಸತಿ ಶಾಲೆ ➤ “ಸಂಸ್ಕೃತವು”ಒಂದು ಪಕ್ವಯುತ ಭಾಷೆ- ಪ್ರೊ.ಜನಾರ್ದನತಾಮ್ಹಾನ್ಕರ್

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.23.ಸಂಸ್ಕೃತ ಸಹಜವಾಗಿ ಪಕ್ವಯುತ ಹಾಗೂ ಶ್ರೇಷ್ಠವಾದ ಭಾಷೆಯಾಗಿದ್ದು, ಭಾರತೀಯ ಭಾಷೆಗಳಿಗೆಲ್ಲಾ ಮೂಲಾಧಾರವಾಗಿತನ್ನಇರುವನ್ನುಕಾಪಾಡಿಕೊಂಡಿದೆ. ಪದ್ಯರೂಪದಇದರಲ್ಲಿನಸಾಹಿತ್ಯವುಕಂಠಪಾಠಕ್ಕೆಪೂರಕವಾಗಿದೆ.ವಿದ್ಯಾರ್ಥಿಗಳಜ್ಞಾನಾರ್ಜನೆಗೆಇದುಪೂರ್ಣಸಹಕಾರಿಆಗಿದೆಎಂದುಕರ್ನಾಟಕಆಯುರ್ವೇದಮೆಡಿಕಲ್‍ಕಾಲೇಜಿನಪ್ರೊಜನಾರ್ದನತಾಮ್ಹನ್‍ಕರ್‍ಅವರು ತಿಳಿಸಿದರು. ದಿನಾಂಕ 22.08.2019ರಂದು ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ನಡೆದ ಸಂಸ್ಕೃತೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅವರು ಶಾಲಾ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.ವಿದ್ಯಾರ್ಥಿಗಳಾದ ಸಲೋನಿ ಹಾಗೂ ಮೆಹಫೂಸ್‍ಅವರು ಸಂಸ್ಕೃತ ಭಾಷೆಯ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಶಾಲಾ ಪ್ರಾಚಾರ್ಯ ವಿದ್ಯಾ ಜಿ ಕಾಮತ್‍ಅವರು “ಸಂಸ್ಕೃತವುಜಗತ್ತಿನ ಶ್ರೇಷ್ಠ ಭಾಷೆಗಳಲ್ಲಿ ಒಂದಾಗಿದೆ” ಎಂದು ಹೇಳಿದರು. ಸಂಸ್ಕೃತ ಶಿಕ್ಷಕ ಶ್ರೀನಿಧಿ ಎ

ಶಕ್ತಿನಗರದ ಶಕ್ತಿ ವಸತಿ ಶಾಲೆ ➤ “ಸಂಸ್ಕೃತವು”ಒಂದು ಪಕ್ವಯುತ ಭಾಷೆ- ಪ್ರೊ.ಜನಾರ್ದನತಾಮ್ಹಾನ್ಕರ್ Read More »

ಕರಾವಳಿ

ಬಸ್ ಹಾಗೂ ಕಾರು ಪರಸ್ಪರ ಡಿಕ್ಕಿ

(ನ್ಯೂಸ್ ಕಡಬ) newskadaba.com ಕಿನ್ನಿಗೋಳಿ, ಆಗಸ್ಟ್.23.ಇಂದು ಬೆಳಿಗ್ಗೆ ಮೂಡಬಿದ್ರೆಯಿಂದ ಮೂಲ್ಕಿಗೆ ಹೋಗುತ್ತಿದ್ದ ಕಾರು ಹಾಗೂ ಮುಲ್ಕಿಯಿಂದ ಕಿನ್ನಿಗೋಳಿ ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್ ನಡುವೆ ಅಪಘಾತ ನಡೆದಿದೆ. ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಎಸ್ ಕೋಡಿ ಕೆರೆಯ ಬಳಿ ಖಾಸಗಿ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ.ಈ ಗಾಯಾಳುಗಳನ್ನು ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ ಹಾಗೂ ಕಾರು ಪರಸ್ಪರ ಡಿಕ್ಕಿ Read More »

ಕರಾವಳಿ

ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಢಿಕ್ಕಿಹೊಡೆದ ಕಾರು ➤ ಕಾರು ಚಾಲಕ ಹಾಗೂ ಶಾಸಕ ಎಸ್. ರಾಮದಾಸ್

(ನ್ಯೂಸ್ ಕಡಬ) newskadaba.com ಸುಳ್ಯ, ಆಗಸ್ಟ್.23.ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ರಾಮದಾಸ್ ಅವರು ಮೈಸೂರಿನಿಂದ ಸುಳ್ಯ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಗೇಟಿನ ಬಳಿಯಿರುವ ಮೋರಿಗೆ ಢಿಕ್ಕಿ ಹೊಡೆದ ಘಟನೆ ಇಂದು ಮುಂಜಾನೆ ಜಾಲ್ಸೂರಿನಲ್ಲಿ ನಡೆದಿದೆ. ಕಾರು ಜಾಲ್ಸೂರಿನ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಬಳಿಗೆ ಮುಂಜಾನೆ 7.15ರ ಸುಮಾರಿಗೆ ತಲುಪಿದಾಗ ಕಾರು ಚಾಲಕ ನಿದ್ರೆ ಮಂಪರಿನಲ್ಲಿದ್ದ, ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ಗೇಟಿನ ಬಳಿಯಿರುವ ಮೋರಿಗೆ ಢಿಕ್ಕಿ

ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಢಿಕ್ಕಿಹೊಡೆದ ಕಾರು ➤ ಕಾರು ಚಾಲಕ ಹಾಗೂ ಶಾಸಕ ಎಸ್. ರಾಮದಾಸ್ Read More »

ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತೋಟಗಾರಿಕೆ ಇಲಾಖಾವತಿಯಿಂದ ➤ ಟೆಂಡರ್ ಪ್ರಕಟಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.23.ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತೋಟಗಾರಿಕೆ ಇಲಾಖೆಯ ಹಿರಿಯ ಪ್ರಯೋಗ ಶಾಲೆ ತುಂಬೆ, ಇಲ್ಲಿಗೆ ಪರೋಪ ಜೀವಿಗಳನ್ನು ಉತ್ಪಾದಿಸಲು ಟೆಂಡರ್ ಆಹ್ವಾನಿಸಲಾಗಿದೆ. ಟೆಂಡರ್ ಸಲ್ಲಿಸಲು ಕೊನೆಯ ದಿನ ಸೆಪ್ಟೆಂಬರ್ 14.ಆಗಿರುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08255 234102 ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಜಿಲ್ಲಾ ಪಂಚಾಯತ್ ಬಂಟ್ವಾಳ ಕಚೇರಿಯನ್ನು ಸಂಪರ್ಕಿಸಿ ಟೆಂಡರ್ ಡಾಕ್ಯುಮೆಂಟ್ ಪಡೆಯಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಜಿಲ್ಲಾ ಪಂಚಾಯತ್ ಬಂಟ್ವಾಳ ಇವರ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತೋಟಗಾರಿಕೆ ಇಲಾಖಾವತಿಯಿಂದ ➤ ಟೆಂಡರ್ ಪ್ರಕಟಣೆ Read More »

ಕರಾವಳಿ

ಪುತ್ತೂರು ತಾ.ಪಂ. ವಾಣಿಜ್ಯ ಕಟ್ಟಡದಲ್ಲಿರುವ ➤ 1ರಿಂದ 9 ವರೆಗಿನ ಕೋಣೆಗಳನ್ನು ಬಾಡಿಗೆಗೆ ಪಡೆಯಲು ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.23.ಪುತ್ತೂರು ತಾಲೂಕು ಪಂಚಾಯತ್‍ನ ನೂತನ ವಾಣಿಜ್ಯ ಸಂಕೀರ್ಣ ಕಟ್ಟಡ-2 ರ ನೆಲ ಅಂತಸ್ತಿನಲ್ಲಿ ಕೊಠಡಿ ಸಂಖ್ಯೆ 1 ರಿಂದ 9 ರಲ್ಲಿ ಕೊಠಡಿ ಸಂಖ್ಯೆ 1-ಶೇ.5 ವಿಕಲಚೇತನ, ಕೊಠಡಿ ಸಂಖ್ಯೆ -2 ಮತ್ತು 3ನ್ನು ಶೇ.25 ಪ.ಜಾತಿ ಪ.ಪಂಗಡದವರಿಗೆ ಕಡ್ಡಾಯವಾಗಿ ಮೀಸಲಿರಿಸಿ ಕಾದಿರಿಸಿದ್ದು, ಈ ಕಟ್ಟದ ಕೆಲವು ಕೋಣೆಗಳನ್ನು ಬಾಡಿಗೆಗೆ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ವಾಣಿಜ್ಯ ಹಾಗೂ ಇತರ ಅಂಗಡಿ ವ್ಯವಹಾರಗಳನ್ನು ನಡೆಸಲು ಬಹಿರಂಗ ಏಲಂ ಮೂಲಕ ಬಾಡಿಗೆ ದರವನ್ನು ನಿಗಧಿಪಡಿಸಿ

ಪುತ್ತೂರು ತಾ.ಪಂ. ವಾಣಿಜ್ಯ ಕಟ್ಟಡದಲ್ಲಿರುವ ➤ 1ರಿಂದ 9 ವರೆಗಿನ ಕೋಣೆಗಳನ್ನು ಬಾಡಿಗೆಗೆ ಪಡೆಯಲು ಅರ್ಜಿ ಆಹ್ವಾನ Read More »

ಕರಾವಳಿ

ಅನುಭವಗಳಿಂದ ಕಲಿಯುವ ಪಾಠವು ನೈಜ ಶಿಕ್ಷಣ ➤ ಶ್ರೀ ಕೃಷ್ಣ ಮೋಹನ್

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.22.ಜೀವನದಲ್ಲಿ ಸ್ಪಷ್ಟ ಗುರಿ ಇಟ್ಟುಕೊಂಡು ಸವಾಲುಗಳನ್ನು ಮೆಟ್ಟಿಲಾಗಿಸುವ ಕಲೆಯನ್ನು ಮೈಗೂಡಿಸಿಕೊಂಡಲ್ಲಿ ಯಶಸ್ಸು ಸಾಧ್ಯ. ಅನುಭವಗಳಿಂದ ಕಲಿಯುವ ಪಾಠವು ನೈಜ ಶಿಕ್ಷಣವಾಗಿರುತ್ತದೆ ಎಂದು ಜೇಸಿಐ ರಾಷ್ಟ್ರೀಯ ತರಬೇತುದಾರರಾದ ಶ್ರೀಕೃಷ್ಣ ಮೋಹನ್ ಹೇಳಿದರು. ಅವರು ಸರಸ್ವತೀ ಪದವಿಪೂರ್ವ ವಿದ್ಯಾಲಯ ಕಡಬ ಇಲ್ಲಿ ಸಿಸ್ಕೋ ಸಂಭ್ರಮ ತಂಡ ಬೆಂಗಳೂರು ಹಾಗೂ ರಾಮಕುಂಜೇಶ್ವರ ಪದವಿ ವಿದ್ಯಾಲಯ ಇದರ ಸಹಯೋಗದೊಂದಿಗೆ ವಾಣಿಜ್ಯ ವಿದ್ಯಾರ್ಥಿಗಳಿಗೆ ಆಯೋಜಿಸಲ್ಪಟ್ಟ ಮಾಹಿತಿ ಕಾರ್ಯಗಾರ “ಉತ್ಕರ್ಷ-2019” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಯಾವುದೇ ವೃತ್ತಿಯನ್ನು ಆಯ್ಕೇ ಮಾಡಿಕೊಂಡರು ಸೂಕ್ತ

ಅನುಭವಗಳಿಂದ ಕಲಿಯುವ ಪಾಠವು ನೈಜ ಶಿಕ್ಷಣ ➤ ಶ್ರೀ ಕೃಷ್ಣ ಮೋಹನ್ Read More »

ಕರಾವಳಿ

ಸಮೂಹ ಮಾಧ್ಯಮ ಸರ್ಟಿಫಿಕೇಟ್ಕೋರ್ಸ್ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಾವೂರು, ಆಗಸ್ಟ್.22.ಕಾವೂರಿನ ಸರಕಾರಿ ಪ್ರಥಮದರ್ಜೆಕಾಲೇಜಿನಲ್ಲಿ ಮಹಿಳಾ ಅಧ್ಯಯನ ಕೇಂದ್ರ ಸಮೂಹ ಮಾಧ್ಯಮಕುರಿತು ಸರ್ಟಿಫಿಕೇಟ್‍ಕೋರ್ಸ್ ಮತ್ತು ಗೆಳತಿ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗಾಗಿ ಆಪ್ತ ಸಲಹಾ ಕೇಂದ್ರ ಸೋಮವಾರಉದ್ಫಾಟನೆಗೊಂಡಿತು. ಸಂಸದ ಶ್ರೀ ನಳಿನ್ ಕುಮಾರ್ ಕಟೀಲು ಉದ್ಘಾಟಿಸಿ, ಸರಕಾರಿಕಾಲೇಜಿನಲ್ಲಿ ಆಪ್ತ ಸಲಹಾ ಕೇಂದ್ರ, ಅಧ್ಯಯನ ಕೇಂದ್ರ ಮತ್ತು ಸಮೂಹ ಮಾಧ್ಯಮಕೋರ್ಸ್ ಆರಂಬಿಸಿರುವುದು ಶ್ಲಾಘನೀಯ ಇಂದುಇಂತಹ ಆಪ್ತ ಸಲಹಾ ಕೇಂದ್ರಗಳ ಮೂಲಕ ಅವರ ಸಮಸ್ಯೆಗಳಿಗೆ ಪರಿಹಾರದೊರಕುವಂತಾಗಲಿ ಎಂದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಅಧ್ಯಕ್ಷ ಶ್ರೀ ಶ್ರೀನಿವಾಸ್‍ಇಂದಾಜೆ ಮಾತನಾಡಿ,

ಸಮೂಹ ಮಾಧ್ಯಮ ಸರ್ಟಿಫಿಕೇಟ್ಕೋರ್ಸ್ ಉದ್ಘಾಟನೆ Read More »

ಕರಾವಳಿ

ಅಂತರ್ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ➤ ಜ್ಞಾಜೋದಯ ಬೆಥನಿ ದ್ವಿತೀಯ

(ನ್ಯೂಸ್ ಕಡಬ) newskadaba.comನೆಲ್ಯಾಡಿ, ಆಗಸ್ಟ್.22.ಕೇರಳದ ಕೋಟ್ಟಯಂನಲ್ಲಿ ನಡೆಸಲ್ಪಟ್ಟ ಅಂತರ್ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷ ವಿಜ್ಞಾನ ವಿಭಾಗ ವಿದ್ಯಾರ್ಥಿಗಳಾದ ನವೀನ್ ಹಾಗೂ ನವನೀತ್ ಇವರು ದ್ವಿತೀಯ ಸ್ಥಾನ ಗಳಿಸಿದ್ದಾರೆ. ಬೆಥನಿ ಆಶ್ರಮದ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಕೇರಳದ ಕೋಟ್ಟಯಂನಲ್ಲಿ ನಡೆಸಲ್ಪಟ್ಟ ಅಂತರ್ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ಸಂಸ್ಥೆಯ ಹಿರಿಮೆಗೆ ಹೊಸ ಗರಿ ಮೂಡಿಸಿದ್ದಾರೆ. ಇವರನ್ನು ಸಂಸ್ಥೆಯ ಸಂಚಾಲಕರಾದ ರೆ|ಡಾ|ಫಾ| ವರ್ಗೀಸ್ ಕೈಪನಡುಕ್ಕ

ಅಂತರ್ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ➤ ಜ್ಞಾಜೋದಯ ಬೆಥನಿ ದ್ವಿತೀಯ Read More »

ಕರಾವಳಿ
Scroll to Top