ಕಡಬ ನ್ಯೂಸ್

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಲಾರಿ

(ನ್ಯೂಸ್ ಕಡಬ) newskadaba.com ಪಂಜಿಗುಂಡಿ, ಸೆ.22: ಉಡುಪಿಯಿಂದ ಮಡಿಕೇರಿಗೆ ಕೋಳಿ ಆಹಾರ ತುಂಬಿಕೊಂಡು ತೆಳುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಘಟನೆ ಕನಕಮಜಲು ಗ್ರಾಮದ ಪಂಜಿಗುಂಡಿ ಎಂಬಲ್ಲಿ ಕಳೆದ ದಿನ ಮಧ್ಯರಾತ್ರಿ ಸಂಭವಿಸಿದೆ.     ಆಹಾರ ತುಂಬಿಕೊಂಡು ಮಡಿಕೇರಿಗೆ ತರಳುತ್ತಿದ್ದ ಲಾರಿ ಆನೆಗುಂಡಿ ದಾಟಿ ಇಳಿಜಾರಿನಲ್ಲಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆದಿದೆ. ಲಾರಿಯಲ್ಲಿ ಚಾಲಕ ಮಾತ್ರ ಇದ್ದು,  ಅಪಾಯದಿಂದ ಪಾರಾಗಿದ್ದಾರೆ.   […]

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಲಾರಿ Read More »

ಕರಾವಳಿ

ಮಂಗಳೂರಿಗೆ ಮತ್ತೊಂದು ಗರಿ ➤ ದೇಶದ ಮೊದಲ ಕೋಸ್ಟ್‌ಗಾರ್ಡ್ ಅಕಾಡೆಮಿ ಸ್ಥಾಪನೆ

(ನ್ಯೂಸ್ ಕಡಬ) newskadaba.com ಮಂಗಳೂರು,ಸೆ. 22: ದೇಶದ ಮೊದಲ ಕೋಸ್ಟ್‌ಗಾರ್ಡ್ ಅಕಾಡೆಮಿ ಮಂಗಳೂರಿನಲ್ಲೇ ಸ್ಥಾಪನೆಯಾಗುವುದು ಖಚಿತಗೊಂಡಿದೆ. ಈ ಸಂಬಂಧ ರಾಜ್ಯ ಸರ್ಕಾರ ದೃಢವಾಗಿ ಮೊದಲ ಹೆಜ್ಜೆ ಇರಿಸಿದ್ದು, ಮಂಗಳೂರಿನ ಕೆಂಜಾರಿನಲ್ಲಿ 158 ಎಕರೆ ಭೂಮಿಯನ್ನು ಅಕಾಡೆಮಿ ಸ್ಥಾಪನೆಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ರಕ್ಷಣಾ ಸಚಿವಾಲಯಕ್ಕೆ ಹಸ್ತಾಂತರಿಸಿದೆ. ಭಾರತೀಯ ತಟರಕ್ಷಣಾ ಪಡೆಯ ತರಬೇತಿ ಅಕಾಡೆಮಿ (ಐಸಿಜಿಎ)ಯನ್ನು ಮಂಗಳೂರಿನಲ್ಲಿ ಸ್ಥಾಪಿಸುವ ನಿಟ್ಟಿನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಸಕ್ತಿ ವಹಿಸಿದ್ದು, ಶೀಘ್ರ ಈ ಕುರಿತ ಪ್ರಕ್ರಿಯೆಗಳು ಆರಂಭವಾಗಲಿರುವ ಎಲ್ಲ

ಮಂಗಳೂರಿಗೆ ಮತ್ತೊಂದು ಗರಿ ➤ ದೇಶದ ಮೊದಲ ಕೋಸ್ಟ್‌ಗಾರ್ಡ್ ಅಕಾಡೆಮಿ ಸ್ಥಾಪನೆ Read More »

ಕರಾವಳಿ, ಕರ್ನಾಟಕ

ಬೈಕ್​ನಿಂದ ಬಿದ್ದು ಸ್ಥಳದಲ್ಲೇ ಶಿಕ್ಷಕ ಮೃತ್ಯು..!!

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಸೆ. 21:  ಚಲಿಸುತ್ತಿದ್ದ ಬೈಕ್‌ನಿಂದ ಬಿದ್ದು ಶಿಕ್ಷಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ನಡೆದಿದೆ. ಮೃತಪಟ್ಟವರನ್ನು ಮಧುವನಹಳ್ಳಿ ನಿವಾಸಿ ಮಹದೇವಶೆಟ್ಟಿ(57) ಎಂದು ಗುರುತಿಸಲಾಗಿದೆ   ಕೊಳ್ಳೇಗಾಲ ಪಟ್ಟಣದ ಮಾರ್ಗವಾಗಿ ಬೈಕ್​ನಲ್ಲಿ ತೆರಳುತ್ತಿದ್ದ ಮಧುವನಹಳ್ಳಿ ಗ್ರಾಮದ ಶಿಕ್ಷಕ ಮಹದೇವಶೆಟ್ಟಿ ಬೈಕ್​ನಿಂದ ಬಿದ್ದಿದ್ದಾರೆ. ಈ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್​ನಿಂದ ಬಿದ್ದು ಸ್ಥಳದಲ್ಲೇ ಶಿಕ್ಷಕ ಮೃತ್ಯು..!! Read More »

ಕರ್ನಾಟಕ

ಪುತ್ತೂರಿನಲ್ಲಿ ಇಂದು ಮೂವರಲ್ಲಿ ಕೋವಿಡ್ ದೃಢ

(ನ್ಯೂಸ್ ಕಡಬ) newskadaba.com ಪುತ್ತೂರು , ಸೆ. 21:  ಆರೋಗ್ಯ ಇಲಾಖೆಯ ಕೊರೋನಾ ಅಪ್‍ಡೇಟ್ ವರದಿಯಲ್ಲಿ ಪುತ್ತೂರು ತಾಲೂಕಿನಲ್ಲಿ ಮಾತ್ರ ಕೊರೊನಾ ಪತ್ತೆಯಾಗಿದ್ದು, ತಾಲೂಕಿನಲ್ಲಿ ಮೂವರಿಗೆ ಕೋವಿಡ್ 19 ದೃಢಗೊಂಡಿದೆ. ಬನ್ನೂರು ನಿವಾಸಿ 62 ವರ್ಷದ ವ್ಯಕ್ತಿ , ಸರ್ವೆಯ 46 ವರ್ಷದ ಮಹಿಳೆ, 21 ವರ್ಷದ ಯುವಕನಲ್ಲಿ ಕೊರೋನಾ ಇಂದು ಪತ್ತೆಯಾಗಿದೆ.  

ಪುತ್ತೂರಿನಲ್ಲಿ ಇಂದು ಮೂವರಲ್ಲಿ ಕೋವಿಡ್ ದೃಢ Read More »

ಕರಾವಳಿ, ಕರ್ನಾಟಕ

ಕಾಸರಗೋಡು: ಮಳೆಯ ಅಬ್ಬರಕ್ಕೆ ನೀರು ತುಂಬಿದ ಹೊಂಡಕ್ಕೆ ಬಿದ್ದು ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು , ಸೆ.21: ಕಾಸರಗೋಡು ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಮಧೂರು ಚೇನಕ್ಕೋಡುನ ಬಯಲಿನಲ್ಲಿ ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಚೆಂದ್ರಶೇಖರ (37) ಹಾಗೂ ಚೆರ್ವತ್ತೂರು ಮಯ್ಯಚ್ಚಿಯಲ್ಲಿ ಸುಧಾಕರ (50) ಎಂಬವರು ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ. 25 ಕ್ಕೂ ಅಧಿಕ ಮನೆಗಳು ಹಾನಿಗೊಂಡಿದ್ದು, 20 ಕ್ಕೂ ಅಧಿಕ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.   ಮಂಜೇಶ್ವರ ತಾಲೂಕಿನ ಲ್ಲಿ ಫೆಲಿಕ್ಸ್ ಡಿ ಸೋಜ ಎಂಬವರ ಮನೆ ಮೇಲೆ ಮರ ಬಿದ್ದು, ಹಾನಿಗೊಂಡಿದೆ. ಕೊಡ್ಲಮೊಗರು ಎಂಬಲ್ಲಿ ಅಬ್ದುಲ್

ಕಾಸರಗೋಡು: ಮಳೆಯ ಅಬ್ಬರಕ್ಕೆ ನೀರು ತುಂಬಿದ ಹೊಂಡಕ್ಕೆ ಬಿದ್ದು ಇಬ್ಬರು ಮೃತ್ಯು Read More »

ಕರಾವಳಿ, ಕರ್ನಾಟಕ

ತಡರಾತ್ರಿ ನಿವೃತ್ತ ಪ್ರಾಂಶುಪಾಲರ ಬರ್ಬರ ಹತ್ಯೆ..!!

(ನ್ಯೂಸ್ ಕಡಬ) newskadaba.com ಮೈಸೂರು, ಸೆ. 21:  ವೃದ್ಧ ನಿವೃತ್ತ ಪ್ರಾಂಶುಪಾಲರೊಬ್ಬರನ್ನು ಅವರ ನಿವಾಸದಲ್ಲೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಮೈಸೂರಿನ ನಿವೇದಿತಾ ನಗರದಲ್ಲಿ ನಡೆದಿದೆ. ಭಾನುವಾರ ತಡರಾತ್ರಿ ಸುಮಾರಿಗೆ ಆಗಮನಿಸಿದ ಇಬ್ಬರು ಹಂತಕರು ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ಅವರ ಮನೆಗೆ ಆಗಮಿಸಿ ಕಾಲಿಂಗ್‌ ಬೆಲ್‌ ಒತ್ತಿದ್ದಾರೆ. ಬಳಿಕ ಬಾಗಿಲು ತೆರೆಯುತ್ತಿದ್ದಂತೆ ಪರಶಿವಮೂರ್ತಿ ಅವರಿಗೆ ಇರಿದಿದ್ದಾರೆ. ಎದೆ, ಹೊಟ್ಟೆ ಮತ್ತು ಕುತ್ತಿಗೆ ಭಾಗಗಳಿಗೆ ಮನಸೋ ಇಚ್ಛೆ ಚುಚ್ಚಿ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದೊಂದಿಗೆ ಮನೆಯ ಹಾಲ್‌ಗೆ ಬಂದ

ತಡರಾತ್ರಿ ನಿವೃತ್ತ ಪ್ರಾಂಶುಪಾಲರ ಬರ್ಬರ ಹತ್ಯೆ..!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸುಬ್ರಹ್ಮಣ್ಯ: ಪಾರ್ಕಿಂಗ್‌ ಮಾಡಿದ್ದ ಓಮ್ನಿ ಕಳವು -ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.20: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸವಾರಿ ಮಂಟಪದಲ್ಲಿ ಪಾರ್ಕಿಂಗ್‌ ಮಾಡಿದ್ದ ಓಮ್ನಿ ಕಳವಾದ ಘಟನೆ ಕಳೆದ ದಿನ ನಡೆದಿದೆ. ಬೆಳ್ತಂಗಡಿಯ ಬಳ್ಳಮಂಜದ ಕುಟುಂಬದೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಬಂದು ಓಮ್ನಿಯನ್ನು ( KA 21 P 1467) ಸುಬ್ರಹ್ಮಣ್ಯದ ಸವಾರಿ ಮಂಟಪದಲ್ಲಿ ನಿಲ್ಲಿಸಿ ದೇವರ ದರ್ಶನಕ್ಕಾಗಿ ದೇವಸ್ಥಾನಕ್ಕೆ ತೆರಳಿದ್ದಾರೆ. ವಾಪಸ್ಸು ಸುಮಾರು 10.30 ರ ವೇಳೆಗೆ ಬಂದು ನೋಡಿದಾಗ ನಿಲ್ಲಿಸಿದ್ದ ಜಾಗದಲ್ಲಿ ಕಾರು ಇರಲಿಲ್ಲ. ಎಷ್ಟು ಹುಡುಕಾಡಿದರೂ ಪತ್ತೆಯಾಗದ ಕಾರಣ ಕಳ್ಳರು

ಸುಬ್ರಹ್ಮಣ್ಯ: ಪಾರ್ಕಿಂಗ್‌ ಮಾಡಿದ್ದ ಓಮ್ನಿ ಕಳವು -ಪ್ರಕರಣ ದಾಖಲು Read More »

ಕರಾವಳಿ

ಪುತ್ತೂರು : ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಅಕ್ಕಿ ಸಹಿತ ಲಾರಿ ಪೊಲೀಸ್ ವಶಕ್ಕೆ..!!

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 21:  ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿಯೊಂದನ್ನು ಕಳೆದ ರಾತ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ಧಾರೆ. ದಾಖಲೆ ಪತ್ರಗಳಿಲ್ಲದೆ 9,250 ಕಿಲೋ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ಪುತ್ತೂರು ನಗರಠಾಣೆ ಪೊಲೀಸರು ಭಾನುವಾರ ರಾತ್ರಿ ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.     ಮಾಣಿ-ಮೈಸೂರು ಹೆದ್ದಾರಿಯ ಪೋಳ್ಯದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಪುತ್ತೂರು ಕಡೆಯಿಂದ ಬಂದ ಕೆಎ 21 ಸಿ 4647 ನೋಂದಣಿ ಸಂಖ್ಯೆಯ ಲಾರಿಯನ್ನು ತಡೆಯಲಾಗಿತ್ತು. ಪರಿಶೀಲಿಸಿದಾಗ ಅವರ

ಪುತ್ತೂರು : ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಅಕ್ಕಿ ಸಹಿತ ಲಾರಿ ಪೊಲೀಸ್ ವಶಕ್ಕೆ..!! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಎಡಮಂಗಲ: ಕಾಣೆಯಾಗಿದ್ದ ವಿವಾಹಿತೆ ಮಂಡ್ಯದಲ್ಲಿ ಪತ್ತೆ.!

(ನ್ಯೂಸ್ ಕಡಬ) newskadaba.com ಎಡಮಂಗಲ, ಸೆ.21: ಎಡಮಂಗಲ ಗ್ರಾಮದ ಎರಿಂಬಿಲ ಮೋಹನ ಎ. ಎಂಬವರ ಪತ್ನಿ ಮಂಜುಳ(28) ರವರು ಸೆ.13 ರಂದು ಮನೆಯಿಂದ ಕಾಣೆಯಾಗಿದ್ದಾರೆ ಎಂದು ಪತಿ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದರು.   ಇದೀಗ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನು ಮಂಡ್ಯದ ಬಡಾವಣೆಯಲ್ಲಿ ಪತ್ತೆ ಹಚ್ಚಿ ಸುಳ್ಯಕ್ಕೆ ಕರೆದುಕೊಂಡು ಬಂದು ಮನೆಯವರೊಂದಿಗೆ ಕಳುಹಿಸಿರುವುದಾಗಿ ತಿಳಿದು ಬಂದಿದೆ.  

ಎಡಮಂಗಲ: ಕಾಣೆಯಾಗಿದ್ದ ವಿವಾಹಿತೆ ಮಂಡ್ಯದಲ್ಲಿ ಪತ್ತೆ.! Read More »

ಕರಾವಳಿ

ಪುತ್ತೂರು :ಗಾಂಜಾ ನಶೆಯಲ್ಲಿದ್ದ ಇಬ್ಬರು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.21: ಮುಕ್ರಂಪಾಡಿ ಬಸ್‌ ತಂಗುದಾಣದಲ್ಲಿ ಗಾಂಜಾ ನಶೆಯಲ್ಲಿದ್ದ ವೇಳೆ ಬಂಧಿತರಾಗಿರುವ ಆರೋಪಿಗಳಿಬ್ಬರನ್ನು ನ್ಯಾಯಾಲಯ ಒಂದು ದಿನದವಧಿಗೆ ಪೊಲೀಸ್‌ ಕಸ್ಟಡಿಗೆ ನೀಡಿದೆ.ಮಂಜೇಶ್ವರ ತಾಲೂಕು ಉಪ್ಪಳ ಪಪ್ಪಾಯಿತೊಟ್ಟಿಯ ರಹಿಮಾನ್‌ ಖಾನ್(44ವ.) ಹಾಗೂ ಮಂಜೇಶ್ವರ ತಾಲೂಕು ಹೊಸಂಗಡಿ ಬಜ್ಜೆಂಗಳ ಅಬ್ದುಲ್ಲಾ ರವರು ಕಳೆದ ದಿನದಂದು ಸಂಜೆ ಮುಕ್ರಂಪಾಡಿ ಬಸ್‌ ತಂಗುದಾಣದ ಬಳಿ ನಿಲ್ಲಿಸಿದ್ದ ಕಾರೊಂದರ ಬಳಿ ಗಾಂಜಾ ನಶೆಯಲ್ಲಿದ್ದು ಅನುಚಿತವಾಗಿ ವರ್ತಿಸುತ್ತಿದ್ದ ಕುರಿತು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಎಸ್‌.ಐ. ಜಂಬುರಾಜ್‌ ಮಹಾಜನ್‌

ಪುತ್ತೂರು :ಗಾಂಜಾ ನಶೆಯಲ್ಲಿದ್ದ ಇಬ್ಬರು ಪೊಲೀಸ್ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top