ಬಿದ್ದು ಗಾಯಕ್ಕೊಳಗಾಗಿದ್ದ ತಂದೆ – ಮಗಳಿಗೆ ಸಹಾಯ ಧನ ಹಸ್ತಾಂತರ ► ದಾನಿಗಳ ಸಹಾಯ ಬೇಕಾಗಿದೆ

(ನ್ಯೂಸ್ ಕಡಬ) newskadaba.com ಕಡಬ, ಆ.07.  ಮರ್ಧಾಳ ಕೆದಿಲ ನಿವಾಸಿ ಲಿಂಗಪ್ಪ ಗೌಡ ಕಳೆದ ಮೂರು ತಿಂಗಳ ಹಿಂದೆ ಮರ್ಧಾಳ ಪೇಟೆಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ ಚರಂಡಿಗೆ ಬಿದ್ದು ಕಾಲಿಗೆ ಗಾಯವಾಗಿ ತನ್ನ ಟೈಲರ್ ವೃತ್ತಿಯನ್ನು ಮಾಡಲು ಅಸಾಧ್ಯವಾಗಿದ್ದು ಇದೀಗ ಕೆಲವು ದಿನಗಳ ಹಿಂದೆ ತನ್ನ ಮಗಳು ಅಂಗಳದಲ್ಲಿ ಆಟವಾಡುವ ವೇಳೆ ಬಿದ್ದು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮಗಳ ಚಿಕಿತ್ಸೆಗೆ ಮರ್ದಾಳ ಪೇಟೆಯಲ್ಲಿ ಹಣ ಸಂಗ್ರಹಿಸಿ ನೀಡಲಾಯಿತು. ಧನಸಹಾಯ 16000 ಸಾವಿರವನ್ನು ಮರ್ಧಾಳ ಗ್ರಾ.ಪಂ […]

ಬಿದ್ದು ಗಾಯಕ್ಕೊಳಗಾಗಿದ್ದ ತಂದೆ – ಮಗಳಿಗೆ ಸಹಾಯ ಧನ ಹಸ್ತಾಂತರ ► ದಾನಿಗಳ ಸಹಾಯ ಬೇಕಾಗಿದೆ Read More »

ಕರಾವಳಿ

ಮೊಸಳೆ ದಾಳಿಗೆ ತುತ್ತಾದ ರೈತ ► ಸ್ಥಳಿಯರ ನೆರವಿನಿಂದ ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಬಿಜಾಪುರ, ಆ.07. ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕಮಲದಿನ್ನಿ ಗ್ರಾಮದಲ್ಲಿ ಮೊಸಳೆ ದಾಳಿಗೆ ರೈತರೋರ್ವರು ಗಂಭೀರವಾಗಿ ಗಾಯಗೊಂಡು ಸ್ಥಳೀಯರ ಸಹಾಯದಿಂದ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸೋಮವಾರ ನಡೆದಿದೆ. ಕಮಲದಿನ್ನಿ ಗ್ರಾಮದ ಬಸಪ್ಪ ಸಿದ್ರಾಮಪ್ಪ ಮರಿಗೌಡರ(೪೮) ಮೊಸಳೆ ದಾಳಿಗೆ ತುತ್ತಾಗಿ ಗಾಯಗೊಂಡಿರುವ ರೈತ. ಸೋಮವಾರ ಬೆಳಿಗ್ಗೆ ಎತ್ತುಗಳಿಗೆ ಮೈ ತೊಳೆಯಲು ನದಿಗೆ ಇಳಿದಿದ್ದ ವೇಳೆ ಬಸಪ್ಪನ ಮೇಲೆ ಮೊಸಳೆ ದಾಳಿ ಮಾಡಿದೆ. ದಾಳಿಯಿಂದಾಗಿ ಬಸಪ್ಪನ ಎಡಗೈ, ಕಾಲಿಗೆ ಗಂಭೀರವಾದ ಗಾಯಗಳಾಗಿದ್ದು ಮುದ್ದೇಬಿಹಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಮೊಸಳೆ ದಾಳಿಗೆ ತುತ್ತಾದ ರೈತ ► ಸ್ಥಳಿಯರ ನೆರವಿನಿಂದ ಅಪಾಯದಿಂದ ಪಾರು Read More »

ಕರ್ನಾಟಕ

ಪುತ್ತೂರು ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ರೆ| ಡಾ| ಜೋರ್ಜ್ ಕಾಲಾಯಿಲ್ ನೇಮಕ

(ನ್ಯೂಸ್ ಕಡಬ) newskadaba.com ಕಡಬ, ಆ.07. ಮಲಂಕರ ಸಿರಿಯನ್ ಕ್ಯಾಥಲಿಕ್ ಧರ್ಮಸಭೆಯ ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ರೆಂಜಿಲಾಡಿ ಗ್ರಾಮದ ರೆ| ಡಾ| ಜೋರ್ಜ್ ಕಾಲಾಯಿಲ್ ಆಯ್ಕೆಯಾಗಿದ್ದಾರೆ. ಅವರನ್ನು ಕ್ಯಾಥಲಿಕ್ ಧರ್ಮಸಭೆಯ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರು ನೇಮಕ ಮಾಡಿ ಆದೇಶ ಹೊರಡಿಸಿರುತ್ತಾರೆ. ಕಳೆದ 7 ವರ್ಷಗಳಿಂದ ನೂತನ ಪುತ್ತೂರು ಧರ್ಮಪ್ರಾಂತ್ಯದ ಸೇವೆ ಸಲ್ಲಿಸುತ್ತಿದ್ದ ಅತೀ ವಂದನೀಯ ಡಾ| ಗೀವರ್ಗೀಸ್ ಮಾರ್ ದಿವನ್ನಾಸಿಯೋಸ್ ರವರ ನಿವೃತ್ತಿಯಿಂದ ತೆರವಾದ ಹುದ್ದೆಗೆ 2017 ಜನವರಿ 24ರಿಂದ ಧರ್ಮಪ್ರಾಂತ್ಯದ ಆಡಳಿತಾಧಿಕರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಡಾ|

ಪುತ್ತೂರು ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ರೆ| ಡಾ| ಜೋರ್ಜ್ ಕಾಲಾಯಿಲ್ ನೇಮಕ Read More »

ಕರಾವಳಿ

ಪತ್ರಕರ್ತನ ಮನೆಯ ಮುಂದೆ ಗುಂಡು ಸೂಜಿ ಚುಚ್ಚಿದ ಸೌತೆಕಾಯಿ ► ವಾಮಾಚಾರ ಮಾಡಿರುವ ಶಂಕೆ

(ನ್ಯೂಸ್ ಕಡಬ) newskadaba.com ಕಡಬ, ಆ.07. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ನಿವಾಸಿ ಪತ್ರಕರ್ತ ಖಾದರ್ ಸಾಹೇಬ್ ಅವರ ಮನೆಯ ಮುಂಭಾಗದಲ್ಲಿ ಭಾನುವಾರ ವಾಮಾಚಾರ ನಡೆಸಲಾಗಿದೆ ಎಂದು ಕಡಬ ಠಾಣೆಗೆ ದೂರು ನೀಡಲಾಗಿದೆ. ಖಾದರ್ ಸಾಹೇಬ್ ಅವರ ಮನೆಯ ಅಂಗಳದಲ್ಲಿ ಸೌತೆ ಕಾಯಿ ಮೇಲೆ ಗುಂಡು ಸೂಜಿಗಳನ್ನು ಚುಚ್ಚಿ ಶಿಲುಬೆಯಾಕಾರ ಮಾಡಿರುವ ಚಿತ್ರಣ ಕಂಡು ಬಂದಿದ್ದು, ಇದರಿಂದ ಭಯಭೀತರಾದ ಮನೆಯವರು ಸ್ಥಳೀಯ ಮುಖಂಡರುಗಳು, ಜನಪ್ರತಿನಿಧಿಗಳು ಹಾಗೂ ಪೋಲೀಸರಿಗೆ ತಿಳಿಸಿದ್ದಾರೆ. ಕಡಬ ಠಾಣಾ ಸಿಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಊರಿನ

ಪತ್ರಕರ್ತನ ಮನೆಯ ಮುಂದೆ ಗುಂಡು ಸೂಜಿ ಚುಚ್ಚಿದ ಸೌತೆಕಾಯಿ ► ವಾಮಾಚಾರ ಮಾಡಿರುವ ಶಂಕೆ Read More »

ಕರಾವಳಿ

ನೆಲ್ಯಾಡಿ: ಜೀಪು – ಕಾರು ಢಿಕ್ಕಿ ► ಐವರು ಗಂಭೀರ – ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ.06. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಆರ್ಲ ಎಂಬಲ್ಲಿ ಜೀಪು ಹಾಗೂ ಎರ್ಟಿಗಾ ಕಾರು ನಡುವೆ ಢಿಕ್ಕಿ ಸಂಭವಿಸಿ ಐವರು ಗಂಭೀರ ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ. ಗಾಯಾಳುಗಳನ್ನು ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಗಾಯಗೊಂಡಿರುವ ಐವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ನೆಲ್ಯಾಡಿ: ಜೀಪು – ಕಾರು ಢಿಕ್ಕಿ ► ಐವರು ಗಂಭೀರ – ಹಲವರಿಗೆ ಗಾಯ Read More »

ಕರಾವಳಿ

ಪತ್ರಕರ್ತರಿಗೆ ಹಲ್ಲೆ ನಡೆಸಿದರೆ ನಿರ್ದಾಕ್ಷಿಣ್ಯ ಕ್ರಮ: ಜಿಲ್ಲಾಧಿಕಾರಿ

 (ನ್ಯೂಸ್ ಕಡಬ) newskadaba.com ಮ0ಗಳೂರು. ಆ.05. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ರಕರ್ತರಿಗೆ ಕರ್ತವ್ಯ ನಿರ್ವಹಣೆಯಲ್ಲಿ ಬೆದರಿಕೆ, ಹಲ್ಲೆಯಂತಹ  ಪ್ರಕರಣಗಳು ನಡೆದರೆ ಅಂತಹವರ ವಿರುದ್ಧ ಕಾನೂನು ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು  ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಹೇಳಿದ್ದಾರೆ. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಕರ್ತರ ಮೇಲಿನ ಹಲ್ಲೆಗಳ ಮೇಲ್ವಿಚಾರಣೆ ಮತ್ತು ಪರಿಶೀಲನೆಗೆ ರಚಿಸಿರುವ ಜಿಲ್ಲಾಮಟ್ಟದ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಕರ್ತರ ವಿರುದ್ಧ  ಯಾವುದೇ ದೂರುಗಳಿದ್ದರೂ ಸಮಿತಿಗೆ ಸಲ್ಲಿಸಬಹುದು. ಅದು ಬಿಟ್ಟು ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಸೂಕ್ತ ಕ್ರಮ ನಡೆಯಲಿದೆ.

ಪತ್ರಕರ್ತರಿಗೆ ಹಲ್ಲೆ ನಡೆಸಿದರೆ ನಿರ್ದಾಕ್ಷಿಣ್ಯ ಕ್ರಮ: ಜಿಲ್ಲಾಧಿಕಾರಿ Read More »

ಕರಾವಳಿ

ಭಾರತದ 15ನೇ ಉಪ ರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಆಯ್ಕೆ

(ನ್ಯೂಸ್ ಕಡಬ) newskadaba.com ನವದೆಹಲಿ, ಆ.06. ದೇಶದ ಉಪರಾಷ್ಟ್ರಪತಿ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಅವರನ್ನು 272 ಮತಗಳ ಅಂತರದಿಂದ ಸೋಲಿಸುವ ಮೂಲಕ 15ನೇ ಉಪರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಆಯ್ಕೆ ಆಗಿದ್ದಾರೆ.  ಒಟ್ಟು 785 ಮತದಾರರ ಪೈಕಿ 771 ಅಭ್ಯರ್ಥಿಗಳು ಮತ ಚಲಾಯಿಸಿದ್ದು, ಬಿಜೆಪಿಯ ಇಬ್ಬರು ಸೇರಿ 14 ಮಂದಿ ಮತ ಹಾಕಿರಲಿಲ್ಲ. 516 ಸಂಸದರು ಎನ್‍ಡಿಎ ಅಭ್ಯರ್ಥಿ ವೆಂಕಯ್ಯ ನಾಯ್ಡು ಪರ ಮತ ಚಲಾಯಿಸಿದರೆ,  244 ಮಂದಿ ಸಂಸದರು ಯುಪಿಎ ಅಭ್ಯರ್ಥಿ

ಭಾರತದ 15ನೇ ಉಪ ರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಆಯ್ಕೆ Read More »

ರಾಷ್ಟ್ರೀಯ ನ್ಯೂಸ್

ಬಂಟ್ವಾಳದ ವಿದ್ಯಾರ್ಥಿಗಳು ಸಕಲೇಶಪುರದಲ್ಲಿ ಆತ್ಮಹತ್ಯೆ ► ಅಪ್ರಾಪ್ತ ಪ್ರೇಮಿಗಳಿಂದ ಕಾಫಿ ಗಿಡಕ್ಕೆ ನೇಣು

(ನ್ಯೂಸ್ ಕಡಬ) newskadaba.com ಮಂಗಳೂರು, ಆ.06. ಕಳೆದ ನಾಲ್ಕು ದಿನಗಳಿಂದ ಕಾಣೆಯಾಗಿದ್ದ ಬಂಟ್ವಾಳದಿಂದ ಕಾಣೆಯಾಗಿದ್ದ ಅಪ್ರಾಪ್ತ ವಯಸ್ಸಿನ ಪ್ರೇಮಿಗಳಿಬ್ಬರು ಕಾಫಿ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕೊಳೆತ ಸ್ಥಿತಿಯಲ್ಲಿ ಇವರ ಶವಗಳು ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದಲ್ಲಿ ಕಂಡುಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಹಾರ್ಲೆ ಗ್ರಾಮದ ಸಹನಾ(16) ಮತ್ತು ಕುಂಬರಡಿ ಗ್ರಾಮದ ಅರುಣ್(17) ಇವರಿಬ್ಬರು ಕಳೆದ ನಾಲ್ಕು ದಿನಗಳಿಂದ ಕಾಣೆಯಾಗಿದ್ದರು. ಬಾಲ್ಯದಿಂದಲೂ ಇಬ್ಬರೂ ಪರಿಚಯಸ್ಥರಾಗಿದ್ದು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತಿದ್ದರೆನ್ನಲಾಗಿದೆ. ಆದರೆ ಮನೆಯವರಲ್ಲಿ

ಬಂಟ್ವಾಳದ ವಿದ್ಯಾರ್ಥಿಗಳು ಸಕಲೇಶಪುರದಲ್ಲಿ ಆತ್ಮಹತ್ಯೆ ► ಅಪ್ರಾಪ್ತ ಪ್ರೇಮಿಗಳಿಂದ ಕಾಫಿ ಗಿಡಕ್ಕೆ ನೇಣು Read More »

ಕರ್ನಾಟಕ

108 ಆಂಬ್ಯುಲೆನ್ಸ್ ಡೋರ್ ಲಾಕ್ ► ಹೊರಗೆ ಬರಲಾಗದೆ ಪರದಾಡಿದ ರೋಗಿ

(ನ್ಯೂಸ್ ಕಡಬ) newskadaba.com ಮಂಡ್ಯ, ಆ.06. 108 ಅಂಬುಲೆನ್ಸೊಂದರ ಡೋರ್ ಓಪನ್ ಆಗದ ಕಾರಣ ರೋಗಿ ಹಾಗೂ ರೋಗಿಯ ಸಂಬಂಧಿಗಳು ಅರ್ಧಗಂಟೆಗೂ ಹೆಚ್ಚು ಕಾಲ ಅಂಬುಲೆನ್ಸ್ ಒಳಗೆ ಪರದಾಡಿದ ಘಟನೆ ಚಾಮರಾಜನಗರದಲ್ಲಿ ಶನಿವಾರದಂದು ನಡೆದಿದೆ. ಕೂಲಿ ಕೆಲಸದ ಸಂದರ್ಭದಲ್ಲಿ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ 108 ಆಂಬ್ಯುಲೆನ್ಸಿಗೆ ಕರೆ ಮಾಡಲಾಗಿ ರೋಗಿಯನ್ನು ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ಕರೆ ತರಲಾಗಿತ್ತು. ಆಸ್ಪತ್ರೆಗೆ ತಲುಪಿ ಹೊರಬರಲೆಂದು ಡೋರ್ ತೆಗೆಯುವಾಗ ಡೋರ್ ಲಾಕ್ ಆಗಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಡೋರ್ ಓಪನ್ ಆಗಲಿಲ್ಲ. ಅಂಬುಲೆನ್ಸ್ ಒಳಗಿದ್ದ

108 ಆಂಬ್ಯುಲೆನ್ಸ್ ಡೋರ್ ಲಾಕ್ ► ಹೊರಗೆ ಬರಲಾಗದೆ ಪರದಾಡಿದ ರೋಗಿ Read More »

ಕರ್ನಾಟಕ

ಹಟ್ಟಿಯ ಮೇಲೆ ಗುಡ್ಡ ಜರಿದು 4 ಹಸುಗಳ ದಾರುಣ ಸಾವು

(ನ್ಯೂಸ್ ಕಡಬ) newskadaba.com ಕಡಬ, ಆ.05. ಗುಡ್ಡದ ಬದಿಯಲ್ಲಿದ್ದ ಹಟ್ಟಿಯೊಂದರ ಮೇಲೆ ಗುಡ್ಡ ಜರಿದು 4 ದನಗಳು ದಾರುಣವಾಗಿ ಸಾವಿಗೀಡಾದ ಘಟನೆ ಶನಿವಾರದಂದು ಪುತ್ತೂರು ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ಕುಡಾಲ ಎಂಬಲ್ಲಿ ನಡೆದಿದೆ. ಕುಡಾಲ ನಿವಾಸಿ ಕೃಷಿಕ ಸುಭಾಶ್ಚಂದ್ರ ಎಂಬವರು ತನ್ನ ಮನೆಯ ಪಕ್ಕದಲ್ಲೇ ಹಟ್ಟಿ ನಿರ್ಮಿಸಿ ಹೈನುಗಾರಿಕೆ ನಡೆಸುತ್ತಿದ್ದರು. ಶನಿವಾರದಂದು ಸಂಜೆ ಸುರಿದ ಮಳೆಗೆ ಗುಡ್ಡ ಜರಿದು ಹಟ್ಟಿಯ ಮೇಲೆ ಬಿದ್ದ ಪರಿಣಾಮ 3 ದನ, 3 ಕರುಗಳು ಮಣ್ಣಿನಡಿಯಲ್ಲಿ ಬಾಕಿಯಾಗಿದ್ದವು. ಜೆಸಿಬಿ ಮೂಲಕ

ಹಟ್ಟಿಯ ಮೇಲೆ ಗುಡ್ಡ ಜರಿದು 4 ಹಸುಗಳ ದಾರುಣ ಸಾವು Read More »

ಕರಾವಳಿ
Scroll to Top