ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ: ಶಕುಂತಲಾ ಶೆಟ್ಟಿ ► ಬಿಜೆಪಿ ಸೇರಲಿದ್ದಾರೆ ಎನ್ನುವುದಕ್ಕೆ ಪ್ರತಿಕ್ರಿಯಿಸಿದ ಶಕುಂತಲಾ ಶೆಟ್ಟಿ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.26. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ನಾನು ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಪಕ್ಷವನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಪುತ್ತೂರು ಶಾಸಕಿ ಶ್ರೀಮತಿ ಶಕುಂತಲಾ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯ ಪರಿವರ್ತನಾ ಸಮಾವೇಶದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಸೇರಿ ಶಾಸಕಿಯಾಗಿರುವ ಶಕುಂತಲಾ ಶೆಟ್ಟಿಯವರು ಪುನಃ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಪಕ್ಷಕ್ಕೆ ಸೇರಿದ್ದು, ಪಕ್ಷ ಬಿಡುವ ಪ್ರಶ್ನೆಯೇ […]

ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ: ಶಕುಂತಲಾ ಶೆಟ್ಟಿ ► ಬಿಜೆಪಿ ಸೇರಲಿದ್ದಾರೆ ಎನ್ನುವುದಕ್ಕೆ ಪ್ರತಿಕ್ರಿಯಿಸಿದ ಶಕುಂತಲಾ ಶೆಟ್ಟಿ Read More »

ಕರಾವಳಿ

ಇದು ಜೀವರಕ್ಷಕವೋ…? ಯಮದೂತವೋ…? ► ಅನಾಹುತವನ್ನು ಆಹ್ವಾನಿಸುತ್ತಿರುವ ಕಡಬದ 108 ಆಂಬ್ಯುಲೆನ್ಸ್

(ನ್ಯೂಸ್ ಕಡಬ) newskadaba.com ಕಡಬ, ಅ.25. ಅಪಘಾತದಂತಹ ತುರ್ತು ಸಂದರ್ಭಗಳಲ್ಲಿ ಜನರ ಜೀವರಕ್ಷಣೆಗೆಂದು ಸರಕಾರದಿಂದ ನಿಯೋಜಿತವಾಗಿರುವ 108 ಆಂಬ್ಯುಲೆನ್ಸ್ ವಾಹನವು ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಯಮದೂತವಾಗಿ ಪರಿಣಮಿಸುತ್ತಿದೆಯಾ…??   ಹೌದು… ಹೀಗೊಂದು ಸಂಶಯ ಸಾರ್ವಜನಿಕರನ್ನು ಕಾಡುತ್ತಿದೆ. ವಾಹನದಲ್ಲಿ ಅಗತ್ಯವಾಗಿ ಇರಬೇಕಾಗಿದ್ದ ಚಕ್ರಗಳೇ ಸರಿಯಿಲ್ಲದಿದ್ದರೆ ಹೇಗೆ….? ಕಡಬ ಪರಿಸರದಲ್ಲಿ ತುರ್ತು ಸಂದರ್ಭಕ್ಕೆಂದು ಕೊಡಮಾಡಿರುವ 108 ಆಂಬ್ಯುಲೆನ್ಸ್ ವಾಹನದ ಹಿಂಭಾಗದ ಎರಡೂ ಚಕ್ರಗಳು ಸವೆದಿದ್ದು ಈಗಲೋ ಆಗಲೋ ಒಡೆಯುವ ಸ್ಥಿತಿಯಲ್ಲಿದೆ. ಚಕ್ರಗಳು ಪೂರ್ತಿ ಸವೆದು ಒಳಗಿನ ತಂತಿಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

ಇದು ಜೀವರಕ್ಷಕವೋ…? ಯಮದೂತವೋ…? ► ಅನಾಹುತವನ್ನು ಆಹ್ವಾನಿಸುತ್ತಿರುವ ಕಡಬದ 108 ಆಂಬ್ಯುಲೆನ್ಸ್ Read More »

ಕರಾವಳಿ

ಬಿಜೆಪಿಗೆ ಮುಜುಗರ ತಂದ ರಾಷ್ಟ್ರಪತಿಯವರ ಹೇಳಿಕೆ ► ಟಿಪ್ಪು ಕ್ಷಿಪಣಿ ತಂತ್ರಜ್ಞಾನದ ಜನಕ ಎಂದು ಹಾಡಿ ಹೊಗಳಿದ ರಾಷ್ಟ್ರಪತಿ ಕೋವಿಂದ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.25. ಟಿಪ್ಪು ಕ್ಷಿಪಣಿ ತಂತ್ರಜ್ಞಾನದ ಜನಕನಾಗಿದ್ದು, ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿದ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟಿಪ್ಪು ಸುಲ್ತಾನನನ್ನು ಹಾಡಿ ಹೊಗಳಿದ್ದು, ಬಿಜೆಪಿಗೆ ತೀವ್ರ ಮುಜುಗರವನ್ನುಂಟುಮಾಡಿದೆ. ವಿಧಾನಸೌಧದ ವಜ್ರಮಹೋತ್ಸವದ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ತನ್ನ ಭಾಷಣದಲ್ಲಿ ಟಿಪ್ಪುಸುಲ್ತಾನ್ ಬಗ್ಗೆ ಉಲ್ಲೇಖಿಸಿ ಟಿಪ್ಪು ಕ್ಷಿಪಣಿ ತಂತ್ರಜ್ಞಾನದ ಜನಕನಾಗಿದ್ದು, ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿದ ಎಂದರು. ಇದಕ್ಕೆ ಕಾಂಗ್ರೆಸ್ ಶಾಸಕರು ಮೇಜುಕುಟ್ಟಿ ಸ್ವಾಗತಿಸಿದರೆ,

ಬಿಜೆಪಿಗೆ ಮುಜುಗರ ತಂದ ರಾಷ್ಟ್ರಪತಿಯವರ ಹೇಳಿಕೆ ► ಟಿಪ್ಪು ಕ್ಷಿಪಣಿ ತಂತ್ರಜ್ಞಾನದ ಜನಕ ಎಂದು ಹಾಡಿ ಹೊಗಳಿದ ರಾಷ್ಟ್ರಪತಿ ಕೋವಿಂದ್ Read More »

ರಾಷ್ಟ್ರೀಯ ನ್ಯೂಸ್

ದುಷ್ಕರ್ಮಿಗಳ ಗುಂಡಿಗೆ ಗೃಹಿಣಿ ಬಲಿ ►2 ವರ್ಷದ ಮಗುವಿನ ಮುಂದೆ ಕೊಲೆಯಾದ ತಾಯಿ..!!!

(ನ್ಯೂಸ್ ಕಡಬ) newskadaba.com ನವದೆಹಲಿ, ಅ.25.  ಮಹಿಳೆಯೊಬ್ಬರು ತನ್ನ ಪತಿ, ಹಾಗೂ 2 ವರ್ಷದ ಮಗುವಿನ ಮುಂದೆಯೇ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಘಟನೆ ಪಶ್ಚಿಮ ದೆಹಲಿ ರೋಹಿಣಿಯಲ್ಲಿ ಬುಧವಾರ ಮುಂಜಾನೆ ನಡೆದಿದೆ. ಪ್ರಿಯಾ ಮೆಹ್ರಾ (30) ಕೊಲೆಯಾದ ಗೃಹಿಣಿ. ಬುಧವಾರ ನಸುಕಿನ ಜಾವ 4 ಗಂಟೆಗೆ ಗುರುದ್ವಾರದಿಂದ ಕಾರಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಗುರುದ್ವಾರದಿಂದ ರೋಹಿಣಿಯಲ್ಲಿರುವ ತಮ್ಮ ಮನೆಗೆ ಪತಿ ಪಂಕಜ್ ಜೊತೆ ಮಾರುತಿ ರಿಟ್ಜ್ ಕಾರಿನಲ್ಲಿ ಹಿಂದಿರುಗುತ್ತಿದ್ದ ವೇಳೆ ದುಷ್ಕರ್ಮಿಗಳು ಕಾರಿನಲ್ಲಿ ವೇಗವಾಗಿ ಬಂದು

ದುಷ್ಕರ್ಮಿಗಳ ಗುಂಡಿಗೆ ಗೃಹಿಣಿ ಬಲಿ ►2 ವರ್ಷದ ಮಗುವಿನ ಮುಂದೆ ಕೊಲೆಯಾದ ತಾಯಿ..!!! Read More »

ರಾಷ್ಟ್ರೀಯ ನ್ಯೂಸ್

ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ► ಪಟ್ಟಾಭಿಷೇಕದ ಸುವರ್ಣ ಮಹೋತ್ಸವ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ,ಅ.25. ಸೇವೆ ಎನ್ನುವುದು ಜೀವನದಲ್ಲಿ ಮುಖ್ಯವಾದುದು. ಅದರಲ್ಲೂ ಉತ್ತಮ ಸೇವೆ ಎನ್ನುವುದು ಎಲ್ಲದಕ್ಕಿಂತ ಮುಖ್ಯವಾಗುತ್ತದೆ. ಅಂತಹ ಉತ್ತಮ ಸಮಾಜ ಸೇವೆಯಿಂದಾಗಿ ಇಂದು ವೀರೇಂದ್ರ ಹೆಗ್ಗಡೆಯವರನ್ನು ಎಲ್ಲೆಡೆ ಗುರುತಿಸುವಂತಾಗಿದೆ ಎಂದು ಮೈಸೂರು ಅರಮನೆಯ ಮಹಾರಾಜರಾದ ಯದುವೀರದತ್ತ ಒಡೆಯರ್‌ ಅವರು ಹೇಳಿದರು. ಅವರು ಮಂಗಳವಾರ ರಾತ್ರಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಅಂಗವಾಗಿ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದರು. ಶುಚಿತ್ವದಲ್ಲಿ ರಾಷ್ಟ್ರ ಮಟ್ಟದ ಪುರಸ್ಕಾರ

ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ► ಪಟ್ಟಾಭಿಷೇಕದ ಸುವರ್ಣ ಮಹೋತ್ಸವ Read More »

ಕರಾವಳಿ

ಐಶ್ವರ್ಯ ರೈ ತಾಯಿ ಮನೆಯಲ್ಲಿ ಬೆಂಕಿ ಅವಘಡ ► ಅಪಾಯದಿಂದ ಪಾರು..!!!

(ನ್ಯೂಸ್ ಕಡಬ) newskadaba.com ಮುಂಬೈ, ಅ.25. ನಗರದ ಬಾಂದ್ರಾದಲ್ಲಿ ವಾಸವಾಗಿರುವ ಐಶ್ವರ್ಯ ರೈ ತಾಯಿ ಮನೆ ಲಾ ಮರ್ ಬಿಲ್ಡಂಗ್ ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ. ಮೂಲಗಳ ಪ್ರಕಾರ ಮಧ್ಯರಾತ್ರಿ ಸುಮಾರು 1 ಗಂಟೆಗೆ ಬೆಂಕಿ ಕಾಣಿಸಿಕೊಂಡಿತ್ತು. ಅವಘಡದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಸರಿಯಾದ ಸಮಯಕ್ಕೆ ಸ್ಥಳಕ್ಕೆ ಭೇಟಿ ನೀಡಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಷಯ ತಿಳಿದ ಕೂಡಲೇ ಅಭಿಷೇಕ್ ಜೊತೆ ಐಶ್ವರ್ಯ ರೈ ತನ್ನ ತಾಯಿ ವೃಂದಾ ರೈ ಮನೆಗೆ

ಐಶ್ವರ್ಯ ರೈ ತಾಯಿ ಮನೆಯಲ್ಲಿ ಬೆಂಕಿ ಅವಘಡ ► ಅಪಾಯದಿಂದ ಪಾರು..!!! Read More »

ಕರ್ನಾಟಕ

100 ಸಿಸಿಯ ಲಿಸ್ಟಲ್ಲಿ ನಿಮ್ಮ ವಾಹನ ರಿಜಿಸ್ಟರ್ ಆಗಿದೆಯೇ..??? ►ನಿಮಗೆ ಈ ಆದೇಶ ಅನ್ವಯಿಸುತ್ತಾ ತಿಳಿದುಕೊಳ್ಳಿ..!!!

(ನ್ಯೂಸ್ ಕಡಬ) newskadaba.com ಕಡಬ, ಅ.25. 100 ಸಿಸಿ.ಗಿಂತ ಕಡಿಮೆ ಎಂಜಿನ್ ಸಾಮರ್ಥ್ಯವುಳ್ಳ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರು ಪ್ರಯಾಣಿಸುವುದನ್ನು ನಿಷೇಧಿಸುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಆದೇಶದ ಪ್ರಕಾರ ರಾಜ್ಯ ಸರಕಾರ ಈ ಆದೇಶ ಹೊರಡಿಸಿದ್ದು , ಇನ್ನು ಮುಂದೆ ಯಾವುದೇ 100 ಸಿಸಿಗಿಂತ ಕಡಿಮೆ ಇರುವ ವಾಹನಗಳ ನೊಂದಣಿಯನ್ನು ರದ್ದುಪಡಿಸಿದೆ. ಆದರೆ 100 ಸಿಸಿ ಗಿಂತ ಕಡಿಮೆ ಇರುವ ವಾಹನಗಳು ಒಂದು ಸೀಟ್ ಆಳವಡಿಸಿಕೊಂಡು ವಾಹನದ ಸಾಮರ್ಥ್ಯ ಒಂದು ಸೀಟು ಎಂದು ನಮೂದಿಸಿ ವಾಹನವನ್ನು ನೊಂದಣಿ

100 ಸಿಸಿಯ ಲಿಸ್ಟಲ್ಲಿ ನಿಮ್ಮ ವಾಹನ ರಿಜಿಸ್ಟರ್ ಆಗಿದೆಯೇ..??? ►ನಿಮಗೆ ಈ ಆದೇಶ ಅನ್ವಯಿಸುತ್ತಾ ತಿಳಿದುಕೊಳ್ಳಿ..!!! Read More »

ಕರಾವಳಿ

ಕಡಬದಲ್ಲಿ ನಸೀಬ್ ಬೋರ್ವೆಲ್ಸ್‌ ಮತ್ತು ಅರ್ಥ್ ಮೂವರ್ಸ್‌ ಶಾಖಾ ಕಚೇರಿ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ, ಅ.25. ಇಲ್ಲಿನ ಹೃದಯ ಭಾಗದಲ್ಲಿರುವ ರಾಯಲ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡ ನಸೀಬ್ ಬೋರ್ವೆಲ್ ಮತ್ತು ಅರ್ಥ್ ಮೂವರ್ಸ್‌ ಶಾಖಾ ಕಚೇರಿಯನ್ನು ಪುತ್ತೂರು ಬದ್ರಿಯಾ ಜುಮ್ಮಾ ಮಸೀದಿಯ ಮುದರ್ರಿಸ್ ಎಸ್.ಬಿ ಮೊಹಮ್ಮದ್ ದಾರಿಮಿಯವರು ಸೋಮವಾರ ಉದ್ಘಾಟಿಸಿದರು.  ಬಳಿಕ ಮಾತನಾಡಿದ ಅವರು, ಜನರೊಂದಿಗೆ ಪ್ರಾಮಾಣಿಕತೆಯಿಂದ ವರ್ತಿಸಿ ವ್ಯಾಪಾರದಲ್ಲಿ ಬಂದ ಲಾಭದಲ್ಲಿ 1 ಅಂಶ ಜನರ ಒಳಿತಿಗಾಗಿ ವಿನಿಯೋಗಿಸಿ ಸೇವೆಗೈಯುವುದೇ ಸಮಾಜ ಸೇವೆ ಎಂದರು. ಹಿಂದು ಸಂಪ್ರದಾಯದಲ್ಲಿ ಸರ್ವೇ ಜನೋ ಸುಖಿನೋ ಭವಂತು ಎಂದು ಸಾರಿದರೆ ಇಸ್ಲಾಂ ಧರ್ಮದಲ್ಲಿ ಸತ್ಯ

ಕಡಬದಲ್ಲಿ ನಸೀಬ್ ಬೋರ್ವೆಲ್ಸ್‌ ಮತ್ತು ಅರ್ಥ್ ಮೂವರ್ಸ್‌ ಶಾಖಾ ಕಚೇರಿ ಉದ್ಘಾಟನೆ Read More »

ಕರಾವಳಿ

ಮಂಗಳೂರು: ನವೆಂಬರ್ 14 ರಿಂದ 18 ರವರೆಗೆ “ಪ್ರೇರಣಾ”ವಿಜ್ಞಾನ ವಿಷಯದ ಶಿಬಿರ ► ಆಸಕ್ತ ವಿದ್ಯಾರ್ಥಿಗಳು ಸಂಪರ್ಕಿಸಿ..

(ನ್ಯೂಸ್ ಕಡಬ) newskadaba.com ಮ0ಗಳೂರು, ಅ.25.(ಕರ್ನಾಟಕ ವಾರ್ತೆ): ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ಸಂಶೋಧನೆಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ “ಪ್ರೇರಣಾ” ವಿಜ್ಞಾನ ವಿಷಯದಲ್ಲಿ ಶಿಬಿರ(ವಸತಿ ಸಹಿತ)ವನ್ನು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ  ಮೈಕ್ರೋಬಯಲಾಜಿ ವಿಭಾಗವು “ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ಹೊಸದಿಲ್ಲಿ” ಇದರ ಪ್ರಾಯೋಜಕತ್ವದಲ್ಲಿ ನವೆಂಬರ್ 14 ರಿಂದ 18 ರ ವರೆಗೆ “ಪಿಲಿಕುಳ ವಿಜ್ಞಾನ ಕೆಂದ್ರ” ಮಂಗಳೂರು ಇಲ್ಲಿ  ನಡೆಸಲಿದೆ. ಈ ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಯಾವುದೇ ನೋಂದಣಿ ಶುಲ್ಕ ಇರುವುದಿಲ್ಲ ಹಾಗೂ 200 ವಿದ್ಯಾರ್ಥಿಗಳಿಗೆ ಭಾಗವಹಿಸಲು

ಮಂಗಳೂರು: ನವೆಂಬರ್ 14 ರಿಂದ 18 ರವರೆಗೆ “ಪ್ರೇರಣಾ”ವಿಜ್ಞಾನ ವಿಷಯದ ಶಿಬಿರ ► ಆಸಕ್ತ ವಿದ್ಯಾರ್ಥಿಗಳು ಸಂಪರ್ಕಿಸಿ.. Read More »

ಕರಾವಳಿ

ಶೀಘ್ರದಲ್ಲಿ ಬರಲಿದೆ ವಾಟ್ಸಪ್‌ ಗುಂಪಿನ ಸದಸ್ಯರ ಜೊತೆ ವಿಡಿಯೋ ಕಾನ್ಫರೆನ್ಸ್ ಸೌಲಭ್ಯ..!!!

(ನ್ಯೂಸ್ ಕಡಬ) newskadaba.com ತಂತ್ರಜ್ಞಾನ, ಅ.25. ವಾಟ್ಸಪ್‌ ಬಳಕೆದಾರರು ಇನ್ನು ಮುಂದೆ ವೀಡಿಯೋ ಕಾಲ್ ಮಾತ್ರವಲ್ಲದೇ, ಗುಂಪಿನ ಸದಸ್ಯರ ಜೊತೆ ಕಾನ್ಫರೆನ್ಸ್ ಕರೆಗಳ ಮೂಲಕ ಕೂಡ ಮಾತನಾಡಬಹುದಾಗಿದೆ. ವಾಟ್ಸಪ್ ಬಳಕೆದಾರರು ತಮ್ಮ ಸ್ನೇಹಿತರು, ಕುಟುಂಬದ ಸದಸ್ಯರು ಮತ್ತು ಕಚೇರಿಯ ಸಹೋದ್ಯೋಗಿಗಳೊಂದಿಗೆ ಧ್ವನಿ ಮತ್ತು ವಿಡಿಯೋ ಕಾನ್ಫರೆನ್ಸ್ ಕರೆಗಳನ್ನು ಮಾಡುವ ಅವಕಾಶ ಶೀಘ್ರದಲ್ಲೇ ಲಭ್ಯವಾಗಲಿದೆ. ಮುಂದಿನ ಅಪ್‌ಡೇಟ್‌ನಲ್ಲಿ ವಾಟ್ಸಪ್ ಗಂಪು ಕರೆ ಮಾಡುವ ಸೌಲಭ್ಯವನ್ನು ನೀಡಲಿದೆ. 2.17.70 ಅಪ್‌ಡೇಟ್ ಮೂಲಕ ಈ ಸೌಲಭ್ಯ ಲಭ್ಯವಾಗಲಿದೆ. ಅಲ್ಲದೇ ಸಂದೇಶಗಳನ್ನು ಅನ್‌ಸೆಂಡ್ ಮತ್ತು ಡಿಲೀಟ್

ಶೀಘ್ರದಲ್ಲಿ ಬರಲಿದೆ ವಾಟ್ಸಪ್‌ ಗುಂಪಿನ ಸದಸ್ಯರ ಜೊತೆ ವಿಡಿಯೋ ಕಾನ್ಫರೆನ್ಸ್ ಸೌಲಭ್ಯ..!!! Read More »

ತಂತ್ರಜ್ಞಾನ, ಲೈಫ್‍ಸ್ಟೈಲ್
Scroll to Top