ಕಾಲು ಮುರಿತಕ್ಕೊಳಗಾಗಿ ನರಳಾಡುತ್ತಿದ್ದ ಮಂಡ್ಯದ ಮಹಿಳೆಗೆ ನೆರವು ► ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದ ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ
(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.01. ಕಾಲು ಮುರಿತಕ್ಕೊಳಗಾಗಿ ಚಿಕಿತ್ಸೆ ಪಡೆಯಲೆಂದು ಆಂಧ್ರಪ್ರದೇಶದ ಪುತ್ತೂರಿಗೆ ತೆರಳಬೇಕಿದ್ದ ಮಹಿಳೆಯೋರ್ವರು ವಿಳಾಸದ ಗೊಂದಲದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಆಗಮಿಸಿ ಇತ್ತ ವಿಳಾಸ ಸಿಗದೆ, ಅತ್ತ ಊರಿಗೂ ಹೋಗಲು ದುಡ್ಡಿಲ್ಲದೆ ಒದ್ದಾಡುತ್ತಿದ್ದ ಮಹಿಳೆಯೋರ್ವರಿಗೆ ಪುತ್ತೂರು ಶಾಸಕಿ ಸಹಾಯಹಸ್ತ ನೀಡಿದ ಘಟನೆ ಬುಧವಾರದಂದು ಸಂಜೆ ನಡೆದಿದೆ. ಮುರಿತಕ್ಕೊಳಗಾಗಿದ್ದ ಮಂಡ್ಯ ಮೂಲದ ಬಡ ಮಹಿಳೆ ಚಿಕಿತ್ಸೆಗೆಂದು ಪ್ರಸಿದ್ಧ ನಾಟಿ ಮದ್ದು ನೀಡಲಾಗುವ ಆಂಧ್ರಪ್ರದೇಶದ ಪುತ್ತೂರಿಗೆಂದು ಹೊರಟಿದ್ದರು. ಆದರೆ ವಿಳಾಸದ ಗೊಂದಲದಿಂದಾಗಿ ದಕ್ಷಿಣ ಕನ್ನಡದ […]










