ಫೆ.18 ರಂದು ಬಿಜೆಪಿಯ ಮಾಸ್ಟರ್ ಮೈಂಡ್ ಅಮಿತ್ ಷಾ ಸುಬ್ರಹ್ಮಣ್ಯಕ್ಕೆ…? ► ಕರಾವಳಿಯಲ್ಲಿ ಹೆಣೆಯುತ್ತಾರಾ ಕಾಂಗ್ರೆಸ್ ಮುಕ್ತ ಕರ್ನಾಟಕದ ರಣತಂತ್ರ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.08. ಗುಜರಾತ್‌ನಲ್ಲಿ ಆಡಳಿತದ ಚುಕ್ಕಾಣಿಯನ್ನು ಹಿಡಿದ ನಂತರ ಇದೀಗ ಕಾಂಗ್ರೆಸ್ ಮುಕ್ತ ಕರ್ನಾಟಕದ ಗುರಿಯನ್ನು ಹೊಂದಿರುವ ಬಿಜೆಪಿಯು ಇದೀಗ ಚುನಾವಣಾ ರಣತಂತ್ರವನ್ನು ಹೆಣೆದಿದ್ದು, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರವರು ಇದೀಗ ಬಿಜೆಪಿಯ ತವರಾದ ಕರಾವಳಿಗೆ ಆಗಮಿಸಲು ದಿನಾಂಕ ನಿಗದಿಯಾಗಿದೆ. ಫೆಬ್ರವರಿ 18 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಅವರು ದೇವಾಲಯದ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ. ಮರುದಿನ ಫೆಬ್ರವರಿ 19 ರಂದು […]

ಫೆ.18 ರಂದು ಬಿಜೆಪಿಯ ಮಾಸ್ಟರ್ ಮೈಂಡ್ ಅಮಿತ್ ಷಾ ಸುಬ್ರಹ್ಮಣ್ಯಕ್ಕೆ…? ► ಕರಾವಳಿಯಲ್ಲಿ ಹೆಣೆಯುತ್ತಾರಾ ಕಾಂಗ್ರೆಸ್ ಮುಕ್ತ ಕರ್ನಾಟಕದ ರಣತಂತ್ರ Read More »

ಕರಾವಳಿ

ಕೃಷ್ಣಮಠವನ್ನು ಸರಕಾರ ಸ್ವಾಧೀನಪಡಿಸಿದರೆ ನಾನು ನೌಕರನಾಗಿ ಮಠದಲ್ಲಿ ಇರಲಾರೆ ► ಪೇಜಾವರ ಶ್ರೀ ಆಕ್ರೋಶ

(ನ್ಯೂಸ್ ಕಡಬ) newskadaba.com ಉಡುಪಿ, ಫೆ.07. ಕೃಷ್ಣಮಠವನ್ನು ಸರಕಾರವು ಸ್ವಾಧೀನಪಡಿಸಿದರೆ ನಾನು ಸರಕಾರದ ನೌಕರನಾಗಿ ಮಠದಲ್ಲಿ ಇರಲಾರೆ. ನಾನು ಮಠದಿಂದ ಹೊರಬರುತ್ತೇನೆ ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವಾಲಯ ಮತ್ತು ಮಠಗಳ ಸ್ವಾಧೀನ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು ದೇವಾಲಯ ಮತ್ತು ಮಠಗಳ ಸ್ವಾಧೀನಕ್ಕೆ ಕೈ ಹಾಕುವ ಮೂಲಕ ಸರಕಾರವೇ ವಿಪಕ್ಷದ ಹೋರಾಟಕ್ಕೆ ಅಸ್ತ್ರ ಕೊಟ್ಟಂತಾಗಿದೆ. ಆದರೆ ನಾನು ಇದರ ವಿರುದ್ಧ ಹೋರಾಟ ಮಾಡುವುದಿಲ್ಲ. ಈ

ಕೃಷ್ಣಮಠವನ್ನು ಸರಕಾರ ಸ್ವಾಧೀನಪಡಿಸಿದರೆ ನಾನು ನೌಕರನಾಗಿ ಮಠದಲ್ಲಿ ಇರಲಾರೆ ► ಪೇಜಾವರ ಶ್ರೀ ಆಕ್ರೋಶ Read More »

ಕರ್ನಾಟಕ

ಬೆಳ್ಳಾರೆ: ಅಕ್ರಮ ಮರಳು ಅಡ್ಡೆಗೆ ದಾಳಿ ► ನಾಲ್ವರ ಬಂಧನ – 1 ಜೆಸಿಬಿ, 4 ಟಿಪ್ಪರ್ ವಶಕ್ಕೆ

ಸಾಂದರ್ಭಿಕ ಚಿತ್ರ (ನ್ಯೂಸ್ ಕಡಬ) newskadaba.com ಬೆಳ್ಳಾರೆ, ಫೆ.07. ಯಾವುದೇ ಪರವಾನಿಗೆ ಇಲ್ಲದೇ ಜೇಸಿಬಿ ಮೂಲಕ ಅಕ್ರಮವಾಗಿ ಮರಳನ್ನು ತೆಗೆಯುತ್ತಿದ್ದುದನ್ನು ಪತ್ತೆಹಚ್ಚಿರುವ ಬೆಳ್ಳಾರೆ ಪೊಲೀಸರು ಒಂದು ಜೇಸಿಬಿ, ನಾಲ್ಕು ಟಿಪ್ಪರ್ ಗಳನ್ನು ವಶಪಡಿಸಿಕೊಂಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಅಮರ ಮೂಡ್ನೂರು ಗ್ರಾಮದ ಚಿಲ್ಪಾರ್ ಬಳಿ ಯಾವುದೇ ಪರವಾನಿಗೆ ಪಡೆಯದೆ ಅಕ್ರಮವಾಗಿ ಜೆಸಿಬಿ ಬಳಸಿ ನದಿಯಿಂದ ಟಿಪ್ಪರ್ ಲಾರಿಗಳಿಗೆ ಮರಳು ತುಂಬಿಸುತ್ತಿರುವುದನ್ನು ಪತ್ತೆ ಹಚ್ಚಿ ಆರೋಪಿಗಳಾದ ಸೊಣಂಗೇರಿ ನಿವಾಸಿ ಬೆಳಿಯಪ್ಪ ಎಂಬವರ ಪುತ್ರ ಮಹೇಶ್ (30),

ಬೆಳ್ಳಾರೆ: ಅಕ್ರಮ ಮರಳು ಅಡ್ಡೆಗೆ ದಾಳಿ ► ನಾಲ್ವರ ಬಂಧನ – 1 ಜೆಸಿಬಿ, 4 ಟಿಪ್ಪರ್ ವಶಕ್ಕೆ Read More »

ಕರಾವಳಿ

ನಮೂನೆ 29, 30 ಭರ್ತಿ ಮಾಡದೆ ವಾಹನ ಮಾರಾಟ ಮಾಡುವವರಿಗೆ ಎಚ್ಚರಿಕೆ ► ವಾಹನ ಅಪಘಾತಕ್ಕೀಡಾದಲ್ಲಿ ಮಾರಾಟಗಾರರೇ ಜವಾಬ್ದಾರರು

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.07. ವಾಹನ ಮಾರಾಟಗಾರರು ನಮೂನೆ 29( ದ್ವಿಪ್ರತಿ), 30 ಭರ್ತಿ ಮಾಡದೇ ಹಾಗೂ ದಿನಾಂಕ ನಮೂದಿಸದೇ ಖಾಲಿ ನಮೂನೆಗಳಿಗೆ ಸಹಿ ಮಾಡಿ ಖರೀದಿದಾರರಿಗೆ ನೀಡುತ್ತಿರುವುದರಿಂದ ಇಂತಹ ವಾಹನಗಳು ಅಪಘಾತಕ್ಕೀಡಾದಲ್ಲಿ ಅಥವಾ ಕಾನೂನು ಬಾಹಿರ ಚಟುವಟಿಕೆಗಳಿಗೆ ಉಪಯೋಗಿಸಿದ್ದಲ್ಲಿ ವಾಹನ ಮಾರಾಟಗಾರರೇ ಜವಾಬ್ದಾರರಾಗುತ್ತಾರೆ ಎಂದು ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಎಚ್ಚರಿಸಿದ್ದಾರೆ. ವಾಹನ ಮಾರಾಟ ಮಾಡಿದ ದಿನಾಂಕದಿಂದ ಮಾರಾಟಗಾರರು 14 ದಿನಗಳೊಳಗಡೆ ಆರ್.ಟಿ.ಒ ಕಛೇರಿಗೆ ಮಾಹಿತಿ ನೀಡಿ ಸ್ವೀಕೃತಿ

ನಮೂನೆ 29, 30 ಭರ್ತಿ ಮಾಡದೆ ವಾಹನ ಮಾರಾಟ ಮಾಡುವವರಿಗೆ ಎಚ್ಚರಿಕೆ ► ವಾಹನ ಅಪಘಾತಕ್ಕೀಡಾದಲ್ಲಿ ಮಾರಾಟಗಾರರೇ ಜವಾಬ್ದಾರರು Read More »

ಕರಾವಳಿ

ಚಿಪ್ಸ್ ಪ್ಯಾಕೆಟ್ ನಲ್ಲಿನ ಗೊಂಬೆಯನ್ನು ತಿಂದ ಮಗು ಉಸಿರುಗಟ್ಟಿ ಮೃತ್ಯು ► ಎಚ್ಚರ… ತಮ್ಮ ಮುದ್ದು ಕಂದಮ್ಮಗಳನ್ನು ಕೈಯಾರೆ ಬಲಿ ಕೊಡಬೇಡಿ

(ನ್ಯೂಸ್ ಕಡಬ) newskadaba.com ಆಂಧ್ರಪ್ರದೇಶ, ಫೆ.07. ತಾಯಿ ತನ್ನ ಮುದ್ದಾದ ಮಗುವಿಗೆ ತಿನ್ನಲೆಂದು ಖರೀದಿಸಿದ ಚಿಪ್ಸ್ ಪ್ಯಾಕೆಟ್ ನಿಂದಾಗಿ ಮಗು ಜೀವ ಕಳೆದುಕೊಂಡ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. 4 ವರ್ಷದ ಬಾಲಕ ತನ್ನ ತಾಯಿಯ ಜೊತೆ ಶಾಪಿಂಗ್ ಹೋಗಿದ್ದ ಸಂದರ್ಭ ಚಿಪ್ಸ್ ಬೇಕೆಂದು ಮಗನ ಹಠಕ್ಕೆ ಜೋತುಬಿದ್ದು ತಾಯಿ ಒಂದು ಚಿಪ್ಸ್ ಪ್ಯಾಕೆಟ್ ತೆಗೆದುಕೊಟ್ಟಿದ್ದಾಳೆ. ಮನೆಗೆ ಬಂಡ ಹುಡುಗ ತಾಯಿ ತೆಗೆಸಿಕೊಟ್ಟ ಚಿಪ್ಸ್ ಪ್ಯಾಕೆಟ್ ಓಪನ್ ಮಾಡಿ ಚಿಪ್ಸ್ ಜೊತೆ ಪ್ಯಾಕೆಟ್ ಒಳಗೆ ಇದ್ದ ರಬ್ಬರ್ ಗೊಂಬೆಯನ್ನ

ಚಿಪ್ಸ್ ಪ್ಯಾಕೆಟ್ ನಲ್ಲಿನ ಗೊಂಬೆಯನ್ನು ತಿಂದ ಮಗು ಉಸಿರುಗಟ್ಟಿ ಮೃತ್ಯು ► ಎಚ್ಚರ… ತಮ್ಮ ಮುದ್ದು ಕಂದಮ್ಮಗಳನ್ನು ಕೈಯಾರೆ ಬಲಿ ಕೊಡಬೇಡಿ Read More »

ರಾಷ್ಟ್ರೀಯ ನ್ಯೂಸ್

ಚರಿತ್ರೆ ಪ್ರಸಿದ್ಧ ಬೆಳ್ಳಾರೆ ಮಖಾಂ ಉರೂಸಿಗೆ ವಿದ್ಯುಕ್ತ ಚಾಲನೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಫೆ.07. ಇಲ್ಲಿನ ಝಕರಿಯಾ ಜುಮಾ ಮಸೀದಿಯಲ್ಲಿ ಫೆಬ್ರವರಿ 7 ರಿಂದ 11 ರವರೆಗೆ ನಡೆಯಲಿರುವ ಚರಿತ್ರೆ ಪ್ರಸಿದ್ದ ಬೆಳ್ಳಾರೆ ವಲಿಯುಲ್ಲಾಹಿ ಮಖಾಂ ಉರೂಸ್ ಗೆ ಝಕರಿಯಾ ಜುಮಾ ಮಸೀದಿ ಬೆಳ್ಳಾರೆ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಉರೂಸ್ ಸಮಿತಿಯ ಅಧ್ಯಕ್ಷರಾದ ಕೆ.ಎಂ. ಮಹಮ್ಮದ್ ಹಾಜಿ ಬೆಳ್ಳಾರೆ ಯವರು ಧ್ವಜಾರೋಹಣ ನೆರವೇರಿಸುವ ಮೂಲಕ ಬುಧವಾರದಂದು ವಿದ್ಯುಕ್ತವಾಗಿ ಚಾಲನೆಯನ್ನು ನೀಡಿದರು. ಬೆಳ್ಳಾರೆ ದರ್ಗಾ ಶರೀಫಿನಲ್ಲಿ ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಖತೀಬರಾದ ತಾಜುದ್ದೀನ್ ರಹ್ಮಾನಿಯವರ

ಚರಿತ್ರೆ ಪ್ರಸಿದ್ಧ ಬೆಳ್ಳಾರೆ ಮಖಾಂ ಉರೂಸಿಗೆ ವಿದ್ಯುಕ್ತ ಚಾಲನೆ Read More »

ಕರಾವಳಿ

ಅನಾರೋಗ್ಯ ಪೀಡಿತ ಯುವತಿಗೆ ಬೇಕಾಗಿದೆ ದಾನಿಗಳ ನೆರವಿನ ಹಸ್ತ ► ದ್ವಿತೀಯ ಪಿಯುಸಿ ಓದಿದ್ದರೂ ಕಿಡ್ನಿ ವೈಫಲ್ಯದಿಂದ ಕಮರಿದೆ ಭವಿಷ್ಯದ ಕನಸುಗಳು

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಫೆ.07. ತಾಯಿಯ ಪ್ರೇಮ ಕಾಣದೆ, ತಂದೆಯ ಆಸರೆಯಿಲ್ಲದೆ ನೊಂದಿದ್ದರೂ ತಾನೂ ಎಲ್ಲರಂತೆ ದುಡಿದು ತನ್ನ ಬದುಕನ್ನು ಕಟ್ಟಿಕೊಳ್ಳಬೇಕೆಂದು ಹಂಬಲಿಸುತ್ತಿದ್ದ ಯುವತಿಯೋರ್ವಳು ಇದೀಗ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಕೂಲಿ ಮಾಡಿಕೊಂಡು ಬದುಕುವ ಅತ್ತೆಯ ಆಶ್ರಯದಲ್ಲಿ ಬೆಳೆದಿರುವ ಆಕೆಗೆ ಸಹೃದಯರ ನೆರವಿನ ಹಸ್ತ ಬೇಕಾಗಿದೆ. ಮಂಗಳೂರು ತಾಲೂಕು ದರೆಗುಡ್ಡೆ ಕೆಲ್ಲಪುತ್ತಿಗೆಯ ಮೇಲಿನ ಮನೆಯ ಡೊಂಬಯ್ಯ ಪೂಜಾರಿ ಎಂಬವರ ಪುತ್ರಿ ಪೂಜಾ ಪೂಜಾರಿ(23) ಎಂಬಾಕೆ ಕಿಡ್ನಿ ವೈಫಲ್ಯಕ್ಕೀಡಾಗಿರುವ ಯುವತಿ. ಈಕೆ 2 ವರ್ಷದ ಮಗುವಿರುವಾಗಲೇ ತಾಯಿಯನ್ನು

ಅನಾರೋಗ್ಯ ಪೀಡಿತ ಯುವತಿಗೆ ಬೇಕಾಗಿದೆ ದಾನಿಗಳ ನೆರವಿನ ಹಸ್ತ ► ದ್ವಿತೀಯ ಪಿಯುಸಿ ಓದಿದ್ದರೂ ಕಿಡ್ನಿ ವೈಫಲ್ಯದಿಂದ ಕಮರಿದೆ ಭವಿಷ್ಯದ ಕನಸುಗಳು Read More »

ಕರಾವಳಿ

ದ.ಕ. ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಬೆಳ್ಳಿಪ್ಪಾಡಿ ಸಂಕಪ್ಪ ರೈ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.07. ಕಾಂಗ್ರೆಸ್ ನ ಹಿರಿಯ ಮುಖಂಡ ದಕ್ಷಿಣ ಕನ್ನಡ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷರಾದ ಬೆಳ್ಳಿಪ್ಪಾಡಿ ಸಂಕಪ್ಪ ರೈ(85) ಬುಧವಾರದಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಕೆಲ ಸಮಯಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರದಂದು ಅವರು ಆಸ್ಪತ್ರೆಯಲ್ಲಿ ಮೃತರಾದರು. ಮೂಲತಃ ಬೆಳ್ಳಿಪ್ಪಾಡಿಯವರಾದ ಸಂಕಪ್ಪ ರೈಯವರ ಮೃತದೇಹವನ್ನು ಬುಧವಾರ ಅಪರಾಹ್ನ ಅವರ ಪುತ್ತೂರಿನ ಕೊಂಬೆಟ್ಟು ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಿ ಬಳಿಕ ಮಾಣಿ

ದ.ಕ. ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಬೆಳ್ಳಿಪ್ಪಾಡಿ ಸಂಕಪ್ಪ ರೈ ಇನ್ನಿಲ್ಲ Read More »

ಕರಾವಳಿ

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಅಂತರ್ಜಾತಿ ಪ್ರೇಮವಿವಾಹ ಪ್ರಕರಣದ ಪ್ರೇಮಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕುಂದಾಪುರ, ಫೆ.07. ಸುಮಾರು ಎರಡು ದಶಕಗಳ ಹಿಂದೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಅಂತರ್ಜಾತಿ ಪ್ರೇಮ ಪ್ರಕರಣದ ಪ್ರೇಮಿ ತನ್ನ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಾತನನ್ನು ಸುಮಾರು 26 ವರ್ಷಗಳ ಹಿಂದೆ ರಾಜ್ಯಾದ್ಯಂತ ಸುದ್ದಿಯಾಗಿ ಅಂತರ್ಜಾತಿ ಪ್ರೇಮ ವಿವಾಹವಾಗಿದ್ದ ಕುಂದಾಪುರ ತಾಲೂಕಿನ ಅಂಪಾರು ಮೂಡುಬಗೆ ನಿವಾಸಿ ಭಾಸ್ಕರ್ ಕೊಠಾರಿ(47) ಎಂದು ಗುರುತಿಸಲಾಗಿದೆ. 1992 ರಲ್ಲಿ ಮುಸ್ಲಿಂ ಯುವತಿಯಾದ (ಆಶಾ) ಮುನಾವರ್ ಳನ್ನು ಪ್ರೀತಿಸಿ ಮದುವೆಗೆ ಅಣಿಯಾಗುತ್ತಿದ್ದಂತೆಯೇ

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಅಂತರ್ಜಾತಿ ಪ್ರೇಮವಿವಾಹ ಪ್ರಕರಣದ ಪ್ರೇಮಿ ಆತ್ಮಹತ್ಯೆ Read More »

ಕರಾವಳಿ

ಮಿತ್ತೂರು: ರೈಲ್ವೇ ಸೇಫ್ ಗಾರ್ಡ್‌ ಗೆ ಢಿಕ್ಕಿ ಹೊಡೆದು ರಸ್ತೆಗಡ್ಡ ನಿಂತಿದ್ದ ಲಾರಿ ತೆರವು ► ಸುಗಮವಾಯ್ತು ಪುತ್ತೂರು – ಮಾಣಿ ವಾಹನ ಸಂಚಾರ

(ನ್ಯೂಸ್ ಕಡಬ) newskadaba.com ವಿಟ್ಲ, ಫೆ.07. ಬುಧವಾರದಂದು ಬೆಳಿಗ್ಗೆ ಕಾರುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಕಂಟೈನರ್ ಲಾರಿಯೊಂದು ರೈಲ್ವೇ ಬ್ರಿಡ್ಜ್ ನ ಸೇಫ್ ಗಾರ್ಡ್ ಗೆ ಢಿಕ್ಕಿ ಹೊಡೆದು ಸಿಲುಕಿಕೊಂಡ ಪರಿಣಾಮ ಮಾಣಿ-ಪುತ್ತೂರು ರಾಜ್ಯ ರಸ್ತೆ ತಡೆ ಉಂಟಾಗಿದ್ದ ಹಿನ್ನೆಲೆಯಲ್ಲಿ ಲಾರಿಯನ್ನು ತೆರವುಗೊಳಿಸಲಾಯಿತು. ಮೈಸೂರಿನಿಂದ ಪುತ್ತೂರು ಮಾರ್ಗವಾಗಿ ಮಾಣಿ ಮೂಲಕ ಮಂಗಳೂರಿಗೆ ತೆರಳುತ್ತಿದ್ದ ಕಂಟೈನರ್ ಲಾರಿಯ ಎತ್ತರ ಹೆಚ್ಚಾಗಿದ್ದುದರಿಂದ ಹಿಂದಕ್ಕೂ ಮುಂದಕ್ಕೂ ಹೋಗಲಾಗದೆ ಈ ಅಪಘಾತ ಸಂಭವಿಸಿದೆ. ಘಟನೆಯಿಂದಾಗಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು

ಮಿತ್ತೂರು: ರೈಲ್ವೇ ಸೇಫ್ ಗಾರ್ಡ್‌ ಗೆ ಢಿಕ್ಕಿ ಹೊಡೆದು ರಸ್ತೆಗಡ್ಡ ನಿಂತಿದ್ದ ಲಾರಿ ತೆರವು ► ಸುಗಮವಾಯ್ತು ಪುತ್ತೂರು – ಮಾಣಿ ವಾಹನ ಸಂಚಾರ Read More »

ಕರಾವಳಿ
Scroll to Top