ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನಿಂದ ಸ್ಪರ್ಧಿಸುವ ಹಿನ್ನೆಲೆ ► ಪೇಜಾವರ ಸ್ವಾಮಿಯನ್ನು ಭೇಟಿಯಾಗಿ ಆಶಿರ್ವಾದ ಪಡೆದ ಸಂಜೀವ ಮಠಂದೂರು

(ನ್ಯೂಸ್ ಕಡಬ) newskadaba.com ಪುತ್ತೂರು, ಎ.20. ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಸಂಜೀವ ಮಠಂದೂರುರವರು ಗುರುವಾರದಂದು ಪೇಜಾವರ ಸ್ವಾಮಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಗುರುವಾರದಂದು ಉಡುಪಿಯ ಪೇಜಾವರ ಮಠಕ್ಕೆ ತೆರಳಿ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರನ್ನು ಮಠದಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಮೊದಲಾದವರು ಉಪಸ್ಥಿತರಿದ್ದರು.

ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನಿಂದ ಸ್ಪರ್ಧಿಸುವ ಹಿನ್ನೆಲೆ ► ಪೇಜಾವರ ಸ್ವಾಮಿಯನ್ನು ಭೇಟಿಯಾಗಿ ಆಶಿರ್ವಾದ ಪಡೆದ ಸಂಜೀವ ಮಠಂದೂರು Read More »

ಕರಾವಳಿ

 ಅಗ್ನಿಶಾಮಕ ಸೇವಾ ಸಪ್ತಾಹ ದಿನಾಚರಣೆ

(ನ್ಯೂಸ್ ಕಡಬ) newskadaba.com  ಕರ್ನಾಟಕ, ಎ.20. ಕರ್ನಾಟಕ ರಾಜ್ಯ ಅಗ್ನಿಶಾಮಕ ಸೇವಾ ಇಲಾಖೆಯು ಏಪ್ರಿಲ್ 20 ರವರೆಗೆ ಅಗ್ನಿಶಾಮಕ ಸೇವಾ ಸಪ್ತಾಹವನ್ನು ಆಚರಿಸುತ್ತಿದೆ. ಈ ಅವಧಿಯಲ್ಲಿ ಅಗ್ನಿನಿವಾರಣೆ ಮತ್ತು ಅಗ್ನಿಶಮನದ ಬಗ್ಗೆ ತಿಳುವಳಿಕೆ ಹಾಗೂ ಅಣುಕು ಪ್ರದರ್ಶನಗಳನ್ನು ವಿವಿಧ ಸಂಘ ಸಂಸ್ಥೆಗಳು, ಕೈಗಾರಿಕಾ ಕೇಂದ್ರಗಳು, ವಿದ್ಯಾಸಂಸ್ಥೆಗಳು, ವಾಣಿಜ್ಯ ಮಳಿಗೆಗಳು, ಆಸ್ಪತ್ರೆ ಇತ್ಯಾದಿ ಕಡೆಗಳಲ್ಲಿ ನಡೆಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

 ಅಗ್ನಿಶಾಮಕ ಸೇವಾ ಸಪ್ತಾಹ ದಿನಾಚರಣೆ Read More »

ಕರ್ನಾಟಕ

ಸಿಇಟಿ ಪರೀಕ್ಷೆ: ಎರಡನೇ ದಿನದ ಹಾಜರಾತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.20.  ಸಿಇಟಿ ಪರೀಕ್ಷೆಯು ಆರಂಭಗೊಂಡಿದ್ದು, ಏಪ್ರಿಲ್ 19 ರಂದು  ಬೆಳಿಗ್ಗೆ ನಡೆದ ಭೌತಶಾಸ್ತ್ರ ವಿಷಯ ಪರೀಕ್ಷೆಗೆ 14131 ವಿದ್ಯಾರ್ಥಿಗಳು ಹಾಜರಾಗಿದ್ದು, 288 ಮಂದಿ ಗೈರು ಹಾಜರಾಗಿದ್ದಾರೆ. ಮಧ್ಯಾಹ್ನ ನಡೆದ ರಸಾಯನಶಾಸ್ತ್ರ ಪರೀಕ್ಷೆಗೆ 14129 ಮಂದಿ ಹಾಜರಾಗಿದ್ದು, 290 ಮಂದಿ ಗೈರು ಹಾಜರಾಗಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.

ಸಿಇಟಿ ಪರೀಕ್ಷೆ: ಎರಡನೇ ದಿನದ ಹಾಜರಾತಿ Read More »

ಕರಾವಳಿ

ಎ.20(ಇಂದು): ಮಂಗಳೂರಿಗೆ ನೀರು ಸ್ಥಗಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.20. ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯಲ್ಲಿ ಬರುವ 80 ಎಂ.ಎಲ್.ಡಿ ಎಲ್.ಎಲ್.ಪಿ.ಎಸ್.-2 ಹಾಗೂ ನೀರು ಪೂರೈಕೆಯ  ಮೂಲವಾದ ತುಂಬೆಯ ಕೆಳಗಿನ ರೇಚಕ ಸ್ಥಾವರಗಳಿಗೆ ಸಂಬಂಧಿಸಿದ ಜಾಕ್ ವೆಲ್‍ನಲ್ಲಿ ನೇತ್ರಾವತಿ ನದಿಯ ನೀರಿನಲ್ಲಿ ಹರಿದು ಬರುವ ತ್ಯಾಜ್ಯ ವಸ್ತುಗಳು, ಕಸಕಡ್ಡಿಗಳು, ಮಡ್ಡಿ ಮರಳು ಇತ್ಯಾದಿಗಳು ಶೇಖರಣೆಗೊಂಡಿದ್ದು, ನೀರೆತ್ತುವ ಪಂಪ್ ಚಾಲನೆಯಲ್ಲಿ ಅಡೆತಡೆ ಉಂಟಾಗುತ್ತಿರುವುದನ್ನು ಸರಿಪಡಿಸಲು, ಜಾಕ್‍ವೆಲ್‍ಗಳಲ್ಲಿ ಶೇಖರಣೆಗೊಂಡಿರುವ ತ್ಯಾಜ್ಯ ವಸ್ತುಗಳು, ಮಡ್ಡಿಯನ್ನು ಶುಚಿಗೊಳಿಸುವ ಕಾರ್ಯವನ್ನು ಹಾಗೂ ಹೆಚ್.ಎಲ್.ಪಿ.ಎಸ್. -2 ರಲ್ಲಿ ನಾನ್ ರಿರ್ಟ್‍ನ್ ವಾಲ್ವ್

ಎ.20(ಇಂದು): ಮಂಗಳೂರಿಗೆ ನೀರು ಸ್ಥಗಿತ Read More »

ಕರಾವಳಿ

ಹೊಸ ಸಾಲ ಮಂಜೂರಾತಿ ಇಲ್ಲ: ಸಹಕಾರ ಸಂಘಗಳಿಗೆ ಸೂಚನೆ  

(ನ್ಯೂಸ್ ಕಡಬ) newskadaba.com ಕರ್ನಾಟಕ, ಎ.20. ಸಾರ್ವತ್ರಿಕ ವಿಧಾನ ಸಭಾ  ಚುನಾವಣೆ 2018ರ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಡಿಸಿಸಿ ಬ್ಯಾಂಕುಗಳು ನೀತಿ ಸಂಹಿತೆ ಜಾರಿಯಲ್ಲಿ ಇರುವ ದಿನಾಂಕದವರೆಗೆ ಯಾವುದೇ ಹೊಸ ರೈತರಿಗೆ ಕೃಷಿ ಉದ್ದೇಶಕ್ಕಾಗಿ ರಿಯಾಯಿತಿ ಬಡ್ಡಿ ದರದಲ್ಲಿ ಹೊಸ ಸಾಲವನ್ನು ಮಂಜೂರು ಅಥವಾ ವಿತರಣೆ ಮಾಡುವಂತಿಲ್ಲ. ಆದರೆ ಈಗಾಗಲೇ ಹಿಂದಿನ ವರ್ಷದಲ್ಲಿ ನೀಡಿದ ಸಾಲವನ್ನು ರೈತರು ಮರುಪಾವತಿಸಿದಲ್ಲಿ ನವೀಕರಣ ಮಾಡಬಹುದಾಗಿದೆ. ಸ್ವಸಹಾಯ ಗುಂಪುಗಳಿಗೆ ನೀಡುವ ಸಾಲವನ್ನು ನೀತಿ ಸಂಹಿತೆ ಜಾರಿಯಲ್ಲಿರುವ

ಹೊಸ ಸಾಲ ಮಂಜೂರಾತಿ ಇಲ್ಲ: ಸಹಕಾರ ಸಂಘಗಳಿಗೆ ಸೂಚನೆ   Read More »

ಕರ್ನಾಟಕ

ಆಟೋರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಶುಭ ಸುದ್ದಿ ನೀಡಿದ ಕೇಂದ್ರ ಸರಕಾರ

ಸಾಂದರ್ಭಿಕ ಚಿತ್ರ (ನ್ಯೂಸ್ ಕಡಬ) newskadaba.com ನವದೆಹಲಿ, ಎ.20. ಟ್ಯಾಕ್ಸಿ, ತ್ರಿಚಕ್ರ ವಾಹನಗಳು, ಇ- ರಿಕ್ಷಾಗಳನ್ನು ಚಲಾಯಿಸಲು ಇನ್ನು ಮುಂದೆ ಟೂರಿಸ್ಟ್ ಬ್ಯಾಡ್ಜ್ ಅಗತ್ಯವಿರುವಿಲ್ಲ ಎಂದು ರಸ್ತೆ ಮತ್ತು ಸಾರಿಗೆ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಹೆಚ್ಚಿನ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದಕ್ಕಾಗಿ ಲಘು ವಾಹನಗಳಾದ ಕಾರು, ರಿಕ್ಷಾ ಚಾಲಕರಿಗೆ ತಮ್ಮ ವೈಯಕ್ತಿಕ ಚಾಲನಾ ಪರವಾನಗಿಯನ್ನೇ ಉಪಯೋಗಿಸಲು ಸರಕಾರ ಅನುಮತಿ ನೀಡಿದ್ದು, ಸುಪ್ರೀಂ ಕೋರ್ಟ್ ಆದೇಶದಂತೆ ಹೊಸ ನಿಯಮವನ್ನು ಪಾಲಿಸುವಂತೆ ರಾಜ್ಯ ಸರಕಾರಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.

ಆಟೋರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಶುಭ ಸುದ್ದಿ ನೀಡಿದ ಕೇಂದ್ರ ಸರಕಾರ Read More »

ರಾಷ್ಟ್ರೀಯ ನ್ಯೂಸ್

ಬಿ.ಸಿ.ರೋಡ್: ಬ್ಯಾಂಕ್‌ಗೆ ದಾಳಿ ನಡೆಸಿದ ಚುನಾವಣಾ ಆಯೋಗದ ಅಧಿಕಾರಿಗಳು ► ಲಕ್ಷಾಂತರ ಮೌಲ್ಯದ ಸೀರೆಗಳು ವಶಕ್ಕೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ.19. ಇಲ್ಲಿನ ಬ್ಯಾಂಕೊಂದರಲ್ಲಿ ಅಕ್ರಮವಾಗಿ ಸೀರೆಗಳನ್ನು ದಾಸ್ತಾನು ಮಾಡಲಾಗಿದೆ ಎಂಬ ಬಗ್ಗೆ ಖಚಿತ ಮಾಹಿತಿ ಮೇರೆಗೆ ಚುನಾವಣಾ ಅಧಿಕಾರಿಗಳು ಈ ದಾಳಿ ನಡೆಸಿ, ಬ್ಯಾಂಕಿನ ಕೋಣೆಯೊಂದರಲ್ಲಿ ಏಳು ಚೀಲಗಳಲ್ಲಿ ತುಂಬಿಸಿಟ್ಟಿದ್ದ ಸುಮಾರು 1,222 ಸೀರೆಗಳನ್ನು ವಶಪಡಿಸಿಕೊಂಡ ಘಟನೆ ಗುರುವಾರದಂದು ನಡೆದಿದೆ. ನವೋದಯ ಸ್ವಸಹಾಯ ಗುಂಪಿನ ಸದಸ್ಯರಿಗೆ ವಿತರಣೆಗಾಗಿ ತಂದಿಟ್ಟಿದ್ದ ಸುಮಾರು 2 ಲಕ್ಷ ರೂ. ಮೌಲ್ಯದ ಸೀರೆಗಳನ್ನು ಬಿ.ಸಿ.ರೋಡ್ ಶಾಖೆಗೆ ತಂದ ದಿನವೇ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ವಿತರಿಸದೆ ದಾಸ್ತಾನು ಮಾಡಲಾಗಿತ್ತು

ಬಿ.ಸಿ.ರೋಡ್: ಬ್ಯಾಂಕ್‌ಗೆ ದಾಳಿ ನಡೆಸಿದ ಚುನಾವಣಾ ಆಯೋಗದ ಅಧಿಕಾರಿಗಳು ► ಲಕ್ಷಾಂತರ ಮೌಲ್ಯದ ಸೀರೆಗಳು ವಶಕ್ಕೆ Read More »

ಕರಾವಳಿ

ಮಂಗಳೂರು: ಗ್ಯಾಸ್ ಸಿಲಿಂಡರ್ ಸ್ಫೋಟ ► ಇಬ್ಬರು ಗಂಭೀರ

ಸಾಂದರ್ಭಿಕ ಚಿತ್ರ (ನ್ಯೂಸ್ ಕಡಬ) newskadaba.com ಮಂಗಳೂರು, ಎ.20. ವೆಲ್ಡಿಂಗ್ ಸೆಂಟರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ‌ಗ್ಯಾಸ್ ಸಿಲಿಂಡರೊಂದು ಸ್ಪೋಟಗೊಂಡ ಪರಿಣಾಮ ಇಬ್ಬರು ಕಾರ್ಮಿಕರು ಗಂಭೀರ ಗಾಯಗೊಂಡ ಘಟನೆ ನಗರದ ಹೊರವಲಯದ ತೊಕ್ಕೊಟ್ಟು ಎಂಬಲ್ಲಿ ಗುರುವಾರ ಸಂಜೆ ನಡೆದಿದೆ. ಗಂಭೀರ ಗಾಯಗೊಂಡ ಕಾರ್ಮಿಕರನ್ನು ಸ್ಥಳೀಯ ನಿವಾಸಿಗಳಾದ ನವೀನ್ ಆಚಾರಿ(30) ಹಾಗೂ ಲತೀಶ್ (55) ಎಂದು ಗುರುತಿಸಲಾಗಿದೆ. ಸಹ ಕಾರ್ಮಿಕ ಅರ್ಫಾಣ್ (22) ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ‌. ಇವರು ಗುರುವಾರ ಸಂಜೆ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ

ಮಂಗಳೂರು: ಗ್ಯಾಸ್ ಸಿಲಿಂಡರ್ ಸ್ಫೋಟ ► ಇಬ್ಬರು ಗಂಭೀರ Read More »

ಕರಾವಳಿ

ಕಡೂರು: ಕೆಎಸ್ಸಾರ್ಟಿಸಿ ಬಸ್ – ಟೂರಿಸ್ಟ್ ಕಾರು ನಡುವೆ ಮುಖಾಮುಖಿ ಢಿಕ್ಕಿ ► ನಾಲ್ವರು ಮೃತ್ಯು, ಮೂವರು ಗಂಭೀರ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಎ.19. ಟೂರಿಸ್ಟ್ ಕಾರು ಹಾಗೂ ಕೆಎಸ್ಸಾರ್ಟಿಸಿ ಬಸ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ನಾಲ್ವರು ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ಕಡೂರು – ಚಿಕ್ಕಮಗಳೂರು ಹೆದ್ದಾರಿಯ ಹಿರೇಗೌಜ ಗ್ರಾಮದಲ್ಲಿ ಗುರುವಾರದಂದು ನಡೆದಿದೆ. ಮೃತರನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ದಾಸಪ್ಪ, ದೀಪಾ, ಶ್ರೇಯಾ ಹಾಗೂ ಕಾರು ಚಾಲಕ ಲಿಂಗೇಶ್ ಎಂದು ಗುರುತಿಸಲಾಗಿದೆ. ಭದ್ರಾವತಿ ಮೂಲದ ಒಂದೇ ಕುಟುಂಬದವರು ಶಿವಮೊಗ್ಗದಿಂದ ಬಾಡಿಗೆಯ ಕಾರಿನಲ್ಲಿ ಚಿಕ್ಕಮಗಳೂರಿಗೆ ಪ್ರವಾಸಕ್ಕೆಂದು ಬಂದಿದ್ದು, ಹಿಂತಿರುಗುತ್ತಿದ್ದಾಗ ಹಿರೇಗೌಜ ಗ್ರಾಮದ

ಕಡೂರು: ಕೆಎಸ್ಸಾರ್ಟಿಸಿ ಬಸ್ – ಟೂರಿಸ್ಟ್ ಕಾರು ನಡುವೆ ಮುಖಾಮುಖಿ ಢಿಕ್ಕಿ ► ನಾಲ್ವರು ಮೃತ್ಯು, ಮೂವರು ಗಂಭೀರ Read More »

ಕರ್ನಾಟಕ

ಕಡಬ: ಭಾರೀ ಗಾಳಿ ಮಳೆಗೆ ರಸ್ತೆಗೆ ಬಂದು‌ ಬಿದ್ದ ಸಿಮೆಂಟ್ ಶೀಟುಗಳು ► ರಸ್ತೆಗಡ್ಡವಾಗಿ ಬಿದ್ದ ತೆಂಗು, ಅಪಾರ ನಷ್ಟ

(ನ್ಯೂಸ್ ಕಡಬ) newskadaba.com ಕಡಬ, ಎ.19. ಗುರುವಾರ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಅಂಗಡಿ ಕಟ್ಟಡದ ಸಿಮೆಂಟ್ ಶೀಟ್, ಹೆಂಚುಗಳು ಸೇರಿದಂತೆ ಅಪಾರ ನಷ್ಟವಾದ ಘಟನೆ ಮರ್ಧಾಳದಲ್ಲಿ‌ ನಡೆದಿದೆ. ಮರ್ಧಾಳ ಪೇಟೆಯ ಜೈನ ಬಸದಿ ಸಮೀಪದ ತೆಂಗಿನ ಮರ ರಸ್ತೆಗೆ ಬಿದ್ದು, ಕೆಲಕಾಲ ರಸ್ತೆ ತಡೆಯುಂಟಾಗಿತ್ತು. ಆ ಸಮಯದಲ್ಲಿ ಅದೇ ರಸ್ತೆಯ ಮೂಲಕ ತೆರಳುತ್ತಿದ್ದ ಜೀಪೊಂದು ಕೂದಳೆಲೆಯ ಅಂತರದಲ್ಲಿ ಪಾರಾಗಿದೆಯೆನ್ನಲಾಗಿದೆ. ಗಣೇಶ್ ಬೇಕರಿ‌ ಮತ್ತು ಸಾಯಿ ಮೆಡಿಕಲ್ ಕಟ್ಟಡದ ಮೇಲ್ಛಾವಣಿಯ 20 ಕ್ಕೂ ಅಧಿಕ ಸಿಮೆಂಟ್

ಕಡಬ: ಭಾರೀ ಗಾಳಿ ಮಳೆಗೆ ರಸ್ತೆಗೆ ಬಂದು‌ ಬಿದ್ದ ಸಿಮೆಂಟ್ ಶೀಟುಗಳು ► ರಸ್ತೆಗಡ್ಡವಾಗಿ ಬಿದ್ದ ತೆಂಗು, ಅಪಾರ ನಷ್ಟ Read More »

ಕರಾವಳಿ
Scroll to Top