ಶುಚಿಗೊಳಿಸುವ ನಾಟಕವಾಡಿ ಚಿನ್ನದ ಸರ ಕರಗಿಸಿ ವಂಚನೆ

(ನ್ಯೂಸ್‌ ಕಡಬ) newskadaba.com,  ಫೆ.12  ಬೆಳ್ತಂಗಡಿ: ಕಾಶಿಪಟ್ಣ ಗ್ರಾಮದ ಪಣಿಲಾಜೆಯಲ್ಲಿ ವೃದ್ಧೆಯೊಬ್ಬರು ಮನೆಯಲ್ಲಿದ್ದ ಸಮಯದಲ್ಲಿ ಚಿನ್ನವನ್ನು ತೊಳೆದು ಕೊಡುವುದಾಗಿ ಅವರ 2 ಮುಕ್ಕಾಲು ಪವನ್ ಚಿನ್ನದ ಸರವನ್ನು ರಾಸಾಯನಿಕದ ಮೂಲಕ ಕರಗಿಸಿ ಚಿನ್ನವನ್ನು ವಂಚಿಸಿದ ಘಟನೆ ಸಂಭವಿಸಿದೆ.   ಘಟನೆಯ ಕುರಿತು ಪಣಿಲಾಜೆ ನಿವಾಸಿ 90ರ ಹರೆಯದ ರುಕ್ಮಿಣಿ ಶೆಟ್ಟಿಗಾರ್ ಅವರು ದೂರು ನೀಡಿದ್ದು, ಅವರು ಫೆ. 10ರಂದು ಬೆಳಗ್ಗೆ 11.15ರ ಸುಮಾರಿಗೆ ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿಯೋರ್ವ ಚಿನ್ನಾಭರಣ ತೊಳೆದು […]

ಶುಚಿಗೊಳಿಸುವ ನಾಟಕವಾಡಿ ಚಿನ್ನದ ಸರ ಕರಗಿಸಿ ವಂಚನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ದಿನ ಭವಿಷ್ಯ

(ನ್ಯೂಸ್‌ ಕಡಬ) newskadaba.com,  ಫೆ.12: ಶ್ರೀ ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು ಮಾಘಮಾಸ, ಕೃಷ್ಣಪಕ್ಷ, ದಶಮಿ/ಏಕಾದಶಿ, ಗುರುವಾರ, ಜೇಷ್ಠ ನಕ್ಷತ್ರ / ಮೂಲ ನಕ್ಷತ್ರ ರಾಹುಕಾಲ: 02:06 ರಿಂದ 03:34 ಗುಳಿಕಕಾಲ: 09:42 ರಿಂದ 11:10 ಯಮಗಂಡಕಾಲ; 06:46 ರಿಂದ 08:14 ಮೇಷ: ಸಾಲದ ಚಿಂತೆ, ಶತ್ರುಗಳ ಕಾಟ, ಸಂಗಾತಿಯಿಂದ ಅಂತರ, ಪಾಲುದಾರಿಕೆಯಲ್ಲಿ ನಷ್ಟ. ವೃಷಭ: ಆರ್ಥಿಕವಾಗಿ ಪ್ರಗತಿ, ಕುಟುಂಬದಿಂದ ಸಹಕಾರ, ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ, ವಾಹನದಿಂದ ಅನುಕೂಲ. ಮಿಥುನ: ಅವಕಾಶ ಕೈತಪ್ಪುವುದು, ಅಧಿಕ ಉತ್ಸಾಹ, ಸ್ಥಿರಾಸ್ತಿಯಿಂದ ನಷ್ಟ, ಮಕ್ಕಳಿಗೋಸ್ಕರವಾಗಿ ಖರ್ಚು. ಕಟಕ: ಅಧಿಕ ಖರ್ಚು,

ಇಂದಿನ ದಿನ ಭವಿಷ್ಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,  ಫೆ.12: ರಾಜ್ಯದಲ್ಲಿ ಈ ಬಾರಿ ಅವಧಿಗೆ ಮುನ್ನವೇ ಬೇಸಿಗೆಯ ಬೇಗೆ ಆರಂಭವಾಗಲಿದೆ ಎನ್ನುತ್ತಿದ್ದಾರೆ ಹವಾಮಾನ ತಜ್ಞರು. ಕನಿಷ್ಠ ತಾಪಮಾನ ವಾಡಿಕೆಯಷ್ಟೆ ಇದ್ದರೂ ಈಗಾಗಲೇ ಕರಾವಳಿ ಮತ್ತಿತರ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಸುಮಾರು 2-3 ಡಿಗ್ರಿಯಷ್ಟು ಏರಿಕೆಯಾಗಿದೆ. ವಾಡಿಕೆಯಂತೆ ಮಾರ್ಚ್ ಮೊದಲ ವಾರದಿಂದ ಬೇಸಿಗೆ ಆರಂಭವಾಗುತ್ತದೆ. ಆದರೆ, ಈ ಬಾರಿ ಫೆಬ್ರವರಿ ಮೂರನೇ ವಾರದಿಂದಲೇ ಬೇಸಿಗೆ ಆರಂಭವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ತುರ್ತು ಲ್ಯಾಂಡಿಂಗ್ ವೇಳೆ ರನ್‌ವೇಯಿಂದ ಜಾರಿದ ವಿಮಾನ ಜನರ ಜೀವ ಉಳಿಸಿದ ಪೈಲಟ್ ಸಮಯಪ್ರಜ್ಞೆ

(ನ್ಯೂಸ್‌ ಕಡಬ) newskadaba.com,  ಫೆ.11: ವಿಮಾನವು ಮೊಗದಿಶುನಿಂದ ಗಾಲ್ಕಾಯೋ ನಗರಕ್ಕೆ ಹೊರಟಿತ್ತು. ಟೇಕ್ ಆಫ್ ಆದ ಸುಮಾರು 15 ನಿಮಿಷಗಳಲ್ಲೇ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೈಲಟ್ ತುರ್ತು ಲ್ಯಾಂಡಿಂಗ್‌ಗಾಗಿ ವಾಪಸ್ ಬಂದಿದ್ದರು. ರನ್‌ವೇ ಮೇಲೆ ಲ್ಯಾಂಡ್ ಆಗುವ ಸಮಯದಲ್ಲಿ ವಿಮಾನದ ವೇಗ ನಿಯಂತ್ರಿಸಲಾಗದೆ, ಅದು ರನ್‌ವೇಯಿಂದ ಜಾರಿ ಪಕ್ಕದಲ್ಲೇ ಇದ್ದ ಹಿಂದೂ ಮಹಾಸಾಗರದ ಬೀಚ್‌ಗೆ ನುಗ್ಗಿದೆ. ​ ವಿಮಾನವು ಸಮುದ್ರದ ಆಳವಿಲ್ಲದ ನೀರಿನ ಭಾಗಕ್ಕೆ ಬಿದ್ದರೂ, ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲಾ 55 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತುರ್ತು ಲ್ಯಾಂಡಿಂಗ್ ವೇಳೆ ರನ್‌ವೇಯಿಂದ ಜಾರಿದ ವಿಮಾನ ಜನರ ಜೀವ ಉಳಿಸಿದ ಪೈಲಟ್ ಸಮಯಪ್ರಜ್ಞೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರೈಲ್ವೆ ಪ್ರಯಾಣಿಕರಿಗೆ ಪ್ರಮುಖ ಸುದ್ದಿ: ಮಾರ್ಚ್‌ 1ರಿಂದ ಭಾರತೀಯ ರೈಲ್ವೆ ಭಾರೀ ಬದಲಾವಣೆ

(ನ್ಯೂಸ್‌ ಕಡಬ) newskadaba.com,  ಫೆ.11: ಭಾರತದಲ್ಲಿ ಅಗ್ಗದ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಭಾರತೀಯ ರೈಲ್ವೆ ಹೆಸರುವಾಸಿ ಆಗಿದ್ದು, ಪ್ರತಿ ದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ಆಗಾಗ್ಗೆ ಹೊಸ ಹೊಸ ನವೀಕರಣಗಳನ್ನು ತರುತ್ತಲೇ ಇರುತ್ತದೆ. ಇದೀಗ ಮಾರ್ಚ್‌ 1 ರಿಂದ ಜಾರಿಗೆ ಬರುವಂತೆ ಭಾರತೀಯ ರೈಲ್ವೆ ಭಾರೀ ಬದಲಾವಣೆಗೆ ಮುಂದಾಗಿದೆ…. ವಾಸ್ತವವಾಗಿ, ಭಾರತೀಯ ರೈಲುಗಳಲ್ಲಿ ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಪ್ರತಿದಿನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೆಲಸಕ್ಕಾಗಿ

ರೈಲ್ವೆ ಪ್ರಯಾಣಿಕರಿಗೆ ಪ್ರಮುಖ ಸುದ್ದಿ: ಮಾರ್ಚ್‌ 1ರಿಂದ ಭಾರತೀಯ ರೈಲ್ವೆ ಭಾರೀ ಬದಲಾವಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಾಂಗ್ಲಾದೇಶಕ್ಕೆ ಅಮೇರಿಕಾದ ಸುಂಕ ರಿಯಾಯಿತಿ – ಹೊಸ ವ್ಯಾಪಾರ ಒಪ್ಪಂದಕ್ಕೆ ಸಹಿ

(ನ್ಯೂಸ್‌ ಕಡಬ) newskadaba.com,  ಫೆ.11: ಅಮೇರಿಕಾ ಮತ್ತು ಬಾಂಗ್ಲಾದೇಶ ನಡುವೆ ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಒಪ್ಪಂದದ ಅನ್ವಯ, ಬಾಂಗ್ಲಾದೇಶಕ್ಕೆ ವಿಧಿಸಲಾಗುತ್ತಿದ್ದ ಟ್ಯಾರಿಫ್ ದರವನ್ನು ಅಮೇರಿಕಾ ಶೇ. 19ಕ್ಕೆ ಇಳಿಸಲು ಒಪ್ಪಿದೆ. ಅಲ್ಲದೆ, ಅಮೆರಿಕ ಮೂಲದ ಕೆಲ ಜವಳಿ ಮತ್ತು ಉಡುಪು ಉತ್ಪನ್ನಗಳಿಗೆ ಪೂರ್ಣ ಟ್ಯಾರಿಫ್ ವಿನಾಯಿತಿ ನೀಡಲಾಗುತ್ತದೆ. ಇದಕ್ಕೆ ಪ್ರತಿಯಾಗಿ, ಅಮೆರಿಕದ ಹಲವಾರು ಕೃಷಿ ಮತ್ತು ಕೈಗಾರಿಕಾ ಉತ್ಪನ್ನಗಳಿಗೆ ಬಾಂಗ್ಲಾದೇಶ ತನ್ನ ಮಾರುಕಟ್ಟೆಯನ್ನು ಹೆಚ್ಚಿನ ಮಟ್ಟದಲ್ಲಿ ತೆರೆಯಲು ಒಪ್ಪಿದೆ. ಸೋಯಾ ಮತ್ತು ಡೈರಿ ಉತ್ಪನ್ನಗಳು,

ಬಾಂಗ್ಲಾದೇಶಕ್ಕೆ ಅಮೇರಿಕಾದ ಸುಂಕ ರಿಯಾಯಿತಿ – ಹೊಸ ವ್ಯಾಪಾರ ಒಪ್ಪಂದಕ್ಕೆ ಸಹಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಇಪಿಎಫ್‌ಒ ಮತ್ತು ಇಎಸ್‌ಐಸಿ ವೇತನ ಮಿತಿ 15,000 ರಿಂದ 25,000ಕ್ಕೆ ಏರಿಕೆ!

(ನ್ಯೂಸ್‌ ಕಡಬ) newskadaba.com,  ಫೆ.11: ಕೇಂದ್ರ ಸರ್ಕಾರವು EPFO ​​ಮತ್ತು ESIC ವ್ಯಾಪ್ತಿಗೆ ವೇತನ ಮಿತಿಯನ್ನು ಹೆಚ್ಚಿಸುವ ಪ್ರಸ್ತಾಪವನ್ನು ಪರಿಶೀಲಿಸುತ್ತಿದೆ, ಇದು ಲಕ್ಷಾಂತರ ಹೆಚ್ಚುವರಿ ಕಾರ್ಮಿಕರನ್ನು ಭಾರತದ ಸಾಮಾಜಿಕ ಭದ್ರತಾ ಚೌಕಟ್ಟಿನ ಅಡಿಯಲ್ಲಿ ತರಬಹುದು. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಪ್ರಸ್ತುತ ಈ ಪ್ರಸ್ತಾಪವನ್ನು ಪರಿಶೀಲಿಸುತ್ತಿದೆ, ಆದರೆ ಇನ್ನೂ ಯಾವುದೇ ಅಂತಿಮ ನಿರ್ಧಾರವನ್ನು ಘೋಷಿಸಲಾಗಿಲ್ಲ. ಈ ಚರ್ಚೆಯು ಕನಿಷ್ಠ ಪಿಂಚಣಿ ಪರಿಷ್ಕರಣೆ ಮತ್ತು ರಾಷ್ಟ್ರೀಯ ಮಹಡಿ ವೇತನ ಬದಲಾವಣೆಗಳನ್ನು ಒಳಗೊಂಡಿರುವ ವಿಶಾಲ ಕಾರ್ಮಿಕ-ನೀತಿ ಸುಧಾರಣೆಗಳ ಭಾಗವಾಗಿದೆ. ಪ್ರಸ್ತುತ,

ಇಪಿಎಫ್‌ಒ ಮತ್ತು ಇಎಸ್‌ಐಸಿ ವೇತನ ಮಿತಿ 15,000 ರಿಂದ 25,000ಕ್ಕೆ ಏರಿಕೆ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹಿರಿಯ ಪತ್ರಕರ್ತ ʼಹಿಂದೂ ರಾಮಯ್ಯʼ ವಿಧಿವಶ

(ನ್ಯೂಸ್‌ ಕಡಬ) newskadaba.com,  ಫೆ.11: ಹಿರಿಯ ಪತ್ರಕರ್ತ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ.ರಾಮಯ್ಯ (93 ) ಅವರು ನಿಧನರಾಗಿದ್ದಾರೆ. ಇವರನ್ನು ʼಹಿಂದೂ ರಾಮಯ್ಯʼ ಎಂದೇ ಕರೆಯಲಾಗುತ್ತಿತ್ತು. ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಮಂಗಳವಾರ ರಾತ್ರಿ 9 ಗಂಟೆಗೆ ಆಸ್ಪತ್ರೆಯಲ್ಲಿ ಅಸುನೀಗಿದರು ಎಂದು ಅವರ ಪುತ್ರ ಡಾ ಬಾಲಜಿ ತಿಳಿಸಿದ್ದಾರೆ. ರಾಮಯ್ಯ ಅವರ ಅಗಲುವಿಕೆಗೆ ಸಿಎಂ ಸಿದ್ದರಾಮಯ್ಯ, ಆದಿಚುಂಚನಗಿರಿ ಮಠಾಧ್ಯಕ್ಷರಾಗಿರುವ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವ ಎಚ್.

ಹಿರಿಯ ಪತ್ರಕರ್ತ ʼಹಿಂದೂ ರಾಮಯ್ಯʼ ವಿಧಿವಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಿನ್ನಾಭರಣ ಪ್ರಿಯರಿಗೆ ಗುಡ್‌ನ್ಯೂಸ್: ಇಂದಿನ ಚಿನ್ನದ ಬೆಲೆ

(ನ್ಯೂಸ್‌ ಕಡಬ) newskadaba.com,  ಫೆ.11: ಚಿನ್ನದ ದರದಲ್ಲಿ ಸತತ ಏರಿಕೆಯ ಬಳಿಕ ಇಂದು ಕೊಂಚ ಇಳಿಕೆ ದಾಖಲಿಸಿದೆ. ಬೆಳ್ಳಿ ಬೆಲೆ ಮಾತ್ರ ತಟಸ್ಥವಾಗಿದೆ. ಮಾರುಕಟ್ಟೆ ಸಕಾರಾತ್ಮಕವಾಗಿದ್ದು ಚಿನ್ನದ ಬೆಲೆ ಮತ್ತೆ ಹೆಚ್ಚಳ ಆಗುವ ಸಾಧ್ಯತೆ ಇದೆ. ಚಿನ್ನದ ಇಂದಿನ ದರ ಫೆಬ್ರವರಿ 11 2026, ಬುಧವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ. 24 ಕ್ಯಾರೆಟ್‌ನ 1 ಗ್ರಾಂ ಬೆಲೆ 27 ರೂ ಇಳಿಕೆಯಾಗಿ, 15,851 ರೂ ದಾಖಲಾಗಿದೆ. 10 ಗ್ರಾಂ ಬೆಲೆಯಲ್ಲಿ

ಚಿನ್ನಾಭರಣ ಪ್ರಿಯರಿಗೆ ಗುಡ್‌ನ್ಯೂಸ್: ಇಂದಿನ ಚಿನ್ನದ ಬೆಲೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮನೆಯಲ್ಲೇ ನಡೆಯುತ್ತಿತ್ತು ಜೂಜಾಟ: ಪೊಲೀಸರ ಮಿಂಚಿನ ದಾಳಿ, 8 ಜನ ವಶಕ್ಕೆ.

(ನ್ಯೂಸ್‌ ಕಡಬ) newskadaba.com,  ಫೆ.11: ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ಬೈಲ್ಬೆಟ್ಟು ಪ್ರದೇಶದಲ್ಲಿರುವ ಮನೆಯೊಂದರಲ್ಲಿ ಇಸ್ಪೀಟ್ ಜುಗಾರಿ ಆಟ ನಡೆಯುತ್ತಿದ್ದ ಅಡ್ಡೆಗೆ ಕಾರ್ಕಳ ನಗರ ಪೊಲೀಸ್ ಠಾಣಾ ಸಿಬ್ಬಂದಿ ದಾಳಿ ನಡೆಸಿ ಎಂಟು ಮಂದಿಯನ್ನು ಬಂಧಿಸಿದ್ದಾರೆ.ಪ್ರಕರಣದ ಆರೋಪಿಗಳಾದ ಅಬ್ದುಲ್ ಅಜೀಜ್ (40), ಸತೀಶ ಎಸ್. ಪ್ರಭು (49), ಉಮ್ಮರ ಫಾರೂಕ್ (62), ಅಬ್ದುಲ್ ರಹಿಮಾನ್ (49), ಸುಲೇಮಾನ್ (45),ಸಮೀರ್ (46), ಇರ್ಫಾನ್ (26) ಹಾಗೂ ಚೇತಕ್ (38) ಪ್ರಕರಣದ ಆರೋಪಿಗಳು. ಅಶೋಕ ಎಂಬುವರಿಗೆ ಸೇರಿದ ಸಾದ್ವಿನ್ ಎಂಬ

ಮನೆಯಲ್ಲೇ ನಡೆಯುತ್ತಿತ್ತು ಜೂಜಾಟ: ಪೊಲೀಸರ ಮಿಂಚಿನ ದಾಳಿ, 8 ಜನ ವಶಕ್ಕೆ. Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top