ಕರಾವಳಿ

ದಕ್ಷಿಣ ರೈಲ್ವೆ ಮಂಗಳೂರು ಸೆಂಟ್ರಲ್‌ನಿಂದ ದೆಹಲಿಗೆ ವಿಶೇಷ ರೈಲು

(ನ್ಯೂಸ್‌ ಕಡಬ) newskadaba.com,  ಅ.03 ಪುತ್ತೂರು: ದಕ್ಷಿಣ ರೈಲ್ವೆ ವಲಯವು ಮಂಗಳೂರು ಸೆಂಟ್ರಲ್‌ ನಿಲ್ದಾಣದಿಂದ ಬೆಂಗಳೂರು ಮಾರ್ಗವಾಗಿ ದೆಹಲಿಗೆ ವಿಶೇಷ ರೈಲು ಘೋಷಣೆ ಮಾಡಿದೆ. ಅ.5ರಂದು ಈ ರೈಲು ಮಂಗಳೂರು ಸೆಂಟ್ರಲ್‌ ನಿಲ್ದಾಣದಿಂದ ಹೊರಡಲಿದೆ. ರೈಲು ಸಂಖ್ಯೆ 06008 ಮಂಗಳೂರು ಸೆಂಟ್ರಲ್‌- ಹಜ್ರತ್‌ ನಿಜಾಮುದ್ದೀನ್‌ ವಿಶೇಷ ರೈಲು ಅಕ್ಟೋಬರ್ 5ರಂದು ಮಧ್ಯಾ2.25ಕ್ಕೆ ಮಂಗಳೂರು ಸೆಂಟ್ರಲಿನಿಂದ ಹೊರಟು ಪುತ್ತೂರು, ಸುಬ್ರಹ್ಮಣ್ಯ ರೋಡ್‌, ಹಾಸನ ಮಾರ್ಗವಾಗಿ ರಾತ್ರಿ 11.30ಕ್ಕೆ ಯಶವಂತಪುರ ಜಂಕ್ಷನ್‌ ನಿಲ್ದಾಣ ತಲುಪಲಿದೆ. ಅಲ್ಲಿಂದ ರಾತ್ರಿ 11.45 ಕ್ಕೆ […]

ದಕ್ಷಿಣ ರೈಲ್ವೆ ಮಂಗಳೂರು ಸೆಂಟ್ರಲ್‌ನಿಂದ ದೆಹಲಿಗೆ ವಿಶೇಷ ರೈಲು Read More »

ಕರಾವಳಿ

ಸೇತುವೆಗೆ ಕಂಟೈನರ್ ಲಾರಿಯೊಂದು ಡಿಕ್ಕಿ; ತಪ್ಪಿದ ಭಾರೀ ಅನಾಹುತ

(ನ್ಯೂಸ್‌ ಕಡಬ) newskadaba.com,  ಅ.03 ಬೈಂದೂರು: ಸೇತುವೆಗೆ ಕಂಟೈನರ್ ಲಾರಿಯೊಂದು ಡಿಕ್ಕಿ ಹೊಡೆದು, ಭಾರೀ ಅನಾಹುತವೊಂದು ತಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಕಂಬದಕೋಣೆ ಬಳಿ ಗುರುವಾರ (ಅ.2)ರಂದು ನಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನವು ನದಿಗೆ ಬೀಳುವ ಸಾಧ್ಯತೆ ಇತ್ತು. ಆದರೆ ಅದೃಷ್ಟವಶಾತ್, ಲಾರಿಯು ಸೇತುವೆಯ ಮೇಲೆಯೇ ನಿಂತಿದೆ. ಇದರಿಂದ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕಂಟೈನರ್ ಲಾರಿಯು ಮಂಗಳೂರಿನಿಂದ ಗೋವಾ ಕಡೆಗೆ ಸಾಗುತ್ತಿತ್ತು ಎಂದು ತಿಳಿದುಬಂದಿದೆ.

ಸೇತುವೆಗೆ ಕಂಟೈನರ್ ಲಾರಿಯೊಂದು ಡಿಕ್ಕಿ; ತಪ್ಪಿದ ಭಾರೀ ಅನಾಹುತ Read More »

ಕರಾವಳಿ

2025ರ ಏಷ್ಯಾ ಕಪ್‌: ಸಿಕ್ಸ್, ಬೌಂಡರಿ ಸಿಡಿಸಿ ಐಸಿಸಿ ರ್ಯಾಂ ಕಿಂಗ್‌ನಲ್ಲಿ ವಿಶ್ವದಾಖಲೆ ಸೃಷ್ಟಿಸಿದ ಅಭಿಷೇಕ್ ಶರ್ಮಾ

(ನ್ಯೂಸ್‌ ಕಡಬ) newskadaba.com,  ಅ.02 ದುಬೈ: 2025ರ ಏಷ್ಯಾ ಕಪ್‌ನಲ್ಲಿ ಸಿಕ್ಸ್, ಬೌಂಡರಿ ಸಿಡಿಸಿ ರನ್‌ಗಳ ಮಳೆ ಹರಿಸಿದ ಅಭಿಷೇಕ್ ಶರ್ಮಾ ಐಸಿಸಿ ಟಿ20 ರ‍್ಯಾಂಕ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ವಿಶ್ವದಾಖಲೆ ನಿರ್ಮಿಸಿದ್ದಾರೆ ಅಭಿಷೇಕ್ ಶರ್ಮಾ ಮೊದಲ ಸ್ಥಾನ ಗಳಿಸಿದ್ದು ಅಲ್ಲದೇ 926 ರೇಟಿಂಗ್ ಪಾಯಿಂಟ್ ಪಡೆದಿದ್ದಾರೆ. ಈ ಮೂಲಕ ಐಸಿಸಿ ಟಿ20 ರ‍್ಯಾಂಕ್ ಪಟ್ಟಿಯಲ್ಲಿ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಅಭಿಷೇಕ್ ಶರ್ಮಾ ಮುರಿದಿದ್ದಾರೆ. ಸೂಪರ್ 4 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಶರ್ಮಾ 31 ಎಸೆತಗಳಲ್ಲಿ

2025ರ ಏಷ್ಯಾ ಕಪ್‌: ಸಿಕ್ಸ್, ಬೌಂಡರಿ ಸಿಡಿಸಿ ಐಸಿಸಿ ರ್ಯಾಂ ಕಿಂಗ್‌ನಲ್ಲಿ ವಿಶ್ವದಾಖಲೆ ಸೃಷ್ಟಿಸಿದ ಅಭಿಷೇಕ್ ಶರ್ಮಾ Read More »

ಕರಾವಳಿ

ಉಪ್ಪಿನಂಗಡಿ: ಮಾದಕ ದ್ರವ್ಯ ಸಾಗಟದ ಆರೋಪ- ವ್ಯಕ್ತಿಯ ಬಂಧನ

(ನ್ಯೂಸ್‌ ಕಡಬ) newskadaba.com,  ಅ.02 ಪುತ್ತೂರು: ಬಜತ್ತೂರು ಗ್ರಾಮದ ಬೆದ್ರೋಡಿಯಲ್ಲಿ ಮಾದಕ ದ್ರವ್ಯಗಳನ್ನು ಸೇವಿಸಿ ಮಾರಾಟಕ್ಕಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಉಪ್ಪಿನಂಗಡಿ ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ. ಬಂಧಿತನನ್ನು ಉಪ್ಪಿನಂಗಡಿಯ ಮಠ ಹಿರ್ತಡ್ಕ ನಿವಾಸಿ ರಜಾಕ್ (43) ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 30 ರಂದು, ಉಪ್ಪಿನಂಗಡಿ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಅವಿನಾಶ್ ಹೆಚ್ ಮತ್ತು ಅವರ ತಂಡವು ನೆಲ್ಯಾಡಿಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರನ್ನು ನಿಲ್ಲಿಸಲು ಸಿಗ್ನಲ್ ಮಾಡಿದರು. ಆದರೆ, ಚಾಲಕ ರಜಾಕ್ ಸ್ವಲ್ಪ ಮುಂದೆ ವಾಹನ ಚಲಾಯಿಸಿ, ವಾಹನವನ್ನು

ಉಪ್ಪಿನಂಗಡಿ: ಮಾದಕ ದ್ರವ್ಯ ಸಾಗಟದ ಆರೋಪ- ವ್ಯಕ್ತಿಯ ಬಂಧನ Read More »

ಕರಾವಳಿ

ಭಾರತದಲ್ಲಿ ಪ್ರತಿ ಗಂಟೆಗೆ ಒಬ್ಬ ರೈತ ಆತ್ಮಹತ್ಯೆ

(ನ್ಯೂಸ್‌ ಕಡಬ) newskadaba.com,  ಅ.02 ನವದೆಹಲಿ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದ ಇತ್ತೀಚಿನ ವರದಿಯ ಪ್ರಕಾರ, 2023 ರಲ್ಲಿ, ದೇಶದಲ್ಲಿ ಪ್ರತಿ ಗಂಟೆಗೊಮ್ಮೆ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕೃಷಿಯಲ್ಲಿ ತೊಡಗಿರುವವರು ಎದುರಿಸುತ್ತಿರುವ ಆರ್ಥಿಕ ಒತ್ತಡವನ್ನು ಇದು ಎತ್ತಿ ತೋರಿಸುತ್ತದೆ. ಆತ್ಮಹತ್ಯೆಗೆ ಬಲಿಯಾದವರಲ್ಲಿ ಹೆಚ್ಚಿನವರು ಮಹಾರಾಷ್ಟ್ರ (38.5%), ನಂತರ ಕರ್ನಾಟಕ (22.5%), ಆಂಧ್ರಪ್ರದೇಶ (8.6%), ಮಧ್ಯಪ್ರದೇಶ (7.2%) ಮತ್ತು ತಮಿಳುನಾಡು (5.9%) ಪ್ರದೇಶಗಳವರು, ಒಂದು ಕಾಲದಲ್ಲಿ ಶ್ರೀಮಂತ ಕೃಷಿ ಪರಂಪರೆಯನ್ನು ಹೊಂದಿದ್ದ ಈ ರಾಜ್ಯಗಳ

ಭಾರತದಲ್ಲಿ ಪ್ರತಿ ಗಂಟೆಗೆ ಒಬ್ಬ ರೈತ ಆತ್ಮಹತ್ಯೆ Read More »

ಕರಾವಳಿ

ಹನೂರು: ಕಬ್ಬಿನ ತೋಟದಲ್ಲಿ ಎರಡು ಚಿರತೆ ಮರಿ ಪ್ರತ್ಯಕ್ಷ

(ನ್ಯೂಸ್‌ ಕಡಬ) newskadaba.com,  ಅ.02 ಹನೂರು :  ತಾಲೂಕಿನ ಕೆ.ಗುಂಡಾಪುರ ಗ್ರಾಮದ ಪುಟ್ಟೇಗೌಡ ಎಂಬುವರಿಗೆ ಸೇರಿದ ಕಬ್ಬಿನ ತೋಟದಲ್ಲಿ ಸಾಯಂಕಾಲದ ವೇಳೆಯಲ್ಲಿ ಎರಡು ಚಿರತೆ ಮರಿಗಳು ಸಿಕ್ಕಿದೆ. ಕಬ್ಬಿನ ತೋಟದಲ್ಲಿ ಚಿರತೆ ಮರಿಗಳು ಇರುವುದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಒಂದು ಹೆಣ್ಣು ಮತ್ತು ಒಂದು ಗಂಡು ಚಿರತೆ ಮರಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಮಯದಲ್ಲಿ ಹನೂರು ಮಲೆ ಮಹದೇಶ್ವರ ಬಫರ್ ವಲಯದ ಆರ್.ಎಫ್.ಓ ನಾಗರಾಜು, ರಾಮಾಪುರ

ಹನೂರು: ಕಬ್ಬಿನ ತೋಟದಲ್ಲಿ ಎರಡು ಚಿರತೆ ಮರಿ ಪ್ರತ್ಯಕ್ಷ Read More »

ಕರಾವಳಿ

ಡಾ. ರಾಮಚಂದ್ರ ಗುಹಾರಿಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ

(ನ್ಯೂಸ್‌ ಕಡಬ) newskadaba.com,  ಅ.02 ಬೆಂಗಳೂರು :  ಕರ್ನಾಟಕ ಸರ್ಕಾರವು ೨೦೨೫ ರ ಮಹಾತ್ಮ ಗಾಂಧಿ ಸೇವಾ -ಪ್ರಶಸ್ತಿಗೆ ಇತಿಹಾಸಕಾರ, ಅಂಕಣಕಾರ ಮತ್ತು ಚಿಂತಕ ಡಾ. ಗುಹಾ ಅವರನ್ನು ಆಯ್ಕೆ ಮಾಡಿದೆ. ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ವಾರ್ಷಿಕವಾಗಿ ನೀಡಲಾಗುವ ಈ ಪ್ರಶಸ್ತಿಯು, ಸಮಾಜದಲ್ಲಿ ಗಾಂಧೀಜಿಯವರ ಮೌಲ್ಯಗಳನ್ನು ಹರಡಲು ಗಣನೀಯ ಕೊಡುಗೆ ನೀಡಿದ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರುತಿಸುತ್ತದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ರಾಜ್ಯ ಸರ್ಕಾರವು ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು

ಡಾ. ರಾಮಚಂದ್ರ ಗುಹಾರಿಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ Read More »

ಕರಾವಳಿ

ವಿಶ್ವ ದಾಖಲೆ ಪಟ್ಟಿಗೆ ಶಕ್ತಿ ಯೋಜನೆ

(ನ್ಯೂಸ್‌ ಕಡಬ) newskadaba.com,  ಅ.02 ಬೆಂಗಳೂರು: ರಾಜ್ಯ ಸರ್ಕಾರದ ಮಹಿಳಾ ಸಬಲೀಕರಣದೆಡೆಗಿನ ಮಹತ್ವಾಕಾಂಕ್ಷೆ ಯೋಜನೆಯಾದ ಶಕ್ತಿ ಯೋಜನೆಯು ೫೦೦ ಕೋಟಿ ಮಹಿಳಾ ಟಿಕೇಟ್ ಉಚಿತ ಪ್ರಯಾಣ ಮತ್ತೊಂದು ವಿಶ್ವ ದಾಖಲೆಗೆ *International Book of Records – World Record of Excellence ಸೇರ್ಪಡೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ. ಈಗಾಗಲೇ ಉoಟಜeಟಿGolden Book of World Records ನಲ್ಲಿ ಸೇರ್ಪಡೆಯಾಗಿತ್ತು. ನಾಲ್ಕು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಸಮಸ್ತ ಅಧಿಕಾರಿ/

ವಿಶ್ವ ದಾಖಲೆ ಪಟ್ಟಿಗೆ ಶಕ್ತಿ ಯೋಜನೆ Read More »

ಕರಾವಳಿ

3 ದಿನ ರಾಜ್ಯಕ್ಕೆ ಭಾರಿ ಮಳೆ

(ನ್ಯೂಸ್‌ ಕಡಬ) newskadaba.com,  ಅ.02 ಬೆಂಗಳೂರು: ಬಂಗಾಳ ಕೊಲ್ಲಿ ಉಪಸಾಗರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಕ್ಟೋಬರ್ 2 ರಿಂದ ಅಕ್ಟೋಬರ್ 5 ರವರೆಗೆ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಕಳೆದ 24 ಗಂಟೆಯಲ್ಲಿ ಭಾರಿ ಮಳೆಯಾದ ಪ್ರದೇಶಗಳು ಬೆಳಗಾವಿ ಜಿಲ್ಲೆಯ ನೀಲವಾಡೆಯಲ್ಲಿ 51.0 ಮಿಮೀ ಮಳೆ ದಾಖಲಾಗಿದೆ. * ಉಡುಪಿ ಜಿಲ್ಲೆಯ ಹಕ್ಲಾಡಿಯಲ್ಲಿ 44.5 ಮಿಮೀ ಮಳೆ ದಾಖಲಾಗಿದೆ. *

3 ದಿನ ರಾಜ್ಯಕ್ಕೆ ಭಾರಿ ಮಳೆ Read More »

ಕರಾವಳಿ

ನ್ಯೂಯಾರ್ಕ್ ಏರ್ಪೋರ್ಟ್ ರನ್ವೇನಲ್ಲಿ ಎರಡು ವಾಣಿಜ್ಯ ವಿಮಾನಗಳು ಪರಸ್ಪರ ಡಿಕ್ಕಿ

(ನ್ಯೂಸ್‌ ಕಡಬ) newskadaba.com,  ಅ.02  ವಾಷಿಂಗ್ಟನ್: ಬುಧವಾರ ರಾತ್ರಿ ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ, ಟ್ಯಾಕ್ಸಿಂಗ್ ಸಮಯದಲ್ಲಿ ಡೆಲ್ಟಾ ಏರ್‌ಲೈನ್ಸ್‌ಗೆ ಸೇರಿದ 2  ವಿಮಾನಗಳು ಪರಸ್ಪರ ಡಿಕ್ಕಿಯಾಗಿ, ಒಂದು ವಿಮಾನದ ರೆಕ್ಕೆ ಸಂಪೂರ್ಣ ಮುರಿದು ಬಿದ್ದಿದೆ. ಅಪಘಾತವು ಸ್ಥಳೀಯ ಸಮಯದ ಪ್ರಕಾರ ರಾತ್ರಿ 9:56ಕ್ಕೆ ನಡೆದಿದೆ. ಏರ್ ಟ್ರಾಫಿಕ್ ಕಂಟ್ರೋಲ್ ಆಡಿಯೋನ ಪ್ರಕಾರ, 2 ವಿಮಾನಗಳು ಚಲಾಯಿಸುತ್ತಿದ್ದ ಸಮಯದಲ್ಲಿ, ಒಂದು ಜೆಟ್‌ನ ಮುಂಭಾಗವು ಮತ್ತೊಂದು ಜೆಟ್‌ನ ಬಲಭಾಗದ ರೆಕ್ಕೆಗೆ ಡಿಕ್ಕಿ ಹೊಡೆದಿದೆ. ಪೈಲಟ್‌ಗಳು ತಮ್ಮ ವಿಂಡ್‌ಶೀಲ್ಡ್‌ಗೆ ಹಾನಿಯಾಗಿದೆ

ನ್ಯೂಯಾರ್ಕ್ ಏರ್ಪೋರ್ಟ್ ರನ್ವೇನಲ್ಲಿ ಎರಡು ವಾಣಿಜ್ಯ ವಿಮಾನಗಳು ಪರಸ್ಪರ ಡಿಕ್ಕಿ Read More »

ಕರಾವಳಿ
Scroll to Top