ಕರಾವಳಿ

ಉಳ್ಳಾಲ: ಮುಂದುವರಿದ ಕಡಲ‌ಬ್ಬರ ► ರೆಸಾರ್ಟ್ ತಡೆಗೋಡೆ ಕುಸಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.03. ಓಖಿ ಚಂಡಮಾರುತದ ಪರಿಣಾಮದಿಂದಾಗಿ ಸೋಮೇಶ್ವರ, ಉಳ್ಳಾಲ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿಯಿಂದ ಎದ್ದಿರುವ ಸಮುದ್ರದ ಅಲೆಗಳ ಅಬ್ಬರವು ಭಾನುವಾರ ಬೆಳಗ್ಗೆಯೂ ಮುಂದುವರಿದಿದೆ. ಶನಿವಾರ ರಾತ್ರಿಯಿಂದ ಸಮುದ್ರದ ಬೃಹತ್ ಅಲೆಗಳು ಸೋಮೇಶ್ವರ, ಉಚ್ಚಿಲ ಪರಿಸರದ ಕೆಲವು ಮನೆಗಳಿಗೆ ಅಪ್ಪಳಿಸಿ ಸಮುದ್ರ ತೀರದ ನಿವಾಸಿಗಳನ್ನು ಆತಂಕಗೊಳಿಸಿತ್ತು. ಉಳ್ಳಾಲದ ರೆಸಾರ್ಟ್ ಒಂದರ ತಡೆಗೋಡೆಯು ಸಮುದ್ರದ ಅಲೆಗಳಿಗೆ ಸಿಲುಕಿ ಕುಸಿದಿತ್ತು. ಶನಿವಾರ ತಡರಾತ್ರಿಯಿಂದ ಸಮುದ್ರವು ಶಾಂತವಾಗತೊಡಗಿದ್ದು ಅಲೆಗಳ ಅಬ್ಬರ ಮಾತ್ರ ಮುಂದುವರಿದಿದೆ. ಮುಂಜಾಗ್ರತ ಕ್ರಮವಾಗಿ ಪರಿಸರದ ವಿವಿಧೆಡೆ […]

ಉಳ್ಳಾಲ: ಮುಂದುವರಿದ ಕಡಲ‌ಬ್ಬರ ► ರೆಸಾರ್ಟ್ ತಡೆಗೋಡೆ ಕುಸಿತ Read More »

ಕರಾವಳಿ

‘ಓಖೀ’ ಚಂಡಮಾರುತಕ್ಕೆ ಮಂಗಳೂರು ತತ್ತರ ► ಉಳ್ಳಾಲ ಪರಿಸರದಲ್ಲಿ ಮನೆಗೆ ನುಗ್ಗಿದ ಸಮುದ್ರದ ನೀರು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.02. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಸೃಷ್ಟಿಯಾಗಿರುವ ‘ಓಖೀ’ ಚಂಡಮಾರುತದ ಎಫೆಕ್ಟ್ ಕರಾವಳಿ ಭಾಗದಲ್ಲಿ ಕಾಣತೊಡಗಿದ್ದು, ಸಮುದ್ರದ ಭೋರ್ಗರೆತ ಹೆಚ್ಚಾಗುತ್ತಿದೆ. ಉಳ್ಳಾಲ – ಸೋಮೇಶ್ವರದಲ್ಲಿ ರಸ್ತೆಗೆ ಅಪ್ಪಳಿಸಿದ ಸಮುದ್ರದ ಅಲೆಗಳಿಂದಾಗಿ ರೆಸಾರ್ಟ್ ನ ತಡೆಗೋಡೆ ಕುಸಿದಿದ್ದು, ಅಲೆಯ ಅಬ್ಬರಕ್ಕೆ ರೆಸಾರ್ಟ್ ನಲ್ಲಿದ್ದ ಜನ ದಿಕ್ಕುಪಾಲಾಗಿ ಓಡಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಪರಿಸರದಲ್ಲಿ ಪೊಲೀಸರು ಮುನ್ನೆಚ್ಚರಿಕೆ ಘೋಷಿಸಿದ್ದಾರೆ. ಉಚ್ಚಿಲದಲ್ಲಿ ಮನೆಗೆ‌ ಸಮುದ್ರದ ನೀರು ಬಂದಿದೆ. ಇನ್ನುಳಿದಂತೆ ಪಣಂಬೂರು, ಪಡುಬಿದ್ರಿ, ಕಾಪು,

‘ಓಖೀ’ ಚಂಡಮಾರುತಕ್ಕೆ ಮಂಗಳೂರು ತತ್ತರ ► ಉಳ್ಳಾಲ ಪರಿಸರದಲ್ಲಿ ಮನೆಗೆ ನುಗ್ಗಿದ ಸಮುದ್ರದ ನೀರು Read More »

ಕರಾವಳಿ

ವಿಜಯಾ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನದ ವತಿಯಿಂದ ► ಆಲಂಕಾರು ಶ್ರೀ ದುರ್ಗಾಂಬ ಪದವಿ ಪೂರ್ವ ಕಾಲೇಜಿಗೆ ಪುಸ್ತಕ ಹಸ್ತಾಂತರ

(ನ್ಯೂಸ್ ಕಡಬ) newskadaba.com ಕಡಬ, ಡಿ.02. ಕನ್ನಡಿಗರಿಗೆ ಮೂಲ ಶಿಕ್ಷಣ ಕನ್ನಡದಲ್ಲೇ ಸಿಗುವಂತಾಗಬೇಕು ಎಂದು ಮಂಗಳೂರು ವಿಜಯಾ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಉದಯ ಹೆಗ್ಡೆ ಹೇಳಿದರು. ವಿಜಯಾ ಬ್ಯಾಂಕ್ ಆಶ್ರಯದಲ್ಲಿ ಆಲಂಕಾರು ಶ್ರೀ ದುರ್ಗಾಂಬ ಪದವಿ ಪುರ್ವ ಕಾಲೇಜಿನ ಗ್ರಂಥಾಲಯಕ್ಕೆ ಬುಧವಾರ ಸಾಯಂಕಾಲ ಪುಸ್ತಕಗಳನ್ನು ಹಸ್ತಾಂತರಿಸಿ ಅವರು ಮಾತನಾಡುತ್ತಿದ್ದರು. ಕನ್ನಡ ಮಾಧ್ಯಮದ ಹಿನ್ನೆಲೆ ತಿಳಿಯದ ಪೋಷಕರು ಆಂಗ್ಲ ಮಾಧ್ಯಮಕ್ಕೆ ಮಾರು ಹೋಗಿದ್ದಾರೆ. ಇದರಿಂದಾಗಿ ಕನ್ನಡ ಮಾಧ್ಯಮ ಶಾಲೆಗಳು ಅಪಾಯದ ಅಂಚಿನಲ್ಲಿದೆ. ಜ್ಞಾನ ಎಂಬ ಸಂಪತ್ತಿಗಿಂತ

ವಿಜಯಾ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನದ ವತಿಯಿಂದ ► ಆಲಂಕಾರು ಶ್ರೀ ದುರ್ಗಾಂಬ ಪದವಿ ಪೂರ್ವ ಕಾಲೇಜಿಗೆ ಪುಸ್ತಕ ಹಸ್ತಾಂತರ Read More »

ಕರಾವಳಿ

ಪುತ್ತೂರು: ಬೈಕ್ – ಬೈಕ್ ಢಿಕ್ಕಿ ► ಓರ್ವ ಮೃತ್ಯು, ಮೂವರು ಗಂಭೀರ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.02. ದ್ಚಿಚಕ್ರ ವಾಹನಗಳೆರಡರ ಮಧ್ಯೆ ಢಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು ಮೂವರು ಗಂಭೀರ ಗಾಯಗೊಂಡ ಘಟನೆ ನರಿಮೊಗರು ಗ್ರಾಮದ ಕೊಡಿನೀರು ಎಂಬಲ್ಲಿ ಶನಿವಾರದಂದು ನಡೆದಿದೆ. ಮೃತನನ್ನು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಥಮ ಪಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸವಣೂರು ಸಮೀಪದ ಅನ್ಯಾಡಿ ನಿವಾಸಿ ಸುಲೈಮಾನ್ ಎಂಬವರ ಪುತ್ರ ಮಹಮ್ಮದ್ ಅನಸ್ ಎಂದು ಗುರುತಿಸಲಾಗಿದೆ. ಟಿವಿಎಸ್ ಅಪಾಚಿ ಬೈಕ್ ಮತ್ತು ಬಜಾಜ್ ಪ್ಲಾಟಿನಾ ಬೈಕ್ ಮಧ್ಯೆ ಮುಖಾಮುಖಿ ಢಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.

ಪುತ್ತೂರು: ಬೈಕ್ – ಬೈಕ್ ಢಿಕ್ಕಿ ► ಓರ್ವ ಮೃತ್ಯು, ಮೂವರು ಗಂಭೀರ Read More »

ಕರಾವಳಿ

ಬುಡೋಳಿ: ಬೈಕ್-ಜುಪಿಟರ್ ಢಿಕ್ಕಿ ► ಸವಾರರಿಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ವಿಟ್ಲ, ಡಿ.01. ಬೈಕ್ ಮತ್ತು ಟಿವಿಎಸ್ ಜುಪಿಟರ್ ಮಧ್ಯೆ ಢಿಕ್ಕಿ ಸಂಭವಿಸಿ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಸಮೀಪ ಶುಕ್ರವಾರ ರಾತ್ರಿ ನಡೆದಿದೆ. ಗಾಯಗೊಂಡ ಬೈಕ್ ಸವಾರನನ್ನು ಉಪ್ಪಿನಂಗಡಿ ನಿವಾಸಿ ಮುಸ್ತಫಾ ಮತ್ತು ಜುಪಿಟರ್ ಸವಾರ ಗಡಿಯಾರ ನಿವಾಸಿ ಝುಬೈರ್ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬುಡೋಳಿ: ಬೈಕ್-ಜುಪಿಟರ್ ಢಿಕ್ಕಿ ► ಸವಾರರಿಬ್ಬರು ಗಂಭೀರ Read More »

ಕರಾವಳಿ

ಮಂಗಳೂರು: ಪೊಲೀಸ್ ಬಸ್ – ಲಾರಿ‌ ಢಿಕ್ಕಿ ► ನಾಲ್ವರು ಗಂಭೀರ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.01. ಪೊಲೀಸ್ ಬಸ್ ಹಾಗೂ ಮೀನು ಸಾಗಾಟ ಲಾರಿ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ನಾಲ್ವರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರದಂದು ನಗರದ ಪಂಪುವೆಲ್ ಬಳಿ ನಡೆದಿದೆ. ತೊಕ್ಕೊಟ್ಟಿನಿಂದ ಮಂಗಳೂರು ಕಡೆ ಬರುತ್ತಿದ್ದ ಪೊಲೀಸ್ ಬಸ್ ಹಾಗೂ ಮಂಗಳೂರಿನಿಂದ ಕೇರಳ ಕಡೆ ತೆರಳುತ್ತಿದ್ದ ಮೀನಿನ ಲಾರಿಗಳು ಮುಖಾಮುಖಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಲಾರಿ ಹಾಗೂ ಪೊಲೀಸ್ ಬಸ್ ಚಾಲಕ ಸೇರಿದಂತೆ ನಾಲ್ವರು ಗಂಭೀರ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ

ಮಂಗಳೂರು: ಪೊಲೀಸ್ ಬಸ್ – ಲಾರಿ‌ ಢಿಕ್ಕಿ ► ನಾಲ್ವರು ಗಂಭೀರ Read More »

ಕರಾವಳಿ

ನಾಳೆ(ಡಿ.03.) ರಾಮಕುಂಜದಲ್ಲಿ ‘ಅಕ್ಷರ ಹಬ್ಬ – 2017’ ಕಾರ್ಯಕ್ರಮ ► 3ಡಿ ಶೋ, ವಿಜ್ಞಾನ ಮಾದರಿ ಪ್ರದರ್ಶನ, ಪುಸ್ತಕ ಪ್ರದರ್ಶನ, ಕ್ಯಾಂಪ್ಕೋ ಉತ್ತನ್ನಗಳ ಪ್ರದರ್ಶನ

(ನ್ಯೂಸ್ ಕಡಬ) newskadaba.com ಕಡಬ, ಡಿ.01. ವಿದ್ಯಾರ್ಥಿಗಳಲ್ಲಿ ಸೃಜನ ಶೀಲತೆ ಹಾಗೂ ಕ್ರಿಯಾತ್ಮಕ ಕಲಿಕೆಯ ಅಭಿರುಚಿ ಬೆಳೆಸುವ ಹಾಗೂ ಪರಿಸರದ ವಿದ್ಯಾಸಂಸ್ಥೆಗಳೊಂದಿಗೆ ಉತ್ತಮ ಬಾಂಧವ್ಯವನ್ನು ವೃದ್ಧಿಸುವ ಉದ್ದೇಶದೊಂದಿಗೆ ಬೆಂಗಳೂರಿನ ‘ವೈಎಫ್‌ಎಸ್’ ಸಿಸ್ಕೋ ಸಂಭ್ರಮ ತಂಡದ ಸಹಯೋಗದಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢ ಶಾಲೆಯ ಆಶ್ರಯದಲ್ಲಿ ಆಹ್ವಾನಿತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ವೈವಿಧ್ಯಮ ಸ್ಪರ್ಧೆಗಳ ‘ಅಕ್ಷರ ಹಬ್ಬ – 2017’ ಡಿಸೆಂಬರ್ 03 ಭಾನುವಾರದಂದು ಶ್ರೀ ರಾಮಕುಂಜೇಶ್ವರ ಪ.ಪೂ

ನಾಳೆ(ಡಿ.03.) ರಾಮಕುಂಜದಲ್ಲಿ ‘ಅಕ್ಷರ ಹಬ್ಬ – 2017’ ಕಾರ್ಯಕ್ರಮ ► 3ಡಿ ಶೋ, ವಿಜ್ಞಾನ ಮಾದರಿ ಪ್ರದರ್ಶನ, ಪುಸ್ತಕ ಪ್ರದರ್ಶನ, ಕ್ಯಾಂಪ್ಕೋ ಉತ್ತನ್ನಗಳ ಪ್ರದರ್ಶನ Read More »

ಕರಾವಳಿ

ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಚಿತ್ರಕಲಾ ಸ್ಪರ್ಧೆ ► ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ಅನಿಲ್ ಬಲ್ಯ ರಾಜ್ಯಮಟ್ಟಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ನ.30.‌ ಜಿಲ್ಲಾ ಮಟ್ಟದ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಚಿತ್ರಕಲಾ ಸ್ಪರ್ಧೆಯಲ್ಲಿ ನೆಲ್ಯಾಡಿಯ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ಚಿತ್ರಕಲಾ ಶಿಕ್ಷಕ ಕಡಬದ ಬಲ್ಯ ನಿವಾಸಿ ಅನಿಲ್ ಬಲ್ಯ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಮಂಗಳೂರಿನ ಕಪಿತಾನಿಯೋ ವಿದ್ಯಾಲಯದಲ್ಲಿ ನಡೆದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಇವರು ಸತತವಾಗಿ ನಾಲ್ಕನೇ ಬಾರಿಯೂ ರಾಜ್ಯಮಟ್ಟಕ್ಕೆ ಆಯ್ಕೆಯಾದರು.

ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಚಿತ್ರಕಲಾ ಸ್ಪರ್ಧೆ ► ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ಅನಿಲ್ ಬಲ್ಯ ರಾಜ್ಯಮಟ್ಟಕ್ಕೆ Read More »

ಕರಾವಳಿ

ಪುಷ್ಪಗಿರಿ ವನ್ಯಧಾಮ ಮತ್ತು ಆನೆ ಕಾರಿಡಾರ್ ಯೋಜನೆಗೆ ತೀವ್ರ ವಿರೋಧ ► ಡಿ.04 ರಂದು ಕಡಬ ತಾಲೂಕು ಕಛೇರಿಯ ಮುಂಭಾಗ ಬೃಹತ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ನ.30. ಸರಕಾರವು ಜಾರಿಗೆ ತರಲು ಉದ್ದೇಶಿಸಿರುವ ಕಸ್ತೂರಿ ರಂಗನ್, ಗಾಡ್ಗಿಲ್ ವರದಿ, ವೈಲ್ಡ್ ಲೈಫ್, ಪುಷ್ಪಗಿರಿ ವನ್ಯಧಾಮ ಮತ್ತು ಆನೆ ಕಾರಿಡಾರ್ ಯೋಜನೆಗಳ ವಿರುದ್ಧ ಡಿಸೆಂಬರ್ 04 ರಂದು ಬೆಳಿಗ್ಗೆ 11.00 ಗಂಟೆಗೆ ಕಡಬ ತಾಲೂಕು ಕಛೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಮರ್ಪಣೆ ನಡೆಯಲಿದೆ ಎಂದು ಕಡಬ ತಾಲೂಕು ಜಾತ್ಯಾತೀತ ಜನತಾದಳ ಅಧ್ಯಕ್ಷ ಸೈಯದ್ ಮೀರಾ ಸಾಹೇಬ್ ಹೇಳಿದ್ದಾರೆ. ಕಡಬ ತಾಲೂಕು ವ್ಯಾಪ್ತಿಯ ಬಲ್ಯ, ಕೌಕ್ರಾಡಿ, ಶಿರಾಡಿ,

ಪುಷ್ಪಗಿರಿ ವನ್ಯಧಾಮ ಮತ್ತು ಆನೆ ಕಾರಿಡಾರ್ ಯೋಜನೆಗೆ ತೀವ್ರ ವಿರೋಧ ► ಡಿ.04 ರಂದು ಕಡಬ ತಾಲೂಕು ಕಛೇರಿಯ ಮುಂಭಾಗ ಬೃಹತ್ ಪ್ರತಿಭಟನೆ Read More »

ಕರಾವಳಿ

ಕೊಡಾಜೆ: ಖಾಸಗಿ ಬಸ್ ಪಲ್ಟಿ ► ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ವಿಟ್ಲ, ನ. 30. ಚಾಲಕನ ನಿಯಂತ್ರಣ ಕಳೆದುಕೊಂಡ ಖಾಸಗಿ ಬಸ್ಸೊಂದು ಪಲ್ಟಿಯಾದ ಘಟನೆ ಮಾಣಿ- ಮೈಸೂರು ರಾಜ್ಯ ಹೆದ್ದಾರಿಯ ಕೊಡಾಜೆಯಲ್ಲಿ ಗುರುವಾರದಂದು ನಡೆದಿದೆ. ಮಡಿಕೇರಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬಸ್ಸಿನಲ್ಲಿದ್ದ ಸುಮಾರು 20ಕ್ಕಿಂತಲೂ ಅಧಿಕ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಘಟನೆ ತೀವ್ರತೆಗೆ ಬಸ್ ರಸ್ತೆಯಿಂದ ಪೊದೆಯೊಂದಕ್ಕೆ ನುಗ್ಗಿ ಪಲ್ಟಿಯಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.

ಕೊಡಾಜೆ: ಖಾಸಗಿ ಬಸ್ ಪಲ್ಟಿ ► ಹಲವರಿಗೆ ಗಾಯ Read More »

ಕರಾವಳಿ
Scroll to Top