ಕಳಾರ: ಕಟ್ಟಡದಲ್ಲಿನ ಸಾಮಾಗ್ರಿ ತೆರವುಗೊಳಿಸದೆ ಬೆದರಿಕೆ ► ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿಗೆ ದೂರು
(ನ್ಯೂಸ್ ಕಡಬ) newskadaba.com ಕಡಬ, ಜ.26. ಕಡಬ ಗ್ರಾಮದ ಕಳಾರ ನಿವಾಸಿ ಪಿಜಿನರವರ ಸ್ವಂತ ಕಟ್ಟಡದಲ್ಲಿ ಸ್ಥಳೀಯ ನಿವಾಸಿ ಸಯ್ಯದ್ ಹುಸೈನ್ ಎಂಬವರು ಇಟ್ಟಿರುವ ಶಾಮಿಯಾನ ಸಾಮಾಗ್ರಿಗಳನ್ನು ತೆರವುಗೊಳಿಸುವಂತೆ ಕೇಳಿಕೊಂಡರು ತೆರವುಗೊಳಿಸದೇ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಕಡಬ ತಾಲೂಕು ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ವಾದ) ಸಂಚಾಲಕ ವಸಂತ ಕುಬಲಾಡಿಯವರು ಜಿಲ್ಲಾಧಿಕಾರಿ, ಕಡಬ ತಹಶೀಲ್ದಾರ್ ಹಾಗೂ ಕಡಬ ಗ್ರಾ.ಪಂ.ಗೆ ದೂರು ನೀಡಿದ್ದಾರೆ. ಕಡಬ ಗ್ರಾಮದ ಕಳಾರ ದಿ.ಕೊರಗ ಮುಗೇರರವರ ಪುತ್ರ ಪಿಜಿನ ಮುಗೇರರವರು ಅವರ ಪಟ್ಟಾ ಸ್ಥಳದ ಸ.ನಂ.16/3ರಲ್ಲಿ ಕೃಷಿ ಸಾಮಾಗ್ರಿಗಳ […]









