ಕರಾವಳಿ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ➤ಆರೋಗ್ಯ ಜಾಗೃತಿ:ವಸ್ತು ಪ್ರದರ್ಶನ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.9. ವಿವಿಧ ಸಾಂಕ್ರಾಮಿಕ ರೋಗಗಳ ಹಾಗೂ ಆರೋಗ್ಯ ಜಾಗೃತಿ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು, ಮಾಹಿತಿ ಪ್ರದರ್ಶನ ನಗರದ ಲಾಲ್‍ಬಾಗ್ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಗಸ್ಟ್ 8 ರಂದು ಚಾಲನೆ  ನೀಡಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್ ಅವರು ಪ್ರದರ್ಶನ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಾಂಕ್ರಾಮಿಕ ರೋಗಗಳ ನಿಯಂತ್ರಣ ನಮ್ಮಿಂದಲೇ ಸಾಧ್ಯ. ವೈದ್ಯಕೀಯ ಚಿಕಿತ್ಸೆಗಳ […]

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ➤ಆರೋಗ್ಯ ಜಾಗೃತಿ:ವಸ್ತು ಪ್ರದರ್ಶನ Read More »

ಕರಾವಳಿ

ಕೊಕ್ಕಡ: ಪ್ರವಾಹದ ನೀರಿನ ಸೆಳೆತಕ್ಕೊಳಗಾಗಿ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ.09. ಕಪಿಲಾ ನದಿಯಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟ ಘಟನೆ ನೆಲ್ಯಾಡಿ ಸಮೀಪದ ಕೊಕ್ಕಡದಲ್ಲಿ ಗುರುವಾರದಂದು ನಡೆದಿದೆ. ಮೃತ ಯುವಕನನ್ನು ಕೊಕ್ಕಡ ನಿವಾಸಿ ವಿಶ್ವನಾಥ ಎಂಬವರ ಪುತ್ರ ಭವಿತ್(23) ಎಂದು ಗುರುತಿಸಲಾಗಿದೆ. ಕೊಕ್ಕಡ ಸಮೀಪದ ಸುದೆಗಂಡಿ ಎಂಬಲ್ಲಿ ಕಪಿಲಾ ನದಿಯಲ್ಲಿ ಇಳಿದ ಸಂದರ್ಭದಲ್ಲಿ ಪ್ರವಾಹದ ನೀರಿನ ಸೆಳೆತಕ್ಕೊಳಗಾಗಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ನದಿಯಲ್ಲಿ ನೆರೆ ನೀರಿನ ಪ್ರವಾಹ ಅಧಿಕವಾಗಿರುವ ಹಿನ್ನೆಲೆಯಲ್ಲಿ ಯಾರೂ ನೀರಿಗೆ ಇಳಿಯುವ ಸಾಹಸಕ್ಕೆ ಕೈ ಹಾಕಬಾರದೆಂದು ಅಧಿಕಾರಿಗಳು ಎಚ್ಚರಿಕೆ

ಕೊಕ್ಕಡ: ಪ್ರವಾಹದ ನೀರಿನ ಸೆಳೆತಕ್ಕೊಳಗಾಗಿ ಯುವಕ ಮೃತ್ಯು Read More »

ಕರಾವಳಿ

ಬೆಳ್ಳಾರೆ: ಎರಡಂತಸ್ತಿನ ಕಟ್ಟಡದಿಂದ ಆಯತಪ್ಪಿ ಕೆಳಕ್ಕೆ ಬಿದ್ದ ಗುತ್ತಿಗೆದಾರ ➤ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಆ.08. ಎರಡಂತಸ್ತಿನ ಮನೆಯಿಂದ ಆಯತಪ್ಪಿ ಕೆಳಕ್ಕೆ ಬಿದ್ದು ಗುತ್ತಿಗೆ ಕಾರ್ಮಿಕರೋರ್ವರು ಮೃತಪಟ್ಟ ಘಟನೆ ಗುರುವಾರದಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಮೂಲತಃ ಹಾಸನದ ಪ್ರಸ್ತುತ ಪಳ್ಳಿಮಜಲು ಎಂಬಲ್ಲಿ ವಾಸವಿದ್ದ ಮೇಸ್ತ್ರಿ ಕೆಲಸದ ಗುತ್ತಿಗೆ ನಿರ್ವಹಿಸುತ್ತಿದ್ದ ಅಲಿ ಎಂದು ಗುರುತಿಸಲಾಗಿದೆ. ಬೆಳ್ಳಾರೆಯ ತಡಗಜೆ ಎಂಬಲ್ಲಿ ಎರಡಂತಸ್ತಿನ ಮನೆ ನಿರ್ಮಾಣದ ನೇತೃತ್ವ ವಹಿಸಿಕೊಂಡಿದ್ದು, ಕೆಲಸ ಪೂರ್ತಿಯಾದ ಹಿನ್ನೆಲೆಯಲ್ಲಿ ಗುರುವಾರದಂದು ಅಳತೆಗಾಗಿ ಎರಡನೇ ಮಹಡಿಯ ಮೇಲೆ ತೆರಳಿದ್ದ ವೇಳೆ ಆಯ ತಪ್ಪಿ ಕೆಳಗೆ

ಬೆಳ್ಳಾರೆ: ಎರಡಂತಸ್ತಿನ ಕಟ್ಟಡದಿಂದ ಆಯತಪ್ಪಿ ಕೆಳಕ್ಕೆ ಬಿದ್ದ ಗುತ್ತಿಗೆದಾರ ➤ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತ್ಯು Read More »

ಕರಾವಳಿ

ಕರಾವಳಿಯಲ್ಲಿ ನಿಲ್ಲದ ವರ್ಷಧಾರೆ ➤ ನಾಳೆ (ಶುಕ್ರವಾರ) ದಕ್ಷಿಣ ಕನ್ನಡದ ಎಲ್ಲಾ ಶಾಲಾ ಕಾಲೇಜುಗಳಿಗೆ ಮತ್ತೆ ರಜೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.08. ಕರಾವಳಿಯಲ್ಲಿ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ (ಪದವಿ ತರಗತಿವರೆಗೆ) ಶುಕ್ರವಾರದಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ. ಕರಾವಳಿ ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಡಬ ತಾಲೂಕುಗಳಲ್ಲಿ ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚಿನ ಮಳೆ ದಾಖಲಾಗಿದೆ. ಜಿಲ್ಲೆಯ ಹೆಚ್ಚಿನ ನದಿಗಳು ತುಂಬಿ

ಕರಾವಳಿಯಲ್ಲಿ ನಿಲ್ಲದ ವರ್ಷಧಾರೆ ➤ ನಾಳೆ (ಶುಕ್ರವಾರ) ದಕ್ಷಿಣ ಕನ್ನಡದ ಎಲ್ಲಾ ಶಾಲಾ ಕಾಲೇಜುಗಳಿಗೆ ಮತ್ತೆ ರಜೆ Read More »

ಕರಾವಳಿ

ಹೊಸ್ಮಠ :ಹಳೆ ಸೇತುವೆ ಇಡೀ ದಿನ ಮುಳುಗಡೆ

(ನ್ಯೂಸ್ ಕಡಬ) newskadaba.com ಹೊಸ್ಮಠ, ಆಗಸ್ಟ್.8.ಗುಂಡ್ಯ ಹೊಳೆಗೆ ಅಡ್ಡಲಾಗಿರುವ ಕಡಬ ಸಮೀಪದ ಹೊಸ್ಮಠ ಹಳೆ ಸೇತುವೆ ಕಳೆದ ಬುದವಾರ ರಾತ್ರಿಯಿಂದ  ಮುಳುಗಡೆಯಾಗಿದೆ. ಈ ಸೇತುವೆಯ ಪಕ್ಕದಲ್ಲಿರು ನೂತನ ಸರ್ವಋತು ಸೇತುವೆಯಲ್ಲಿ ಪ್ರಯಾಣಿಸುವ ಹಲವಾರು ಮಂದಿ ತಮ್ಮ ವಾಹನವನ್ನು ಸೇತುವೆಯಲ್ಲಿ ನಿಲ್ಲಿಸಿ ನೀರನನು ವೀಕ್ಷಿಸುತ್ತಿದ್ದರು, ಸೇತುವೆ ಮೇಲೆ ನಿಂತು ಅಪಾಯದ ಭಂಗಿಯಲ್ಲಿಕೆಲವರು ಸೆಲ್ಪಿಗೆ ಮೊರೆಹೋಗುತ್ತಿದ್ದರು.  

ಹೊಸ್ಮಠ :ಹಳೆ ಸೇತುವೆ ಇಡೀ ದಿನ ಮುಳುಗಡೆ Read More »

ಕರಾವಳಿ

ಉಳಿಪ್ಪು ರಸ್ತೆ ದುರಸ್ತಿ ವಿಚಾರದಲ್ಲಿ ➤ ಪಂಚಾಯತ್ ವಿರುದ್ದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.8.ಕುಟ್ರುಪಾಡಿ ಗ್ರಾಮದ ಉಳಿಪ್ಪು ಎಂಬಲ್ಲಿ ರಸ್ತೆ ದುರಸ್ತಿ ವಿಚಾರದಲ್ಲಿ ಆ.9ರಂದು ಕುಟ್ರುಪಾಡಿ ಪಂಚಾಯತ್ ಎದುರು ಎಲ್ಸಿತೋಮಸ್ ಎಂಬವರು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಪ್ರತಿಭಟನೆ ನಡೆಸಲು ಉದ್ದೇಶಿಸಿರುವ ಹಿನ್ನಲೆಯಲ್ಲಿ ಕುಟ್ರುಪಾಡಿ ಗ್ರಾ.ಪಂ.ನಲ್ಲಿ ತುರ್ತು ಸಭೆಯಲ್ಲಿ  ಚರ್ಚೆ ನಡೆಸಿ, ರಸ್ತೆಯ ದುರಸ್ತಿಗೆ ನ್ಯಾಯಾಲಯದ ಆದೇಶ ಮತ್ತು ಪಟ್ಟಾ ಜಾಗದವರ ಆಕ್ಷೇಪಣೆ ಅರ್ಜಿ ಅಡ್ಡಿಯುಂಟಾಗಿರುವುದರಿಂದ ತುರ್ತು ದುರಸ್ತಿ ಸಾಧ್ಯವಾಗುವುದಿಲ್ಲ, ಈ ವಿಚಾರವನ್ನು ಎಲ್ಸಿ ತೋಮಸ್ ಅವರು ಅರ್ಥ ಮಾಡಿಕೊಂಡು ಪಂಚಾಯತ್ ವಿರುದ್ದ ನಡೆಸಲು ಉದ್ದೇಶಿಸಿದ ಪ್ರತಿಭಟನೆಯನ್ನು

ಉಳಿಪ್ಪು ರಸ್ತೆ ದುರಸ್ತಿ ವಿಚಾರದಲ್ಲಿ ➤ ಪಂಚಾಯತ್ ವಿರುದ್ದ ಪ್ರತಿಭಟನೆ Read More »

ಕರಾವಳಿ

ಮಳೆಗೆ ಕೃಷಿ ತೋಟ ಜಲಾವೃತ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.8.ದಿನ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ನೂಜಿಬಾಳ್ತಿಲ ಗ್ರಾಮದ ಗುಂಡ್ಯ ಹೊಳೆ ಬದಿಯ ಕೃಷಿ ಪ್ರದೇಶಗಳು ಜಲಾವೃತಗೊಂಡ ಬಗ್ಗೆ ವರದಿಯಾಗಿದೆ. ನೂಜಿಬಾಳ್ತಿಲ ಗ್ರಾಮದ ಇಚ್ಲಂಪಾಡಿ ಸೇತುವೆ ಸಮೀಪದ ಕುಂಬ್ಲಾಯಿ ಉದಯ ಕುಮಾರ್ ಎಂಬವರ ಅಡಿಕೆ ತೋಟ ಹಾಗೂ ವಸಂತ ಕುಂಬ್ಲಾಯಿ ಎಂಬವರ ಅಡಿಕೆ, ರಬ್ಬರ್ ತೋಟಕ್ಕೆ ನೀರು ನುಗ್ಗಿದ್ದು, ತೋಟ ಪೂರ್ತಿ ಜಲಾವೃತಗೊಂಡಿದ್ದು, ಹೊಳೆ ಬದಿಯ ಹಲವರ ಕೃಷಿ ಭೂಮಿಗೆ ನೀರು ನುಗ್ಗಿದೆ ಎಂದು ತಿಳಿದುಬಂದಿದೆ. ನೆನ್ನೆ ಸಂಜೆ ವೇಳೆ ನೀರು ಕಡಿಮೆಯಾಗತೊಡಗಿದೆ.

ಮಳೆಗೆ ಕೃಷಿ ತೋಟ ಜಲಾವೃತ Read More »

ಕರಾವಳಿ

ಮರ್ದಾಳ ➤ ವರಮಹಾಲಕ್ಷ್ಮೀ ಪೂಜಾ ಸಮಿತಿ ರಚನೆ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.8.ಮರ್ದಾಳ 9ನೇ ವರ್ಷದ ವರಮಹಾಲಕ್ಷ್ಮೀ ಪೂಜೆಯ ಸಮಿತಿ ಅಧ್ಯಕ್ಷೆಯಾಗಿ ಚಿತ್ರನೇಮಿರಾಜ ಬರಮೇಲು, ಕಾರ್ಯದರ್ಶಿಯಾಗಿ ಜಾನಕಿ ಮಿತ್ತೋಡಿ, ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳಾಗಿ ವಸಂತಿನಾರಾಯಣ ಗೌಡ ಪುಯಿಲ, ನಿರ್ಮಲಾಸೀತಾರಾಮ ಗೌಡ, ಉಷಾಮನೋಹರ್ ರೈ, ಸುನಾಂದ ಕೋಲಂತ್ತಾಡಿ, ಪ್ರೇಮ ಕೋಲಂತ್ತಾಡಿ, ಜಾನಕಿ ಕಂಪ, ಕುಸುಮ ಸುಳ್ಯ, ವೇದಾವತಿ ಎಡೆಂಜ, ಆಯ್ಕೆ ಮಾಡಲಾಗಿದೆ.

ಮರ್ದಾಳ ➤ ವರಮಹಾಲಕ್ಷ್ಮೀ ಪೂಜಾ ಸಮಿತಿ ರಚನೆ Read More »

ಕರಾವಳಿ

ಮುಳುಗಡೆಯ ಭೀತಿಯಲ್ಲಿ ಹೊಸ್ಮಠ ಹೊಸ ಸೇತುವೆ ➤ ನೂತನ ಸೇತುವೆಗೆ ಹೊಡೆಯುತ್ತಿರುವ ನೆರೆ ನೀರು ➤ ಸ್ಥಳಕ್ಕೆ ಜಮಾಯಿಸುತ್ತಿರುವ ಸಾರ್ವಜನಿಕರು

(ನ್ಯೂಸ್ ಕಡಬ) newskadaba.com ಕಡಬ, ಆ.08. ಮುಳುಗು ಸೇತುವೆಯೆಂದೇ ಕುಖ್ಯಾತಿ ಪಡೆದಿದ್ದ ಹೊಸ್ಮಠ ಸೇತುವೆಗೆ ಪರ್ಯಾಯವಾಗಿ ಹೊಸ ಸೇತುವೆ ನಿರ್ಮಿಸಿ ಸಂಚಾರಕ್ಕೆ ಮುಕ್ತಗೊಳಿಸಿದ್ದರೂ, ಇದೀಗ ನೆರೆ ನೀರಿನ ಹೆಚ್ಚಳದಿಂದಾಗಿ ಹೊಸ ಸೇತುವೆಯೂ ಮುಳುಗಡೆಯ ಭೀತಿಯನ್ನು ಎದುರಿಸುತ್ತಿದೆ. ಹೊಸ ಸೇತುವೆಯ ಅಡಿಭಾಗಕ್ಕೆ ನೀರು ಹೊಡೆಯುತ್ತಿದ್ದು, ಹೊಸ ಸೇತುವೆಯ ಮೇಲೆ ಸಂಚರಿಸಲು ಸಾರ್ವಜನಿಕರು ಭಯಪಡುತ್ತಿದ್ದಾರೆ. ನೀರಿನ ಹರಿವು ಹೆಚ್ಚಾಗುತ್ತಿದ್ದು, ಹರಿವಿನ ಮಟ್ಟವನ್ನು ವೀಕ್ಷಿಸಲು ಸಾರ್ವಜನಿಕರು ಸ್ಥಳಕ್ಕೆ ಜಮಾಯಿಸುತ್ತಿದ್ದಾರೆ.

ಮುಳುಗಡೆಯ ಭೀತಿಯಲ್ಲಿ ಹೊಸ್ಮಠ ಹೊಸ ಸೇತುವೆ ➤ ನೂತನ ಸೇತುವೆಗೆ ಹೊಡೆಯುತ್ತಿರುವ ನೆರೆ ನೀರು ➤ ಸ್ಥಳಕ್ಕೆ ಜಮಾಯಿಸುತ್ತಿರುವ ಸಾರ್ವಜನಿಕರು Read More »

ಕರಾವಳಿ

ಕೇಪು ಕುಟ್ರುಪಾಡಿ ➤ ಕೋಟಿ ವೃಕ್ಷ ಆಂದೋಲನ

(ನ್ಯೂಸ್ ಕಡಬ) newskadaba.com ಕೇಪು ಕುಟ್ರುಪಾಡಿ , ಆಗಸ್ಟ್.8.ಕುಟ್ರುಪಾಡಿ ಗ್ರಾಮದ ಕೇಪು ಶ್ರೀ ಲಕ್ಷೀ ಜನಾರ್ದನ ದೇವಸ್ಥಾನದ ಬಳಿ ಕೋಟಿ ವೃಕ್ಷ ಆಂದೋಲನ ನಡೆಯಿತು. ಕಡಬ ಸರಸ್ವತಿ ವಿದ್ಯಾಲಯದ ಸಹಯೋಗದೊಂದಿಗೆ ನಡೆದ ಕೋಟಿ ವೃಕ್ಷ ಆಂದೋಲನವನ್ನು ಸುರೇಶ್ ದೇಂತಾರು ಗಿಡ ನೆಡುವ ಮೂಲಕ ಚಾಲನೆ ನೀಡಿ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಗೂ ಸಸಿಗಳು ವಿತರಿಸಲಾಯಿತು. ಕೇಪು ಶ್ರೀ ಲಕ್ಷೀ ಜನಾರ್ದನ ದೇವಸ್ಥಾನದ ವಠಾರ ಹಾಗೂ ಸುತ್ತಮುತ್ತಲಿನಲ್ಲಿ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಕುಟ್ರುಪಾಡಿ ಗ್ರಾ.ಪಂ. ಸದಸ್ಯ ಶಿವಪ್ರಸಾದ್

ಕೇಪು ಕುಟ್ರುಪಾಡಿ ➤ ಕೋಟಿ ವೃಕ್ಷ ಆಂದೋಲನ Read More »

ಕರಾವಳಿ
Scroll to Top