ಊಟ ಕೇಳಿದ ಮಗುವಿಗೆ ಅನ್ನದ ಬದಲು ಕಾದ ಸಲಾಕೆಯಿಂದ ಬರೆಯಿಟ್ಟ ಮಲತಾಯಿ..!!! ➤ ರೋಧಿಸುತ್ತಾ ಪಕ್ಕದ ಮನೆಯಲ್ಲಿ ಅಡಗಿ ಕುಳಿತ ಎಳೆಯ ಕಂದಮ್ಮ..!!
(ನ್ಯೂಸ್ ಕಡಬ) newskadaba.com ಚಿತ್ತಾಪುರ, ಜೂ. 07. ‘ಅಮ್ಮ ಹಸಿವಾಗಿದೆ ಊಟ ಕೊಡು’ ಎಂದ ಮಗುವಿಗೆ ಬಾ ಕೊಡ್ತೀನಿ ಎಂದು ಹತ್ತಿರ ಕರೆದ ಮಲತಾಯಿ, ಅನ್ನದ ಬದಲು ಕೆಂಡದಿಂದ ಕಾದ ಸಲಾಕೆಯಿಂದ ಕೈಗೆ ಬರೆಯಿಟ್ಟಿದ್ದು, ಸುಟ್ಟ ಗಾಯದಿಂದ ರೋಧಿಸಿದ ಮಗು ಪಕ್ಕದ ಮನೆಯಲ್ಲಿ ಅಡಗಿ ಕುಳಿತ ಘಟನೆ ತಾಲೂಕಿನ ವಾಡಿ ನಗರದ ನಾಲವಾರ ಸ್ಟೇಷನ್ ಬಡಾವಣೆಯಲ್ಲಿ ನಡೆದಿದೆ. ಗಾಯಗೊಂಡ ಮಗುವನ್ನು ಸೊನಾಲಿಕಾ ಎಂದು ಗುರುತಿಸಲಾಗಿದೆ. ಮಗುವಿನ ತಾಯಿ ಮೃತಪಟ್ಟ ಹಿನ್ನೆಲೆ ತಂದೆ ತಿಪ್ಪಣ್ಣ ಎರಡನೇ ಮದುವೆಯಾಗಿದ್ದು, ಮಗುವನ್ನು […]









