Ashitha Soodlu

ಡಿ.13 :  ಶಾಂತಿಮೊಗರು  ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ

ಸವಣೂರು ; ಕುದ್ಮಾರು ಗ್ರಾಮದ  ಶಾಂತಿಮೊಗರು  ಶ್ರೀಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ದ ಅಂಗವಾಗಿ  ಡಿ.12,13 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಡಿ.12 ರಂದು ಪಂಚಮಿಯಂದು ಪೂರ್ವಾಹ್ನ  ಸ್ಕಂದ ಗಣೇಶ ನಗರದಿಂದ ಭಕ್ತಾದಿಗಳಿಂದ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಣೆ, ನಂತರ ದೇವರಿಗೆ ಪಂಚಾಮೃತ ಅಭಿಷೇಕ ,ಕಲಾಶಭಿಷೇಕ ,ಅಪರಾಹ್ನ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ಆಶೀರ್ವಚನ ,ಸಂಜೆ ಶಾಂತಿಮೊಗರು  ಶ್ರೀಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಹಾಗೂ ಊರವರಿಂದ ಭಜನೆ ,ನಂತರ ದೇವರಿಗೆ ಮಹಾಪೂಜೆ ನಡೆಯಲಿದೆ. ಡಿ.13 […]

ಡಿ.13 :  ಶಾಂತಿಮೊಗರು  ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ Read More »

ಕರಾವಳಿ

ಬಂಬಿಲ ಮಹಾದೇವಿ ಮಹಿಳಾ ಭಜನ ಮಂಡಳಿಯಿಂದ ಕೊಡುಗೆ

Newskadaba.in ಸವಣೂರು : ಪಾಲ್ತಾಡಿ ಗ್ರಾಮದ ಬಂಬಿಲ ಮಹಾದೇವಿ ಮಹಿಳಾ  ಭಜನ ಮಂಡಳಿಯ ವತಿಯಿಂದ ಮಂಜುನಾಥನಗರ ಹಿ.ಪ್ರಾ.ಶಾಲೆಗೆ ಪಾತ್ರೆ ಕೊಡುಗೆ ನೀಡಲಾಯಿತು. ಬಂಬಿಲ ಮಹಾದೇವಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ,ಗ್ರಾ.ಪಂ.ಉಪಾಧ್ಯಕ್ಷ  ಬಿ.ಕೆ.ರವಿಕುಮಾರ್,ಮಹಿಳಾ ಭಜನ ಮಂಡಳಿಯ ಅಧ್ಯಕ್ಷೆ  ಸೀತಾ ಬಂಬಿಲ,ಕಾರ್ಯದರ್ಶಿ ಶ್ರಾವ್ಯಾ ಬಿ,ಸದಸ್ಯರಾದ ಗೀತಾ,ವಿಜಯಲಕ್ಷ್ಮೀ,ದಿವ್ಯಾ ,ಆಡಳಿತ ಮಂಡಳಿ ಸದಸ್ಯ ಸುಂದರ ಬಿ ಕೊಡುಗೆ ಹಸ್ತಾಂತರಿಸಿದರು. ಈ ಸಂದರ್ಭ  ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ, ಚೈತನ್ಯ ರೈತಶಕ್ತಿ ಗುಂಪಿನ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ,ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ  ಹೊನ್ನಪ್ಪ

ಬಂಬಿಲ ಮಹಾದೇವಿ ಮಹಿಳಾ ಭಜನ ಮಂಡಳಿಯಿಂದ ಕೊಡುಗೆ Read More »

ಕರಾವಳಿ

ಸುಳ್ಯ ಬಿಜೆಪಿ ಮಂಡಲ ಕಾರ್ಯಕಾರಿಣಿ ಸಭೆ

Newskadba.in ಸುಳ್ಯ : ಕೇಂದ್ರ ಸರಕಾರದ ಸಾಧನೆಗಳನ್ನು ಮನೆಮನೆಗೂ ತಲುಪಿಸುವ ಕಾರ್ಯವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕಿದೆ.ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿನ ಅಂತರ ೨ ಲಕ್ಷಕ್ಕೇ ಏರಿಸುವ ಗುರಿ ಇದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು ಮಂಗಳವಾರ ಸುಳ್ಯ ಅಂಬಟೆಡ್ಕ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಶ್ರೀನಿವಾಸ ಪದ್ಮಾವತಿ ಸಭಾಭವನದಲ್ಲಿ  ನಡೆದ ಬಿಜೆಪಿ ಸುಳ್ಯ ಮಂಡಲ ಕಾರ್ಯಕಾರಣಿ ಸಭೆಯಲ್ಲಿ  ಮಾತನಾಡಿದರು. ಡಿಸೆಂಬರ್ ಅಂತ್ಯದೊಳಗೆ ೫೦ ಸಾವಿರ ಹೊಸ ಮತದಾರರ ಸೇರ್ಪಡೆ ಮಾಡುವ ಗುರಿಯನ್ನು

ಸುಳ್ಯ ಬಿಜೆಪಿ ಮಂಡಲ ಕಾರ್ಯಕಾರಿಣಿ ಸಭೆ Read More »

ಕರಾವಳಿ

ರಕ್ತದಾನಿ ರಾಕೇಶ್ ರೈ ಕೆಡೆಂಜಿ ಅವರಿಗೆ ವಿವೇಕ ಯುವ ಪ್ರಶಸ್ತಿ

newskadaba.com ಸವಣೂರು, ಡಿ.03. ಪಾಲ್ತಾಡಿ ಗ್ರಾಮದ ಮಂಜುನಾಥ ನಗರ ವಿವೇಕಾನಂದ ಯುವಕ ಮಂಡಲ ಮತ್ತು ಶ್ರೀ ಗೌರಿ ಯುವತಿ ಮಂಡಲದ ವತಿಯಿಂದ ನೀಡಲಾಗುವ “ವಿವೇಕ ಯುವ ಪ್ರಶಸ್ತಿ”ಗೆ  ಸವಣೂರಿನ ರಾಕೇಶ್ ರೈ ಕೆಡೆಂಜಿ ಅವರು ಆಯ್ಕೆಯಾಗಿದ್ದಾರೆ. 52  ಬಾರಿ ರಕ್ತದಾನ ಹಾಗೂ ರಕ್ತದಾನದ ಮಹತ್ವ ಕುರಿತ ಪ್ರಚಾರ ರಾಯಬಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಕೇಶ್ ರೈ ಕೆಡೆಂಜಿ ಅವರಿಗೆ ಈ ಪ್ರಶಸ್ತಿಯನ್ನು  ಡಿ.8ರಂದು ಮಂಜುನಾಥನಗರ ಹಿ.ಪ್ರಾ.ಶಾಲೆಯಲ್ಲಿ ನಡೆಯುವ ಸಮಾರಂಭದಲ್ಲಿ  ಸಂಸದ ನಳಿನ್ ಕುಮಾರ್ ಕಟೀಲ್  ಇವರ ಸಮ್ಮುಖದಲ್ಲಿ, ಸುಳ್ಯ ವಿಧಾನಸಭಾ

ರಕ್ತದಾನಿ ರಾಕೇಶ್ ರೈ ಕೆಡೆಂಜಿ ಅವರಿಗೆ ವಿವೇಕ ಯುವ ಪ್ರಶಸ್ತಿ Read More »

ಕರಾವಳಿ

ಡಿ. 5ರಿಂದ 9ರ ವರೆಗೆ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ರಜತ ಸಂಭ್ರಮ

ಕಾಣಿಯೂರು : ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಡಿ.೫ರಿಂದ ೯ರ ವರೆಗೆ ಪ್ರಗತಿ ವಿದ್ಯಾಸಂಸ್ಥೆ ಹಾಗೂ ಬೆಳ್ಳಿಹಬ್ಬ ವರ್ಷಾಚರಣ ಸಮಿತಿ ವತಿಯಿಂದ ರಜತ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಸಮಾಜದ ನಾನಾ ಕ್ಷೇತ್ರಗಳ ಸಾಧಕರ ಪಾಲ್ಗೊಳ್ಳುವಿಕೆ, ಸಂಪನ್ಮೂಲ ವ್ಯಕ್ತಿಗಳ ಉಪನ್ಯಾಸ, ಸಾಧಕರಿಗೆ ಸನ್ಮಾನ, ಖ್ಯಾತ ತಂಡಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ತಾರಾ ಮೆರುಗು, ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿದೆ. ಗುರುವಾರ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಕಾರ್ಯಕ್ರಮ ಕುರಿತಾಗಿ ವಿವರ ನೀಡಿದ ಶಾಲಾ ಆಡಳಿತ ಸಮಿತಿ ಅಧ್ಯಕ್ಷ

ಡಿ. 5ರಿಂದ 9ರ ವರೆಗೆ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ರಜತ ಸಂಭ್ರಮ Read More »

ಕರಾವಳಿ, ಕರ್ನಾಟಕ

ಡಿ.13  : ನಳೀಲು ಸುಬ್ರಹ್ಮಣ್ಯ  ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ

Newskadaba.in ಸವಣೂರು ; ಪುತ್ತೂರು ತಾಲೂಕಿನಲ್ಲಿ ವಲ್ಮಿಕ (ಹುತ್ತ)ಕ್ಕೆ  ಪೂಜೆ ಸಲ್ಲುವ ವಿಶೇಷ ಹಾಗೂ ಕಾರಣಿಕ ಸಾನಿಧ್ಯ  ಕೊಳ್ತಿಗೆ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ ವಿವಿಧ ಧಾರ್ಮಿಕ ಕಾರ‍್ಯಗಳೊಂದಿಗೆ ಡಿ.12,13 ರಂದು ನಡೆಯಲಿದೆ. ಹುತ್ತಕ್ಕೆ ಪೂಜೆ ಸಲ್ಲುವ ತಾಲೂಕಿನ ಏಕೈಕ ಕ್ಷೇತ್ರ ನಳೀಲು ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ  ಹುತ್ತಕ್ಕೆ ಆರಾಧನೆ ನಡೆಯುತ್ತದೆ.ಆದರಿಂದ ಇದು ಭಕ್ತರ ಪಾಲಿನ ಶ್ರದ್ದೆಯ ಹಾಗೂ ಭಕ್ತಿಯ ಕ್ಷೇತ್ರವಾಗಿದೆ.ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಸೇವೆ ಪಡೆಯುವ ಏಕೈಕ ಕ್ಷೇತ್ರವಾಗಿರುವ ಇಲ್ಲಿ   ಕಂಕಣ ಭಾಗ್ಯಕ್ಕಾಗಿ, ಸಂತಾನ

ಡಿ.13  : ನಳೀಲು ಸುಬ್ರಹ್ಮಣ್ಯ  ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ Read More »

ಕರಾವಳಿ

ಡಿ.16 : ಪಾಲ್ತಾಡಿ ಅಂಕತ್ತಡ್ಕದಲ್ಲಿ  ನವೋದಯ ಕ್ರೀಡಾಕೂಟ

Newskadaba.in ಸವಣೂರು : ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ನವೋದಯ ಸ್ವಸಹಾಯ ಗುಂಪುಗಳ ಒಕ್ಕೂಟ ಪಾಲ್ತಾಡಿ ಮತ್ತು ಕೊಳ್ತಿಗೆ ,ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್  ಮಂಗಳೂರು ಇದರ ವತಿಯಿಂದ ನವೋದಯ ಸ್ವಸಹಾಯ ಗುಂಪುಗಳ ಸದಸ್ಯರ ಕ್ರೀಡಾಕೂಟ ಡಿ.16 ರಂದು ಅಂಕತ್ತಡ್ಕ  ಹಿ.ಪ್ರಾ.ಶಾಲೆಯಲ್ಲಿ  ನಡೆಯಲಿದೆ. ಕ್ರೀಡಾಕೂಟವನ್ನು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಽಕಾರಿ ಪೂರ್ಣಿಮಾ ಶೆಟ್ಟಿ  ಉದ್ಘಾಟಿಸುವರು.ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಕುಮಾರ್ ಕೆ ಅಧ್ಯಕ್ಷತೆ ವಹಿಸುವರು.ಅತಿಥಿಗಳಾಗಿ

ಡಿ.16 : ಪಾಲ್ತಾಡಿ ಅಂಕತ್ತಡ್ಕದಲ್ಲಿ  ನವೋದಯ ಕ್ರೀಡಾಕೂಟ Read More »

ಕರಾವಳಿ

ಡಿ.8 : ಅಂಕತ್ತಡ್ಕ ಪ್ರಾಥಮಿಕ  ಶಾಲಾ ವಾರ್ಷಿಕೋತ್ಸವ

Newskadaba.in ಸವಣೂರು:  ಪಾಲ್ತಾಡಿ ಗ್ರಾಮದ  ಅಂಕತ್ತಡ್ಕ  ಸ.ಹಿ.ಪ್ರಾ ಶಾಲೆಯ ವಾರ್ಷಿಕೋತ್ಸವ ಡಿ.8 ರಂದು ನಡೆಯಲಿದೆ. ಬೆಳಿಗ್ಗೆ ನಡೆಯುವ ಧ್ವಜಾರೋಹಣವನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ  ವಿಶ್ವನಾಥ ಪೂಜಾರಿ ನೆರವೇರಿಸುವರು ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ ವಸ್ತು ಪ್ರದರ್ಶನ ಉದ್ಘಾಟಿಸುವರು. ಗ್ರಾ.ಪಂ.ಸದಸ್ಯೆ ಜಯಂತಿ ಮಡಿವಾಳ ಉಪಸ್ಥಿತರಿರುವರು. ಸಭಾ ಕಾರ್ಯಕ್ರಮ ಶಾಲಾ ರಜತ ಮಂದಿರವನ್ನು  ಸುಳ್ಯ ಶಾಸಕ ಎಸ್.ಅಂಗಾರ  ಉದ್ಘಾಟಿಸುವರು. ಪತ್ತೂರು ಶಾಸಕ ಸಂಜೀವ ಮಠಂದೂರು ಸಭಾ ಕಾರ್ಯಕ್ರಮದ ದೀಪ ಪ್ರಜ್ವಲನೆ ಮಾಡುವರು. ಅಧ್ಯಕ್ಷತೆಯನ್ನು  ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ವಹಿಸುವರು. ಜಿ.ಪಂ.ಸದಸ್ಯೆ

ಡಿ.8 : ಅಂಕತ್ತಡ್ಕ ಪ್ರಾಥಮಿಕ  ಶಾಲಾ ವಾರ್ಷಿಕೋತ್ಸವ Read More »

ಕರಾವಳಿ

ಡಿ.8 : ಮಂಜುನಾಥನಗರ ಶಾಲಾ ವಾರ್ಷಿಕೋತ್ಸವ

Newskadaba.in ಸವಣೂರು:  ಪಾಲ್ತಾಡಿ ಗ್ರಾಮದ  ಮಂಜುನಾಥನಗರ ಸ.ಹಿ.ಪ್ರಾ ಶಾಲೆ ಮತ್ತು ಸರಕಾರಿ ಪ್ರೌಢಶಾಲೆಯ ಜಂಟಿ ವಾರ್ಷಿಕೋತ್ಸವ ಡಿ.೮ ರಂದು ನಡೆಯಲಿದೆ. ಬೆಳಿಗ್ಗೆ ನಡೆಯುವ ಧ್ವಜಾರೋಹಣವನ್ನು ಸವಣೂರು ಗ್ರಾ.ಪಂ.ಉಪಾಧ್ಯಕ್ಷ ಬಿ.ಕೆ.ರವಿಕುಮಾರ್ ನೆರವೇರಿಸುವರು.ಗ್ರಾ.ಪಂ.ಸದಸ್ಯೆ ಜಯಂತಿ ಮಡಿವಾಳ ಪುಸ್ತಕ ಪ್ರದರ್ಶನ ಉದ್ಘಾಟಿಸುವರು.ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ ವಸ್ತು ಪ್ರದರ್ಶನ ಉದ್ಘಾಟಿಸುವರು.ಕೆಯ್ಯೂರು ಕ್ಲಸ್ಟರ್ ಸಿಆರ್‌ಪಿ ಅಬ್ದುಲ್ ಬಶೀರ್ ಕೆ  ಶುಭಾಶಂಸನೆ ಮಾಡುವರು. ಸಿದ್ದಿವಿನಾಯಕ ಸೇವಾ ಸಂಘದ ಅಧ್ಯಕ್ಷ  ಪ್ರವೀಣ್ ಬಂಬಿಲದೋಳ,ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಪದ್ಮಪ್ರಸಾದ್ ಆರಿಗ ಪಂಚೋಡಿ,ವಿವೇಕಾನಂದ ಯುವಕ ಮಂಡಲದ

ಡಿ.8 : ಮಂಜುನಾಥನಗರ ಶಾಲಾ ವಾರ್ಷಿಕೋತ್ಸವ Read More »

ಕರಾವಳಿ

ಸವಣೂರು  ವಲಯ ಕರ್ನಾಟಕ ಟೈಲರ್ ಅಸೋಸಿಯೇಶನ್ ಸಭೆ

ಸವಣೂರು : ಸವಣೂರು ವಲಯ ಕರ್ನಾಟಕ ಟೈಲರ್ ಅಸೋಸಿಯೇಶನ್ ವಾರ್ಷಿಕ ಸಭೆ ಸವಣೂರು ಅಶ್ವಿನಿ ಕಾಂಪ್ಲೆಕ್ಸ್‌ನಲ್ಲಿ ಬುಧವಾರ ಸಂಜೆ ನಡೆಯಿತು. ಸಭೆಯಲ್ಲಿ ಕರ್ನಾಟಕ ಟೈಲರ್ ಅಸೋಸಿಯೇಶನ್‌ನ ನಿಕಟಪೂರ್ವ ರಾಜ್ಯ ಕಾರ್ಯದರ್ಶಿರಘುನಾಥ ಅವರು,ಟೈಲರ್‌ಗಳಿಗೆ ಸಿಗುವ ವಿವಿಧ ಸವಲತ್ತು ಹಾಗೂ ಸರಕಾರದ ಯೋಜನೆಗಳನ್ನು ಹೇಗೆ ಜೋಡಿಸಿಕೊಂಡು ಸಂಘದ ಸದಸ್ಯರ ಬೆಳವಣಿಗೆಗೆ ಪೂರಕವಾಗಿ ಮಾಡುವ ಕುರಿತು ಮಾಹಿತಿ ನೀಡಿದರು. ಕೊಡಗು ನೆರೆಯಿಂದ ಸಂತ್ರಸ್ತರಾದ ಅಲ್ಲಿನ ಟೈಲರ್‌ಗಳಿಗೆ ಇಲ್ಲಿನ ಸಮಿತಿಯ ಮೂಲಕ ನೆರವು ನೀಡುವ ಕುರಿತು ವಿವರಿಸಿದರು. ಟೈಲರ್ ಅಸೋಸಿಯೇಶನ್ ಕ್ಷೇತ್ರ ಸಮಿತಿ

ಸವಣೂರು  ವಲಯ ಕರ್ನಾಟಕ ಟೈಲರ್ ಅಸೋಸಿಯೇಶನ್ ಸಭೆ Read More »

ಕರಾವಳಿ
Scroll to Top