Ashitha Soodlu

ಕೊಯಿಲ ಫಾರ್ಮ್ ಪ್ರವೇಶಕ್ಕೆ ನಿಷೇಧ ಹೇರಿ ಆದೇಶ

(ನ್ಯೂಸ್ ಕಡಬ) newskadaba.com ಕಡಬ:. ಸೆ.05:  ಉಪ್ಪಿನಂಗಡಿ ಕಡಬ ರಾಜ್ಯ ಹೆದ್ದಾರಿಯ ರಾಮಕುಂಜ ಸಮೀಪದ ಕೊಯಿಲ ಫಾರ್ಮ್ ಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ ಆದೇಶ ಹೊರಡಿಸಿದೆ. ಹಚ್ಚಹಸಿರಾಗಿ ಭೂಮಾತೆಯ ಮಡಿಲಲ್ಲಿ ಕಂಗೊಳಿಸುತ್ತಿದ್ದ ಕೊಯಿಲ ಫಾರ್ಮ್ ಗೆ ಸಾರ್ವಜನಿಕರು ಪ್ರವಾಸಿಗರು ಭೇಟಿ ನೀಡಿ ತ್ಯಾಜ್ಯಗಳನ್ನು ಎಸೆದು ವಾಪಾಸ್ಸಗುತ್ತಿದ್ದರು. ಇದರಿಂದ ಗೋವುಗಳು ಮೇವಿನ ವೇಳೆ ತ್ಯಾಜ್ಯಗಳನ್ನು ತಿಂದು ಆರೋಗ್ಯದಲ್ಲಿ ಏರುಪೇರಾಗಿತ್ತು. ಇದರಿಂದಾಗಿ ಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಪಶುಸಂಗೋಪಾನ ಮತ್ತು […]

ಕೊಯಿಲ ಫಾರ್ಮ್ ಪ್ರವೇಶಕ್ಕೆ ನಿಷೇಧ ಹೇರಿ ಆದೇಶ Read More »

ಕರಾವಳಿ

ಮಣಿಪಾಲ: ಚಿರತೆಯನ್ನು ಬೋನಿಗೆ ಬೀಳಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿ

(ನ್ಯೂಸ್ ಕಡಬ) newskadaba.com ಮಣಿಪಾಲ, ಸೆ. 05: ಕಳೆದ ಕೆಲವು ದಿನಗಳಿಂದ ವಿಜಯನಗರ ಕೋಡಿ ಎಂಬಲ್ಲಿ ಜನರಿಗೆ ಭೀತಿ ಹುಟ್ಟಿಸಿದ್ದ ಚಿರತೆಯನ್ನು ಬೋನಿಗೆ ಬೀಳಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ವಿಜಯನಗರ ಕೋಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿದ್ದ ಈ ಚಿರತೆ ಈ ಭಾಗದ ಜನರಲ್ಲಿ ಭೀತಿ ಹುಟ್ಟಿಸಿತ್ತು.     ಪ್ರದೇಶದ ಮನೆಗಳ ದನಕರು, ನಾಯಿ, ಕೋಳಿಗಳನ್ನು ಹಿಡಿದು ತಿನ್ನುತ್ತಿತ್ತು. ಚಿರತೆಯ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಭಾಗದಲ್ಲಿ ಜನರು ರಾತ್ರಿ ಹೊರಬರುವುದನ್ನೇ ನಿಲ್ಲಿಸಿದ್ದರು.

ಮಣಿಪಾಲ: ಚಿರತೆಯನ್ನು ಬೋನಿಗೆ ಬೀಳಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿ Read More »

ಕರಾವಳಿ, ಕರ್ನಾಟಕ

ಪೂಜೆ ಸೇವೆಗಳು ಆರಂಭ ➤ ಕಟೀಲಿನಲ್ಲಿ ಭಕ್ತರ ಸಂಖ್ಯೆ ಹೆಚ್ಚಳ

(ನ್ಯೂಸ್ ಕಡಬ) newskadaba.com ಮೂಲ್ಕಿ ,ಸೆ.05:  ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಎರಡು ದಿನಗಳಿಂದ ಎಲ್ಲ ಸೇವೆಗಳು ನಿಯಮಿತವಾಗಿ ಆರಂಭವಾಗಿವೆ. ದೇವಿಗೆ ವಿಶೇಷ ದಿನವಾದ ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದರು.   ಕೋವಿಡ್-19 ನಿಯಮ ಪಾಲನೆಯೊಂದಿಗೆ, ದುರ್ಗಾ ನಮಸ್ಕಾರ, ಹೂವಿನ ಪೂಜೆ ಸೇರಿದಂತೆ ಎಲ್ಲ ಸೇವೆಗಳೂ ನಡೆಯುತ್ತಿವೆ. ಸಾಂಕ್ರಾಮಿಕ ಕಾಯಿಲೆ ನಿಯಂತ್ರಣದ ಉದ್ದೇಶದಿಂದ ವೃದ್ಧರು, 10 ವರ್ಷದೊಳಗಿನ ಮಕ್ಕಳಿಗೆ ದೇವಳ ಪ್ರವೇಶ ನಿಷೇಧ ನಿಯಮ ಮುಂದುವರಿಯಲಿದೆ. ‘ದಿನಕ್ಕೆ ಐದು ರಂಗಪೂಜೆ ಸೇವೆಗೆ ಮಾತ್ರ ಅವಕಾಶ ನೀಡಲಾಗಿದೆ.

ಪೂಜೆ ಸೇವೆಗಳು ಆರಂಭ ➤ ಕಟೀಲಿನಲ್ಲಿ ಭಕ್ತರ ಸಂಖ್ಯೆ ಹೆಚ್ಚಳ Read More »

ಕರಾವಳಿ

ಕಡಬ : ನಾಪತ್ತೆಯಾಗಿದ್ದ ಅತಿಥಿ ಶಿಕ್ಷಕಿ ಮದುವೆಯಾಗಿ ಪತ್ತೆ.

(ನ್ಯೂಸ್ ಕಡಬ) newskadaba.com ಕಡಬ. ಸೆ.05:  ಆಗಸ್ಟ್ 31 ರಂದು ಶಾಲೆಗೆ ತೆರಳಿ ವಾಪಸ್ ಮನೆಗೆ ಬಾರದೇ ನಾಪತ್ತೆಯಾಗಿದ್ದ ಕಡಬ ತಾಲೂಕಿನ ಬಲ್ಯ ಶಾಲೆಯ ಅತಿಥಿ ಶಿಕ್ಷಕಿ ಪ್ರಿಯಕರನ ಜೊತೆ ವಿವಾಹವಾಗಿ ಪತ್ತೆಯಾಗಿದ್ದಾರೆ.   ಇವರಿಗೆ ಬೆಂಗಳೂರಿನ ಬಸವೇಶ್ವರ ನಗರದ ವ್ಯಕ್ತಿಯೊಂದಿಗೆ 3 ತಿಂಗಳ ಹಿಂದೆ ಕನ್ನಡ ಮ್ಯಾಟ್ರಿಮೋನಿ ಮೂಲಕ ಪರಿಚಯವಾಗಿತ್ತು. ಇವರ ಪರಿಚಯ ಪ್ರೇಮಕ್ಕೆ ತಿರುಗಿ ಸೆಪ್ಟಂಬರ್ 1 ರಂದು ವಿವಾಹವಾಗಿದ್ದಾರೆ. ಕಡಬ ಠಾಣೆಯ ಪಿ ಎಸ್ ವೈ ರುಕ್ಮನಾಯ್ಕ್ ಅವರ ಮಾರ್ಗದರ್ಶನದಲ್ಲಿ ಹೆಚ್ ಸಿ

ಕಡಬ : ನಾಪತ್ತೆಯಾಗಿದ್ದ ಅತಿಥಿ ಶಿಕ್ಷಕಿ ಮದುವೆಯಾಗಿ ಪತ್ತೆ. Read More »

ಕರಾವಳಿ, ಕರ್ನಾಟಕ

ಗೋಳಿತೊಟ್ಟು: ಮಕ್ಕಳಿಗೆ ಈಜು ಕಲಿಸಲು ಹೋದ ತಂದೆ ನೀರುಪಾಲು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ , ಸೆ. 05: ಇಲ್ಲಿಗೆ ಸಮೀಪದ ಗೋಳಿತೊಟ್ಟು ಗ್ರಾಮದ ನಾಯಿಲ ಎಂಬಲ್ಲಿ ಇಂಗು ಗುಂಡಿಯಲ್ಲಿ ಮಕ್ಕಳಿಗೆ ಈಜು ಕಲಿಸಲು ಹೋದ ತಂದೆಯೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕಳೆದ ದಿನ ಸಂಭವಿಸಿದೆ.    ಗೋಳಿತೊಟ್ಟು ಗ್ರಾಮದ ಹರೀಶ್ ಪೂಜಾರಿ (38) ಎಂಬವರು ಮೃತಪಟ್ಟವರು. ಇವರು ತನ್ನ ಮನೆ ಸಮೀಪದ ಗೇರು ನಿಗಮದ ಭೂಮಿಯಲ್ಲಿ ನಿರ್ಮಿಸಿದ್ದ ಇಂಗು ಗುಂಡಿಯಲ್ಲಿ ತನ್ನ ಮಕ್ಕಳಿಗೆ ಈಜು ಕಲಿಸಲೆಂದು ಹೋದವರು, ನೀರಿನಲ್ಲಿ ಮುಳುಗಿ ಅಸ್ವಸ್ಥರಾದರು. ಕೂಡಲೇ ಅವರನ್ನು

ಗೋಳಿತೊಟ್ಟು: ಮಕ್ಕಳಿಗೆ ಈಜು ಕಲಿಸಲು ಹೋದ ತಂದೆ ನೀರುಪಾಲು Read More »

ಕರಾವಳಿ, ಕರ್ನಾಟಕ

ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ವಂಚನೆ

(ನ್ಯೂಸ್ ಕಡಬ) newskadaba.com ಕುಂದಾಪುರ, ಸೆ. 04: ಮಹಿಳೆಯೋರ್ವರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಅಲ್ಲದೇ ಮದುವೆಯಾಗುವುದಾಗಿ ನಂಬಿಸಿ ಅವರಿಂದ ಹಣ ಪಡೆದು ವಂಚಿಸಿದ ವಿವಾಹಿತ, ಮಾಜಿ ಪುರಸಭಾ‌ ಸದಸ್ಯನನ್ನು ಸೆ.4ರ ಶುಕ್ರವಾರದಂದು ಬಂಧಿಸಲಾಗಿದೆ.     ಸಂದೀಪ ಪೂಜಾರಿ ಕೋಡಿ ಎನ್ನುವ ವ್ಯಕ್ತಿ ಪರಿಶಿಷ್ಟ ಪಂಗಡಕ್ಕೆ ಸೇರಿರುವ ಮಹಿಳೆಯೋರ್ವರ ಪತಿ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಮೃತಪಟ್ಟಿದ್ದು ಅವರ ಉದ್ಯೋಗವನ್ನು ಅವರ ಪತ್ನಿಗೆ ಕೊಡಿಸುವುದಾಗಿ ಹಾಗೂ ಮದುವೆಯಾಗುತ್ತೇನೆಂದು ಭರವಸೆ ಕೊಟ್ಟು ಆ ಮಹಿಳೆಯಿಂದ ಹಣವನ್ನು ಪಡೆದಿದ್ದನು. ನಂತರ

ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ವಂಚನೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಅಕ್ರಮ ಗೋ ಸಾಗಾಟ ಆರೋಪಿಗಳಿಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 04: ಮಾರುತಿ ಓಮಿನಿಯಲ್ಲಿ ಕೇರಳದ ಅಕ್ರಮವಾಗಿ ಕರು ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ವಾಹನ ತಪಾಸಣೆ ನಡೆಸಿದ ಪುತ್ತೂರು ಪೊಲೀಸರು, ವಾಹನದಲ್ಲಿ ಕರುವಿನ ಕೈ ಕಾಲುಗಳನ್ನು ಕಟ್ಟಿ ಹಾಕಿದ್ದ ಕರುವನ್ನು ರಕ್ಷಣೆ ಮಾಡಿದ್ದಾರೆ. ಪುತ್ತೂರು ತಾಲೂಕು ನರಿಮೊಗರು ಸಮೀಪದ ಪುರುಷರಕಟ್ಟೆಯಲ್ಲಿ ಘಟನೆ ನಡೆದಿದೆ.   ಪುತ್ತೂರು ನಗರ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ಕೇರಳ ನೋಂದಾಯಿತ ಓಮಿನಿ ಮಾರುತಿ ಕಾರನ್ನು ನರಿಮೊಗ್ರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ ಗುರುವಾರ

ಪುತ್ತೂರು: ಅಕ್ರಮ ಗೋ ಸಾಗಾಟ ಆರೋಪಿಗಳಿಬ್ಬರ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮೈಸೂರು: ರಿಮೋಟ್‌ ಶೆಲ್‌ ನುಂಗಿ ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಮೈಸೂರು, ಸೆ. 04: ರಿಮೋಟ್‌ ಶೆಲ್‌ ಅನ್ನು ನುಂಗಿ ಮಗುವೊಂದು ಸಾವಿಗೀಡಾಗಿರುವ ಘಟನೆ ಮೈಸೂರು ನಗರದ ಇಟ್ಟಿಗೆಗೂಡಿನಲ್ಲಿ ನಡೆದಿದೆ. ರಿಮೋಟ್‌ ಶೆಲ್‌ ನುಂಗಿ ಮೃತಪಟ್ಟ ಮಗುವನ್ನು ಚೆಲುವರಾಜ್ ಎಂಬುವವರ ಒಂದೂವರೆ ವರ್ಷದ ಮಗ ಹೇಮಂತ್‌ ಎಂದು ಗುರುತಿಸಲಾಗಿದೆ.     ಮನೆಯಲ್ಲೇ ರಿಮೋಟ್‌ ನೊಂದಿಗೆ ಆಟವಾಡಿಕೊಂಡಿದ್ದ ಮಗು ಗುರುವಾರ ಸಂಜೆ ಅಕಸ್ಮಿಕವಾಗಿ ರಿಮೋಟ್‌ನೊಳಗಿದ್ದ ಶೆಲ್‌ ನ್ನು ನುಂಗಿದೆ. ಅಸ್ವಸ್ಥಗೊಂಡ ಮಗುವನ್ನು ಕೂಡಲೇ ಕೆ.ಆರ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಉಸಿರಾಡಲು ಕಷ್ಟಪಡುತ್ತಿದ್ದ ಮಗು ಚಿಕಿತ್ಸೆ

ಮೈಸೂರು: ರಿಮೋಟ್‌ ಶೆಲ್‌ ನುಂಗಿ ಮಗು ಮೃತ್ಯು Read More »

ಕರಾವಳಿ, ಕರ್ನಾಟಕ

ಪಂಜ: ದೇವಿಪ್ರಾಸಾದ್‌ ಚಿಕ್ಮುಳಿಯರಿಗೆ ಸಾಧನಾಶ್ರೀ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಪಂಜ, ಸೆ. 04: ಜೇಸಿಐ ಪಂಜ ಪಂಚಶ್ರೀಯ ಕಾರ್ಯದರ್ಶಿ, ಯುವ ಉದ್ಯಮಿ, ಗುತ್ತಿಗಾರಿನ ದೇವಿ ಸಿಟಿ ಕಾಂಪ್ಲೆಕ್ಸ್‌ ನ ಮಾಲಕ ಜೇಸೀ ಜೆಎಫ್‌ಎಂ ದೇವಿಪ್ರಾಸಾದ್‌ ಚಿಕ್ಮುಳಿವಯರಿಗೆ ಜೇಸಿಐ ಭಾರತದ ವಲಯ 15ರ ವಿಭಾಗದ ಅಭಿವೃದ್ಧಿ, ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ನೀಡುವ ಸಾಧನಾಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.   ವ್ಯವಹಾರ ಅಥವಾ ವೃತ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿ ಜೇಸೀ ಘಟಕದ ಓರ್ವ ಸದಸ್ಯರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಪಂಜ ಜೇಸಿಐ ಘಟಕದಿಂದ ಇವರು

ಪಂಜ: ದೇವಿಪ್ರಾಸಾದ್‌ ಚಿಕ್ಮುಳಿಯರಿಗೆ ಸಾಧನಾಶ್ರೀ ಪ್ರಶಸ್ತಿ Read More »

ಕರಾವಳಿ, ಕರ್ನಾಟಕ

ಕಡಬ , ಪುತ್ತೂರಿನಲ್ಲಿ ಇಂದು 40 ಮಂದಿಗೆ ಕೊರೋನ ದೃಢ

(ನ್ಯೂಸ್ ಕಡಬ) newskadaba.com ಕಡಬ. ಸೆ.04:  ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಶುಕ್ರವಾರ 40 ಮಂದಿಗೆ ಕೊರೋನ ಪಾಸಿಟಿವ್ ದೃಢಪಟ್ಟಿವೆ. ಈ ತನಕ ಉಭಯ ತಾಲೂಕುಗಳಲ್ಲಿ ಒಟ್ಟು 847 ಪ್ರಕರಣಗಳು ವರದಿಯಾಗಿವೆ. ಕಡಬ ತಾಲೂಕಿನ ಬಲ್ಯ ನಿವಾಸಿ 52 ವರ್ಷದ ಪುರುಷ, ಶಿರಾಡಿ ನಿವಾಸಿ 50 ವರ್ಷದ ಪುರುಷ, 48 ವರ್ಷದ ಮಹಿಳೆ, ನೂಜಿಬಾಳ್ತಿಲದ 39 ವರ್ಷದ ಪುರುಷ, ಬಿಳಿನೆಲೆಯ 62 ವರ್ಷದ ಮಹಿಳೆ, ಸವಣೂರಿನ 41 ವರ್ಷದ ಪುರುಷ, ನೆಲ್ಯಾಡಿ ದೋಂತಿಲದ 52 ವರ್ಷದ ಮಹಿಳೆ,

ಕಡಬ , ಪುತ್ತೂರಿನಲ್ಲಿ ಇಂದು 40 ಮಂದಿಗೆ ಕೊರೋನ ದೃಢ Read More »

ಕರಾವಳಿ, ಕರ್ನಾಟಕ
Scroll to Top