ಆತ್ಮಹತ್ಯೆಗೆ ಶರಣಾದ ಮಗ..!  ಶವದ ಮುಂದೆ ಕಣ್ಣೀರಿಡುತ್ತಾ ಮೃತಪಟ್ಟ ತಾಯಿ..!



(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 26.  ಮಗ ಆತ್ಮಹತ್ಯೆಗೆ ಶರಣಾಗಿದ್ದನ್ನು ನೋಡಿದ ತಾಯಿ ಆ ನೋವಿನಲ್ಲೇ ಶವದ ಮುಂದೆ ಕಣ್ಣೀರಿಡುತ್ತಾ ಕೊನೆಯುಸಿರೆಳೆದಿರುವ ಮನಕಲಕುವ ಘಟನೆ ನಡೆದಿದೆ.







ಬೆಂಗಳೂರಿನ ಕಾವೇರಿಪುರದಲ್ಲಿ ನೆಲೆಸಿದ್ದ ಕ್ಯಾಬ್ ಚಾಲಕನಾಗಿದ್ದ ಅರುಣ್ ಕುಮಾರ್ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದನು. ಕೋಣೆಯಲ್ಲಿ ಮಲಗಿದ್ದ ಮಗನಿಗೆ ಕಾಫಿ ಕೊಡಲು ಹೋಗಿದ್ದ ತಾಯಿಗೆ ಮಗು ನೇಣು ಬಿಗಿದುಕೊಂಡಿರುವುದನ್ನು ನೋಡಿ ಬರಸಿಡಿಲು ಬಡಿದಂತಾಗಿತ್ತು. ಮಗನ ಶವ ಮುಂದೆ ಕುಳಿತು ರೋದಿಸುತ್ತಿದ್ದ 78 ವರ್ಷದ ಸರಸ್ವತಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.






 

error: Content is protected !!
Scroll to Top