ಕಡಬ ರಕ್ಷಿತಾರಣ್ಯದಲ್ಲಿ ಅಸ್ಥಿಪಂಜರ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಆ. 17. ಸಂಪೂರ್ಣ ಕೊಳೆತುಹೋದ ಮೃತದೇಹದ ಅಸ್ಥಪಂಜರವೊಂದು ಪತ್ತೆಯಾಗಿರುವ ಕುರಿತು ಕಡಬ ತಾಲೂಕಿನ ಕೊಂಬಾರು ಗ್ರಾಮದ ಬೊಟ್ಟಡ್ಕ ಬಳಿಯ ಕೊಂಬಾರು ರಕ್ಷಿತಾರಣ್ಯದ ಪ್ರದೇಶದ ಉಡೆಂಜಿಪಲ್ಲ ತೋಡು ಪ್ರದೇಶದಿಂದ ವರದಿಯಾಗಿದೆ.

ಸ್ಥಳೀಯರ ಮಾಹಿತಿಯಂತೆ ಸ್ಥಳಕ್ಕೆ ತೆರಳಿದ ಪೊಲೀಸರಿಗೆ ತಲೆ ಬುರುಡೆ, ಎದೆ ಮೂಳೆಗಳು ಹಾಗೂ ಕಾಲಿನ ಮೂಳೆಗಳು ಮಾತ್ರ ಕಂಡುಬಂದಿದ್ದು, ಮಾಂಸಖಂಡಗಳು ಮತ್ತು ಚರ್ಮ ಇಲ್ಲದೇ ಇದ್ದು, ಮೃತದೇಹವು ಪುರುಷನದ್ದೋ ಅಥವಾ ಮಹಿಳೆಯದ್ದೋ ಎನ್ನುವುದು ತಿಳಿದುಬಂದಿಲ್ಲ. ಸುಮಾರು 4ರಿಂದ 6 ತಿಂಗಳ ಹಿಂದೆ ಕಾಡಿನಲ್ಲಿ ಮೃತಪಟ್ಟಿರುವ ಸಾಧ್ಯತೆಗಳಿದ್ದು, ಅದರ ಗುರುತು ಪತ್ತೆಗೆ ಸಹಕರಿಸುವಂತೆ ಕಡಬ ಪೊಲೀಸರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ. ಈ ಕುರಿತು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

error: Content is protected !!

Join the Group

Join WhatsApp Group