(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 22. ಇಲ್ಲಿನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಇದೇ ಜೂ. 28ರ ಬುಧವಾರ ಬೆಳಿಗ್ಗೆ 9ರಿಂದ ಜನಸ್ಪಂದನ ಸಭೆ ನಡೆಯಲಿದೆ. ಮಂಗಳೂರು, ಉಳ್ಳಾಲ, ಮುಲ್ಕಿ ಮತ್ತು ಮೂಡಬಿದ್ರೆ ವ್ಯಾಪ್ತಿಗೆ ಸಂಬಂಧಿಸಿದ ಅವಹಾಲುಗಳನ್ನು ಸ್ವೀಕರಿಸಲು ಮುಕ್ತ ಸಭೆ ಕರೆಯಲಾಗಿದ್ದು, ಸಾರಿಗೆ ಇಲಾಖೆಗೆ ಸಂಬಂಧಪಟ್ಟ ಅಹವಾಲುಗಳನ್ನು ಸಾರ್ವಜನಿಕರು ಸಲ್ಲಿಸುವಂತೆ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂ. 28ರಂದು ಜನಸ್ಪಂದನ ಸಭೆ
![](https://i0.wp.com/newskadaba.com/wp-content/uploads/2022/12/News-Kadaba-Defualt-Image-copy.jpg?fit=1024%2C576&ssl=1)