ಕ್ಷಣಾರ್ಧದಲ್ಲಿ ಹಾವು ಕಡಿತದಿಂದ ಬಚಾವ್ ಆದ ಬಾಲಕಿ!

(ನ್ಯೂಸ್ ಕಡಬ)newskadaba.com ಬೆಳಗಾವಿ, ಮೇ.31. ಮನೆ ಹೊಸ್ತಿಲ ಬಳಿ ಇದ್ದ ಹಾವಿನಿಂದ ಬಾಲಕಿಯೋರ್ವಳು ಕ್ಷಣಾರ್ಧದಲ್ಲಿ ಬಚಾವ್​ ಆಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಮನೆ ಬಾಗಿಲಿನ ಸಮೀಪವೇ ಇದ್ದ ಹಾವನ್ನು ಗಮನಿಸದೇ ಮನೆಯೊಳಗೆ ಪ್ರವೇಶಿಸಲು ಮುಂದಾಗಿದ ಬಾಲಕಿ ಹೊಸ್ತಿಲ ಬಳಿ ಬರುತ್ತಿದ್ದಂತೆ ಹಾವು ಹೆಡೆ ಎತ್ತಿತ್ತು.

ಗಮನಿಸಿದ ಮನೆ ಸದಸ್ಯರು ಹೊಸ್ತಿಲ ಬಳಿ ಹಾವು ಇರುವ ವಿಷಯ ತಿಳಿಸಿದ್ದಾರೆ. ಕೂಡಲೇ ಎಚ್ಚೆತ್ತ ಬಾಲಕಿ ಹಾವು ನೋಡಿ ಹೆದರಿ ಮನೆಯೊಳಗೆ ಓಡಿ ಹೋಗಿದ್ದಾಳೆ. ಈ ಮೂಲಕ ಹಾವು ಕಡಿತದಿಂದ ಬಾಲಕಿ ಪಾರಾಗಿದ್ದಾಳೆ.

Also Read  ದ.ಕ. ಜಿಲ್ಲಾ ಎನ್ಎಸ್.ಯು.ಐ ಅಧ್ಯಕ್ಷರಾಗಿ ಎರಡನೇ ಬಾರಿಗೆ ಸವಾದ್ ಸುಳ್ಯ ಆಯ್ಕೆ

 

 

 

error: Content is protected !!
Scroll to Top