ಸುಬ್ರಹ್ಮಣ್ಯ: ಮತದಾನ ಬಹಿಷ್ಕರಿಸಿ ಆಕ್ರೋಶ ➤ ಸಂಕ ನಿರ್ಮಿಸಲು ಶ್ರಮಸೇವೆ

(ನ್ಯೂಸ್ ಕಡಬ)newskadaba.com ಸುಬ್ರಮಣ್ಯ, ಮೇ.11. ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಐನಕಿದು ಗ್ರಾಮದ ಕುಜುಂಬಾರ್ ನಲ್ಲಿ ಸೇತುವೆ ನಿರ್ಮಿಸುವಂತೆ ಹಲವಾರು ವರ್ಷಗಳಿಂದ ಬೇಡಿಕೆ ಇದ್ದರೂ ಅದನ್ನು ಈಡೇರಿಸದ ಹಿನ್ನಲೆಯಲ್ಲಿ ಆ ಭಾಗದ ಜನರು ಮತದಾನದಲ್ಲಿ ಭಾಗವಹಿಸದೆ ಹೊಳೆಗೆ ತಾತ್ಕಲಿಕ ಮರದ ಸಂಕ ನಿರ್ಮಿಸಿದಲು ಶ್ರಮಸೇವೆ ನಡೆಸಿದ ಘಟನೆ ನಡೆದಿದೆ.


ಮತದಾನ ಬಹಿಷ್ಕರಿಸುವ ಬ್ಯಾನರ್ ಹಿಂದೆಯೇ ಅಳವಡಿಸಿದ್ದು ಅಧಿಕಾರಿಗಳು ಬಂದು ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ ಯಾವುದೇ ಭರವಸೆ ನೀಡದ ಹಿನ್ನಲೆ ೩೦ ಕ್ಕೂ ಹೆಚ್ಚು ಮನೆಯ ೮೦ ಮಂದಿ ಮತ ಚಲಾಯಿಸಿರಲಿಲ್ಲ. ಹೀಗಾಗಿ ಹೊಳೆಗೆ ಸಂಪರ್ಕ ಕಲ್ಪಿಸುವ ಪಾಲ ನಿರ್ಮಾಣಕ್ಕಾಗಿ ಶ್ರಮ ಸೇವೆ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Also Read  ಕಡಬದ ಆಶಾ ಕಾರ್ಯಕರ್ತೆ ನಾಪತ್ತೆ ➤ ಕರುಳ ಕುಡಿಗಳ ಆಕ್ರಂದನ

error: Content is protected !!
Scroll to Top