ಬೆಳ್ತಂಗಡಿ: ಹರೀಶ್ ಪೂಂಜ ವಿರುದ್ದ ಹಣ ಹಂಚಲು ಹೋದ ಆರೋಪ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಮೇ.09. ಮನೆ ಮನೆ ಪ್ರಚಾರದ ವೇಳೆ ಹಣ ಹಂಚಲು ಹೋಗಿರುವ ಆರೋಪ ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ವಿರುದ್ದ ಕೇಳಿಬಂದಿದೆ.


ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರ ನಿನ್ನೆ ಸಂಜೆಗೆ ಅಂತ್ಯವಾಗಿದ್ದು, ಈ ಹಿನ್ನಲೆಯಲ್ಲಿ ರಾತ್ರಿ ವೇಳೆ ಪೂಂಜ ಮತ್ತು ತಂಡದವರು ಮನೆ ಮನೆ ಪ್ರಚಾರ ಆರಂಭಿಸಿದ್ದರು. ಬೆಳ್ತಂಗಡಿಯಲ್ಲಿರುವ ಅಶೋಕ ನಗರದ ದಲಿತ ಕಾಲೋನಿಯೊಂದಕ್ಕೆ ಮತಯಾಚನೆಗೆ ಹೋದ ಸಂದರ್ಭ ಐದು ಲಕ್ಷ ರೂ. ಕೊಡುತ್ತೇನೆ ಎಂದು ಆಮಿಷವೊಡ್ಡಿರುವ ಬಗ್ಗೆಆರೋಪ ಕೇಳಿಬಂದಿದೆ.

Also Read  ಗೃಹಜ್ಯೋತಿ ಯೋಜನೆ: ಹೊಸ ಗ್ರಾಹಕರಿಗೆ 'ಅರ್ಧ ಜ್ಯೋತಿ' ಭಾಗ್ಯ; ಇದರಿಂದ ಸರ್ಕಾರಕ್ಕೆ 600 ಕೋಟಿ ಉಳಿತಾಯ!

error: Content is protected !!
Scroll to Top