ಸುಡಾನ್‌ನಿಂದ ಸುರಕ್ಷಿತವಾಗಿ ಬೆಂಗಳೂರಿಗೆ ಬಂದಿಳಿದ ಕನ್ನಡಿಗರು..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.29 ಯುದ್ಧ ಪೀಡಿತ ಸುಡಾನ್‌ನಿಂದ ರಕ್ಷಿಸಲ್ಪಟ್ಟ ಒಟ್ಟು 362 ಭಾರತೀಯರು, ಅವರಲ್ಲಿ 114 ಮಂದಿ ಕರ್ನಾಟಕದವರು ಬೆಂಗಳೂರು ತಲುಪಿದ್ದಾರೆ. ಜೆಡ್ಡಾದಿಂದ ಸೌದಿಯಾ ವಿಮಾನದಲ್ಲಿ ಅವರು ಬಂದರು ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಮೂಲಗಳು ತಿಳಿಸಿವೆ.

ಬಂದವರ ಗುಂಪಿನಲ್ಲಿ 241 ಪುರುಷರು, 107 ಮಹಿಳೆಯರು, 12 ಮಕ್ಕಳು ಮತ್ತು ಇಬ್ಬರು ಶಿಶುಗಳು ಇದ್ದಾರೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಕೆಎಸ್‌ಡಿಎಂಎ) ಆಯುಕ್ತ ಮನೋಜ್ ರಾಜನ್ ತಿಳಿಸಿದ್ದಾರೆ. ಆಪರೇಷನ್ ಕಾವೇರಿಯ ಭಾಗವಾಗಿ ಸುಡಾನ್‌ನಿಂದ ಸ್ಥಳಾಂತರಿಸಲಾದ ಕರ್ನಾಟಕದ ಸ್ಥಳೀಯರ ಎರಡನೇ ಬ್ಯಾಚ್ ಇದಾಗಿದೆ ಎಂದು ಡಿಎಚ್‌ ವರದಿ ಮಾಡಿದೆ.

 

 

error: Content is protected !!

Join the Group

Join WhatsApp Group