ಉಪ್ಪಿನಂಗಡಿ: ಆಟೋ ಚಾಲಕನಿಗೆ ಹಲ್ಲೆ ನಡೆಸಿ ತಂಡ ಪರಾರಿ    ➤ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಏ.28. ಓವರ್ ಟೇಕ್ ವಿಚಾರದಲ್ಲಿ ಜಗಳ ನಡೆದು ರಿಕ್ಷಾ ಚಾಲಕನ‌ ಮೇಲೆ ಕೇರಳ ನೋಂದಣಿಯ ಕಾರಿನಲ್ಲಿದ್ದ ತಂಡ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.

ಕಡಬ ತಾಲೂಕಿನ ಅಡ್ಡಹೊಳೆ ಬಳಿ ಘಟನೆ ನಡೆದಿದೆ ಎನ್ನಲಾಗಿದೆ. ಶಿರಾಡಿ ಗ್ರಾಮದ ಪೆರುಮಜಲು ನಿವಾಸಿ ಆಟೋ ಚಾಲಕ ವಿಶ್ವನಾಥ್ ಈ ಕುರಿತು ದೂರು ನೀಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

 

error: Content is protected !!

Join the Group

Join WhatsApp Group