ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ   ➤ ರಾಜ್ಯಾದ್ಯಂತ 265 ಕೋಟಿ ರೂ. ನಗದು, ವಸ್ತುಗಳು ಜಪ್ತಿ.!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.26 ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಚುನಾವಣಾಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಈವರೆಗೆ 88 ಕೋಟಿ ರೂ. ನಗದು, 147 ಕೆ.ಜಿ. ಚಿನ್ನವನ್ನು ಜಪ್ತಿ ಮಾಡಿದ್ದಾರೆ.ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ 88 ಕೋಟಿ ರೂ.ನಗದು, 75 ಕೋಟಿ ರೂ.ಮೌಲ್ಯದ 147 ಕೆ.ಜಿ ಚಿನ್ನ ಸೇರಿದಂತೆ ಒಟ್ಟು 265 ಕೋಟಿ ರೂ.ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಾಗೃತದಳ, ಸ್ಥಿರ ತಪಾಸಣಾ ತಂಡ, ಪೊಲೀಸ್, ಅಬಕಾರಿ ಹಾಗೂ ಆದಾಯ ತೆರಿಗೆ ಅಧಿಕಾರಿಗಳು ಈವರೆಗೆ 26.62 ಕೋಟಿ ರೂ. ಮೌಲ್ಯದ ಉಡುಗೊರೆಗಳು ಹಾಗೂ 4.32 ಕೋಟಿ ರೂ. ಮೌಲ್ಯದ 615 ಕೆಜಿ ಬೆಳ್ಳಿ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 17 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ, 60 ಕೋಟಿ ರೂ. ಮೌಲ್ಯದ 15.73 ಲಕ್ಷ ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ. ಅಕ್ರಮಕ್ಕೆ ಸಂಬಂಧಿಸಿದಂತೆ ಒಟ್ಟು 2,036 ಪ್ರಕರಣಗಳು ದಾಖಲಾಗಿವೆ.

Also Read  ಹಾನಗಲ್ ಶತಮಾನ ಪುರುಷ ಗೋಷ್ಠಿ ➤ನಟಿ ಸುಧಾ ನರಸಿಂಹರಾಜು ಅವರಿಗೆ ದಿಗ್ಬಂಧನ!

 

 

 

 

error: Content is protected !!
Scroll to Top