ಮಗುವನ್ನು ಬಿಸಿ ನೀರಿನಲ್ಲಿ ಮುಳುಗಿಸಿ ಕೊಲೆಗೈದ ಪಾಪಿ!   ➤ಆರೋಪಿಯನ್ನು ಬಂಧಿಸಿದ ಪೋಲೀಸರು..!  

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.25, ಕೊಲೆಗಾರ ವಿಕ್ರಮ್ ಮತ್ತು ಮಗುವಿನ ತಾಯಿ ಕಿರಣಾ ನಡುವೆ ಅಕ್ರಮ ಸಂಬಂಧವಿತ್ತು. ಕಿರಣಾಳನ್ನು ಮದುವೆಯಾಗಲು ವಿಕ್ರಮ್ ಬಯಸಿದ್ದು, ತನ್ನನ್ನು ಮದುವೆಯಾಗುವಂತೆ ಕಿರಣಾ ಬಳಿ ಕೇಳಿದ್ದಾನೆ.

ಕಿರಣಾ ಮದುವೆಯಾಗಲು ನಿರಾಕರಿಸಿದಳು ಎಂಬ ಕಾರಣಕ್ಕೆ ಅವಳ ಒಂದೂವರೆ ವರ್ಷದ ಮಗುವನ್ನು ಬಿಸಿ ನೀರಿನ ಬಕೆಟ್‌ನಲ್ಲಿ ಮುಳುಗಿಸಿ ಕೊಂದ ಘಟನೆ ಮಹಾರಾಷ್ಟ್ರದ ಪುಣೆಯ ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ನಡೆದಿದೆ.

ಕೊಲೆಗಾರ ವಿಕ್ರಮ್ನನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗಲು ಕಿರಣಾ ನಿರಾಕರಿಸಿದ್ದು, ಇದೇ ಕೋಪಕ್ಕೆ ಮಗುವನ್ನು ಕೊಂದಿದ್ದಾನೆ’ ಎಂದು ಹಿರಿಯ ಇನ್ಸ್‌ಪೆಕ್ಟರ್ ವೈಭವ್ ಶಿಂಗಾರೆ ಹೇಳಿದ್ದಾರೆ.

Also Read  ತುಳಸಿ ದೀಪಾರಾಧನೆ, ಪ್ರದಕ್ಷಣೆಯಿಂದ ಎಷ್ಟೆಲ್ಲ ಉಪಯೋಗ

 

 

 

 

error: Content is protected !!
Scroll to Top