ಹೊಳೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ವರು ಸಾವು.!

(ನ್ಯೂಸ್ ಕಡಬ)Newskadaba.com ಉಡುಪಿ,ಏ.24 ಹೊಳೆಯಲ್ಲಿ ಕಪ್ಪೆ ಚಿಪ್ಪು, ಮೀನು ಹಿಡಿಯಲು ಹೋಗಿದ್ದ ನಾಲ್ವರು ಮೃತಪಟ್ಟ ಘಟನೆ ಬ್ರಹ್ಮಾವರ ಸಮೇಪದ ಹೂಡೆಯ ಕಿಣಿಯಾರ ಕುದ್ರುವಿನಲ್ಲಿ ನಡೆದಿದೆ.ಹೂಡೆಯ ಇಬಾಸ್, ಫೈಜಾನ್, ಶೃಂಗೇರಿಯ ಫರ್ಹಾನ್ ಮತ್ತು ಸುಫಾನ್ ಮೃತಪಟ್ಟವರು ಎಂದು ಹೇಳಲಾಗಿದೆ.

ರಂಜಾನ್ ಅಂಗವಾಗಿ ಶೃಂಗೇರಿಯಿಂದ ಬ್ರಹ್ಮಾವರದ ಹೂಡೆಯಲ್ಲಿರುವ ಸಂಬಂಧಿಕರ ಮನೆಗೆ ಯುವಕರು ಬಂದಿದ್ದು, ಸ್ಥಳೀಯರೊಂದಿಗೆ ಕಪ್ಪೆಚಿಪ್ಪು ಸಂಗ್ರಹಿಸಲು ದೋಣಿಯಲ್ಲಿ ತೆರಳಿದ್ದರು.7 ಜನ ಕಪ್ಪೆ ಚಿಪ್ಪು ತೆಗೆಯುವ ವೇಳೆ ಆಕಸ್ಮಿಕವಾಗಿ ಗುಂಡಿಗೆ ಇಳಿದಿದ್ದಾರೆ. ಆಳವಾದ ಗುಂಡಿಗೆ ಇಳಿದ ಮೂವರು ಈಜಿಕೊಂಡು ಪಾರಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಬ್ರಹ್ಮಾವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

error: Content is protected !!

Join the Group

Join WhatsApp Group