ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್ ಸಿಗದ ಹಿನ್ನಲೆ ➤25 ಕ್ಷೇತ್ರಗಳ ಪ್ರಮುಖ ನಾಯಕರು ಜೆಡಿಎಸ್ ತೆಕ್ಕೆಗೆ..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.19 ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್ ಸಿಗದ ಒಂಬತ್ತು ಮಾಜಿ ಶಾಸಕರು ಸೇರಿ 25 ಕ್ಷೇತ್ರಗಳ ಪ್ರಮುಖ ನಾಯಕರು ಜೆಡಿಎಸ್ ತೆಕ್ಕೆಗೆಬಿದ್ದಿದ್ದಾರೆ.

ಎರಡೂ ಪಕ್ಷಗಳಲ್ಲಿ ಕಾಣಿಸಿಕೊಂಡ ಬಂಡಾಯ ಜೆಡಿಎಸ್ ಪಾಲಿಗೆ ವರದಾನವಾಗಿದ್ದು, ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಕೊರತೆಯನ್ನೂ ನೀಗಿಸಿದೆ.

ಐವರು ಮಾಜಿ ಶಾಸಕರು, ಇಬ್ಬರು ವಿಧಾನಪರಿಷತ್ನ ಮಾಜಿ ಸದಸ್ಯರಷ್ಟೇ ಅಲ್ಲದೆ ಮೂವರು ಮಾಜಿ ಸಚಿವರು ಸಹ ಕಾಂಗ್ರೆಸ್ ಮತ್ತು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದು, ಪಕ್ಷಕ್ಕೂ ಕೆಲವೆಡೆ ಬಲ ಬಂದಂತಾಗಿದೆ.

 

 

 

Scroll to Top