ಬಂಟ್ವಾಳ: ಹೊಟೇಲ್ ಗೆ ಕನ್ನ ಹಾಕಿದ ಖದೀಮರು ➤ ನಗದು ದೋಚಿ ಪರಾರಿ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಏ.19. ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ರಸ್ತೆ ಮಧ್ಯೆ ಬಿಸಿರೋಡಿನ ಹೃದಯ ಭಾಗದಲ್ಲಿರುವ ಪ್ರಸಿದ್ಧ ಹೊಟೇಲ್ ಒಂದಕ್ಕೆ ಕಳ್ಳರು ನುಗ್ಗಿ, ಸಾವಿರಾರು ನಗದು ದೋಚಿದ ಬಂದಿದೆ.


ಬಿಸಿರೋಡಿನ ಕಿಶೋರ್ ಎಂಬವರ ಮಾಲಕತ್ವದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಶ್ರೀ ಕೃಷ್ಣ ವಿಲಾಸ ಹೋಟೆಲ್’ನಿಂದ ಕಳವು ಮಾಡಲಾಗಿದೆ. ಹೊಟೇಲ್ ನ ಬೀಗವನ್ನು ಮುರಿದು ಶಟರ್ ತೆಗದು ಒಳನುಗ್ಗಿದ ಕಳ್ಳರು ಕ್ಯಾಶ್ ಕೌಂಟರ್’ನಲ್ಲಿದ್ದ ಸುಮಾರು 30 ಸಾವಿರಕ್ಕಿಂತಲೂ ಅಧಿಕ ನಗದನ್ನು ದೋಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.

Scroll to Top