ವಿವಾಹಿತೆ ಜತೆ ಯುವಕನ ಸಂಬಂಧ!   ➤ಕೊಲೆಯಲ್ಲಿ ಅಂತ್ಯ!  

(ನ್ಯೂಸ್ ಕಡಬ) newskadaba.com. ಹಾರಾಷ್ಟ್ರ ,ಏ.10. ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ವಿವಾಹಿತೆ ಜತೆ ಸಂಬಂಧ ಬೆಳೆಸಿದ ಆರೋಪದಡಿ ಯುವಕನನ್ನು ಕೊಚ್ಚಿ ಕೊಲೆ ಮಾಡಿದ್ದು, ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗ್ರಾಮದ ನಿವಾಸಿ ಸಂತೋಷ ಶ್ರೀಮಂತ ಹೆಗಡೆ (26) ಕೊಲೆಗೀಡಾದ ಯುವಕ.’ಗ್ರಾಮದ ವಿವಾಹಿತೆ ಜತೆ ನನ್ನ ಮಗ ಸಂತೋಷ ಸಂಬಂಧ ಬೆಳೆಸಿದ್ದ. ಅವಳಿಂದ ದೂರಾಗುವಂತೆ ತಿಳಿ ಹೇಳಿದ್ದೆವು ಆದರೆ ಆಕೆಯನ್ನು ನಾನು ಬಿಟ್ಟರೂ ಆಕೆ ನನ್ನನ್ನು ಬಿಡುವುದಿಲ್ಲ ಎನ್ನುತ್ತಿದ್ದ. ಹೀಗಾಗಿ, ಸಂತೋಷನಿಗೆ ಹೆಣ್ಣು ನೋಡಿ, ನಿಶ್ಚಿತಾರ್ಥಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಶನಿವಾರ ಬೆಳಿಗ್ಗೆ ಮನೆ ಬಿಟ್ಟು ಹೋದವನು ಭಾನುವಾರ ಗ್ರಾಮದ ಶಾಲಾ ಆವರಣದಲ್ಲಿ ಶವವಾಗಿ ಪತ್ತೆಯಾದ’ ಎಂದು ಮೃತನ ತಾಯಿ ಚಂದಮ್ಮ ಶ್ರೀಮಂತ ದೂರು ನೀಡಿದ್ದಾರೆ.

 

 

error: Content is protected !!

Join the Group

Join WhatsApp Group