ಪುತ್ತೂರು: ನಗರಸಭಾ ಸದಸ್ಯ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ. 16. ಪುತ್ತೂರು ನಗರಸಭಾ ಸದಸ್ಯರೋರ್ವರು ಆತ್ಮಹತ್ಯೆ ಮಾಡಿಕೊಂಡ ಕುರಿತು ಪುತ್ತೂರಿನಲ್ಲಿ ವರದಿಯಾಗಿದೆ.

ಆತ್ಮಹತ್ಯೆ ಮಾಡಕೊಂಡವರನ್ನು ಪುತ್ತೂರು ನಗರಸಭಾ ಸದಸ್ಯ ಶಿವರಾಮ್ ಸಪಲ್ಯ ಎಂದು ಗುರುತಿಸಲಾಗಿದೆ. ಇವರು ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಪತ್ನಿ ಫೋನ್ ಮಾಡಿದಾಗ ಶಿವರಾಂ ಫೋನನ್ನು ಸ್ವೀಕರಿಸದೇ ಇದ್ದ ಕಾರಣ, ಹತ್ತಿರದ ಮನೆಯವರಿಗೆ ಮನೆಗೆ ತೆರಳಿ ನೋಡುವಂತೆ ಹೇಳಿದ್ದಾರೆ. ಈ ಸಂದರ್ಭ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Also Read  ತುಳುನಾಡಿನಲ್ಲೊಂದು ವಿಚಿತ್ರ ಮದುವೆ 'ರಾಪಟದ ರಾಕೇಶನ ಮದಿಮೆ' ► ಬಂಟ್ವಾಳದ ಮದುವೆಯಲ್ಲಿ ಗೆಳೆಯರು ಮಾಡಿದ ಕೀಟಲೆಯ ವೀಡಿಯೋ ಇದೀಗ ವೈರಲ್

error: Content is protected !!
Scroll to Top