ಕಡಬದ ಆಹಾರ ನಿರೀಕ್ಷಕ ಚಂದ್ರ ನಾಯ್ಕ್ ಕಂದಾಯ ನಿರೀಕ್ಷಕರಾಗಿ ಪಂಜಕ್ಕೆ ವರ್ಗಾವಣೆ !

(ನ್ಯೂಸ್ ಕಡಬ)newskadaba.com ಕಡಬ, ಫೆ.16. ಕಡಬ ತಾಲೂಕು ಕಚೇರಿಯಲ್ಲಿ ಆಹಾರ ನಿರೀಕ್ಷಕರಾಗಿದ್ದ ಚಂದ್ರ ನಾಯ್ಕ ಎನ್. ಕಂದಾಯ ನಿರೀಕ್ಷಕರಾಗಿ ಪಂಜಕ್ಕೆ ವರ್ಗಾವಣೆಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ದಾವಣಗೆರೆ ನಿವಾಸಿಯಾದ ಚಂದ್ರ ನಾಯ್ಕ ಕಳೆದ 13 ವರ್ಷಗಳಿಂದ ಕೊಡಿಂಬಾಡಿ, ಉಪ್ಪಿನಂಗಡಿ, ಸವಣೂರು, ಪುಣಚ್ಚಾಡಿಯಲ್ಲಿ ಕಾರ್ಯ ನಿರ್ವಹಿಸಿದ್ದರು ಎನ್ನಲಾಗಿದೆ. ಕಡಬ ತಾಲೂಕು ಕಚೇರಿಗೆ ವರ್ಗಾವಣೆಗೊಂಡಿದ್ದ ಇವರು ಇದೀಗ ಕಂದಾಯ ನಿರೀಕ್ಷಕರಾಗಿ ಪದೊನ್ನತಿ ಪಡೆದು ವರ್ಗಾವಣೆಗೊಂಡಿದ್ದಾರೆ ಎಂದು ತಿಳಿದುಬಂದಿದೆ.

 

Scroll to Top