ಸುಳ್ಳು ದೂರು ಕೊಟ್ಟಅಮೀರ್ ಖಾನ್ಗೆ ನ್ಯಾಯಾಂಗ ಬಂಧನ

(ನ್ಯೂಸ್ ಕಡಬ)newskadaba.com ದಾವಣಗೆರೆ, ಫೆ.16. ಆನ್ಲೈನ್ ಗೇಮ್ನಲ್ಲಿ ಹಣ ಸೋತು ಮನೆಯಲ್ಲಿ ಬೈಯ್ಯುತ್ತಾರೆಂದು ಯಾರೋ ಮೂವರು ಚಾಕು ತೋರಿಸಿ, ತನ್ನನ್ನು ಅಪಹರಿಸಿ, ಮೊಬೈಲ್ ಕಸಿದುಕೊಂಡು, 35 ಸಾವಿರ ರು. ಪೋನ್ ಪೇ ಮೂಲಕ ಕಳಿಸಿಕೊಂಡಿದ್ದಾರೆಂದು ಸುಳ್ಳು ದೂರು ದಾಖಲಿಸಿದ್ದ ಆರೋಪಿಯನ್ನು ಇಲ್ಲಿನ ಆಜಾದ್ ನಗರ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.


ನಗರದ ಎಸ್ಎಸ್ಎಂ ನಗರಎ ಬ್ಲಾಕ್ ವಾಸಿ ಅಮೀರ್ ಖಾನ್ (21 ವರ್ಷ) ಬಂಧಿತ ಆರೋಪಿ. ಬಂಧಿತ ಆರೋಪಿಯು ತನ್ನ ಖಾತೆಯಲ್ಲಿದ್ದ ಹಣವನ್ನು ಮೊಬೈಲ್ ಆನ್ಲೈನ್ ಗೇಮ್ನಲ್ಲಿ ಹಾಕಿ, ಹಣ ಸೋತಿದ್ದನು. ಹಣ ಸೋತಿದ್ದರಿಂದ ಮನೆಯಲ್ಲಿ ತಂದೆ ಬೈಯ್ಯುತ್ತಾರೆಂದು ಮೂವರು ವ್ಯಕ್ತಿಗಳು ತನಗೆ ಚಾಕು ತೋರಿಸಿ, ಅಪಹರಿಸಿದ್ದರು ಎಂಬುದಾಗಿ ಆರೋಪಿ ಅಮೀರ್ ಖಾನ್ ಆಜಾದ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

error: Content is protected !!

Join the Group

Join WhatsApp Group