ಬುದ್ಧಿವಾದ ಹೇಳಿದ್ದೆ ತಪ್ಪಾಯ್ತು ➤ ಕಂಡಕ್ಟರ್ ಗೆ ಹೊಡೆದ ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba. com. ಕೊಪ್ಪಳ. ಫೆ.1. ವಿದ್ಯಾರ್ಥಿಯೊಬ್ಬ ಸ್ಥಳೀಯರನ್ನು ಸೇರಿಸಿಕೊಂಡು ಕೆಎಸ್​ಆರ್​ಟಿಸಿ ಬಸ್ ಕಂಡಕ್ಟರ್ ಮತ್ತು ಡ್ರೈವರ್ ಮೇಲೆ ಹಲ್ಲೆ ಮಾಡಿರುವ ಘಟನೆ ಯಲಬುರ್ಗಾ ತಾಲೂಕಿನ ಕುದರಿಮೋತಿ ಕ್ರಾಸ್ ಬಳಿ ನಿನ್ನೆ ಈ ಘಟನೆ ನಡೆದಿದೆ. ಬಸ್ ಬಾಗಿಲ ಬಳಿ ನಿಂತ ವಿದ್ಯಾರ್ಥಿಗೆ ಬುದ್ದಿ ಮಾತು ಹೇಳಿದ್ದಕ್ಕೆ ಕಂಡಕ್ಟರ್ ಮತ್ತು ಡ್ರೈವರ್ ಮೇಲೆ ಹಲ್ಲೆ ಮಾಡಲಾಗಿದೆ.

ಕುಷ್ಟಗಿ ಬಸ್ ಡಿಪೋ ಡ್ರೈವರ್ ಹನುಮನಗೌಡ ಹಾಗೂ ಕಂಡಕ್ಟರ್ ರಾಜಸಾಬ ಕಂಬಾರ ಮೇಲೆ ಹಲ್ಲೆ ನಡೆದಿದೆ. ಕುದರಿಮೋತಿ ನಿವಾಸಿ ಗಣೇಶ್ ಹಾಗೂ ಸ್ಥಳೀಯ 7-8 ಜನರ ಗುಂಪು ಸೇರಿಕೊಂಡು ಬಸ್​ ಚಾಲಕ ಮತ್ತು ಕಂಡಕ್ಟರ್​ ಮೇಲೆ ಹಲ್ಲೆ ಮಾಡಿದ್ದಾರೆ. ವಿದ್ಯಾರ್ಥಿಯನ್ನು ಬಸ್ ಬಾಗಿಲು ಬಳಿ ನಿಲ್ಲದೆ ಒಳಗೆ ಬಂದು ಕುಳಿತುಕೊಳ್ಳಲು ಹೇಳಿದ್ದಕ್ಕೆ ವಿದ್ಯಾರ್ಥಿ ಗಲಾಟೆ ಮಾಡಿದ್ದಾನೆ. ಅವಾಚ್ಯ ಪದಗಳಿಂದ ನಿಂದಿಸಿ ಸ್ಥಳೀಯರೊಂದಿಗೆ ಸೇರಿ ಹಲ್ಲೆ ಮಾಡಿದ್ದಾನೆ.

error: Content is protected !!

Join the Group

Join WhatsApp Group