ಹಾನಗಲ್ ಶತಮಾನ ಪುರುಷ ಗೋಷ್ಠಿ ➤ನಟಿ ಸುಧಾ ನರಸಿಂಹರಾಜು ಅವರಿಗೆ ದಿಗ್ಬಂಧನ!

ನ್ಯೂಸ್ ಕಡಬ) newskadaba.com., ಹಾವೇರಿ, ಜ.7. ಹಾನಗಲ್ ಕುಮಾರ್ ಶಿವಯೋಗಿಗಳ ವೇದಿಕೆಯಲ್ಲಿ ಶತಮಾನ ಪುರುಷ ಗೋಷ್ಠಿಗೆ ತಮ್ಮ ತಂದೆ ಖ್ಯಾತ ನಟ ನರಸಿಂಹರಾಜು ಕುರಿತು ಮಾತನಾಡಲು ಬಂದಿದ್ದ ಅವರ ಪುತ್ರಿ ನಟಿ ಸುಧಾ ನರಸಿಂಹರಾಜು ಅವರಿಗೆ, ಪೊಲೀಸರು ಪ್ರಧಾನ ವೇದಿಕೆ ಬಳಿ ಒಂದು ತಾಸು ದಿಗ್ಬಂಧನ ಹಾಕಿರುವ ಘಟನೆ ವರದಿಯಾಗಿದೆ.

ಮಧ್ಯಾಹ್ನ 2ಕ್ಕೆ ನಿಗದಿಯಾಗಿದ್ದ ಗೋಷ್ಠಿಗೆ ಬಂದಿದ್ದ ನನ್ನನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ನರಸಿಂಹರಾಜು ಅವರ ಕುರಿತು ಮಾತನಾಡಲು ಬಂದಿರುವೆ ದಯವಿಟ್ಟು ಬಿಡಿ ಎಂದರೂ ಕೇಳಲಿಲ್ಲ. ಬೇರೆ ದಾರಿ ಇಲ್ಲದೆ ಒಂದು ತಾಸು ಅಲ್ಲೇ ನಿಂತಿದ್ದೆ. ನಂತರ ಸಂಘಟಕರು ಕರೆ ಮಾಡಿ, ಸ್ಥಳಕ್ಕೆ ಬಂದು ಕರೆದೊಯ್ಧರು ಎಂದು ಗೋಷ್ಠಿ ಬಳಿಕ ಸುಧಾ ಅವರು ಸುದ್ಧಿಗಾರರೊಂದಿಗೆ ಅಸಮಾಧಾನ ವ್ಯಕ್ತಪಡಿಸಿದರು.

error: Content is protected !!

Join the Group

Join WhatsApp Group